ETV Bharat / state

ರಸ್ತೆ ಸರಿಯಿಲ್ಲದಿದ್ರೂ ದುಬಾರಿ ದಂಡ ಯಾಕೆ..? ಜನ ಹೀಗೆ ಕೇಳೋದರಲ್ಲಿ ಅರ್ಥ ಇದೆ ಎಂದ ಮೇಯರ್

author img

By

Published : Sep 9, 2019, 11:27 PM IST

Updated : Sep 9, 2019, 11:43 PM IST

ದುಬಾರಿ ದಂಡ ವಿಧಿಸಿದರೆ ಸಾಲದು ಅದಕ್ಕೆ ತಕ್ಕಂತೆ ರೋಡ್​ಗಳು ಸರಿಯಾಗಿ ಇರಬೇಕು ಅಲ್ವಾ ಅಂತ ಜನ ಪ್ರಶ್ನಿಸೋದು ಸರಿಯಾಗೇ ಇದೆ ಎಂದು ಮೇಯರ್​ ಗಂಗಾಂಬಿಕೆ ಅಭಿಪ್ರಾಯಿಸಿದ್ದಾರೆ.

ರಸ್ತೆ ಸರಿಯಿಲ್ಲದಿದ್ರೂ ದುಬಾರಿ ದಂಡ ಯಾಕೆ..?

ಬೆಂಗಳೂರು: ಇತ್ತೀಚೆಗೆ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ, ಪ್ರತಿಯೊಂದಕ್ಕೂ ದುಬಾರಿ ದಂಡ ವಿಧಿಸುವ ಹೊಸ ರೂಲ್ಸ್ ಜಾರಿ ಮಾಡಿದೆ. ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾ ಸೇರಿದಂತೆ ನಾನಾ ಕಡೆ ದುಬಾರಿ ದಂಡದ ಕುರಿತು ಆಕ್ರೋಶ ವ್ಯಕ್ತವಾಗಿದೆ.

ಹೊಸ ಕಾನೂನು ತರೋ ಮುಂಚೆ ನೀವೂ ಸರಿಯಾಗಿ ನಮಗೆ ಬೇಕಾದ ಸೌಕಾರ್ಯ ಕಲ್ಪಿಸಿ ಅಂತ ಅನ್ನೋ ಸಂದೇಶಗಳು ಹರಿದಾಡುತ್ತಿದೆ.. ದುಬಾರಿ ದಂಡ ವಿಧಿಸಿದರೆ ಸಾಲದು ಅದಕ್ಕೆ ತಕ್ಕಂತೆ ರೋಡ್ ಗಳು ಸರಿಯಾಗಿ ಇರಬೇಕು ಅಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ..ಈ ಸಂಬಂಧ ಪಟ್ಟಂತೆ ನಗರ ಪಾಲಿಕೆಯ ಮೇಯರ್ ಗಂಗಾಂಬಿಕೆಯವರನ್ನ ಕೇಳಿದ್ರೆ ಜನರು ಹೀಗೆಲ್ಲ ಕೇಳೋದರಲ್ಲಿ ಅರ್ಥ ಇದೆ. ಎಲ್ಲ ರೀತಿಯಲ್ಲೂ ತೆರಿಗೆ ಕಟ್ಟಿಸಿ ಕೊಳ್ಳುತ್ತೀರಾ.. ನಿಮ್ಮಲ್ಲಿ ಲೋಪದೋಷ ಇಟ್ಟುಕೊಂಡು ನಮ್ಮ ಮೇಲೆ ತಪ್ಪು ಹುಡುಕೋದು ಎಷ್ಟು ಸರಿ ಅಂತ ಅವರು ಪ್ರಶ್ನೆ ಮಾಡೋದರಲ್ಲಿ ಒಂದು ಅರ್ಥ ಇದೆ.‌ ಆದರೆ ಇಲ್ಲಿ ಜನರು ಸಹಕಾರ ನೀಡಬೇಕು.. ಗುಂಡಿ ಇದ್ದಾಗ ಅಲ್ಲಿನ ಸ್ಥಳೀಯರು ಮಾಹಿತಿ ನೀಡಬೇಕು ಅಂತ ತಿಳಿಸಿದರು..

ರಸ್ತೆ ಸರಿಯಿಲ್ಲದಿದ್ರೂ ದುಬಾರಿ ದಂಡ ಯಾಕೆ..?

ಈಗಾಗಲೇ ಸಂಬಂಧ ಪಟ್ಟ ಗುತ್ತಿಗೆದಾರರಿಗೆ, ಇಂಜಿನಿಯರ್ ಗಳಿಗೆ ರಸ್ತೆ ಗುಂಡಿ ಮುಚ್ಚುವಂತೆ ಸೂಚನೆ ನೀಡಲಾಗಿದೆ.ರಸ್ತೆಯಲ್ಲಿ ಗುಂಡಿಗಳು ಇದ್ದರೆ ಅಥವಾ ಸರಿಯಾದ ರೀತಿಯಲ್ಲಿ ಗುಂಡಿ ಮುಚ್ಚದೇ ಇದ್ದರೆ ಕ್ರಮ ಕೈಗೊಳ್ಳಲಾಗುತ್ತೆ ಅಂತಾರೆ..

ರಸ್ತೆಯಲ್ಲಿ ಗುಂಡಿ ಕಂಡರೆ ಕಾಲ್ ಮಾಡಿ ದೂರು ನೀಡಿ..

ಇನ್ನು ನಿಮ್ಮ- ನಿಮ್ಮ ಏರಿಯಾದಲ್ಲಿ ಗುಂಡಿ ಕಂಡರೆ ಕೂಡಲೇ ಪಾಲಿಕೆಗೆ ಕರೆ ಮಾಡಿ ಅಂದಿದ್ದಾರೆ ಮೇಯರ್ ಗಂಗಾಂಬಿಕೆ. ಕರೆ ಮೂಲಕವೂ ಕೆಲಸ ಆಗಲಿಲ್ಲ ಅಂದರೆ ಬರವಣಿಗೆಯಲ್ಲಿ ಪತ್ರವೊಂದು ಬರೆದು ದೂರು ನೀಡಿ. ಆಗ ಸಂಬಂಧಪಟ್ಟವ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂತ ಸಾರ್ವಜನಿಕರಿಗೆ ಮನವಿ ಮಾಡಿದರು,ರಸ್ತೆ ಸರಿ ಮಾಡಿ ಆಮೇಲೆ ದುಬಾರಿ ದಂಡ ವಿಧಿಸಿ ಅಂತ ಹೇಳಿದವರಿಗೆ, ಪಾಲಿಕೆ ಅಸ್ತು ಎಂದಿದೆ. ರಸ್ತೆ ಗುಂಡಿ ಮುಚ್ಚದೇ ಇದ್ದರೆ ಅಂತಹ ಕಂಟ್ರಾಕ್ಟರ್, ಎಂಜಿನಿಯರ್ಸ್ ಗಳಿಗೆ ಬಿಸಿ ಮುಟ್ಟಿಸಲು ಮೇಯರ್ ಗಂಗಾಂಬಿಕೆ ದಿಢೀರ್ ಪರಿಶೀಲನೆಗೂ ಮುಂದಾಗಲಿದ್ದಾರೆ.

ಬೆಂಗಳೂರು: ಇತ್ತೀಚೆಗೆ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ, ಪ್ರತಿಯೊಂದಕ್ಕೂ ದುಬಾರಿ ದಂಡ ವಿಧಿಸುವ ಹೊಸ ರೂಲ್ಸ್ ಜಾರಿ ಮಾಡಿದೆ. ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾ ಸೇರಿದಂತೆ ನಾನಾ ಕಡೆ ದುಬಾರಿ ದಂಡದ ಕುರಿತು ಆಕ್ರೋಶ ವ್ಯಕ್ತವಾಗಿದೆ.

ಹೊಸ ಕಾನೂನು ತರೋ ಮುಂಚೆ ನೀವೂ ಸರಿಯಾಗಿ ನಮಗೆ ಬೇಕಾದ ಸೌಕಾರ್ಯ ಕಲ್ಪಿಸಿ ಅಂತ ಅನ್ನೋ ಸಂದೇಶಗಳು ಹರಿದಾಡುತ್ತಿದೆ.. ದುಬಾರಿ ದಂಡ ವಿಧಿಸಿದರೆ ಸಾಲದು ಅದಕ್ಕೆ ತಕ್ಕಂತೆ ರೋಡ್ ಗಳು ಸರಿಯಾಗಿ ಇರಬೇಕು ಅಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ..ಈ ಸಂಬಂಧ ಪಟ್ಟಂತೆ ನಗರ ಪಾಲಿಕೆಯ ಮೇಯರ್ ಗಂಗಾಂಬಿಕೆಯವರನ್ನ ಕೇಳಿದ್ರೆ ಜನರು ಹೀಗೆಲ್ಲ ಕೇಳೋದರಲ್ಲಿ ಅರ್ಥ ಇದೆ. ಎಲ್ಲ ರೀತಿಯಲ್ಲೂ ತೆರಿಗೆ ಕಟ್ಟಿಸಿ ಕೊಳ್ಳುತ್ತೀರಾ.. ನಿಮ್ಮಲ್ಲಿ ಲೋಪದೋಷ ಇಟ್ಟುಕೊಂಡು ನಮ್ಮ ಮೇಲೆ ತಪ್ಪು ಹುಡುಕೋದು ಎಷ್ಟು ಸರಿ ಅಂತ ಅವರು ಪ್ರಶ್ನೆ ಮಾಡೋದರಲ್ಲಿ ಒಂದು ಅರ್ಥ ಇದೆ.‌ ಆದರೆ ಇಲ್ಲಿ ಜನರು ಸಹಕಾರ ನೀಡಬೇಕು.. ಗುಂಡಿ ಇದ್ದಾಗ ಅಲ್ಲಿನ ಸ್ಥಳೀಯರು ಮಾಹಿತಿ ನೀಡಬೇಕು ಅಂತ ತಿಳಿಸಿದರು..

ರಸ್ತೆ ಸರಿಯಿಲ್ಲದಿದ್ರೂ ದುಬಾರಿ ದಂಡ ಯಾಕೆ..?

ಈಗಾಗಲೇ ಸಂಬಂಧ ಪಟ್ಟ ಗುತ್ತಿಗೆದಾರರಿಗೆ, ಇಂಜಿನಿಯರ್ ಗಳಿಗೆ ರಸ್ತೆ ಗುಂಡಿ ಮುಚ್ಚುವಂತೆ ಸೂಚನೆ ನೀಡಲಾಗಿದೆ.ರಸ್ತೆಯಲ್ಲಿ ಗುಂಡಿಗಳು ಇದ್ದರೆ ಅಥವಾ ಸರಿಯಾದ ರೀತಿಯಲ್ಲಿ ಗುಂಡಿ ಮುಚ್ಚದೇ ಇದ್ದರೆ ಕ್ರಮ ಕೈಗೊಳ್ಳಲಾಗುತ್ತೆ ಅಂತಾರೆ..

ರಸ್ತೆಯಲ್ಲಿ ಗುಂಡಿ ಕಂಡರೆ ಕಾಲ್ ಮಾಡಿ ದೂರು ನೀಡಿ..

ಇನ್ನು ನಿಮ್ಮ- ನಿಮ್ಮ ಏರಿಯಾದಲ್ಲಿ ಗುಂಡಿ ಕಂಡರೆ ಕೂಡಲೇ ಪಾಲಿಕೆಗೆ ಕರೆ ಮಾಡಿ ಅಂದಿದ್ದಾರೆ ಮೇಯರ್ ಗಂಗಾಂಬಿಕೆ. ಕರೆ ಮೂಲಕವೂ ಕೆಲಸ ಆಗಲಿಲ್ಲ ಅಂದರೆ ಬರವಣಿಗೆಯಲ್ಲಿ ಪತ್ರವೊಂದು ಬರೆದು ದೂರು ನೀಡಿ. ಆಗ ಸಂಬಂಧಪಟ್ಟವ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂತ ಸಾರ್ವಜನಿಕರಿಗೆ ಮನವಿ ಮಾಡಿದರು,ರಸ್ತೆ ಸರಿ ಮಾಡಿ ಆಮೇಲೆ ದುಬಾರಿ ದಂಡ ವಿಧಿಸಿ ಅಂತ ಹೇಳಿದವರಿಗೆ, ಪಾಲಿಕೆ ಅಸ್ತು ಎಂದಿದೆ. ರಸ್ತೆ ಗುಂಡಿ ಮುಚ್ಚದೇ ಇದ್ದರೆ ಅಂತಹ ಕಂಟ್ರಾಕ್ಟರ್, ಎಂಜಿನಿಯರ್ಸ್ ಗಳಿಗೆ ಬಿಸಿ ಮುಟ್ಟಿಸಲು ಮೇಯರ್ ಗಂಗಾಂಬಿಕೆ ದಿಢೀರ್ ಪರಿಶೀಲನೆಗೂ ಮುಂದಾಗಲಿದ್ದಾರೆ.

Intro:ರಸ್ತೆ ಸರಿಯಿಲ್ಲದೇ ಇದ್ದರೂ ದುಬಾರಿ ದಂಡ ಯಾಕ್ರೀ ಕಟ್ಟಬೇಕು? ಜನ ಹೀಗೆ ಕೇಳೋದಲ್ಲಿ ಅರ್ಥ ಇದೆ; ಮೇಯರ್ ಗಂಗಾಂಭಿಕೆ..

ಬೆಂಗಳೂರು: ಇತ್ತೀಚೆಗೆ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯಿದೆ ತಿದ್ದುಪಡಿ ಮಾಡಿ, ಪ್ರತಿಯೊಂದಕ್ಕೂ ದುಬಾರಿ ದಂಡ ವಿಧಿಸುವ ಹೊಸ ರೂಲ್ಸ್ ಜಾರಿ ಮಾಡ್ತು.. ಈಗಾಗಲೇ ಜನರು ಹೊಸ ರೂಲ್ಸ್ ಗೆ ತಕ್ಕಂತೆ ವಾಹನ ಸಂಚಾರ ಮಾಡುತ್ತಿದ್ದಾರೆ..

ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾ ಸೇರಿದಂತೆ ನಾನಾ ಕಡೆ ದುಬಾರಿ ದಂಡದ ಕುರಿತು ಆಕ್ರೋಶಗಳು ಕೇಳಿ ಬರ್ತಿದೆ.. ಹೊಸ ಕಾನೂನು ತರೋ ಮುಂಚೆ ನೀವೂ ಸರಿಯಾಗಿ ನಮ್ಗೆ ಬೇಕಾದ ಸೌಕಾರ್ಯ ಕಲ್ಪಿಸಿ ಅಂತ ಅನ್ನೋ ಸಂದೇಶಗಳು ಹರಿದಾಡುತ್ತಿದೆ.. ದುಬಾರಿ ದಂಡ ವಿಧಿಸಿದರೆ ಸಾಲದು ಅದಕ್ಕೆ ತಕ್ಕಂತೆ ರೋಡ್ ಗಳು ಸರಿಯಾಗಿ ಇರಬೇಕು ಅಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ...

ಈ ಸಂಬಂಧ ಪಟ್ಟಂತೆ ನಗರ ಪಾಲಿಕೆಯ ಮೇಯರ್ ಗಂಗಾಂಭಿಕೆಯವರನ್ನ ಈ ಬಗ್ಗೆ ಕೇಳಿದ್ದರೆ, ಜನರು ಹೀಗೆಲ್ಲ ಕೇಳೋದರಲ್ಲಿ ಅರ್ಥ ಇದೆ. ಎಲ್ಲ ರೀತಿಯಲ್ಲೂ ತೆರಿಗೆ ಕಟ್ಟಿಸಿ ಕೊಳ್ಳುತ್ತೀರಾ.. ನಿಮ್ಮಲ್ಲಿ ಲೋಪದೋಷ ಇಟ್ಟಕೊಂಡು ನಮ್ಮ ಮೇಲೆ ತಪ್ಪು ಹುಡುಕುದು ಎಷ್ಟು ಸರಿ ಅಂತ ಅವರು ಪ್ರಶ್ನೆ ಮಾಡೋದರಲ್ಲಿ ಒಂದು ಅರ್ಥ ಇದೆ.‌ ಆದರೆ ಇಲ್ಲಿ ಜನರು ಸಹಕಾರ ನೀಡಬೇಕು.. ಗುಂಡಿ ಇದ್ದಾಗ ಅಲ್ಲಿನ ಸ್ಥಳೀಯರು ಮಾಹಿತಿ ನೀಡಬೇಕು ಅಂತ ತಿಳಿಸಿದರು..

ಈಗಾಗಲೇ ಸಂಬಂಧ ಪಟ್ಟ ಗುತ್ತಿಗೆದಾರರಿಗೆ, ಇಂಜಿನಿಯರ್ ಗಳಿಗೆ ರಸ್ತೆ ಗುಂಡಿ ಮುಚ್ಚುವಂತೆ ಸೂಚನೆ ನೀಡಲಾಗಿದೆ.. ರಸ್ತೆಯಲ್ಲಿ ಗುಂಡಿಗಳು ಇದ್ದರೆ ಅಥವಾ ಸರಿಯಾದ ರೀತಿಯಲ್ಲಿ ಗುಂಡಿ ಮುಚ್ಚದೇ ಇದ್ದರೆ ಕ್ರಮ ಕೈಗೊಳ್ಳಲಾಗುತ್ತೆ ಅಂತಾರೆ..

ಈ ಮುಂಚೆ ನಿರ್ವಹಣೆಗೆ ಹಣಕಾಸು ತೊಂದರೆಯ ನೆಪವನ್ನು ಹೊಡ್ಡುತ್ತಿದ್ದರು.. ಆದರೆ ಈಗ ಬಜೆಟ್ನಲ್ಲಿ ನಿರ್ವಹಣೆಗಾಗಿಯೇ 142 ಕೋಟಿ ಮೀಸಲಿಡಲಾಗಿದೆ.. ಹೀಗಾಗಿ ರಸ್ತೆ ಗುಂಡಿ ಮುಚ್ಚಲು ಯಾವುದೇ ಹಣಕಾಸಿನ ತೊಂದರೆ, ಗೊಂದಲವು ಇಲ್ಲ ಅಂತ ತಿಳಿಸಿದರು..‌

*ರಸ್ತೆಯಲ್ಲಿ ಗುಂಡಿ ಕಂಡರೆ ಕಾಲ್ ಮಾಡಿ ದೂರು ನೀಡಿ*
ಇನ್ನು ನಿಮ್ಮ ನಿಮ್ಮ‌ಏರಿಯಾದಲ್ಲಿ ಗುಂಡಿ ಕಂಡರೆ ಕೂಡಲೇ ಪಾಲಿಕೆಗೆ ಕರೆ ಮಾಡಿ ಅಂತಾರೆ ಮೇಯರ್ ಗಂಗಾಂಭಿಕೆ.. ಕರೆ ಮೂಲಕವೂ ಕೆಲಸ ಆಗಲಿಲ್ಲ ಅಂದರೆ ಬರವಣಿಗೆಯಲ್ಲಿ ಪತ್ರವೊಂದು ಬರೆದು ದೂರು ನೀಡಿ.. ಆಗ ಸಂಬಂಧಪಟ್ಟವ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂತ ಸಾರ್ವಜನಿಕರಿಗೆ ಮನವಿ ಮಾಡಿದರು...‌

ಒಟ್ಟಾರೆ, ರಸ್ತೆ ಸರಿ ಮಾಡಿ ಆಮೇಲೆ ದುಬಾರಿ ದಂಡ ವಿಧಿಸಿ ಅಂತ ಹೇಳಿದವರಿಗೆ, ಪಾಲಿಕೆ ಅಸ್ತು ಎಂದಿದೆ.. ರಸ್ತೆ ಗುಂಡಿ ಮುಚ್ಚದೇ ಇದ್ದರೆ ಅಂತಹ ಕಂಟ್ರಾಕ್ಟರ್, ಇಂಜಿನಿಯರ್ಸ್ ಗಳಿಗೆ ಬಿಸಿ ಮುಟ್ಟಿಸಲು ಮೇಯರ್ ಗಂಗಾಂಭಿಕೆ ದಿಢೀರ್ ಪರಿಶೀಲನೆಗೂ ಮುಂದಾಗಲಿದ್ದಾರೆ...

KN_BNG_02_ROAD_GUNDI_MAYORE_SCRIPT_7201801
Body:..Conclusion:..
Last Updated : Sep 9, 2019, 11:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.