ETV Bharat / state

ಸ್ಥಿರಾಸ್ತಿ ಮೇಲಿನ ಮಾರ್ಗಸೂಚಿ ದರ ಪರಿಷ್ಕರಿಸಲು ಸೂಚನೆ : ಸಚಿವ ಆರ್.ಅಶೋಕ್

author img

By

Published : Sep 3, 2021, 3:51 PM IST

ಕೋವಿಡ್ ಬಂದ ಬಳಿಕ ರಿಯಲ್‌ ಎಸ್ಟೇಟ್ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಸರ್ಕಾರಕ್ಕೆ ಮುದ್ರಾಂಕ ಶುಲ್ಕ ಸಂಗ್ರಹದಲ್ಲೂ ಹಿನ್ನಡೆಯಾಗಿದೆ. ಇತ್ತ ಸಂಘ-ಸಂಸ್ಥೆಗಳು ಮಾರ್ಗಸೂಚಿ ದರವನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದವು. ಇದೀಗ ಸರ್ಕಾರ ಮಾರ್ಗಸೂಚಿ ದರ ಕಡಿಮೆ ಮಾಡಲು ಮುಂದಾಗಿದೆ..

ಕಂದಾಯ ಸಚಿವ ಆರ್.ಅಶೋಕ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ
ಕಂದಾಯ ಸಚಿವ ಆರ್.ಅಶೋಕ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ

ಬೆಂಗಳೂರು : ನಿವೇಶನ, ಮನೆ ಖರೀದಿದಾರರಿಗೆ ಸರ್ಕಾರ ಸಿಹಿ ಸುದ್ದಿ ಕೊಡಲು ಮುಂದಾಗಿದೆ. ಸ್ಥಿರಾಸ್ತಿ ಮೇಲಿನ ಮಾರ್ಗಸೂಚಿ ದರವನ್ನು ಕಡಿಮೆ‌ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಕೋವಿಡ್ ಬಂದ ಬಳಿಕ ರಿಯಲ್‌ ಎಸ್ಟೇಟ್ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಸರ್ಕಾರಕ್ಕೆ ಮುದ್ರಾಂಕ ಶುಲ್ಕ ಸಂಗ್ರಹದಲ್ಲೂ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇತ್ತ ಸಂಘ-ಸಂಸ್ಥೆಗಳು ಮಾರ್ಗಸೂಚಿ ದರವನ್ನು ಕಡಿಮೆ ಮಾಡುವಂತೆ ಮನವಿಯನ್ನೂ ಮಾಡಿದ್ದವು. ಇದೀಗ ಸರ್ಕಾರ ಮಾರ್ಗಸೂಚಿ ದರವನ್ನು ಕಡಿಮೆ ಮಾಡಲು ಮುಂದಾಗಿದೆ.

ಕಂದಾಯ ಸಚಿವ ಆರ್ ಅಶೋಕ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ

ಈ ಬಗ್ಗೆ ಮಾತಮಾಡಿದ ಅವರು, ಸ್ಥಿರಾಸ್ತಿ ನೋಂದಣಿ ಮುದ್ರಾಂಕ ಶುಲ್ಕ ಜಾಸ್ತಿ ಇದೆ. ಕಡಿಮೆ ಮಾಡಬೇಕು ಅನ್ನುವ ಮನವಿ ಇತ್ತು. ಕಳೆದ ಆರು ತಿಂಗಳಿಂದ ಈ ಬಗ್ಗೆ ಹಲವರು ಮನವಿ ಮಾಡಿದ್ದಾರೆ. ಈ ಸಂಬಂಧ ಸ್ಥಿರಾಸ್ಥಿ ಮಾರ್ಗಸೂಚಿ ದರ ಕಡಿಮೆ ಮಾಡುವುದಕ್ಕೆ ಇಂದು ಸಭೆ ಮಾಡಿದ್ದೆವು. ಈಗಾಗಲೇ 45 ಲಕ್ಷದವರೆಗಿನ ಫ್ಲ್ಯಾಟ್‌ಗೆ ಶೇ.5%ರಿಂದ ಶೇ.3ರವರೆಗೆ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್‌ನೊಳಗೆ ಎಲ್ಲೆಲ್ಲಿ ಮಾರ್ಗಸೂಚಿ ದರ ಕಡಿಮೆ ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದೇ ರೀತಿ ಎಲ್ಲೆಲ್ಲಿ ಮಾರ್ಗಸೂಚಿ ದರ ಹೆಚ್ಚಳ ಮಾಡಬಹುದು ಅಲ್ಲೂ ದರ ಹೆಚ್ಚಳ ಮಾಡಲು ಸೂಚಿಸಲಾಗಿದೆ.

ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ವಿಶೇಷ ಆರ್ಥಿಕ ಕಾರಿಡಾರ್ ಪಕ್ಕದಲ್ಲಿರುವ ಜಮೀನು, ನಿವೇಶನ ಮೇಲಿನ ಮಾರ್ಗಸೂಚಿ ದರ ಹೆಚ್ಚಳ ಮಾಡಲು ಸೂಚಿಸಲಾಗಿದೆ. ಕೊರೊನಾ ಈ ಸಂಕಷ್ಟದ ಸಮಯದಲ್ಲಿ ಮಾರ್ಗಸೂಚಿ ದರ‌ ಕಡಿಮೆ ಮಾಡುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.

ಇದನ್ನೂ ಓದಿ : ತಮಿಳುನಾಡು ಮಾದರಿಯಲ್ಲಿ ತೈಲದ ಮೇಲಿನ ಸೆಸ್ ಕಡಿತ: ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಎಂದ ಬೈರತಿ ಬಸವರಾಜ್

ಬೆಂಗಳೂರು : ನಿವೇಶನ, ಮನೆ ಖರೀದಿದಾರರಿಗೆ ಸರ್ಕಾರ ಸಿಹಿ ಸುದ್ದಿ ಕೊಡಲು ಮುಂದಾಗಿದೆ. ಸ್ಥಿರಾಸ್ತಿ ಮೇಲಿನ ಮಾರ್ಗಸೂಚಿ ದರವನ್ನು ಕಡಿಮೆ‌ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಕೋವಿಡ್ ಬಂದ ಬಳಿಕ ರಿಯಲ್‌ ಎಸ್ಟೇಟ್ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಸರ್ಕಾರಕ್ಕೆ ಮುದ್ರಾಂಕ ಶುಲ್ಕ ಸಂಗ್ರಹದಲ್ಲೂ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇತ್ತ ಸಂಘ-ಸಂಸ್ಥೆಗಳು ಮಾರ್ಗಸೂಚಿ ದರವನ್ನು ಕಡಿಮೆ ಮಾಡುವಂತೆ ಮನವಿಯನ್ನೂ ಮಾಡಿದ್ದವು. ಇದೀಗ ಸರ್ಕಾರ ಮಾರ್ಗಸೂಚಿ ದರವನ್ನು ಕಡಿಮೆ ಮಾಡಲು ಮುಂದಾಗಿದೆ.

ಕಂದಾಯ ಸಚಿವ ಆರ್ ಅಶೋಕ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ

ಈ ಬಗ್ಗೆ ಮಾತಮಾಡಿದ ಅವರು, ಸ್ಥಿರಾಸ್ತಿ ನೋಂದಣಿ ಮುದ್ರಾಂಕ ಶುಲ್ಕ ಜಾಸ್ತಿ ಇದೆ. ಕಡಿಮೆ ಮಾಡಬೇಕು ಅನ್ನುವ ಮನವಿ ಇತ್ತು. ಕಳೆದ ಆರು ತಿಂಗಳಿಂದ ಈ ಬಗ್ಗೆ ಹಲವರು ಮನವಿ ಮಾಡಿದ್ದಾರೆ. ಈ ಸಂಬಂಧ ಸ್ಥಿರಾಸ್ಥಿ ಮಾರ್ಗಸೂಚಿ ದರ ಕಡಿಮೆ ಮಾಡುವುದಕ್ಕೆ ಇಂದು ಸಭೆ ಮಾಡಿದ್ದೆವು. ಈಗಾಗಲೇ 45 ಲಕ್ಷದವರೆಗಿನ ಫ್ಲ್ಯಾಟ್‌ಗೆ ಶೇ.5%ರಿಂದ ಶೇ.3ರವರೆಗೆ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್‌ನೊಳಗೆ ಎಲ್ಲೆಲ್ಲಿ ಮಾರ್ಗಸೂಚಿ ದರ ಕಡಿಮೆ ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದೇ ರೀತಿ ಎಲ್ಲೆಲ್ಲಿ ಮಾರ್ಗಸೂಚಿ ದರ ಹೆಚ್ಚಳ ಮಾಡಬಹುದು ಅಲ್ಲೂ ದರ ಹೆಚ್ಚಳ ಮಾಡಲು ಸೂಚಿಸಲಾಗಿದೆ.

ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ವಿಶೇಷ ಆರ್ಥಿಕ ಕಾರಿಡಾರ್ ಪಕ್ಕದಲ್ಲಿರುವ ಜಮೀನು, ನಿವೇಶನ ಮೇಲಿನ ಮಾರ್ಗಸೂಚಿ ದರ ಹೆಚ್ಚಳ ಮಾಡಲು ಸೂಚಿಸಲಾಗಿದೆ. ಕೊರೊನಾ ಈ ಸಂಕಷ್ಟದ ಸಮಯದಲ್ಲಿ ಮಾರ್ಗಸೂಚಿ ದರ‌ ಕಡಿಮೆ ಮಾಡುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.

ಇದನ್ನೂ ಓದಿ : ತಮಿಳುನಾಡು ಮಾದರಿಯಲ್ಲಿ ತೈಲದ ಮೇಲಿನ ಸೆಸ್ ಕಡಿತ: ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಎಂದ ಬೈರತಿ ಬಸವರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.