ETV Bharat / state

ಇಂದು ನಾರಾಯಣ ಗೌಡ ಬಿಡುಗಡೆ ಸಾಧ್ಯತೆ: ಗೌಡರ ಪರ ವಕೀಲ ಕುಮಾರ್​ ಹೇಳಿಕೆ

author img

By ETV Bharat Karnataka Team

Published : Jan 9, 2024, 7:20 AM IST

Updated : Jan 9, 2024, 11:54 AM IST

ಜಾಮೀನು ಆದೇಶದ ಪ್ರತಿ ಕಾರಾಗೃಹಕ್ಕೆ ಸರಿಯಾದ ಸಮಯಕ್ಕೆ ತಲುಪಿದೆ. ಆದರೆ ಜೈಲಿನ ಅಧಿಕಾರಿಗಳು ನಮಗೆ ಸಮಯ ಇದೆ ಯಾವಾಗ ಬೇಕಾದರೂ ಬಿಡುಗಡೆ ಮಾಡಬಹುದು ಎನ್ನುತ್ತಿದ್ದಾರೆ ಎಂದು ನಾರಾಯಣ ಗೌಡ ಪರ ವಕೀಲ ಕುಮಾರ್​ ಹೇಳಿದ್ದಾರೆ.

Advocate Kumar for Gowda
ಗೌಡರ ಪರ ವಕೀಲರ ಕುಮಾರ್​
ಗೌಡರ ಪರ ವಕೀಲ ಕುಮಾರ್​

ಆನೇಕಲ್ ( ಬೆಂಗಳೂರು): "ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಅವರ ಜಾಮೀನು ಆದೇಶದ ಪ್ರತಿ ಸರಿಯಾದ ಸಮಯಕ್ಕೆ ಜೈಲನ್ನು ತಲುಪಿದೆ. ಆದರೆ ಕಾರಾಗೃಹದಲ್ಲಿ ಆದೇಶದ ಪ್ರತಿ ಸರಿಯಾದ ಸಮಯಕ್ಕೆ ಬಂದಿಲ್ಲ ಅಂತಿದ್ದಾರೆ. ಕಾರಾಗೃಹದಲ್ಲಿ ಇರುವಂತಹ ಕಾನೂನು ಪ್ರಕ್ರಿಯೆ ಏನು ಎಂಬುದರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಇಮೇಲ್​ ಮುಖಾಂತರ 6.45ರ ಹೊತ್ತಿಗೆ ಆದೇಶದ ಪ್ರತಿ ಕೇಂದ್ರ ಕಾರಾಗೃಹಕ್ಕೆ ತಲುಪಿದೆ. ಆದರೆ ಜೈಲಿನ ಅಧಿಕಾರಿಗಳು ನಾವು ಚರ್ಚೆ ಮಾಡುತ್ತಿದ್ದೇವೆ. ನಮಗೆ ಸಮಯ ಇದೆ ಯಾವಾಗ ಬೇಕಾದರೂ ಅವರನ್ನು ಬಿಡುಗಡೆ ಮಾಡಬಹುದು ಎನ್ನುತ್ತಿದ್ದಾರೆ" ಎಂದು ನಾರಾಯಣ ಗೌಡ ಪರ ವಕೀಲ ಕುಮಾರ್​ ಹೇಳಿದ್ದಾರೆ.

ವಕೀಲ ಕುಮಾರ್​ ಅವರು ಸೋಮವಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದು, ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, "ಇದುವರೆಗೆ ಯಾವುದೇ ಪೊಲೀಸ್​ ಠಾಣೆಯಲ್ಲಿ ಕೂಡ ಪೊಲೀಸರು ಯಾವುದೇ ಪ್ರಕರಣಗಳಿಗೆ ಸಂಬಂಧಿಸಿ ಬಾಡಿ ವಾರೆಂಟ್​ ತೆಗೆದುಕೊಂಡಿಲ್ಲ. ಹಾಗಾಗಿ ಬಾಡಿ ವಾರೆಂಟ್​ ಇಲ್ಲದೆ ಅವರನ್ನು ಒಳಗಡೆ ಇರಿಸಿಕೊಳ್ಳುವ ಅಧಿಕಾರ ಅವರಿಗಿಲ್ಲ. ಇಲ್ಲಿಯವರೆಗೆ ನಾರಾಯಣ ಗೌಡ ಸೇರಿ ಇತರ ಬಂಧಿತ ಕನ್ನಡಪರ ಕಾರ್ಯಕರ್ತರ ಮೇಲೂ ಯಾವುದೇ ಬಾಡಿ ವಾರೆಂಟ್​ ಆಗಿಲ್ಲ. ಹಲಸೂರು ಗೇಟ್​ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ, ಜಾಮೀನು ಅಪರಾಧ ಆಗಿರುವುದರಿಂದ ಗೌಡ್ರು ಸೇರಿ ಎಲ್ಲಾ ಕಾರ್ಯಕರ್ತರು ಹೊರಗಡೆ ಬರುತ್ತಾರೆ. ಕುಮಾರಸ್ವಾಮಿ ಲೇಔಟ್​​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪಿಡಿಪಿಎ ಕಾಯ್ದೆಯ 2a, 2b ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅದು ಜಾಮೀನು ನೀಡದ ಪ್ರಕರಣವಾಗಿದೆ. ಆದ್ದರಿಂದ ಅದರಲ್ಲಿ ಸ್ವಲ್ಪ ನಮಗೆ ತೊಂದರೆ ಆಗುವ ಸಾಧ್ಯತೆ ಇದೆ." ಎಂದು ತಿಳಿಸಿದರು.

2017ರಲ್ಲಿ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ನಾರಾಯಣ ಗೌಡ ಅವರು ಇದುವರೆಗೆ ಅವರಿಗೆ ಸಿಕ್ಕಿರಲಿಲ್ವಾ? ಈಗ ಈ ಸಂದರ್ಭದಲ್ಲಿ ಯಾಕೆ ಬಂಧಿಸಿದ್ದಾರೆ? ಇದರ ಹಿಂದೆ ಯಾರಿದ್ದಾರೆ? ಏನು ನಡೀತಿದೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ. ನಾರಾಯಣ ಗೌಡ ಅವರು ಹೊರಗಡೆ ಬರುತ್ತಾರೆ. ಆದರೆ ನಾವೀಗ ನ್ಯಾಯ ಕೇಳುವ ಪರಿಸ್ಥಿತಿಯಲ್ಲಿದ್ದೇವೆ. 2017ರ ಪ್ರಕರಣದ ಕುರಿತು ಗೌಡ್ರಿಗೆ ಇಲ್ಲಿಯವರೆಗೆ ಯಾಕೆ ಸಮನ್ಸ್​ ಬಂದಿಲ್ಲ. ಈಗ ಯಾಕೆ ಹೀಗಾಗುತ್ತಿದೆ. ಸರ್ಕಾರ ಕನ್ನಡಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ" ಎಂದು ಕುಮಾರ್​ ಆರೋಪಿಸಿದರು.

ಇದನ್ನೂ ಓದಿ: ನಾರಾಯಣಗೌಡ ಬಿಡುಗಡೆಗೆ ಆಗ್ರಹಿಸಿ ಕರವೇ ಪಂಜಿನ ಮೆರವಣಿಗೆ

ಗೌಡರ ಪರ ವಕೀಲ ಕುಮಾರ್​

ಆನೇಕಲ್ ( ಬೆಂಗಳೂರು): "ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಅವರ ಜಾಮೀನು ಆದೇಶದ ಪ್ರತಿ ಸರಿಯಾದ ಸಮಯಕ್ಕೆ ಜೈಲನ್ನು ತಲುಪಿದೆ. ಆದರೆ ಕಾರಾಗೃಹದಲ್ಲಿ ಆದೇಶದ ಪ್ರತಿ ಸರಿಯಾದ ಸಮಯಕ್ಕೆ ಬಂದಿಲ್ಲ ಅಂತಿದ್ದಾರೆ. ಕಾರಾಗೃಹದಲ್ಲಿ ಇರುವಂತಹ ಕಾನೂನು ಪ್ರಕ್ರಿಯೆ ಏನು ಎಂಬುದರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಇಮೇಲ್​ ಮುಖಾಂತರ 6.45ರ ಹೊತ್ತಿಗೆ ಆದೇಶದ ಪ್ರತಿ ಕೇಂದ್ರ ಕಾರಾಗೃಹಕ್ಕೆ ತಲುಪಿದೆ. ಆದರೆ ಜೈಲಿನ ಅಧಿಕಾರಿಗಳು ನಾವು ಚರ್ಚೆ ಮಾಡುತ್ತಿದ್ದೇವೆ. ನಮಗೆ ಸಮಯ ಇದೆ ಯಾವಾಗ ಬೇಕಾದರೂ ಅವರನ್ನು ಬಿಡುಗಡೆ ಮಾಡಬಹುದು ಎನ್ನುತ್ತಿದ್ದಾರೆ" ಎಂದು ನಾರಾಯಣ ಗೌಡ ಪರ ವಕೀಲ ಕುಮಾರ್​ ಹೇಳಿದ್ದಾರೆ.

ವಕೀಲ ಕುಮಾರ್​ ಅವರು ಸೋಮವಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದು, ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, "ಇದುವರೆಗೆ ಯಾವುದೇ ಪೊಲೀಸ್​ ಠಾಣೆಯಲ್ಲಿ ಕೂಡ ಪೊಲೀಸರು ಯಾವುದೇ ಪ್ರಕರಣಗಳಿಗೆ ಸಂಬಂಧಿಸಿ ಬಾಡಿ ವಾರೆಂಟ್​ ತೆಗೆದುಕೊಂಡಿಲ್ಲ. ಹಾಗಾಗಿ ಬಾಡಿ ವಾರೆಂಟ್​ ಇಲ್ಲದೆ ಅವರನ್ನು ಒಳಗಡೆ ಇರಿಸಿಕೊಳ್ಳುವ ಅಧಿಕಾರ ಅವರಿಗಿಲ್ಲ. ಇಲ್ಲಿಯವರೆಗೆ ನಾರಾಯಣ ಗೌಡ ಸೇರಿ ಇತರ ಬಂಧಿತ ಕನ್ನಡಪರ ಕಾರ್ಯಕರ್ತರ ಮೇಲೂ ಯಾವುದೇ ಬಾಡಿ ವಾರೆಂಟ್​ ಆಗಿಲ್ಲ. ಹಲಸೂರು ಗೇಟ್​ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ, ಜಾಮೀನು ಅಪರಾಧ ಆಗಿರುವುದರಿಂದ ಗೌಡ್ರು ಸೇರಿ ಎಲ್ಲಾ ಕಾರ್ಯಕರ್ತರು ಹೊರಗಡೆ ಬರುತ್ತಾರೆ. ಕುಮಾರಸ್ವಾಮಿ ಲೇಔಟ್​​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪಿಡಿಪಿಎ ಕಾಯ್ದೆಯ 2a, 2b ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅದು ಜಾಮೀನು ನೀಡದ ಪ್ರಕರಣವಾಗಿದೆ. ಆದ್ದರಿಂದ ಅದರಲ್ಲಿ ಸ್ವಲ್ಪ ನಮಗೆ ತೊಂದರೆ ಆಗುವ ಸಾಧ್ಯತೆ ಇದೆ." ಎಂದು ತಿಳಿಸಿದರು.

2017ರಲ್ಲಿ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ನಾರಾಯಣ ಗೌಡ ಅವರು ಇದುವರೆಗೆ ಅವರಿಗೆ ಸಿಕ್ಕಿರಲಿಲ್ವಾ? ಈಗ ಈ ಸಂದರ್ಭದಲ್ಲಿ ಯಾಕೆ ಬಂಧಿಸಿದ್ದಾರೆ? ಇದರ ಹಿಂದೆ ಯಾರಿದ್ದಾರೆ? ಏನು ನಡೀತಿದೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ. ನಾರಾಯಣ ಗೌಡ ಅವರು ಹೊರಗಡೆ ಬರುತ್ತಾರೆ. ಆದರೆ ನಾವೀಗ ನ್ಯಾಯ ಕೇಳುವ ಪರಿಸ್ಥಿತಿಯಲ್ಲಿದ್ದೇವೆ. 2017ರ ಪ್ರಕರಣದ ಕುರಿತು ಗೌಡ್ರಿಗೆ ಇಲ್ಲಿಯವರೆಗೆ ಯಾಕೆ ಸಮನ್ಸ್​ ಬಂದಿಲ್ಲ. ಈಗ ಯಾಕೆ ಹೀಗಾಗುತ್ತಿದೆ. ಸರ್ಕಾರ ಕನ್ನಡಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ" ಎಂದು ಕುಮಾರ್​ ಆರೋಪಿಸಿದರು.

ಇದನ್ನೂ ಓದಿ: ನಾರಾಯಣಗೌಡ ಬಿಡುಗಡೆಗೆ ಆಗ್ರಹಿಸಿ ಕರವೇ ಪಂಜಿನ ಮೆರವಣಿಗೆ

Last Updated : Jan 9, 2024, 11:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.