ETV Bharat / state

ಸಿದ್ದರಾಮಯ್ಯ ವಿರೋಧ ಮಾಡಲೇಬೇಕೆಂದು ತಪ್ಪು ಹುಡುಕುತ್ತಿದ್ದಾರೆ : ಸಚಿವ ಸುರೇಶ್ ಕುಮಾರ್ - minister Sureshkumar

ಉಪನ್ಯಾಸಕರ ಆಯ್ಕೆ ಮತ್ತು ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದ್ದು 2015ರಲ್ಲಿ, ಆಗ ನೀವೇ ಮುಖ್ಯಮಂತ್ರಿಗಳಾಗಿದ್ದದ್ದು. 2015ರಿಂದ 2018ರವರೆಗೂ ನಿಮ್ಮ ಅವಧಿಯಲ್ಲಿ ಏಕೆ ಈ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ.

ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್
author img

By

Published : Jul 15, 2020, 11:57 PM IST

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯು ಫಲಿತಾಂಶ ಕುಸಿಯಲು ಉಪನ್ಯಾಸಕರ ಕೊರತೆ ಸಹ ಒಂದು ಕಾರಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ಗೆ ಶಿಕ್ಷಣ ಸಚಿವ ಸುರೇಶ್​​ಕುಮಾರ್​​ ತಿರುಗೇಟು ನೀಡಿದ್ದಾರೆ.

ಸಿದ್ಧರಾಮಯ್ಯನವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರು, ಪ್ರಾಜ್ಞರು, ಅತಿ ಹೆಚ್ಚು ಸಲ ಬಜೆಟ್ ಮಂಡಿಸಿರುವ ಖ್ಯಾತಿಯುಳ್ಳವರು ಸಹ. ಕೇವಲ ವಿರೋಧ ಮಾಡಲೆಂದೇ ಸಂಶೋಧಿಸಿರುವ ಕಾರಣಕ್ಕೆ ಉತ್ತರ ನೀಡುತ್ತಿದ್ದೇನೆ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

  • Shortage of teachers is also one of the reasons for low pass percentage in PUC examinations.@nimmasuresh, who has stopped teachers' appointment process, should own the responsibility for this.

    1/2 pic.twitter.com/x1ud2pusXF

    — Siddaramaiah (@siddaramaiah) July 15, 2020 " class="align-text-top noRightClick twitterSection" data=" ">

ದ್ವಿತೀಯ ಪಿಯು ಫಲಿತಾಂಶಕ್ಕೂ 1,298 ಉಪನ್ಯಾಸಕರ ಕೌನ್ಸೆಲಿಂಗ್ ರದ್ದು ಮಾಡಿರುವುದಕ್ಕೂ ನಂಟು ಮಾಡುತ್ತಿದ್ದಾರೆ. ಉಪನ್ಯಾಸಕರ ಆಯ್ಕೆ ಮತ್ತು ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದ್ದು 2015ರಲ್ಲಿ, ಆಗ ನೀವೇ ಮುಖ್ಯಮಂತ್ರಿಗಳಾಗಿದ್ದದ್ದು. 2015ರಿಂದ 2018ರವರೆಗೂ ನಿಮ್ಮ ಅವಧಿಯಲ್ಲಿ ಏಕೆ ಈ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ನಾನು ಸಚಿವನಾದ ಮೇಲೆ ಈ ಉಪನ್ಯಾಸಕರ ಆಯ್ಕೆ ಫಲಿತಾಂಶ ಪ್ರಕಟವಾಗುವಲ್ಲಿ ಕ್ರಮ‌ ಜರುಗಿಸಿದೆ.‌ ನಂತರ ಕೋರ್ಟ್ ತಡೆಯಾಜ್ಞೆ ಮುಂತಾದ ಸಮಸ್ಯೆಗಳು ಬಂದವು. ಈ ತಿಂಗಳ 8ರಿಂದ ಅಂದರೆ ಜುಲೈ 8ರಿಂದ ಕೌನ್ಸೆಲಿಂಗ್ ಪ್ರಾರಂಭವಾಗಬೇಕಿತ್ತು. ಆದರೆ ಆರ್ಥಿಕ ಇಲಾಖೆಯ ಆದೇಶದ ಮೇರೆಗೆ ಕೌನ್ಸೆಲಿಂಗ್ಅನ್ನು ಮುಂದೂಡಲಾಗಿದೆಯಷ್ಟೇ, ಅದನ್ನು ರದ್ದುಗೊಳಿಸಿಲ್ಲ. ಮೇಲಾಗಿ ಪಿಯುಸಿ ಪರೀಕ್ಷೆಗಳು ಮುಗಿದದ್ದು ಜೂನ್ 18ರಂದು‌, ಕೌನ್ಸೆಲಿಂಗ್ ಮುಂದೂಡಿರುವುದು ಜುಲೈ 8ರಂದು ಎಂದು ಹೇಳಿದ್ದಾರೆ.

  • " class="align-text-top noRightClick twitterSection" data="">

ಈ ಅಂಶಗಳನ್ನ ಗಮನಿಸಿದರೆ ಗೊತ್ತಾಗುತ್ತದೆ ಪ್ರತಿಪಕ್ಷದ ನಾಯಕರು ಯಾವುದಾದರೂ ಕಾರಣದಿಂದ ವಿರೋಧ ಮಾಡಲೇಬೇಕೆಂದು ತಪ್ಪನ್ನು ಹುಡುಕುತ್ತಿದ್ದಾರೆ. ಆದರೆ ಆ ತಪ್ಪಿನ ಮೂಲ 2015ರಿಂದ 2018ರವರೆಗೆ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸದೆ, ಘನಕಾರ್ಯ ಮಾಡಿರುವ ಸಿದ್ದರಾಮಯ್ಯನವರ ಸರ್ಕಾರದಲ್ಲಿಯೇ ಇದೆ ಎಂದು ಟಾಂಗ್ ನೀಡಿದ್ದಾರೆ.

ಈಗಲೂ 1,298 ಉಪನ್ಯಾಸಕರ ಕೌನ್ಸೆಲಿಂಗ್ ನಡೆಸುವುದಕ್ಕೆ ಬದ್ಧನಾಗಿದ್ದೇನೆ. ಹಾಗೆಯೇ ಸಿದ್ದರಾಮಯ್ಯನವರ ಅವಧಿಯಲ್ಲಿ ಬಂದ ಪಿಯುಸಿ ಫಲಿತಾಂಶಗಳಿಗಿಂತ ಈ ಬಾರಿಯ ಫಲಿತಾಂಶ ಹೆಚ್ಚು ಉತ್ತಮವಾಗಿದೆ ಎಂಬುದನ್ನೂ ಅವರ ಗಮನಕ್ಕೆ ತರುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯು ಫಲಿತಾಂಶ ಕುಸಿಯಲು ಉಪನ್ಯಾಸಕರ ಕೊರತೆ ಸಹ ಒಂದು ಕಾರಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ಗೆ ಶಿಕ್ಷಣ ಸಚಿವ ಸುರೇಶ್​​ಕುಮಾರ್​​ ತಿರುಗೇಟು ನೀಡಿದ್ದಾರೆ.

ಸಿದ್ಧರಾಮಯ್ಯನವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರು, ಪ್ರಾಜ್ಞರು, ಅತಿ ಹೆಚ್ಚು ಸಲ ಬಜೆಟ್ ಮಂಡಿಸಿರುವ ಖ್ಯಾತಿಯುಳ್ಳವರು ಸಹ. ಕೇವಲ ವಿರೋಧ ಮಾಡಲೆಂದೇ ಸಂಶೋಧಿಸಿರುವ ಕಾರಣಕ್ಕೆ ಉತ್ತರ ನೀಡುತ್ತಿದ್ದೇನೆ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

  • Shortage of teachers is also one of the reasons for low pass percentage in PUC examinations.@nimmasuresh, who has stopped teachers' appointment process, should own the responsibility for this.

    1/2 pic.twitter.com/x1ud2pusXF

    — Siddaramaiah (@siddaramaiah) July 15, 2020 " class="align-text-top noRightClick twitterSection" data=" ">

ದ್ವಿತೀಯ ಪಿಯು ಫಲಿತಾಂಶಕ್ಕೂ 1,298 ಉಪನ್ಯಾಸಕರ ಕೌನ್ಸೆಲಿಂಗ್ ರದ್ದು ಮಾಡಿರುವುದಕ್ಕೂ ನಂಟು ಮಾಡುತ್ತಿದ್ದಾರೆ. ಉಪನ್ಯಾಸಕರ ಆಯ್ಕೆ ಮತ್ತು ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದ್ದು 2015ರಲ್ಲಿ, ಆಗ ನೀವೇ ಮುಖ್ಯಮಂತ್ರಿಗಳಾಗಿದ್ದದ್ದು. 2015ರಿಂದ 2018ರವರೆಗೂ ನಿಮ್ಮ ಅವಧಿಯಲ್ಲಿ ಏಕೆ ಈ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ನಾನು ಸಚಿವನಾದ ಮೇಲೆ ಈ ಉಪನ್ಯಾಸಕರ ಆಯ್ಕೆ ಫಲಿತಾಂಶ ಪ್ರಕಟವಾಗುವಲ್ಲಿ ಕ್ರಮ‌ ಜರುಗಿಸಿದೆ.‌ ನಂತರ ಕೋರ್ಟ್ ತಡೆಯಾಜ್ಞೆ ಮುಂತಾದ ಸಮಸ್ಯೆಗಳು ಬಂದವು. ಈ ತಿಂಗಳ 8ರಿಂದ ಅಂದರೆ ಜುಲೈ 8ರಿಂದ ಕೌನ್ಸೆಲಿಂಗ್ ಪ್ರಾರಂಭವಾಗಬೇಕಿತ್ತು. ಆದರೆ ಆರ್ಥಿಕ ಇಲಾಖೆಯ ಆದೇಶದ ಮೇರೆಗೆ ಕೌನ್ಸೆಲಿಂಗ್ಅನ್ನು ಮುಂದೂಡಲಾಗಿದೆಯಷ್ಟೇ, ಅದನ್ನು ರದ್ದುಗೊಳಿಸಿಲ್ಲ. ಮೇಲಾಗಿ ಪಿಯುಸಿ ಪರೀಕ್ಷೆಗಳು ಮುಗಿದದ್ದು ಜೂನ್ 18ರಂದು‌, ಕೌನ್ಸೆಲಿಂಗ್ ಮುಂದೂಡಿರುವುದು ಜುಲೈ 8ರಂದು ಎಂದು ಹೇಳಿದ್ದಾರೆ.

  • " class="align-text-top noRightClick twitterSection" data="">

ಈ ಅಂಶಗಳನ್ನ ಗಮನಿಸಿದರೆ ಗೊತ್ತಾಗುತ್ತದೆ ಪ್ರತಿಪಕ್ಷದ ನಾಯಕರು ಯಾವುದಾದರೂ ಕಾರಣದಿಂದ ವಿರೋಧ ಮಾಡಲೇಬೇಕೆಂದು ತಪ್ಪನ್ನು ಹುಡುಕುತ್ತಿದ್ದಾರೆ. ಆದರೆ ಆ ತಪ್ಪಿನ ಮೂಲ 2015ರಿಂದ 2018ರವರೆಗೆ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸದೆ, ಘನಕಾರ್ಯ ಮಾಡಿರುವ ಸಿದ್ದರಾಮಯ್ಯನವರ ಸರ್ಕಾರದಲ್ಲಿಯೇ ಇದೆ ಎಂದು ಟಾಂಗ್ ನೀಡಿದ್ದಾರೆ.

ಈಗಲೂ 1,298 ಉಪನ್ಯಾಸಕರ ಕೌನ್ಸೆಲಿಂಗ್ ನಡೆಸುವುದಕ್ಕೆ ಬದ್ಧನಾಗಿದ್ದೇನೆ. ಹಾಗೆಯೇ ಸಿದ್ದರಾಮಯ್ಯನವರ ಅವಧಿಯಲ್ಲಿ ಬಂದ ಪಿಯುಸಿ ಫಲಿತಾಂಶಗಳಿಗಿಂತ ಈ ಬಾರಿಯ ಫಲಿತಾಂಶ ಹೆಚ್ಚು ಉತ್ತಮವಾಗಿದೆ ಎಂಬುದನ್ನೂ ಅವರ ಗಮನಕ್ಕೆ ತರುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.