ETV Bharat / state

ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ನಾವೆಲ್ಲ ಪಾಲ್ಗೊಳ್ಳೋಣ.. ಮಾಜಿ ಸಚಿವ ಎಂಬಿಪಿ

author img

By

Published : Apr 9, 2020, 2:12 PM IST

ನಾಡಿನ ಸಮಸ್ತ ಲಿಂಗವಂತರು ಹಾಗೂ ಬಸವಾದಿ ಎಲ್ಲಾ ಶರಣರ ಭಕ್ತರು ಬರುವ ಏ.13 ರಂದು ಸಂಜೆ 7 ಗಂಟೆಗೆ ತಮ್ಮ ತಮ್ಮ ಮನೆಗಳಿಂದಲೇ ಧ್ಯಾನಸ್ಥರಾಗಿ ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಹಾವಳಿಯಿಂದ ಮುಕ್ತಗೊಳಿಸಲು ಸಾಮೂಹಿಕ ಪೂಜೆಯನ್ನು ಸಲ್ಲಿಸಬೇಕು ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಕೋರಿಕೊಂಡಿದ್ದಾರೆ.

mbp

ಬೆಂಗಳೂರು : ಮಾರಕ ಕಾಯಿಲೆ ಕೊನೆಗಾಣಿಸಲು ಸದೃಢ ಸಂಕಲ್ಪ ಮಾಡುವುದರೊಂದಿಗೆ, ಸಾಮೂಹಿಕ ಇಷ್ಟ ಲಿಂಗ ಪೂಜೆಯಲ್ಲಿ ತಾವೆಲ್ಲರೂ ಪಾಲ್ಗೊಳ್ಳಿ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಕೋರಿಕೊಂಡಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ನಾಡಿನ ಸಮಸ್ತ ಲಿಂಗವಂತರು ಹಾಗೂ ಬಸವಾದಿ ಎಲ್ಲಾ ಶರಣರ ಭಕ್ತರು ಬರುವ ಏ.13ರಂದು ಸಂಜೆ 7ಗಂಟೆಗೆ ತಮ್ಮ ತಮ್ಮ ಮನೆಗಳಿಂದಲೇ ಧ್ಯಾನಸ್ಥರಾಗಿ ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಹಾವಳಿಯಿಂದ ಮುಕ್ತಗೊಳಿಸಲು ಸಾಮೂಹಿಕ ಪೂಜೆ ಸಲ್ಲಿಸಬೇಕು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ನನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಇದೇ ರೀತಿ ಬಸವ ಸಮಿತಿಯಿಂದ ಪ್ರತಿಯೊಬ್ಬರಿಗೂ ಸಂದೇಶ ರವಾನೆಯಾಗಿದೆ. ಎಲ್ಲರೂ ಈ ಮನವಿಯನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಇಷ್ಟಲಿಂಗ ಪ್ರಾರ್ಥನೆಯು ನಮ್ಮ ಮನಸ್ಸು ಮತ್ತು ದೇಹವನ್ನು ಸಶಕ್ತವನ್ನಾಗಿ ಮಾಡುತ್ತದೆ. ಇದಕ್ಕೆ ನಾಡಿನ ನಮ್ಮ ಸಮಾಜದ ಎಲ್ಲಾ ಮಠಾಧೀಶರ ಸಮ್ಮತಿ ಹಾಗೂ ಅವರ ಮಾರ್ಗದರ್ಶನಲ್ಲಿ ನಡೆಯುತ್ತಿದೆ. ಬಸವಣ್ಣ ಹೇಳಿದಂತೆ “ಧರೆ ಹೊತ್ತಿ ಉರಿಯುವಾಗ, ಬೇಲಿ ಕೈಯ ಮೇಯುವಾಗ, ಏರಿ ನೀರುಂಬುವಾಗ, ಇಷ್ಟಲಿಂಗಕ್ಕೆ ಮೊರೆ ಹೋಗುವುದೇ ನಮಗಿರುವ ಮಾರ್ಗ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ನಾವೆಲ್ಲರೂ ಇದನ್ನು ಸದ್ದುಗದ್ದಲವಿಲ್ಲದೆ ಅಚರಿಸೋಣ” ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೂಡ ಹೇಳಿದೆ. ಅಲ್ಲದೇ ಅಖಿಲ ಭಾರತ ವೀರಶೈವ ಮಹಾಸಭಾ, ಬಸವ ಪರ ಸಂಘಟನೆಗಳು ಹಾಗೂ ನಾಡಿನ ಹಲವಾರು ಪರಮಪೂಜ್ಯ ಮಹಾಸ್ವಾಮೀಜಿಯವರು ಸಹಿತ ಇಷ್ಟಲಿಂಗ ಪ್ರಾರ್ಥನೆಗೆ ಕರೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಡೀ ವಿಶ್ವವನ್ನು ವ್ಯಾಪಿಸಿರುವ ಕೊರೊನಾ ಕಾಯಿಲೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡು ಕುಟುಂಬಗಳು ಸರ್ವನಾಶವಾಗುತ್ತಿವೆ. ಇಂತಹ ವಿಷಮ ಸ್ಥಿತಿಯಲ್ಲಿ ಈ ರೀತಿಯ ಪೂಜೆ ಹಾಗೂ ಪ್ರಾರ್ಥನೆಗಳು ನಮ್ಮೆಲ್ಲರ ಮನೋಬಲ ಹೆಚ್ಚಿಸುವುದಕ್ಕೆ ಸಹಕಾರಿಯಾಗುತ್ತವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು : ಮಾರಕ ಕಾಯಿಲೆ ಕೊನೆಗಾಣಿಸಲು ಸದೃಢ ಸಂಕಲ್ಪ ಮಾಡುವುದರೊಂದಿಗೆ, ಸಾಮೂಹಿಕ ಇಷ್ಟ ಲಿಂಗ ಪೂಜೆಯಲ್ಲಿ ತಾವೆಲ್ಲರೂ ಪಾಲ್ಗೊಳ್ಳಿ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಕೋರಿಕೊಂಡಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ನಾಡಿನ ಸಮಸ್ತ ಲಿಂಗವಂತರು ಹಾಗೂ ಬಸವಾದಿ ಎಲ್ಲಾ ಶರಣರ ಭಕ್ತರು ಬರುವ ಏ.13ರಂದು ಸಂಜೆ 7ಗಂಟೆಗೆ ತಮ್ಮ ತಮ್ಮ ಮನೆಗಳಿಂದಲೇ ಧ್ಯಾನಸ್ಥರಾಗಿ ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಹಾವಳಿಯಿಂದ ಮುಕ್ತಗೊಳಿಸಲು ಸಾಮೂಹಿಕ ಪೂಜೆ ಸಲ್ಲಿಸಬೇಕು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ನನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಇದೇ ರೀತಿ ಬಸವ ಸಮಿತಿಯಿಂದ ಪ್ರತಿಯೊಬ್ಬರಿಗೂ ಸಂದೇಶ ರವಾನೆಯಾಗಿದೆ. ಎಲ್ಲರೂ ಈ ಮನವಿಯನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಇಷ್ಟಲಿಂಗ ಪ್ರಾರ್ಥನೆಯು ನಮ್ಮ ಮನಸ್ಸು ಮತ್ತು ದೇಹವನ್ನು ಸಶಕ್ತವನ್ನಾಗಿ ಮಾಡುತ್ತದೆ. ಇದಕ್ಕೆ ನಾಡಿನ ನಮ್ಮ ಸಮಾಜದ ಎಲ್ಲಾ ಮಠಾಧೀಶರ ಸಮ್ಮತಿ ಹಾಗೂ ಅವರ ಮಾರ್ಗದರ್ಶನಲ್ಲಿ ನಡೆಯುತ್ತಿದೆ. ಬಸವಣ್ಣ ಹೇಳಿದಂತೆ “ಧರೆ ಹೊತ್ತಿ ಉರಿಯುವಾಗ, ಬೇಲಿ ಕೈಯ ಮೇಯುವಾಗ, ಏರಿ ನೀರುಂಬುವಾಗ, ಇಷ್ಟಲಿಂಗಕ್ಕೆ ಮೊರೆ ಹೋಗುವುದೇ ನಮಗಿರುವ ಮಾರ್ಗ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ನಾವೆಲ್ಲರೂ ಇದನ್ನು ಸದ್ದುಗದ್ದಲವಿಲ್ಲದೆ ಅಚರಿಸೋಣ” ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೂಡ ಹೇಳಿದೆ. ಅಲ್ಲದೇ ಅಖಿಲ ಭಾರತ ವೀರಶೈವ ಮಹಾಸಭಾ, ಬಸವ ಪರ ಸಂಘಟನೆಗಳು ಹಾಗೂ ನಾಡಿನ ಹಲವಾರು ಪರಮಪೂಜ್ಯ ಮಹಾಸ್ವಾಮೀಜಿಯವರು ಸಹಿತ ಇಷ್ಟಲಿಂಗ ಪ್ರಾರ್ಥನೆಗೆ ಕರೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಡೀ ವಿಶ್ವವನ್ನು ವ್ಯಾಪಿಸಿರುವ ಕೊರೊನಾ ಕಾಯಿಲೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡು ಕುಟುಂಬಗಳು ಸರ್ವನಾಶವಾಗುತ್ತಿವೆ. ಇಂತಹ ವಿಷಮ ಸ್ಥಿತಿಯಲ್ಲಿ ಈ ರೀತಿಯ ಪೂಜೆ ಹಾಗೂ ಪ್ರಾರ್ಥನೆಗಳು ನಮ್ಮೆಲ್ಲರ ಮನೋಬಲ ಹೆಚ್ಚಿಸುವುದಕ್ಕೆ ಸಹಕಾರಿಯಾಗುತ್ತವೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.