ಬೆಂಗಳೂರು: ತಾನು ಸಾಕಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಾಯಿಯೊಂದನ್ನು ಕದ್ದೊಯ್ಯಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ದೂರು ನೀಡಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಸತೀಶ್ ಎಂಬುವವರು ತಮ್ಮ 8 ಕೋಟಿ ರೂ. ಮೌಲ್ಯದ ಶ್ವಾನ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದು, ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲಸ್ಕನ್ ಮಾಲಮುಟ್ ತಳಿಯ ನಾಯಿ ಇದಾಗಿದೆ.
ಅಲ್ಲದೆ ಈ ಶ್ವಾನವನ್ನು ಮರಳಿ ತಮಗೆ ತಂದು ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ದೂರುದಾರ ಚೇತನ್ ಘೋಷಿಸಿದ್ದಾರೆ.