ETV Bharat / state

ರೈಲ್ವೆ ತ್ಯಾಜ್ಯ ನೀರು ನನ್ ತಲೆ ಮೇಲೂ ಬಿದ್ದಿತ್ತು: ಸುರೇಶ್ ಅಂಗಡಿ

author img

By

Published : Jun 29, 2019, 5:00 PM IST

ಬೆಂಗಳೂರಿನಲ್ಲಿರುವ ಎಲ್ಲಾ ಆರ್​ಯುಬಿಗಳ ನಿರ್ವಹಣೆಯನ್ನು ಉನ್ನತೀಕರಿಸಿ, ಆರ್​ಯುಬಿ ಕೆಳಗಡೆ ಯಾವುದೇ ರೀತಿಯ ಮಲಿನ ನೀರು ಸೋರಿಕೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಸಚಿವ ಸುರೇಶ್ ಅಂಗಡಿ ಹೇಳಿದರು.

ಅಂಗಡಿ

ಬೆಂಗಳೂರು: ಬೆಳಗಾವಿಯಿಂದ ಬೆಂಗಳೂರಿಗೆ ನಾನು ಬರುವಾಗ ರೈಲ್ವೆ ಬ್ರಿಡ್ಜ್ ಕೆಳಗೆ ಹೋದಾಗ ಆ ಕೊಳಚೆ ನೀರು ನಮ್ಮ ಮೇಲೆ ಬಿದ್ದಿತ್ತು. ನಮಗೂ ಆ ಅನುಭವವಾಗಿದೆ ಎಂದು ಸಚಿವ ಸುರೇಶ್ ಚನ್ನಬಸಪ್ಪ ಅಂಗಡಿ ಹೇಳಿದರು.

ಬೆಂಗಳೂರಿನ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರ ಉದ್ಘಾಟನೆ ವೇಳೆ ಮೇಯರ್ ಗಂಗಾಂಬಿಕೆಯವರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ತಮಗಾದ ಅನುಭವವನ್ನು ಹೇಳಿಕೊಂಡರು. ನಗರದಲ್ಲಿರುವ ರೈಲ್ವೆ ಕೆಳ ಸೇತುವೆ ( ಆರ್​ಯುಬಿ) ಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಬಹಳ ತೊಂದರೆ ಆಗುತ್ತಿರುವುದಾಗಿ ಮೇಯರ್ ಸಚಿವರ ಗಮನಕ್ಕೆ ತಂದರು. ಸಾಕಷ್ಟು ಬಾರಿ ರೈಲ್ವೆ ಕೆಳ ಸೇತುವೆಯಲ್ಲಿ ಹೋಗುವಾಗ ದ್ವಿಚಕ್ರ ವಾಹನ ಸವಾರರ ಮೇಲೆ ತ್ಯಾಜ್ಯದ ನೀರು ಬೀಳುತ್ತಿದೆ. ಇದರಿಂದ ಕೆಲವೊಮ್ಮೆ ತಿಳಿಯದೇ ಜನರು ಸಡನ್ ಬ್ರೇಕ್ ಹಾಕಿ ಹಿಂದಿನ ಸವಾರರಿಗೆ ಅಪಘಾತ ಮಾಡಿದ್ದೂ ಇದೆ. ಈ ಬಗ್ಗೆ ರೈಲ್ವೆ ವಿಭಾಗಿಯ ವ್ಯವಸ್ಥಾಪಕ ಡಿ.ಜಿ. ಮಲ್ಯ ಅವರನ್ನು ಕಳೆದ 18ರಂದು ಖುದ್ದು ಭೇಟಿಯಾಗಿ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದು, 19ರಂದು ವಿವರವಾದ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.

ಸಚಿವ ಸುರೇಶ್ ಅಂಗಡಿ

ಇದಕ್ಕೆ ಸ್ಪಂದಿಸಿದ ರೈಲ್ವೆ ರಾಜ್ಯ ಸಚಿವರು, ಈ ರೀತಿಯ ತೊಂದರೆಯನ್ನು ನಾನೂ ಸಹ ಅನುಭವಿಸಿದ್ದೇನೆ. ಇದರಿಂದಾಗಿ ಎಲ್ಲರಿಗೂ ಇರಿಸು ಮುರಿಸಾಗುತ್ತದೆ. ನಗರದಲ್ಲಿರುವ ಎಲ್ಲ ಆರ್​ಯುಬಿಗಳ ನಿರ್ವಹಣೆಯನ್ನು ಉನ್ನತೀಕರಿಸಿ, ಆರ್​ಯುಬಿ ಕೆಳಗಡೆ ಯಾವುದೇ ರೀತಿಯ ಮಲಿನ ನೀರು ಸೋರಿಕೆ ಆಗದಂತೆ ಕ್ರಮ ವಹಿಸಲಾಗುವುದು. ಒಂದು ತಿಂಗಳೊಳಗೆ ಇದನ್ನ ಸರಿಪಡಿಸುವಂತೆ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್​​ರಿಗೆ ಸೂಚಿಸಿದರು.

ಬೆಂಗಳೂರು: ಬೆಳಗಾವಿಯಿಂದ ಬೆಂಗಳೂರಿಗೆ ನಾನು ಬರುವಾಗ ರೈಲ್ವೆ ಬ್ರಿಡ್ಜ್ ಕೆಳಗೆ ಹೋದಾಗ ಆ ಕೊಳಚೆ ನೀರು ನಮ್ಮ ಮೇಲೆ ಬಿದ್ದಿತ್ತು. ನಮಗೂ ಆ ಅನುಭವವಾಗಿದೆ ಎಂದು ಸಚಿವ ಸುರೇಶ್ ಚನ್ನಬಸಪ್ಪ ಅಂಗಡಿ ಹೇಳಿದರು.

ಬೆಂಗಳೂರಿನ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರ ಉದ್ಘಾಟನೆ ವೇಳೆ ಮೇಯರ್ ಗಂಗಾಂಬಿಕೆಯವರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ತಮಗಾದ ಅನುಭವವನ್ನು ಹೇಳಿಕೊಂಡರು. ನಗರದಲ್ಲಿರುವ ರೈಲ್ವೆ ಕೆಳ ಸೇತುವೆ ( ಆರ್​ಯುಬಿ) ಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಬಹಳ ತೊಂದರೆ ಆಗುತ್ತಿರುವುದಾಗಿ ಮೇಯರ್ ಸಚಿವರ ಗಮನಕ್ಕೆ ತಂದರು. ಸಾಕಷ್ಟು ಬಾರಿ ರೈಲ್ವೆ ಕೆಳ ಸೇತುವೆಯಲ್ಲಿ ಹೋಗುವಾಗ ದ್ವಿಚಕ್ರ ವಾಹನ ಸವಾರರ ಮೇಲೆ ತ್ಯಾಜ್ಯದ ನೀರು ಬೀಳುತ್ತಿದೆ. ಇದರಿಂದ ಕೆಲವೊಮ್ಮೆ ತಿಳಿಯದೇ ಜನರು ಸಡನ್ ಬ್ರೇಕ್ ಹಾಕಿ ಹಿಂದಿನ ಸವಾರರಿಗೆ ಅಪಘಾತ ಮಾಡಿದ್ದೂ ಇದೆ. ಈ ಬಗ್ಗೆ ರೈಲ್ವೆ ವಿಭಾಗಿಯ ವ್ಯವಸ್ಥಾಪಕ ಡಿ.ಜಿ. ಮಲ್ಯ ಅವರನ್ನು ಕಳೆದ 18ರಂದು ಖುದ್ದು ಭೇಟಿಯಾಗಿ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದು, 19ರಂದು ವಿವರವಾದ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.

ಸಚಿವ ಸುರೇಶ್ ಅಂಗಡಿ

ಇದಕ್ಕೆ ಸ್ಪಂದಿಸಿದ ರೈಲ್ವೆ ರಾಜ್ಯ ಸಚಿವರು, ಈ ರೀತಿಯ ತೊಂದರೆಯನ್ನು ನಾನೂ ಸಹ ಅನುಭವಿಸಿದ್ದೇನೆ. ಇದರಿಂದಾಗಿ ಎಲ್ಲರಿಗೂ ಇರಿಸು ಮುರಿಸಾಗುತ್ತದೆ. ನಗರದಲ್ಲಿರುವ ಎಲ್ಲ ಆರ್​ಯುಬಿಗಳ ನಿರ್ವಹಣೆಯನ್ನು ಉನ್ನತೀಕರಿಸಿ, ಆರ್​ಯುಬಿ ಕೆಳಗಡೆ ಯಾವುದೇ ರೀತಿಯ ಮಲಿನ ನೀರು ಸೋರಿಕೆ ಆಗದಂತೆ ಕ್ರಮ ವಹಿಸಲಾಗುವುದು. ಒಂದು ತಿಂಗಳೊಳಗೆ ಇದನ್ನ ಸರಿಪಡಿಸುವಂತೆ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್​​ರಿಗೆ ಸೂಚಿಸಿದರು.

Intro:ರೈಲ್ವೆ ತ್ಯಾಜ್ಯ ನೀರು ನನ್ ತಲೆ ಮೇಲು ಬಿದ್ದಿತ್ತು ಅಂದರು ಕೇಂದ್ರ ಸಚಿವರು!!!?

ಬೆಂಗಳೂರು: ಬೆಳಗಾಂನಿಂದ ಬೆಂಗಳೂರಿಗೆ ನಾನು ಬರುವಾಗ ರೈಲ್ವೆ ಬ್ರಿಡ್ಜ್ ಕೆಳಗೆ ಹೋದಾಗ ಆ ಕೊಳಚೆ ನೀರು ನಮ್ಮ ಮೇಲೆ ಬಿದ್ದಿತ್ತು.. ನಮ್ಗೂ ಆ ಅನುಭವವಾಗಿದೆ ಅಂತ ಮೇಯರ್ ಗಂಗಾಂಭಿಕೆ ಮನವಿ ಸ್ವೀಕರಿಸಿ ಕೇಂದ್ರ ಸಚಿವ ಸುರೇಶ್ ಚನ್ನಬಸಪ್ಪ ಅಂಗಡಿ ತಮ್ಮಗಾದ ಅನುಭವವನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರ ಉದ್ಘಾಟನೆ ವೇಳೆ ಹೇಳಿಕೊಂಡರು..

ನಗರದಲ್ಲಿರುವ ರೈಲ್ವೆ ಕೆಳ ಸೇತುವೆ ( RUB ) ಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಬಹಳ ತೊಂದರೆ ಆಗುತ್ತಿರುವುದಾಗಿ ಮೇಯರ್ ಗಂಗಾಂಬಿಕೆ ಸಚಿವರಿಗೆ ವಿವರಿಸಿದರು. ಸಾಕಷ್ಟು ಬಾರಿ ರೈಲ್ವೇ ಕೆಳ ಸೇತುವೆಯಲ್ಲಿ ಹೋಗುವಾಗ ದ್ವಿಚಕ್ರ ವಾಹನ ಸವಾರರ ಮೇಲೆ ತ್ಯಾಜ್ಯದ ನೀರು ಬೀಳುತ್ತಿದೆ.. ಇದರಿಂದ ಕೆಲವೊಮ್ಮೆ ತಿಳಿಯದೇ ಜನರು ಸಡನ್ ಬ್ರೇಕ್ ಹಾಕಿ ಹಿಂದಿನ ಸವಾರರಿಗೆ ಅಪಘಾತ ಮಾಡಿದ್ದು ಇದೆ.. ಈ ಬಗ್ಗೆ ರೈಲ್ವೆ ವಿಭಾಗಿಯ ವ್ಯವಸ್ಥಾಪಕ .ಡಿ.ಜಿ.ಮಲ್ಯ ರವರನ್ನು ಕಳೆದ 18ರಂದು ಖುದ್ದು ಭೇಟಿಯಾಗಿ ಕ್ರಮ ತೆಗೆದು ಕೊಳ್ಳುವಂತೆ ಕೋರಿದ್ದು, 19ರಂದು ವಿವರವಾದ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.

ಇದಕ್ಕೆ ಸ್ಪಂದಿಸಿದ ರೈಲ್ವೆ ರಾಜ್ಯ ಸಚಿವರು, ಈ ರೀತಿಯ ತೊಂದರೆಯನ್ನು ನಾನು ಸಹ ಅನುಭವಿಸಿದ್ದೇನೆ..‌ ಇದರಿಂದಾಗಿ ಎಲ್ಲರಿಗೂ ಇರಿಸು ಮುನಿಸು ಹೋಗುವುದು ಸಹಜ..
ನಗರದಲ್ಲಿರುವ ಎಲ್ಲಾ RUB ಗಳ ನಿರ್ವಹಣೆಯನ್ನು ಉನ್ನತಿಕರಸಿ , RUB ಕೆಳ ಭಾಗದಲ್ಲಿ ಯಾವುದೇ ರೀತಿಯ ಮಲೀನ ನೀರು ಸೋರಿಕೆ ಆಗದಂತೆ ಕ್ರಮವಹಿಸಲಾಗುವುದು ಅಂತ ತಿಳಿಸಿದರು..‌ಒಂದು ತಿಂಗಳೊಳಗೆ ಇದನ್ನ ಸರಿಪಡಿಸುವಂತೆ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ ರಿಗೆ ಆದೇಶ ನೀಡಿದರು..

ಒಟ್ಟಾರೆ, ಇನ್ಮುಂದೆ ಮಲೀನ ನೀರು ಮೈ ಮೇಲೆ ಬೀಳುತ್ತಪ್ಪಾ ಅಂತ ಗಾಡಿನ ಸೈಡ್ ಗೆ ಹಾಕುವ ಪ್ರಮೇಯ ಬರೆದೇ ಇರೋ ಹಾಗೇ ಬಿಬಿಎಂಪಿ ಮತ್ತು ರೈಲ್ವೆ ಇಲಾಖೆಯವರು ಜಂಟಿಯಾಗಿ ನೋಡಿಕೊಳ್ಳಬೇಕಿದೆ..

KN_BNG_03_RAILYWAY_BRIDGE_WATER_MINISTR_SCRIPT_7201801Body:.Conclusion:.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.