ETV Bharat / state

ಸಿಎಂ ಪುತ್ರನಿಗೆ ವರ್ಕೌಟ್​ ಆಗದ ಗೆಲುವಿನ ಹ್ಯಾ'ಟ್ರಿಕ್'.. ಮಾರುಹೋಗದ ಮಸ್ಕಿ ಮತದಾರರು..

author img

By

Published : May 2, 2021, 2:31 PM IST

Updated : May 2, 2021, 3:02 PM IST

ಮಸ್ಕಿಯಲ್ಲಿ‌ ವಿಜಯೇಂದ್ರ ತಂತ್ರ ಫಲಿಸಲಿಲ್ಲ ಎನ್ನುವುದು ಈ ಉಪ ಚುನಾವಣೆಯಿಂದ ಸ್ಪಷ್ಟವಾಗಿದೆ. ಉಪ ಚುನಾವಣೆ ಚಾಣಕ್ಯ ಎಂದು ಕರೆಸಿಕೊಳ್ಳುತ್ತಿದ್ದ ವಿಜಯೇಂದ್ರಗೆ ಈ ಉಪ ಚುನಾವಣೆ ಸೋಲಿನ ಆರಂಭ ತೋರಿಸಿದೆ ಎನ್ನಲಾಗುತ್ತಿದೆ..

maski  voters breaks vijeyendra's hatrick victory
ವಿಜಯೇಂದ್ರ

ಬೆಂಗಳೂರು : ಎರಡು ಉಪ ಚುನಾವಣೆ ಉಸ್ತುವಾರಿ ಹೊತ್ತು ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸುವಲ್ಲಿ ಸಫಲರಾಗಿದ್ದ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ಮಸ್ಕಿ ಮತದಾರರು ಬ್ರೇಕ್ ಹಾಕಿದ್ದಾರೆ. ಭಾರಿ ನಿರೀಕ್ಷೆಯೊಂದಿಗೆ ಪ್ರಚಾರದ ಅಖಾಡಕ್ಕೆ ಧುಮುಕಿದ್ದ ಸಿಎಂ ಪುತ್ರ ಸೋಲಿನ ಕಹಿಯೊಂದಿಗೆ ಮರಳುವಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯಲ್ಲಿ ಪವರ್ ಫುಲ್ ಲೀಡರ್ ಎಂದು ಗುರುತಿಸಿಕೊಂಡಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಸಿಎಂ ಪುತ್ರ ಬಿ ವೈ ವಿಜಯೇಂದ್ರ, ಈ ಬಾರಿಯ ಉಪ ಚುನಾವಣೆಯಲ್ಲಿ ವೈಫಲ್ಯ ಕಂಡಿದ್ದಾರೆ.

ಕೆ ಆರ್‌ ಪೇಟೆ ಹಾಗೂ ಶಿರಾ ಕ್ಷೇತ್ರಗಳಲ್ಲಿ ಕಮಲ ಅರಳಿಸಿ ಬೈ ಎಲೆಕ್ಷನ್ ಮಾಸ್ಟರ್ ಎಂದು ಕರೆಸಿಕೊಂಡಿದ್ದ ವಿಜಯೇಂದ್ರ ಮಸ್ಕಿಯಲ್ಲಿ ಎಡವಿದ್ದಾರೆ. ವಿಜಯೇಂದ್ರ ರಾಜಕೀಯ ಭವಿಷ್ಯಕ್ಕೂ ಈ ಚುನಾವಣಾ ಫಲಿತಾಂಶ ಹಿನ್ನಡೆ ತರಲಿದೆ ಎನ್ನುವ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ‌ ಸೇರಿದ್ದ ಪ್ರತಾಪ್ ಗೌಡ ಪಾಟೀಲ್‌ಗೆ ಭಾರಿ ಅಂತರದ ಸೋಲಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದಿಂದ ಅಂದಿನ ಬಿಜೆಪಿ ಅಭ್ಯರ್ಥಿ ಬಸವರಾಜ ತುರವಿಹಾಳ್ ವಿರುದ್ಧ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್ ಇದೀಗ ಅದೇ ಅಭ್ಯರ್ಥಿ ವಿರುದ್ಧ 26 ಸಾವಿರದಷ್ಟು ಮತಗಳ ಅಂತರದಿಂದ ಸೋತಿದ್ದಾರೆ.

ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯ ಅಭ್ಯರ್ಥಿ ಈಗ ಕಾಂಗ್ರೆಸ್‌ನಿಂದ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದರೂ ಮತದಾರರು ಮಾತ್ರ ಅಭ್ಯರ್ಥಿಗಳು ಅದುಲು ಬದಲಾದರೂ ವಿಜಯಲಕ್ಷ್ಮಿ ಅದಲು ಬದಲು ಮಾಡದೆ ಮತ್ತೊಮ್ಮೆ ಕಾಂಗ್ರೆಸ್ ಪರ ನಿಂತಿದ್ದಾಳೆ.

2019ರ ಅಂತ್ಯದಲ್ಲಿ ನಡೆದಿದ್ದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ಬಿ ವೈ ವಿಜಯೇಂದ್ರ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವು ತಂದು ಕೊಟ್ಟಿದ್ದರು.

ಸಿಎಂ ಯಡಿಯೂರಪ್ಪ ಹುಟ್ಟೂರು ಬೂಕನಕೆರೆ ಇದೇ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಹುಟ್ಟೂರಿನಲ್ಲಿ ಪಕ್ಷವನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ ಎನ್ನುವ ಯಡಿಯೂರಪ್ಪ ಕೊರಗು ನೀಗಿಸಿದ್ದರು.

ಅದಾದ ನಂತರ 2020ರಲ್ಲಿ ನಡೆದಿದ್ದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಶಿರಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ವಿಜಯೇಂದ್ರ ಕ್ಷೇತ್ರದಲ್ಲೇ ಬೀಡುಬಿಟ್ಡು ಪ್ರಚಾರ ನಡೆಸಿದ್ದರು.

ಮದಲೂರು ಕೆರೆಗೆ ನೀರು ತುಂಬಿಸುವ ತಂತ್ರ ಪ್ರಯೋಗಿಸಿ ಸಫಲರಾಗಿದ್ದರು. ನೀರಿನ ಭರವಸೆಗೆ ಓಗೊಟ್ಟಿದ್ದ ಮತದಾರರು ಬಿಜೆಪಿ ಬೆಂಬಲಿಸಿದ್ದರ ಪರಿಣಾಮ ಮೊದಲ ಬಾರಿಗೆ ಶಿರಾದಲ್ಲಿ ಬಿಜೆಪಿಗೆ ಗೆಲುವು ಲಭ್ಯವಾಗಿತ್ತು.

ಬಿಜೆಪಿ ಈವರೆಗೆ ಗೆಲ್ಲದ ಎರಡು ಕ್ಷೇತ್ರವನ್ನು ಬಿಜೆಪಿ ತಂದುಕೊಟ್ಟಿದ್ದ ವಿಜಯೇಂದ್ರಗೆ ಪಕ್ಷದಲ್ಲಿ ವರ್ಚಸ್ಸು ಹೆಚ್ಚಿದ್ದು, ಸಿಎಂ ಉತ್ತರಾಧಿಕಾರಿ ಎನ್ನುವ ಮಾತುಗಳು ಹರಿದು ಬರುವಂತೆ ಮಾಡಿದ್ದರು.

ನಂತರ ಬಸವಕಲ್ಯಾಣ ಉಸ್ತುವಾರಿಗೆ ನಿಯೋಜನೆಗೊಂಡರೂ ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ವಿಜಯೇಂದ್ರ ಅವರನ್ನೇ ನಮ್ಮ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ರಾಜ್ಯ ಬಿಜೆಪಿ ನಾಯಕರು ಬಸವಕಲ್ಯಾಣದ ಬದಲು ಮಸ್ಕಿ ಕ್ಷೇತ್ರದ ಉಸ್ತುವಾರಿ ಜವಾಬ್ದಾರಿ ನೀಡಿದ್ದರು.

ಮಸ್ಕಿ ಉಸ್ತುವಾರಿ ಸಿಗುತ್ತಿದ್ದಂತೆ ತನ್ನ ತಂಡದೊಂದಿಗೆ ಮಸ್ಕಿಗೆ ತೆರಳಿ ಠಿಕಾಣಿ ಹೂಡಿದ್ದ ವಿಜಯೇಂದ್ರ ಸ್ಥಳೀಯ ಸನ್ನಿವೇಶ ನೋಡಿ ಸಿಎಂ ಯಡಿಯೂರಪ್ಪ ಅವರನ್ನು ಎರಡು ಬಾರಿ ಪ್ರಚಾರಕ್ಕೆ ಕರೆದೊಯ್ದಿದ್ದರು. ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದರು ಆದರೂ ಹ್ಯಾಟ್ರಿಕ್ ಗೆಲುವಿನ ವಿಜಯೇಂದ್ರ ಕನಸಿಗೆ ಮಸ್ಕಿ ಮತದಾರರು ಬ್ರೇಕ್ ಹಾಕಿದ್ದಾರೆ.

ಭಾರಿ ಅಂತರದ ಸೋಲುಣಿಸಿ ಆಡಳಿತಾರೂಢ ಪಕ್ಷಕ್ಕೆ ಮುಖಭಂಗವಾಗುವಂತೆ ಮಾಡಿದ್ದಾರೆ. ಹ್ಯಾಟ್ರಿಕ್ ಗೆಲುವು ಕಂಡಿದ್ದ ಪ್ರತಾಪ್ ಗೌಡ ಪಾಟೀಲ್ ನಾಲ್ಕನೇ ಬಾರಿ ಗೆಲ್ಲುವ ಕನಸು ಹುಸಿಯಾಗಿದ್ದು ಈ ಬಾರಿ ಮತದಾರು ಸೋಲಿನ ರುಚಿ ತೋರಿಸಿದ್ದಾರೆ. ಆ ಮೂಲಕ ಪ್ರತಾಪ್ ಗೌಡ ಪಾಟೀಲ್ ಮಂತ್ರಿಯಾಗುವ ಕನಸು ಕೂಡ ನುಚ್ಚು ನೂರಾಗಿದೆ‌.

ಮಸ್ಕಿಯಲ್ಲಿ‌ ವಿಜಯೇಂದ್ರ ತಂತ್ರ ಫಲಿಸಲಿಲ್ಲ ಎನ್ನುವುದು ಈ ಉಪ ಚುನಾವಣೆಯಿಂದ ಸ್ಪಷ್ಟವಾಗಿದೆ. ಉಪ ಚುನಾವಣೆ ಚಾಣಕ್ಯ ಎಂದು ಕರೆಸಿಕೊಳ್ಳುತ್ತಿದ್ದ ವಿಜಯೇಂದ್ರಗೆ ಈ ಉಪ ಚುನಾವಣೆ ಸೋಲಿನ ಆರಂಭ ತೋರಿಸಿದೆ ಎನ್ನಲಾಗುತ್ತಿದೆ.

ಬೆಂಗಳೂರು : ಎರಡು ಉಪ ಚುನಾವಣೆ ಉಸ್ತುವಾರಿ ಹೊತ್ತು ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸುವಲ್ಲಿ ಸಫಲರಾಗಿದ್ದ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ಮಸ್ಕಿ ಮತದಾರರು ಬ್ರೇಕ್ ಹಾಕಿದ್ದಾರೆ. ಭಾರಿ ನಿರೀಕ್ಷೆಯೊಂದಿಗೆ ಪ್ರಚಾರದ ಅಖಾಡಕ್ಕೆ ಧುಮುಕಿದ್ದ ಸಿಎಂ ಪುತ್ರ ಸೋಲಿನ ಕಹಿಯೊಂದಿಗೆ ಮರಳುವಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯಲ್ಲಿ ಪವರ್ ಫುಲ್ ಲೀಡರ್ ಎಂದು ಗುರುತಿಸಿಕೊಂಡಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಸಿಎಂ ಪುತ್ರ ಬಿ ವೈ ವಿಜಯೇಂದ್ರ, ಈ ಬಾರಿಯ ಉಪ ಚುನಾವಣೆಯಲ್ಲಿ ವೈಫಲ್ಯ ಕಂಡಿದ್ದಾರೆ.

ಕೆ ಆರ್‌ ಪೇಟೆ ಹಾಗೂ ಶಿರಾ ಕ್ಷೇತ್ರಗಳಲ್ಲಿ ಕಮಲ ಅರಳಿಸಿ ಬೈ ಎಲೆಕ್ಷನ್ ಮಾಸ್ಟರ್ ಎಂದು ಕರೆಸಿಕೊಂಡಿದ್ದ ವಿಜಯೇಂದ್ರ ಮಸ್ಕಿಯಲ್ಲಿ ಎಡವಿದ್ದಾರೆ. ವಿಜಯೇಂದ್ರ ರಾಜಕೀಯ ಭವಿಷ್ಯಕ್ಕೂ ಈ ಚುನಾವಣಾ ಫಲಿತಾಂಶ ಹಿನ್ನಡೆ ತರಲಿದೆ ಎನ್ನುವ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ‌ ಸೇರಿದ್ದ ಪ್ರತಾಪ್ ಗೌಡ ಪಾಟೀಲ್‌ಗೆ ಭಾರಿ ಅಂತರದ ಸೋಲಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದಿಂದ ಅಂದಿನ ಬಿಜೆಪಿ ಅಭ್ಯರ್ಥಿ ಬಸವರಾಜ ತುರವಿಹಾಳ್ ವಿರುದ್ಧ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್ ಇದೀಗ ಅದೇ ಅಭ್ಯರ್ಥಿ ವಿರುದ್ಧ 26 ಸಾವಿರದಷ್ಟು ಮತಗಳ ಅಂತರದಿಂದ ಸೋತಿದ್ದಾರೆ.

ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯ ಅಭ್ಯರ್ಥಿ ಈಗ ಕಾಂಗ್ರೆಸ್‌ನಿಂದ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದರೂ ಮತದಾರರು ಮಾತ್ರ ಅಭ್ಯರ್ಥಿಗಳು ಅದುಲು ಬದಲಾದರೂ ವಿಜಯಲಕ್ಷ್ಮಿ ಅದಲು ಬದಲು ಮಾಡದೆ ಮತ್ತೊಮ್ಮೆ ಕಾಂಗ್ರೆಸ್ ಪರ ನಿಂತಿದ್ದಾಳೆ.

2019ರ ಅಂತ್ಯದಲ್ಲಿ ನಡೆದಿದ್ದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ಬಿ ವೈ ವಿಜಯೇಂದ್ರ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವು ತಂದು ಕೊಟ್ಟಿದ್ದರು.

ಸಿಎಂ ಯಡಿಯೂರಪ್ಪ ಹುಟ್ಟೂರು ಬೂಕನಕೆರೆ ಇದೇ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಹುಟ್ಟೂರಿನಲ್ಲಿ ಪಕ್ಷವನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ ಎನ್ನುವ ಯಡಿಯೂರಪ್ಪ ಕೊರಗು ನೀಗಿಸಿದ್ದರು.

ಅದಾದ ನಂತರ 2020ರಲ್ಲಿ ನಡೆದಿದ್ದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಶಿರಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ವಿಜಯೇಂದ್ರ ಕ್ಷೇತ್ರದಲ್ಲೇ ಬೀಡುಬಿಟ್ಡು ಪ್ರಚಾರ ನಡೆಸಿದ್ದರು.

ಮದಲೂರು ಕೆರೆಗೆ ನೀರು ತುಂಬಿಸುವ ತಂತ್ರ ಪ್ರಯೋಗಿಸಿ ಸಫಲರಾಗಿದ್ದರು. ನೀರಿನ ಭರವಸೆಗೆ ಓಗೊಟ್ಟಿದ್ದ ಮತದಾರರು ಬಿಜೆಪಿ ಬೆಂಬಲಿಸಿದ್ದರ ಪರಿಣಾಮ ಮೊದಲ ಬಾರಿಗೆ ಶಿರಾದಲ್ಲಿ ಬಿಜೆಪಿಗೆ ಗೆಲುವು ಲಭ್ಯವಾಗಿತ್ತು.

ಬಿಜೆಪಿ ಈವರೆಗೆ ಗೆಲ್ಲದ ಎರಡು ಕ್ಷೇತ್ರವನ್ನು ಬಿಜೆಪಿ ತಂದುಕೊಟ್ಟಿದ್ದ ವಿಜಯೇಂದ್ರಗೆ ಪಕ್ಷದಲ್ಲಿ ವರ್ಚಸ್ಸು ಹೆಚ್ಚಿದ್ದು, ಸಿಎಂ ಉತ್ತರಾಧಿಕಾರಿ ಎನ್ನುವ ಮಾತುಗಳು ಹರಿದು ಬರುವಂತೆ ಮಾಡಿದ್ದರು.

ನಂತರ ಬಸವಕಲ್ಯಾಣ ಉಸ್ತುವಾರಿಗೆ ನಿಯೋಜನೆಗೊಂಡರೂ ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ವಿಜಯೇಂದ್ರ ಅವರನ್ನೇ ನಮ್ಮ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ರಾಜ್ಯ ಬಿಜೆಪಿ ನಾಯಕರು ಬಸವಕಲ್ಯಾಣದ ಬದಲು ಮಸ್ಕಿ ಕ್ಷೇತ್ರದ ಉಸ್ತುವಾರಿ ಜವಾಬ್ದಾರಿ ನೀಡಿದ್ದರು.

ಮಸ್ಕಿ ಉಸ್ತುವಾರಿ ಸಿಗುತ್ತಿದ್ದಂತೆ ತನ್ನ ತಂಡದೊಂದಿಗೆ ಮಸ್ಕಿಗೆ ತೆರಳಿ ಠಿಕಾಣಿ ಹೂಡಿದ್ದ ವಿಜಯೇಂದ್ರ ಸ್ಥಳೀಯ ಸನ್ನಿವೇಶ ನೋಡಿ ಸಿಎಂ ಯಡಿಯೂರಪ್ಪ ಅವರನ್ನು ಎರಡು ಬಾರಿ ಪ್ರಚಾರಕ್ಕೆ ಕರೆದೊಯ್ದಿದ್ದರು. ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದರು ಆದರೂ ಹ್ಯಾಟ್ರಿಕ್ ಗೆಲುವಿನ ವಿಜಯೇಂದ್ರ ಕನಸಿಗೆ ಮಸ್ಕಿ ಮತದಾರರು ಬ್ರೇಕ್ ಹಾಕಿದ್ದಾರೆ.

ಭಾರಿ ಅಂತರದ ಸೋಲುಣಿಸಿ ಆಡಳಿತಾರೂಢ ಪಕ್ಷಕ್ಕೆ ಮುಖಭಂಗವಾಗುವಂತೆ ಮಾಡಿದ್ದಾರೆ. ಹ್ಯಾಟ್ರಿಕ್ ಗೆಲುವು ಕಂಡಿದ್ದ ಪ್ರತಾಪ್ ಗೌಡ ಪಾಟೀಲ್ ನಾಲ್ಕನೇ ಬಾರಿ ಗೆಲ್ಲುವ ಕನಸು ಹುಸಿಯಾಗಿದ್ದು ಈ ಬಾರಿ ಮತದಾರು ಸೋಲಿನ ರುಚಿ ತೋರಿಸಿದ್ದಾರೆ. ಆ ಮೂಲಕ ಪ್ರತಾಪ್ ಗೌಡ ಪಾಟೀಲ್ ಮಂತ್ರಿಯಾಗುವ ಕನಸು ಕೂಡ ನುಚ್ಚು ನೂರಾಗಿದೆ‌.

ಮಸ್ಕಿಯಲ್ಲಿ‌ ವಿಜಯೇಂದ್ರ ತಂತ್ರ ಫಲಿಸಲಿಲ್ಲ ಎನ್ನುವುದು ಈ ಉಪ ಚುನಾವಣೆಯಿಂದ ಸ್ಪಷ್ಟವಾಗಿದೆ. ಉಪ ಚುನಾವಣೆ ಚಾಣಕ್ಯ ಎಂದು ಕರೆಸಿಕೊಳ್ಳುತ್ತಿದ್ದ ವಿಜಯೇಂದ್ರಗೆ ಈ ಉಪ ಚುನಾವಣೆ ಸೋಲಿನ ಆರಂಭ ತೋರಿಸಿದೆ ಎನ್ನಲಾಗುತ್ತಿದೆ.

Last Updated : May 2, 2021, 3:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.