ETV Bharat / state

ತಪಾಸಣೆ ವೇಳೆ ಹರಿದ ಕಾರು: ಮುಖ್ಯ ಪೇದೆ ಸಾವು, ಮತ್ತೋರ್ವ ಪೇದೆ ಗಂಭೀರ

author img

By

Published : Feb 8, 2020, 9:50 PM IST

ತಪಾಸಣೆ ವೇಳೆ ಹರಿದ ಕಾರು. ಚಿಕ್ಕಜಾಲ ಸಂಚಾರಿ ಠಾಣೆಯ ಮುಖ್ಯ ಪೇದೆ ಧನಂಜಯ್ ಸಾವು. ಮತ್ತೋರ್ವ ಪೇದೆಗೆ ಗಂಭೀರ ಗಾಯ.

police head constable dhanjay
ಮೃತ ಪೊಲೀಸ್ ಹೆಡ್​ಕಾನ್​ಸ್ಟೇಬಲ್​ ಧನಂಜಯ್ಯ

ಬೆಂಗಳೂರು: ತಪಾಸಣೆ ಮಾಡುತ್ತಿದ್ದ ಇಬ್ಬರು ಸಂಚಾರಿ ಪೊಲೀಸರ ಮೇಲೆ ಕಾರು ಹರಿದ ಪರಿಣಾಮ ಹೆಡ್ ಕಾನ್​ಸ್ಟೇಬಲ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಲ್ಲಿನ ಚಿಕ್ಕಜಾಲದ ಕಾಡೇನಹಳ್ಳಿ ಬಳಿ ಘಟನೆ ನಡೆದಿದೆ.

police head constable dhanjay
ಮೃತ ಪೊಲೀಸ್ ಹೆಡ್​ಕಾನ್​ಸ್ಟೇಬಲ್​ ಧನಂಜಯ್ಯ

ಚಿಕ್ಕಜಾಲ ಸಂಚಾರಿ ಪೊಲೀಸ್​ ಠಾಣೆ ಹೆಡ್​ ಕಾನ್​ಸ್ಟೇಬಲ್ ಧನಂಜಯ್ಯ ಮೃತಪಟ್ಟಿದ್ದು, ಮತ್ತೋರ್ವ ಕಾನ್​ಸ್ಟೇಬಲ್ ಉಮಾ ಮಹೇಶ್ವರ್​ ಗಂಭೀರವಾಗಿ ಗಾಯಗೊಂಡು, ಸಾವು-ಬದುಕಿನ‌ ಮಧ್ಯೆ ಹೋರಾಡುತ್ತಿದ್ದಾರೆ.

ಘಟನೆ ಸಂಬಂಧ ಕಾರ್ ಚಾಲಕ ಕುಶಾಲ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಇಂದು(ಫೆ.8)‌ ಸಂಜೆ 5.30ರ ಸುಮಾರಿಗೆ ಚಿಕ್ಕಜಾಲದ ಕಾಡೇನಹಳ್ಳಿ ಬಳಿ‌ ವಾಹನಗಳ ಓವರ್ ಸ್ಪೀಡ್ ತಪಾಸಣೆ ಮಾಡಲಾಗುತ್ತಿತ್ತು. ಹೆಡ್ ಕಾನ್​ಸ್ಟೇಬಲ್ ಧನಂಜಯ್ಯ ಹಾಗೂ ಪಿಸಿ ಉಮಾಮಹೇಶ್ವರ್ ಎಂಬುವರು ಕರ್ತವ್ಯದಲ್ಲಿದ್ದರು.

ನಗರದಿಂದ ಏರ್​ಪೋರ್ಟ್​ಗೆ ವೇಗವಾಗಿ ಹೋಗುತ್ತಿದ್ದ ಕಾರು​, ಪೊಲೀಸರ ಮೇಲೆ ಹರಿದು ರಸ್ತೆಯ ಡಿವೈಡರ್​ಗೆ ಗುದ್ದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಳೆದ ವಾರ ನಂದಿನಿ ಲೇಔಟ್ ಠಾಣೆಯ ಹೆಡ್​ಕಾನ್ ಸ್ಟೇಬಲ್ ಭಕ್ತರಾಮ್ ಎಂಬುವವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಒಂದೇ ವಾರದ ಅಂತರದಲ್ಲಿ‌ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.

ಬೆಂಗಳೂರು: ತಪಾಸಣೆ ಮಾಡುತ್ತಿದ್ದ ಇಬ್ಬರು ಸಂಚಾರಿ ಪೊಲೀಸರ ಮೇಲೆ ಕಾರು ಹರಿದ ಪರಿಣಾಮ ಹೆಡ್ ಕಾನ್​ಸ್ಟೇಬಲ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಲ್ಲಿನ ಚಿಕ್ಕಜಾಲದ ಕಾಡೇನಹಳ್ಳಿ ಬಳಿ ಘಟನೆ ನಡೆದಿದೆ.

police head constable dhanjay
ಮೃತ ಪೊಲೀಸ್ ಹೆಡ್​ಕಾನ್​ಸ್ಟೇಬಲ್​ ಧನಂಜಯ್ಯ

ಚಿಕ್ಕಜಾಲ ಸಂಚಾರಿ ಪೊಲೀಸ್​ ಠಾಣೆ ಹೆಡ್​ ಕಾನ್​ಸ್ಟೇಬಲ್ ಧನಂಜಯ್ಯ ಮೃತಪಟ್ಟಿದ್ದು, ಮತ್ತೋರ್ವ ಕಾನ್​ಸ್ಟೇಬಲ್ ಉಮಾ ಮಹೇಶ್ವರ್​ ಗಂಭೀರವಾಗಿ ಗಾಯಗೊಂಡು, ಸಾವು-ಬದುಕಿನ‌ ಮಧ್ಯೆ ಹೋರಾಡುತ್ತಿದ್ದಾರೆ.

ಘಟನೆ ಸಂಬಂಧ ಕಾರ್ ಚಾಲಕ ಕುಶಾಲ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಇಂದು(ಫೆ.8)‌ ಸಂಜೆ 5.30ರ ಸುಮಾರಿಗೆ ಚಿಕ್ಕಜಾಲದ ಕಾಡೇನಹಳ್ಳಿ ಬಳಿ‌ ವಾಹನಗಳ ಓವರ್ ಸ್ಪೀಡ್ ತಪಾಸಣೆ ಮಾಡಲಾಗುತ್ತಿತ್ತು. ಹೆಡ್ ಕಾನ್​ಸ್ಟೇಬಲ್ ಧನಂಜಯ್ಯ ಹಾಗೂ ಪಿಸಿ ಉಮಾಮಹೇಶ್ವರ್ ಎಂಬುವರು ಕರ್ತವ್ಯದಲ್ಲಿದ್ದರು.

ನಗರದಿಂದ ಏರ್​ಪೋರ್ಟ್​ಗೆ ವೇಗವಾಗಿ ಹೋಗುತ್ತಿದ್ದ ಕಾರು​, ಪೊಲೀಸರ ಮೇಲೆ ಹರಿದು ರಸ್ತೆಯ ಡಿವೈಡರ್​ಗೆ ಗುದ್ದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಳೆದ ವಾರ ನಂದಿನಿ ಲೇಔಟ್ ಠಾಣೆಯ ಹೆಡ್​ಕಾನ್ ಸ್ಟೇಬಲ್ ಭಕ್ತರಾಮ್ ಎಂಬುವವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಒಂದೇ ವಾರದ ಅಂತರದಲ್ಲಿ‌ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.