ETV Bharat / state

ಶಾಸಕರ ಹೆಚ್​ಎಎಲ್ ಪ್ರವೇಶಕ್ಕೆ ಪೊಲೀಸರ ಅಡ್ಡಿ... ಬಿಎಸ್​ವೈ ವಾರ್ನಿಂಗ್ ಬಳಿಕ ನಾಗೇಶ್​ಗೆ ಎಂಟ್ರಿ?

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಲು ಹೊರಟಿದ್ದ ನಾಗೇಶ್​ಗೆ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆವೊಡ್ಡಿದ್ದರು. ಡಿಸಿಎಂ ಪರಮೇಶ್ವರ್​ ಅವರು ಪೊಲೀಸರಿಗೆ ಕರೆ ಮಾಡಿ ತಡೆಯಲು ಹೇಳಿದ್ದರು ಎನ್ನಲಾಗ್ತಿದೆ. ಇನ್ನು ಈ ವಿಷಯ ತಿಳಿದ ಯಡಿಯೂರಪ್ಪ ಹೆಚ್​ಎಎಲ್ ಪೊಲೀಸರಿಗೆ ಕರೆ ಮಾಡಿ‌ ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸರು ನಾಗೇಶ್ ಅವರನ್ನ ವಿಮಾನ ಏರಲು ಅನುವು ಮಾಡಿಕೊಟ್ಟಿದ್ದಾರೆ ಎನ್ನಲಾಗ್ತಿದೆ.

author img

By

Published : Jul 8, 2019, 1:22 PM IST

ಬಿಎಸ್​ವೈ ವಾರ್ನಿಂಗ್ ಬಳಿಕ ನಾಗೇಶ್​ಗೆ ಎಂಟ್ರಿ

ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೊರಟಿದ್ದ ನಾಗೇಶ್​ಗೆ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆವೊಡ್ಡಿದ್ದರು. ಆಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ದೂರವಾಣಿ ಮೂಲಕ ಪೊಲೀಸರಿಗೆ ಎಚ್ಚರಿಕೆ ನೀಡಿದ ಬಳಿಕ ವಿಮಾನ ಏರಲು ನಾಗೇಶ್​ಗೆ ಅನುವು ಮಾಡಿಕೊಡಲಾಯಿತು ಎಂದು ತಿಳಿದುಬಂದಿದೆ.

airport
ಬಿಎಸ್​ವೈ ವಾರ್ನಿಂಗ್ ಬಳಿಕ ನಾಗೇಶ್​ಗೆ ಎಂಟ್ರಿ

ಹೌದು, ಹೆಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಆಪ್ತರಿಗೂ ಮತ್ತು ಯಡಿಯೂರಪ್ಪ ಆಪ್ತರಿಗೂ ಮಾತಿನ ಚಕಮಕಿ ನಡೆದಿದೆ. ನಾಗೇಶ್ ಮುಂಬೈಗೆ ಹೋಗೋದನ್ನ ತಡೆಯಲು ಬಂದ ಪರಮೇಶ್ವರ್ ಬೆಂಬಲಿಗರು ವಿಮಾನ ಏರಲು ಅಡ್ಡಿಪಡಿಸಿದ್ದರು ಎನ್ನಲಾಗ್ತಿದೆ.

ಈ ವೇಳೆ ಗದ್ದಲ ಹಾಗೂ ಮಾತಿನ ಚಕಮಕಿ ನಡೆದಿದೆ. ನಾಗೇಶ್ ವಿಚಾರದಲ್ಲಿ‌ ಸಂತೋಷ್ ಹಾಗೂ ಪರಮೇಶ್ವರ್ ಆಪ್ತರು, ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಹೆಚ್​ಎಎಲ್ ಪೊಲೀಸರಿಗೆ ಕರೆ ಮಾಡಿದ್ದ ಡಿಸಿಎಂ ಅವರು ಪಕ್ಷೇತರ ಶಾಸಕ ನಾಗೇಶ್ ಅವರನ್ನು ತಡೆಯಲು ಹೇಳಿದ್ದರು ಎಂದು ಹೇಳಲಾಗ್ತಿದೆ.

ಆಪ್ತರ ಮೂಲಕ ವಿಷಯ ತಿಳಿದ ಯಡಿಯೂರಪ್ಪ ಹೆಚ್​ಎಎಲ್ ಪೊಲೀಸರಿಗೆ ಕರೆ ಮಾಡಿ‌ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಗೇಶ್ ಅವರನ್ನ ಒಳಗೆ ಕಳಿಸಿ ಎಂದು ಖಡಕ್ ಸೂಚನೆ ನೀಡಿದ್ದರು. ಒಳಗೆ ಬಿಡಲಿಲ್ಲ ಅಂದ್ರೆ ದೆಹಲಿಯಿಂದ ಫೋನ್ ಬರುತ್ತದೆ ಎಂದು ಏರು ಧ್ವನಿಯಲ್ಲಿ ಪೊಲೀಸರಿಗೆ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಿಎಸ್​ವೈ ಫೋನ್ ಮಾಡುತ್ತಿದ್ದಂತೆ ನಾಗೇಶ್ ಅವರನ್ನ ಒಳ ಕಳುಹಿಸಿದ ಪೊಲೀಸರು ವಿಮಾನ ಏರಲು ಅನುವು ಮಾಡಿಕೊಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೊರಟಿದ್ದ ನಾಗೇಶ್​ಗೆ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆವೊಡ್ಡಿದ್ದರು. ಆಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ದೂರವಾಣಿ ಮೂಲಕ ಪೊಲೀಸರಿಗೆ ಎಚ್ಚರಿಕೆ ನೀಡಿದ ಬಳಿಕ ವಿಮಾನ ಏರಲು ನಾಗೇಶ್​ಗೆ ಅನುವು ಮಾಡಿಕೊಡಲಾಯಿತು ಎಂದು ತಿಳಿದುಬಂದಿದೆ.

airport
ಬಿಎಸ್​ವೈ ವಾರ್ನಿಂಗ್ ಬಳಿಕ ನಾಗೇಶ್​ಗೆ ಎಂಟ್ರಿ

ಹೌದು, ಹೆಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಆಪ್ತರಿಗೂ ಮತ್ತು ಯಡಿಯೂರಪ್ಪ ಆಪ್ತರಿಗೂ ಮಾತಿನ ಚಕಮಕಿ ನಡೆದಿದೆ. ನಾಗೇಶ್ ಮುಂಬೈಗೆ ಹೋಗೋದನ್ನ ತಡೆಯಲು ಬಂದ ಪರಮೇಶ್ವರ್ ಬೆಂಬಲಿಗರು ವಿಮಾನ ಏರಲು ಅಡ್ಡಿಪಡಿಸಿದ್ದರು ಎನ್ನಲಾಗ್ತಿದೆ.

ಈ ವೇಳೆ ಗದ್ದಲ ಹಾಗೂ ಮಾತಿನ ಚಕಮಕಿ ನಡೆದಿದೆ. ನಾಗೇಶ್ ವಿಚಾರದಲ್ಲಿ‌ ಸಂತೋಷ್ ಹಾಗೂ ಪರಮೇಶ್ವರ್ ಆಪ್ತರು, ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಹೆಚ್​ಎಎಲ್ ಪೊಲೀಸರಿಗೆ ಕರೆ ಮಾಡಿದ್ದ ಡಿಸಿಎಂ ಅವರು ಪಕ್ಷೇತರ ಶಾಸಕ ನಾಗೇಶ್ ಅವರನ್ನು ತಡೆಯಲು ಹೇಳಿದ್ದರು ಎಂದು ಹೇಳಲಾಗ್ತಿದೆ.

ಆಪ್ತರ ಮೂಲಕ ವಿಷಯ ತಿಳಿದ ಯಡಿಯೂರಪ್ಪ ಹೆಚ್​ಎಎಲ್ ಪೊಲೀಸರಿಗೆ ಕರೆ ಮಾಡಿ‌ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಗೇಶ್ ಅವರನ್ನ ಒಳಗೆ ಕಳಿಸಿ ಎಂದು ಖಡಕ್ ಸೂಚನೆ ನೀಡಿದ್ದರು. ಒಳಗೆ ಬಿಡಲಿಲ್ಲ ಅಂದ್ರೆ ದೆಹಲಿಯಿಂದ ಫೋನ್ ಬರುತ್ತದೆ ಎಂದು ಏರು ಧ್ವನಿಯಲ್ಲಿ ಪೊಲೀಸರಿಗೆ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಿಎಸ್​ವೈ ಫೋನ್ ಮಾಡುತ್ತಿದ್ದಂತೆ ನಾಗೇಶ್ ಅವರನ್ನ ಒಳ ಕಳುಹಿಸಿದ ಪೊಲೀಸರು ವಿಮಾನ ಏರಲು ಅನುವು ಮಾಡಿಕೊಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

Intro:


ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಲು ಹೊರಟ ನಾಗೇಶ್ ಗೆ ವಿಮಾನ ನಿಲ್ದಸಣದಲ್ಲಿ ಪೊಲೀಸರು ತಡೆ ಒಡ್ಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೂರವಾಣಿ ಮೂಲಕ ಪೊಲೀಸರಿಗೆ ಎಚ್ಚರಿಕೆ ನೀಡಿದ ಬಳಿಕ ವಿಮಾನ ಏರಲು ನಾಗೇಶ್ ಗೆ ಅನುವು ಮಾಡಿಕೊಡಲಾಯಿತು ಎಂದು ತಿಳಿದುಬಂದಿದೆ.

ಹೌದು, ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಆಪ್ತರಿಗೂ ಮತ್ತು ಯಡಿಯೂರಪ್ಪ ಆಪ್ತರಿಗೂ ಮಾತಿನ ಚಕಮಕಿ ನಡೆದಿದೆ.ನಾಗೇಶ್ ಮುಂಬೈಗೆ ಹೋಗೋದನ್ನ ತಡೆಯಲು ಬಂದ ಪರಮೇಶ್ವರ್ ಬೆಂಬಲಿಗರು, ಪೊಲೀಸರ ಶತ್ ನೊಂದಗೆ ವಿಮಾನ ಏರಲು ಅಡ್ಡಿ ಪಡಿಸಿದ್ದಾರೆ.
ಈ ವೇಳೆ ಗದ್ದಲ, ಮಾತಿನ ಚಕಮಕಿ ನಡೆದಿದೆ, ನಾಗೇಶ್ ವಿಚಾರದಲ್ಲಿ‌ ಸಂತೋಷ್ ಹಾಗೂ ಪರಮೇಶ್ವರ್ ಆಪ್ತರು, ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಎಚ್.ಎ.ಎಲ್ ಪೊಲೀಸರಿಗೆ ಕರೆ ಮಾಡಿದ್ದ ಡಿಸಿಎಂ ನಾಗೇಶ್ ತಡೆಯಲು ಹೇಳಿದ್ದರು ಎನ್ನಲಾಗಿದೆ

ಆಪ್ತರ ಮೂಲಕ ವಿಷಯ ತಿಳಿದ ಯಡಿಯೂರಪ್ಪ ಎಚ್.ಎ.ಎಲ್ ಪೊಲೀಸರಿಗೆ ಫೋನ್ ನಲ್ಲೇ‌ ತರಾಟೆಗೆ ತೆಗೆದುಕೊಂಡಿದ್ದಾರೆ, ನಾಗೇಶ್ ಅವರನ್ನ ಒಳಗೆ ಕಳಿಸಿ ಎಂದು ಖಡಕ್ ಸೂಚನೆ ನೀಡಿದ್ದು ಒಳಗೆ ಬಿಡಲಿಲ್ಲ ಅಂದರೆ ದೆಹಲಿಯಿಂದ ಫೋನ್ ಬರುತ್ತದೆ ಎಂದು ಏರು ಧ್ವನಿಯಲ್ಲಿ ಪೊಲೀಸರಿಗೆ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿದುಬಂದಿದ.

ಬಿಎಸ್ ವೈ ಫೋನ್ ಮಾಡುತ್ತಿದಂತೆ ನಾಗೇಶ್ ಅವರನ್ನ ಒಳ ಕಳುಹಿಸಿದ ಪೊಲೀಸರು ವಿಮಾನ ಏರಲು ಅನುವು ಮಾಡಿಕೊಟ್ಟರು.Body:.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.