ETV Bharat / state

ಪಿಎಸ್ಐ ನೇಮಕಾತಿ ಅಕ್ರಮ: ಚನ್ನಪಟ್ಟಣದಲ್ಲಿ ಮತ್ತೋರ್ವ ಆರೋಪಿ ಸೆರೆ - ಸಿಐಡಿ ಪೊಲೀಸರಿಂದ ಪಿಎಸ್ಐ ನೇಮಕಾತಿ ಹಗರಣ ಆರೋಪಿ ಬಂಧನ

ಪಿಎಸ್ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದು, 10 ದಿನ ಕಸ್ಟಡಿಗೆ ಪಡೆದಿದ್ದಾರೆ.

one-more-accused-arrested-in-karnataka-psi-scam-case
ಪಿಎಸ್ಐ ನೇಮಕಾತಿ ಅಕ್ರಮ: ಚನ್ನಪಟ್ಟಣದಲ್ಲಿ ಮತ್ತೋರ್ವ ಆರೋಪಿ ಬಂಧನ
author img

By

Published : Jul 3, 2022, 9:38 AM IST

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ಸಂಬಂಧ ನಗರದ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್​​ನ ಮೊದಲ ಆರೋಪಿ ಜಾಗೃತ್‌ ಕೊನೆಗೂ ಸಿಐಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚನ್ನಪಟ್ಟಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈತ ಪರೀಕ್ಷೆ ರದ್ದಾದ ಬಳಿಕ ನಡೆದ ಪ್ರತಿಭಟನೆಯ ಮುಂದಾಳತ್ವವನ್ನೂ ವಹಿಸಿದ್ದ.

ಹಗರಣ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಜಾಗೃತ್, ಮೊದಲ ಹಂತದಲ್ಲೇ ಹಣ ಕೊಟ್ಟು ಒಎಂಆರ್ ಶೀಟ್ ತಿದ್ದಿಸಿರುವುದು ಗೊತ್ತಾಗಿತ್ತು. ಎಫ್​ಎಸ್​​ಎಲ್ ವರದಿಯನ್ವಯ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. ಇದಾದ ನಂತರ ತಲೆಮರೆಸಿಕೊಂಡು ಹೈಕೋರ್ಟ್​ನಲ್ಲಿ ಎಫ್‌ಐಆರ್‌ ವಜಾಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದನು.

ಇದನ್ನೂ ಓದಿ: ಹೈಕೋರ್ಟ್ ಕಣ್ಗಾವಲಿನಲ್ಲಿ ಪಿಎಸ್ಐ ನೇಮಕ ಹಗರಣದ ತನಿಖೆ: ಸಮಗ್ರ ವರದಿ ಸಲ್ಲಿಸಲು ಸಿಐಡಿಗೆ ಸೂಚನೆ

ಕೇರಳ ಹಾಗೂ ಬೇರೆ ಬೇರೆ ಕಡೆ ತಪ್ಪಿಸಿಕೊಂಡು ತಿರುಗುತ್ತಿದ್ದ ಆರೋಪಿಯು ಹಣ ನೀಡಿ ಮಧ್ಯವರ್ತಿ ಹಾಗೂ ಎಫ್​ಡಿಎ ಹರ್ಷ ಮೂಲಕ ವ್ಯವಹಾರ ಮಾಡಿದ್ದಾನೆ. ಸಿಐಡಿ ಪೊಲೀಸರು ಆರೋಪಿಯನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ನಿನ್ನೆ ಹಾಜರುಪಡಿಸಿದ್ದು, ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಕೆಲಸದ ಆಮಿಷ, ಒಂದೇ ಊರಿನ 8 ವಿದ್ಯಾರ್ಥಿಗಳಿಗೆ 1.5 ಕೋಟಿ ರೂ. ವಂಚನೆ

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ಸಂಬಂಧ ನಗರದ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್​​ನ ಮೊದಲ ಆರೋಪಿ ಜಾಗೃತ್‌ ಕೊನೆಗೂ ಸಿಐಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚನ್ನಪಟ್ಟಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈತ ಪರೀಕ್ಷೆ ರದ್ದಾದ ಬಳಿಕ ನಡೆದ ಪ್ರತಿಭಟನೆಯ ಮುಂದಾಳತ್ವವನ್ನೂ ವಹಿಸಿದ್ದ.

ಹಗರಣ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಜಾಗೃತ್, ಮೊದಲ ಹಂತದಲ್ಲೇ ಹಣ ಕೊಟ್ಟು ಒಎಂಆರ್ ಶೀಟ್ ತಿದ್ದಿಸಿರುವುದು ಗೊತ್ತಾಗಿತ್ತು. ಎಫ್​ಎಸ್​​ಎಲ್ ವರದಿಯನ್ವಯ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. ಇದಾದ ನಂತರ ತಲೆಮರೆಸಿಕೊಂಡು ಹೈಕೋರ್ಟ್​ನಲ್ಲಿ ಎಫ್‌ಐಆರ್‌ ವಜಾಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದನು.

ಇದನ್ನೂ ಓದಿ: ಹೈಕೋರ್ಟ್ ಕಣ್ಗಾವಲಿನಲ್ಲಿ ಪಿಎಸ್ಐ ನೇಮಕ ಹಗರಣದ ತನಿಖೆ: ಸಮಗ್ರ ವರದಿ ಸಲ್ಲಿಸಲು ಸಿಐಡಿಗೆ ಸೂಚನೆ

ಕೇರಳ ಹಾಗೂ ಬೇರೆ ಬೇರೆ ಕಡೆ ತಪ್ಪಿಸಿಕೊಂಡು ತಿರುಗುತ್ತಿದ್ದ ಆರೋಪಿಯು ಹಣ ನೀಡಿ ಮಧ್ಯವರ್ತಿ ಹಾಗೂ ಎಫ್​ಡಿಎ ಹರ್ಷ ಮೂಲಕ ವ್ಯವಹಾರ ಮಾಡಿದ್ದಾನೆ. ಸಿಐಡಿ ಪೊಲೀಸರು ಆರೋಪಿಯನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ನಿನ್ನೆ ಹಾಜರುಪಡಿಸಿದ್ದು, ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಕೆಲಸದ ಆಮಿಷ, ಒಂದೇ ಊರಿನ 8 ವಿದ್ಯಾರ್ಥಿಗಳಿಗೆ 1.5 ಕೋಟಿ ರೂ. ವಂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.