ETV Bharat / state

ರಿವರ್ಸ್‌ ಆಪರೇಷನ್‌ ಭೀತಿ: ರೆಸಾರ್ಟ್​ನತ್ತ ಪ್ರಯಾಣಿಸಿದ ಬಿಜೆಪಿ ಶಾಸಕರು - undefined

ಸುಪ್ರೀಂ ಕೋರ್ಟ್ ಆದೇಶ, ಅತೃಪ್ತ ಶಾಸಕರ ರಾಜೀನಾಮೆ ಗೊಂದಲ, ರಾಜಕೀಯ ಅಸ್ಥಿರತೆ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಪ್ರೇರಣೆಯಿಂದ ಮೈತ್ರಿ ಸರ್ಕಾರಕ್ಕೆ ಇರುವ ವಿಶ್ವಾಸ ಮತ ಸಾಬೀತುಪಡಿಸುತ್ತೇನೆ ಎಂದು ಹೇಳಿರುವುದು ಬಿಜೆಪಿ ನಾಯಕರಲ್ಲಿ ಆತಂಕ ಸೃಷ್ಟಿಸಿದೆ.

ಬಿಜೆಪಿ
author img

By

Published : Jul 12, 2019, 4:04 PM IST

Updated : Jul 12, 2019, 4:43 PM IST

ಬೆಂಗಳೂರು : ಅತೃಪ್ತ ಶಾಸಕರ ರಾಜೀನಾಮೆಗೆ ಪ್ರತಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ 'ಆಪರೇಷನ್ ಜೆಡಿಎಸ್' ಮಾಡಬಹುದೆನ್ನುವ ಭೀತಿ ಕಮಲ ಪಾಳಯವನ್ನು ಕಾಡುತ್ತಿದೆ. ಹೀಗಾಗಿ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್​ಗೆ ತೆರಳಲು ಬಿಜೆಪಿ ತೀರ್ಮಾನಿಸಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಈ ನಡೆಗೆ ಮುಂದಾಗಿದೆ. ಸುಪ್ರೀಂ ಕೋರ್ಟ್ ಆದೇಶ, ಅತೃಪ್ತ ಶಾಸಕರ ರಾಜೀನಾಮೆ ಗೊಂದಲ, ರಾಜಕೀಯ ಅಸ್ಥಿರತೆ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಪ್ರೇರಣೆಯಿಂದ ಮೈತ್ರಿ ಸರ್ಕಾರಕ್ಕೆ ಇರುವ ವಿಶ್ವಾಸ ಮತ ಸಾಬೀತುಪಡಿಸುತ್ತೇನೆ ಎಂದು ಹೇಳಿರುವುದು ಬಿಜೆಪಿ ನಾಯಕರಿಗೆ ಶಾಕ್ ನೀಡಿದಂತಾಗಿದೆ.

ಅನಿರೀಕ್ಷಿತವಾಗಿ ಪ್ರತಿಪಕ್ಷ ಬಿಜೆಪಿ ಸದನದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕೆನ್ನುವ ಬಗ್ಗೆ ಚರ್ಚೆ ನಡೆಸುತ್ತಿರುವಾಗಲೇ ಮುಖ್ಯಮಂತ್ರಿಗಳ ಘೋಷಣೆ ಬಿಜೆಪಿಯವರನ್ನು ಬೆಚ್ಚಿಬೀಳಿಸಿದೆ. ಜೆಡಿಎಸ್ ಪಕ್ಷ ಬಿಜೆಪಿಯ ಶಾಸಕರನ್ನು ಸೆಳೆಯಬಹುದೇ ಎನ್ನುವ ಆತಂಕ ಕಮಲ ಪಾಳೆಯಕ್ಕೆ ಕಾಡತೊಡಗಿದ್ದು, ಅದಕ್ಕಾಗಿ ತನ್ನ ಎಲ್ಲ ಶಾಸಕರನ್ನು ರೆಸಾರ್ಟ್​ನಲ್ಲಿ ಹಿಡಿದಿಟ್ಟುಕೊಳ್ಳಲು ತೀರ್ಮಾನಿಸಿದೆ.

ಅಧಿವೇಶನಕ್ಕಾಗಿ ಆಗಮಿಸಿರುವ ಶಾಸಕರನ್ನು ರೆಸಾರ್ಟ್​ಗೆ ಕರೆದುಕೊಂಡು ಹೋಗಿ ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಬಿಜೆಪಿ ಪ್ಲಾನ್ ಮಾಡಿದೆ.

ಬೆಂಗಳೂರು : ಅತೃಪ್ತ ಶಾಸಕರ ರಾಜೀನಾಮೆಗೆ ಪ್ರತಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ 'ಆಪರೇಷನ್ ಜೆಡಿಎಸ್' ಮಾಡಬಹುದೆನ್ನುವ ಭೀತಿ ಕಮಲ ಪಾಳಯವನ್ನು ಕಾಡುತ್ತಿದೆ. ಹೀಗಾಗಿ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್​ಗೆ ತೆರಳಲು ಬಿಜೆಪಿ ತೀರ್ಮಾನಿಸಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಈ ನಡೆಗೆ ಮುಂದಾಗಿದೆ. ಸುಪ್ರೀಂ ಕೋರ್ಟ್ ಆದೇಶ, ಅತೃಪ್ತ ಶಾಸಕರ ರಾಜೀನಾಮೆ ಗೊಂದಲ, ರಾಜಕೀಯ ಅಸ್ಥಿರತೆ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಪ್ರೇರಣೆಯಿಂದ ಮೈತ್ರಿ ಸರ್ಕಾರಕ್ಕೆ ಇರುವ ವಿಶ್ವಾಸ ಮತ ಸಾಬೀತುಪಡಿಸುತ್ತೇನೆ ಎಂದು ಹೇಳಿರುವುದು ಬಿಜೆಪಿ ನಾಯಕರಿಗೆ ಶಾಕ್ ನೀಡಿದಂತಾಗಿದೆ.

ಅನಿರೀಕ್ಷಿತವಾಗಿ ಪ್ರತಿಪಕ್ಷ ಬಿಜೆಪಿ ಸದನದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕೆನ್ನುವ ಬಗ್ಗೆ ಚರ್ಚೆ ನಡೆಸುತ್ತಿರುವಾಗಲೇ ಮುಖ್ಯಮಂತ್ರಿಗಳ ಘೋಷಣೆ ಬಿಜೆಪಿಯವರನ್ನು ಬೆಚ್ಚಿಬೀಳಿಸಿದೆ. ಜೆಡಿಎಸ್ ಪಕ್ಷ ಬಿಜೆಪಿಯ ಶಾಸಕರನ್ನು ಸೆಳೆಯಬಹುದೇ ಎನ್ನುವ ಆತಂಕ ಕಮಲ ಪಾಳೆಯಕ್ಕೆ ಕಾಡತೊಡಗಿದ್ದು, ಅದಕ್ಕಾಗಿ ತನ್ನ ಎಲ್ಲ ಶಾಸಕರನ್ನು ರೆಸಾರ್ಟ್​ನಲ್ಲಿ ಹಿಡಿದಿಟ್ಟುಕೊಳ್ಳಲು ತೀರ್ಮಾನಿಸಿದೆ.

ಅಧಿವೇಶನಕ್ಕಾಗಿ ಆಗಮಿಸಿರುವ ಶಾಸಕರನ್ನು ರೆಸಾರ್ಟ್​ಗೆ ಕರೆದುಕೊಂಡು ಹೋಗಿ ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಬಿಜೆಪಿ ಪ್ಲಾನ್ ಮಾಡಿದೆ.

Intro: " ಆಪರೇಶನ್ ಜೆಡಿಎಸ್" ಭೀತಿ : ರೆಸಾರ್ಟ್ ನತ್ತ ಬಿಜೆಪಿ
ಶಾಸಕರು...!

ಬೆಂಗಳೂರು : ಅತೃಪ್ತ ಶಾಸಕರ ರಾಜೀನಾಮೆಗೆ ಪ್ರತಿಯಾಗಿ ಬಿಜೆಪಿಯ ಶಾಸಕರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ " ಆಪರೇಶನ್ ಜೆಡಿಎಸ್ " ಮಾಡಬಹುದೆನ್ನುವ ಭೀತಿ ಕಮಲ ಪಾಳಯದವರನ್ನು ಕಾಡುತ್ತಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಬಿಜೆಪಿಯ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ ಗೆ ತೆರಳಲು ಪಕ್ಷ ತೀರ್ಮಾನಿಸಿದೆ.


Body: ಸುಪ್ರೀಂಕೋರ್ಟ್ ಆದೇಶ, ಅತೃಪ್ತ ಶಾಸಕರ ರಾಜೀನಾಮೆ ಗೊಂದಲ, ರಾಜಕೀಯ ಅಸ್ಥಿರತೆ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಪ್ರೇರಣೆಯಿಂದ ಮೈತ್ರಿ ಸರಕಾರಕ್ಕೆ ಇರುವ ವಿಶ್ವಾಸ ಮತ ಸಾಬೀತುಪಡಿಸುತ್ತೇನೆ ಎಂದು ಹೇಳಿರುವುದು ಬಿಜೆಪಿ ನಾಯಕರಿಗೆ ಶಾಕ್ ನೀಡುವಂತಾಗಿದೆ.

ಅನಿರೀಕ್ಷಿತ ವಾಗಿ ಪ್ರತಿಪಕ್ಷ ಬಿಜೆಪಿ ಸದನದಲ್ಲಿ ಮುಖ್ಯಮಂತ್ತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕೆನ್ನುವ ಬಗ್ಗೆ ಚರ್ಚೆ ನಡೆಸುತ್ತಿರುವಾಗಲೇ ಮುಖ್ಯಮಂತ್ರಿ ಗಳ ಘೋಷಣೆ ಬಿಜೆಪಿಯವರನ್ನ ಬೆಚ್ವಿಬೀಳಿಸಿದೆ.

ಜೆಡಿಎಸ್ ಪಕ್ಷ ಬಿಜೆಪಿಯ ಶಾಸಕರನ್ನು ಸೆಳೆಯಬಹುದೇ ಎನ್ನುವ ಆತಂಕ ಕಮಲ ಪಾಳೆಯಕ್ಕೆ ಕಾಡತೊಡಗಿದ್ದು ಅದಕ್ಕಾಗಿ ಶಾಸಕರನ್ನು ಕಾಪಾಡಿಕೊಳ್ಳಲು ತನ್ನ ಎಲ್ಲ ಶಾಸಕರನ್ನು ರೆಸಾರ್ಟ ನಲ್ಲಿ ಹಿಡಿದಿಟ್ಟುಕೊಳ್ಳಲು ತೀರ್ಮಾನಿಸಿದೆ.

ಅಧಿವೇಶನ ಕ್ಕಾಗಿ ಆಗಮಿಸಿರುವ ಶಾಸಕರನ್ನು ರೆಸಾರ್ಟ ಗೆ ಕರೆದುಕೊಂಡು ಹೋಗಿ ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಬಜೆಪಿ ಉದ್ದೇಶಿಸಿದೆ. ಹಾಗೆಯೇ ಅನುಮಾನ ಇರುವ ಶಾಸಕರಾಗಿರುವ ಬಗ್ಗೆ ಹೆಚ್ವಿನ ನಿಗಾವನ್ನು ಬಿಜೆಪಿ ನಾಯಕರು ಇಟ್ಟಿದ್ದಾರೆ.


Conclusion:
Last Updated : Jul 12, 2019, 4:43 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.