ETV Bharat / state

ಎಂಇಎಸ್ ವಿರೋಧಿಸಿ ಪ್ರವೀಣ್ ಶೆಟ್ಟಿ ಮತ್ತು ಬಣದಿಂದ ಪಂಜಿನ ಮೆರವಣಿಗೆ

ಬೆಂಗಳೂರಿನಲ್ಲಿ ಎಂಇಎಸ್​ ವಿರೋಧಿಸಿ ಕಳೆದ ರಾತ್ರಿ ನಗರದೆಲ್ಲೆಡೆ ಪಂಜನಿ ಮೆರವಣಿಗೆ ನಡೆಸಲಾಯಿತು.

author img

By

Published : Dec 23, 2021, 3:43 AM IST

MES against torch parade, Karave workers protest, Protest in Bengaluru, ಎಂಇಎಸ್​ ವಿರುದ್ಧ ಪಂಜಿನ ಮೆರವಣಿಗೆ, ಕರವೇ ಕಾರ್ಯಕರ್ತರ ಪ್ರತಿಭಟನೆ, ಬೆಂಗಳೂರಿನಲ್ಲಿ ಪ್ರತಿಭಟನೆ,
ಪಂಜಿನ ಮೆರವಣಿಗೆ

ಬೆಂಗಳೂರು: ಎಂಇಎಸ್ ಪುಂಡಾಟಿಕೆ ವಿರೋಧಿಸಿ ಪ್ರವೀಣ್ ಶೆಟ್ಟಿ ಮತ್ತು ಬಣದಿಂದ ಪಂಜಿನ ಮೆರವಣಿಗೆ ಕೈಗೊಳ್ಳಲಾಯಿತು. ಕನ್ನಡ ಬಾವುಟ ಧ್ವಂಸ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಹಿನ್ನೆಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ಹಾಗೂ ಸಂಘಟನೆ ನಿಷೇಧಿಸಬೇಕೆಂದು ಒತ್ತಾಯಿಸಿ ಡಿ.31 ರಂದು ಕರೆ ನೀಡಿರುವ ಕರ್ನಾಟಕ ಬಂದ್​ಗೆೆ ಬೆಂಬಲಿಸುವಂತೆ ಪಂಜಿನ ಮೆರವಣಿಗೆ ಮೂಲಕ ಕರವೇ ಕಾರ್ಯಕರ್ತರು ಮನವಿ ಮಾಡಿದರು.

ರಾಮಮೂರ್ತಿ ನಗರದ ಮುಖ್ಯ ರಸ್ತೆಯಲ್ಲಿ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಬಂದ್​ಗೆ ಸಹಕರಿಸುವಂತೆ ಪಂಜಿನ ಮೆರವಣಿಗೆ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು. ಈ ವೇಳೆ ಪ್ರವೀಣ್ ಶೆಟ್ಟಿ ಮಾತನಾಡಿ ಬಂದ್​ಗೆ ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.

MES against torch parade, Karave workers protest, Protest in Bengaluru, ಎಂಇಎಸ್​ ವಿರುದ್ಧ ಪಂಜಿನ ಮೆರವಣಿಗೆ, ಕರವೇ ಕಾರ್ಯಕರ್ತರ ಪ್ರತಿಭಟನೆ, ಬೆಂಗಳೂರಿನಲ್ಲಿ ಪ್ರತಿಭಟನೆ,
ಪಂಜಿನ ಮೆರವಣಿಗೆ

ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಪಂಜಿನ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಉದ್ಧವ್ ಠಾಕ್ರೆಯ ಭೂತ ದಹನ ಮಾಡಲಾಗಿದೆ. ಎಂಇಎಸ್ ನಿಷೇಧ ಬಗ್ಗೆ ಕೇಂದ್ರ ಸರ್ಕಾರದ ಜೊತೆ ರಾಜ್ಯದ ಸಂಸದರು ಮಾತನಾಡಬೇಕು. ಪೊಲೀಸರ ವಾಹನಗಳಿಗೆ ಬೆಂಕಿ ಹಾಕುವುದು ಹಾಗೂ ಕನ್ನಡಿಗರ ಮೇಲೆ ದಾಳಿ ನಡೆಸುವುದು ಸಹಿಸಲ್ಲ ಎಂದರು.

ರಾಜ್ಯ ಸರ್ಕಾರಕ್ಕೆ ಡಿ. 30 ತನಕ ಗಡುವು ನೀಡಲಾಗಿದೆ. ಈ ಬಗ್ಗೆ ಸರ್ಕಾರ ನಿರ್ದಾರ ತೆಗದುಕೊಳ್ಳಲಿ. ಸರ್ಕಾರ ಎಂಇಎಸ್ ಬ್ಯಾನ್ ಮಾಡಿದರೆ ಬಂದ್ ನ ಹಿಂಪಡೆಯುತ್ತೇವೆ. ಎಂಇಎಸ್ ನ ಗೂಂಡಾಗಿರಿ ಈ ನೆಲದಲ್ಲಿ ಇರಬಾರದು.ಕರ್ನಾಟಕ ಬಂದ್​ಗೆ ಹಲವು ಸಂಘಟನೆಗಳು ಬೆಂಬಲವನ್ನು ಸೂಚಿಸಿವೆ ಎಂದರು.

ಬೆಂಗಳೂರು: ಎಂಇಎಸ್ ಪುಂಡಾಟಿಕೆ ವಿರೋಧಿಸಿ ಪ್ರವೀಣ್ ಶೆಟ್ಟಿ ಮತ್ತು ಬಣದಿಂದ ಪಂಜಿನ ಮೆರವಣಿಗೆ ಕೈಗೊಳ್ಳಲಾಯಿತು. ಕನ್ನಡ ಬಾವುಟ ಧ್ವಂಸ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಹಿನ್ನೆಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ಹಾಗೂ ಸಂಘಟನೆ ನಿಷೇಧಿಸಬೇಕೆಂದು ಒತ್ತಾಯಿಸಿ ಡಿ.31 ರಂದು ಕರೆ ನೀಡಿರುವ ಕರ್ನಾಟಕ ಬಂದ್​ಗೆೆ ಬೆಂಬಲಿಸುವಂತೆ ಪಂಜಿನ ಮೆರವಣಿಗೆ ಮೂಲಕ ಕರವೇ ಕಾರ್ಯಕರ್ತರು ಮನವಿ ಮಾಡಿದರು.

ರಾಮಮೂರ್ತಿ ನಗರದ ಮುಖ್ಯ ರಸ್ತೆಯಲ್ಲಿ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಬಂದ್​ಗೆ ಸಹಕರಿಸುವಂತೆ ಪಂಜಿನ ಮೆರವಣಿಗೆ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು. ಈ ವೇಳೆ ಪ್ರವೀಣ್ ಶೆಟ್ಟಿ ಮಾತನಾಡಿ ಬಂದ್​ಗೆ ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.

MES against torch parade, Karave workers protest, Protest in Bengaluru, ಎಂಇಎಸ್​ ವಿರುದ್ಧ ಪಂಜಿನ ಮೆರವಣಿಗೆ, ಕರವೇ ಕಾರ್ಯಕರ್ತರ ಪ್ರತಿಭಟನೆ, ಬೆಂಗಳೂರಿನಲ್ಲಿ ಪ್ರತಿಭಟನೆ,
ಪಂಜಿನ ಮೆರವಣಿಗೆ

ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಪಂಜಿನ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಉದ್ಧವ್ ಠಾಕ್ರೆಯ ಭೂತ ದಹನ ಮಾಡಲಾಗಿದೆ. ಎಂಇಎಸ್ ನಿಷೇಧ ಬಗ್ಗೆ ಕೇಂದ್ರ ಸರ್ಕಾರದ ಜೊತೆ ರಾಜ್ಯದ ಸಂಸದರು ಮಾತನಾಡಬೇಕು. ಪೊಲೀಸರ ವಾಹನಗಳಿಗೆ ಬೆಂಕಿ ಹಾಕುವುದು ಹಾಗೂ ಕನ್ನಡಿಗರ ಮೇಲೆ ದಾಳಿ ನಡೆಸುವುದು ಸಹಿಸಲ್ಲ ಎಂದರು.

ರಾಜ್ಯ ಸರ್ಕಾರಕ್ಕೆ ಡಿ. 30 ತನಕ ಗಡುವು ನೀಡಲಾಗಿದೆ. ಈ ಬಗ್ಗೆ ಸರ್ಕಾರ ನಿರ್ದಾರ ತೆಗದುಕೊಳ್ಳಲಿ. ಸರ್ಕಾರ ಎಂಇಎಸ್ ಬ್ಯಾನ್ ಮಾಡಿದರೆ ಬಂದ್ ನ ಹಿಂಪಡೆಯುತ್ತೇವೆ. ಎಂಇಎಸ್ ನ ಗೂಂಡಾಗಿರಿ ಈ ನೆಲದಲ್ಲಿ ಇರಬಾರದು.ಕರ್ನಾಟಕ ಬಂದ್​ಗೆ ಹಲವು ಸಂಘಟನೆಗಳು ಬೆಂಬಲವನ್ನು ಸೂಚಿಸಿವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.