ETV Bharat / state

ನಕಲಿ ಚೆಕ್​ ಬಳಸಿ ಹಣ ಲೂಟಿ ಪ್ರಕರಣ: ಬ್ಯಾಂಕ್​ ಮ್ಯಾನೇಜರ್​ ಸೇರಿ ಮೂವರು ಅಂದರ್​ - ನಕಲಿ ಚೆಕ್​ ಬಳಸಿ ಹಣ ಲೂಟಿ ಪ್ರಕರಣ

ನಕಲಿ ಚೆಕ್​ ಬಳಸಿ ಬ್ಯಾಂಕ್ ಮ್ಯಾನೇಜರ್​ವೊಬ್ಬ ಗ್ರಾಹಕರ ಹಣ ಲೂಟಿ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ನಕಲಿ ಚೆಕ್​ ಬಳಸಿ ಹಣ ಲೂಟಿ ಪ್ರಕರಣ
author img

By

Published : Nov 13, 2019, 11:17 PM IST

Updated : Nov 14, 2019, 5:25 PM IST

ಬೆಂಗಳೂರು: ನಕಲಿ ಚೆಕ್​ ಬಳಸಿ ಬ್ಯಾಂಕ್ ಮ್ಯಾನೇಜರ್​ವೊಬ್ಬ ಗ್ರಾಹಕರ ಹಣ ಲೂಟಿ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ನಕಲಿ ಚೆಕ್ ಬಳಸಿ ಎನ್​ಜಿಒ ಸಂಸ್ಥೆಯೊಂದರ ಖಾತೆಗೆ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್​ ಹಾಗೂ ಆತನ ಸಹಚರರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಜು.05ರಂದು ಹರೀಶ್ ಎಂಬಾತ ರಾಮಮೂರ್ತಿ ನಗರದಲ್ಲಿರುವ ಐಸಿಐಸಿಐ ಬ್ಯಾಂಕ್​ನಲ್ಲಿ ಎನ್​ಜಿಒ ಸಂಸ್ಥೆ ಹೆಸರಿನಲ್ಲಿ 3.95 ಕೋಟಿ ರೂ. ಚೆಕ್ ನೀಡಿ ವರ್ಗಾವಣೆ ಮಾಡುವಂತೆ ಸೂಚಿಸಿದ್ದ. ಅದರಂತೆ ಹಣ ಮತ್ತೊಂದು ಅಕೌಂಟ್​ಗೆ ವರ್ಗಾವಣೆಯಾಗಿತ್ತು.

ಚೆಕ್​ನಿಂದ ವರ್ಗಾವಣೆಯಾದ ಹಣವನ್ನು ನೆಲಮಂಗಲದ ಐಸಿಐಸಿಐ ಬ್ಯಾಂಕ್​ಗೆ ಹೋಗಿ ಬೇರೆ ಅಕೌಂಟ್​ಗಳಿಗೆ ಡೆಪಾಸಿಟ್ ಮಾಡಲು ಹೋದಾಗ ದಾಖಲೆಗಳು ಇಲ್ಲದೆ ಚಡಪಡಿಸಿದ್ದರಿಂದ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಪರಿಕ್ಷಿತ್ ನಾಯ್ಡು, ಗುರು, ರಂಗಸ್ವಾಮಿ, ಅಜಯ್ ಹಾಗೂ ಹರೀಶ್ ಎಂಬುವವರನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದು, ನಕಲಿ ಚೆಕ್ ಪಾಸ್ ಮಾಡಲು ಸಹಕರಿಸಿದ ಆರೋಪದಡಿಯಲ್ಲಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್​ನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬೆಂಗಳೂರು: ನಕಲಿ ಚೆಕ್​ ಬಳಸಿ ಬ್ಯಾಂಕ್ ಮ್ಯಾನೇಜರ್​ವೊಬ್ಬ ಗ್ರಾಹಕರ ಹಣ ಲೂಟಿ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ನಕಲಿ ಚೆಕ್ ಬಳಸಿ ಎನ್​ಜಿಒ ಸಂಸ್ಥೆಯೊಂದರ ಖಾತೆಗೆ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್​ ಹಾಗೂ ಆತನ ಸಹಚರರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಜು.05ರಂದು ಹರೀಶ್ ಎಂಬಾತ ರಾಮಮೂರ್ತಿ ನಗರದಲ್ಲಿರುವ ಐಸಿಐಸಿಐ ಬ್ಯಾಂಕ್​ನಲ್ಲಿ ಎನ್​ಜಿಒ ಸಂಸ್ಥೆ ಹೆಸರಿನಲ್ಲಿ 3.95 ಕೋಟಿ ರೂ. ಚೆಕ್ ನೀಡಿ ವರ್ಗಾವಣೆ ಮಾಡುವಂತೆ ಸೂಚಿಸಿದ್ದ. ಅದರಂತೆ ಹಣ ಮತ್ತೊಂದು ಅಕೌಂಟ್​ಗೆ ವರ್ಗಾವಣೆಯಾಗಿತ್ತು.

ಚೆಕ್​ನಿಂದ ವರ್ಗಾವಣೆಯಾದ ಹಣವನ್ನು ನೆಲಮಂಗಲದ ಐಸಿಐಸಿಐ ಬ್ಯಾಂಕ್​ಗೆ ಹೋಗಿ ಬೇರೆ ಅಕೌಂಟ್​ಗಳಿಗೆ ಡೆಪಾಸಿಟ್ ಮಾಡಲು ಹೋದಾಗ ದಾಖಲೆಗಳು ಇಲ್ಲದೆ ಚಡಪಡಿಸಿದ್ದರಿಂದ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಪರಿಕ್ಷಿತ್ ನಾಯ್ಡು, ಗುರು, ರಂಗಸ್ವಾಮಿ, ಅಜಯ್ ಹಾಗೂ ಹರೀಶ್ ಎಂಬುವವರನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದು, ನಕಲಿ ಚೆಕ್ ಪಾಸ್ ಮಾಡಲು ಸಹಕರಿಸಿದ ಆರೋಪದಡಿಯಲ್ಲಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್​ನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Intro:ಕಳ್ಳಾಟ ನಡೆಸಿ ನಾಲ್ಕು ತಿಂಗಳ ಬಳಿಕ ಸಿಕ್ಕಿ ಬಿದ್ದ ಬ್ಯಾಂಕ್ ಮ್ಯಾನೇಜರ್ mojo Byite

ಬೈಟ್: ಡಾ ಶರಣಪ್ಪ, ಡಿಸಿಪಿ ,ಪೂರ್ವ ವಿಭಾಗ

ಜನ್ರು ಕೋಟಿ ಕೋಟಿ ‌ಹಣ ಮನೆಯಲ್ಲಿ ಇಟ್ರೆ ಕಳ್ಳರ ಹಾವಳಿ ಎಂದು ಸೆಕ್ಯೂರಿಟಿಗಾಗಿ ಬ್ಯಾಂಕ್ ನಲ್ಲಿ ಹಣ ಠೇವಣಿ ಮಾಡುತ್ತಾರೆ. ಆದ್ರೆ ಬ್ಯಾಂಕ್‌ನಲ್ಲೂ ಸಾರ್ವಜನಿಕರ ಹಣಕ್ಕೆ ಗ್ಯಾರಂಟಿ ಇಲ್ಲ ಅನ್ನೋ ವಿಚಾರ ಬಯಲಾಗಿದೆ. ಎನ್ ಜಿಒ ಒಂದರ ಅಕೌಂಟ್ ಗೆ ನಕಲಿ ಚೆಕ್ಕನ್ನ ಬಳಸಿ ಹಣ ಪಾಸ್ ಮಾಡಿದ ಆರೋಪದಲ್ಲಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ ಹಾಗು ಆತನ ಸಹಚರರನ್ನ ರಾಮಮೂರ್ತಿನಗರ ಪೊಲೀಸರು ಬಂಧಿಸಿ ತನಿಖೆ ಮುಂದುವರಸಿದ್ದಾರೆ.

ಜುಲೈ ಐದರಂದು ಹರೀಶ್ ಎಂಬಾಂತ ರಾಮಮೂರ್ತಿ ನಗರ ಐಸಿಐಸಿಐ ಬ್ಯಾಂಕ್ ಗೆ ಹೋಗಿ ಎನ್ ಜಿ ಒ ಸಂಸ್ಥೆ ಹೆಸರಿನಲ್ಲಿ
3.95 ಚೆಕ್ ನೀಡಿ ಕೋಟಿ ವರ್ಗಾವಣೆ ಮಾಡುವಂತೆ ಸೂಚಿಸಿದ್ದ ಅದರಂತೆ ಹಣ ಮತ್ತೋಂದು ಅಕೌಂಟ್ ಗೆ ವರ್ಗವಣೆಯಾಗಿತ್ತು.
ಅಷ್ಟು ಮಾತ್ರವಲ್ಲದೇ ಹಣ ವರ್ಗಾವಣೆಯಾದ ಸಂದೇಶ ಅಕೌಂಟ್ ಹೊಂದಿದ್ದವರಿಗೆ ತಿಳಿಯದಂತೆ ರಿಜಿಸ್ಟರ್ಡ್ ಮೊಬೈಲ್ ನಂಬರನ್ನೂ ಸಹ ಬದಲಿಸಿದ್ದರು.

ಚೆಕ್ ನಿಂದ ಪಾಸ್ ಆದ ಹಣವನ್ನ ನೆಲಮಂಗಲದ ಐಸಿಐಸಿಐ ಬ್ಯಾಂಕ್ ಗೆ ಹೋಗಿ ಮತ್ತೋಂದು ಅಕೌಂಟ್ ಗಳಿಗೆ ಡೆಪಾಸಿಟ್ ಮಾಡಲು ಹೋಗಿದ್ದರು. ಆದ್ರೆ ಅಲ್ಲಿ ದಾಖಲೆಗಳು ಇಲ್ಲದೆ ಚಡಪಡಿಸಿದ್ದರಿಂದ ಬ್ಯಾಂಕ್ ಸಿಬ್ಬಂದಿ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ರು..

ಸರಿಯಾದ ಉತ್ತರ ನೀಡದಿದ್ದರಿಂದ ಪೊಲೀಸರು ಸ್ಥಳದಲ್ಲೇ ಪರಿಕ್ಷಿತ್ ನಾಯ್ಡು, ಗುರು, ರಂಗಸ್ವಾಮಿ, ಅಜಯ್ ಹಾಗೂ ಹರೀಶ್ ನನ್ನ ಬಂಧಿಸಿ ಪೊಲೀಸರು ಇದರಲ್ಲಿ ಬ್ಯಾಂಕ್ ಸಿಬ್ಬಂದಿ ಪಾತ್ರ ಇದ್ದೀಯಾ ಎಂಬುದರ ಬಗ್ಗೆ ತನಿಖೆ ನಡೆಸಿದ್ದಾಗ .ಹಣ ವರ್ಗವಣೆ ದಿನ ಮ್ಯಾನೇಜರ್ ಪ್ರಸಾದ್ ರಜೆಯಲ್ಲಿ ಇದ್ದು ಅಸಿಸ್ಟೇಟ್ ಮ್ಯಾನೇಜರ್ ಹರೀಶ್ ಬಳಿ ಯಾವುದೇ ದಾಖಲೆಗಳನ್ನ ನೀಡದೆ ಹಣ ವರ್ಗವಣೆಯಾಗುವಂತೆ ನೋಡಿಕೊಡಿರುವುದು ಖಾತ್ರಿಯಾಗಿತ್ತು. .

ಇದೆಲ್ಲವನ್ನ ಕೂಲಂಕುಶವಾಗಿ ಪರಿಶೀಲನೆ ನೆಡೆಸಿದ ಪೊಲೀಸರು ಇದೀಗಾ 3.95 ಕೋಟಿ ನಕಲಿ ಚೆಕ್ ಪಾಸ್ ಮಾಡಲು ಸಹಕರಿಸಿದ ಆರೋಪದ ಅಡಿಯಲ್ಲಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರನ್ನ ಬಂಧಿಸಿದ್ದಾರೆ.ಸದ್ಯ ಈ ನಕಲಿ ಚೆಕ್ ಪಾಸ್ ಮಾಡಿದ ಪ್ರಕರಣದಲ್ಲಿ ಇನ್ನೂ ಕೆಲ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. Body:KN_BNG_05_BANK_7204498Conclusion:KN_BNG_05_BANK_7204498
Last Updated : Nov 14, 2019, 5:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.