ETV Bharat / state

'3 ಸಾವಿರ ರೂ. ಯಾವ ಕಷ್ಟಕ್ಕೆ ಬಳಸಬೇಕು ಅಂತ ಸಿಎಂ ಹೇಳಬೇಕು': ತನ್ವೀರ್ ಪಾಷಾ

ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಡ್ರೈವರ್​ಗಳಿಗೆ ಸರ್ಕಾರ ಘೋಷಣೆ ಮಾಡಿದ 3 ಸಾವಿರ ರೂ. ಹಣ ಯಾವ ಕಷ್ಟಕ್ಕಾಗಿ ಬಳಸಬೇಕು ಎಂದು ಸಿಎಂ ತಿಳಿಸಬೇಕು ಎಂದು ಓಲಾ ಉಬರ್ ಡ್ರೈವರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಆಗ್ರಹಿಸಿದ್ದಾರೆ.

author img

By

Published : May 19, 2021, 1:46 PM IST

Ola-Uber driver association head Tanveer Pasha
ಓಲಾ ಉಬರ್ ಡ್ರೈವರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಅದರಲ್ಲಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಡ್ರೈವರ್​ಗಳಿಗೆ 3 ಸಾವಿರ ರೂ. ಘೋಷಣೆ ಮಾಡಿದೆ.

ಪರವಾನಗಿ ಹೊಂದಿದ ಹಾಗೂ ನೋಂದಣಿ ಮಾಡಿಸಿದ 2.10 ಲಕ್ಷ ಫಲಾನುಭವಿಗಳಿಗೆ 3 ಸಾವಿರ ರೂ. ಸಹಾಯಧನ ನೀಡುತ್ತಿದೆ.‌ ಆದರೆ ಈ ಕುರಿತು ಓಲಾ-ಉಬರ್ ಡ್ರೈವರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓಲಾ-ಉಬರ್ ಡ್ರೈವರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ

ಇಂದು ಸಿಎಂ ಯಡಿಯೂರಪ್ಪ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಯಾವ ಕಷ್ಟಕ್ಕಾಗಿ 3 ಸಾವಿರ ರೂ. ಬಳಸಬೇಕು ಎಂದು ಅವರೇ ನಮಗೆ ಹೇಳಬೇಕು. ಇವತ್ತಿನ ದಿನನಿತ್ಯ ಬಳಸುವ ವಸ್ತುಗಳು ಬೆಲೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಜೀವನ ನಡೆಸುವುದು ಎಷ್ಟು ಕಷ್ಟ, ಈ ಪ್ಯಾಕೇಜ್ ಘೋಷಣೆ ನಿರಾಶಾದಾಯಕವಾಗಿದೆ ಎಂದು ಕಿಡಿಕಾರಿದರು.

ನಾವು ಕೇಳಿದ್ದು 10,000 ರೂ. ಸಹಾಯಧನ. ಅಲ್ಲದೇ ವಾಹನಗಳ ಮೇಲಿನ ಸಾಲದ ಬಡ್ಡಿ ದರ ಮನ್ನಾ ಮಾಡುವಂತೆ, ದಿನಸಿ ಸಾಮಾನು ಕೊಡುವಂತೆ ಕೇಳಿದ್ದೆವು. ಆದರೆ ಅದನ್ನ ಸರ್ಕಾರ ಕಡೆಗಣಿಸಿದೆ. ಲಾಕ್​​ಡೌನ್​​ನಿಂದಾಗಿ ನಮ್ಮ ಪರಿಸ್ಥಿತಿ ಹೀನಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಓದಿ: ಶಿಕ್ಷಕರು ಫ್ರಂಟ್ ಲೈನ್ ವಾರಿಯರ್ಸ್ ಓಕೆ, ವಿಶೇಷ ಪ್ಯಾಕೇಜ್ ಘೋಷಣೆ ಇಲ್ಲ ಯಾಕೆ?

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಅದರಲ್ಲಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಡ್ರೈವರ್​ಗಳಿಗೆ 3 ಸಾವಿರ ರೂ. ಘೋಷಣೆ ಮಾಡಿದೆ.

ಪರವಾನಗಿ ಹೊಂದಿದ ಹಾಗೂ ನೋಂದಣಿ ಮಾಡಿಸಿದ 2.10 ಲಕ್ಷ ಫಲಾನುಭವಿಗಳಿಗೆ 3 ಸಾವಿರ ರೂ. ಸಹಾಯಧನ ನೀಡುತ್ತಿದೆ.‌ ಆದರೆ ಈ ಕುರಿತು ಓಲಾ-ಉಬರ್ ಡ್ರೈವರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓಲಾ-ಉಬರ್ ಡ್ರೈವರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ

ಇಂದು ಸಿಎಂ ಯಡಿಯೂರಪ್ಪ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಯಾವ ಕಷ್ಟಕ್ಕಾಗಿ 3 ಸಾವಿರ ರೂ. ಬಳಸಬೇಕು ಎಂದು ಅವರೇ ನಮಗೆ ಹೇಳಬೇಕು. ಇವತ್ತಿನ ದಿನನಿತ್ಯ ಬಳಸುವ ವಸ್ತುಗಳು ಬೆಲೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಜೀವನ ನಡೆಸುವುದು ಎಷ್ಟು ಕಷ್ಟ, ಈ ಪ್ಯಾಕೇಜ್ ಘೋಷಣೆ ನಿರಾಶಾದಾಯಕವಾಗಿದೆ ಎಂದು ಕಿಡಿಕಾರಿದರು.

ನಾವು ಕೇಳಿದ್ದು 10,000 ರೂ. ಸಹಾಯಧನ. ಅಲ್ಲದೇ ವಾಹನಗಳ ಮೇಲಿನ ಸಾಲದ ಬಡ್ಡಿ ದರ ಮನ್ನಾ ಮಾಡುವಂತೆ, ದಿನಸಿ ಸಾಮಾನು ಕೊಡುವಂತೆ ಕೇಳಿದ್ದೆವು. ಆದರೆ ಅದನ್ನ ಸರ್ಕಾರ ಕಡೆಗಣಿಸಿದೆ. ಲಾಕ್​​ಡೌನ್​​ನಿಂದಾಗಿ ನಮ್ಮ ಪರಿಸ್ಥಿತಿ ಹೀನಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಓದಿ: ಶಿಕ್ಷಕರು ಫ್ರಂಟ್ ಲೈನ್ ವಾರಿಯರ್ಸ್ ಓಕೆ, ವಿಶೇಷ ಪ್ಯಾಕೇಜ್ ಘೋಷಣೆ ಇಲ್ಲ ಯಾಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.