ETV Bharat / state

ತಮಿಳುನಾಡಿನಿಂದ ಐಷಾರಾಮಿ ಕಾರಲ್ಲಿ ಬಂದು ಮನೆಗಳ್ಳತನ: ಹೈದರಾಬಾದ್​ನಲ್ಲಿ ಸೆರೆಹಿಡಿದ ಸಿಸಿಬಿ

ಅಕ್ಕ ಪಕ್ಕದ ರಾಜ್ಯಗಳಲ್ಲೂ ಕೈಚಳಕ ತೋರಿದ್ದ ಕುಖ್ಯಾತ ಕಳ್ಳನನ್ನು ಸಿಸಿಬಿ ಪೊಲೀಸರು ಹೈದರಬಾದ್​ನಲ್ಲಿ ಬಂಧಿಸಿದ್ದಾರೆ.

author img

By

Published : Jun 30, 2021, 9:37 AM IST

Updated : Jun 30, 2021, 10:08 AM IST

Luxury home thief arrested  Luxury home thief arrested by CCB police  Luxury home thief arrested by CCB police in Hyderabad  Bangalore news  Bangalore crime news  ಐಷಾರಾಮಿ ಮನೆಗಳ್ಳ ಬಂಧನ  ಸಿಸಿಬಿ ಪೊಲೀಸರಿಂದ ಐಷಾರಾಮಿ ಮನೆಗಳ್ಳ ಬಂಧನ  ಹೈದರಾಬಾದ್​ನಲ್ಲಿ ಸಿಸಿಬಿ ಪೊಲೀಸರಿಂದ ಐಷಾರಾಮಿ ಮನೆಗಳ್ಳ ಬಂಧನ  ಬೆಂಗಳೂರು ಸುದ್ದಿ  ಬೆಂಗಳೂರು ಅಪರಾಧ ಸುದ್ದಿ
ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು

ಬೆಂಗಳೂರು: ಅಕ್ಕ ಪಕ್ಕದ ರಾಜ್ಯಗಳಲ್ಲೂ ಕೈಚಳಕ ತೋರಿದ್ದ ಕುಖ್ಯಾತ ಆರೋಪಿಯನ್ನು ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು ಬುಧವಾರ ಕರೆ ತಂದಿದ್ದಾರೆ. ಹತ್ತು ಹಲವು ಪ್ರಕರಣದಲ್ಲಿ ಜೈಲು ಸೇರಿ ಮತ್ತೆ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಈತನ ಇತಿಹಾಸವೇ ರೋಚಕವಾಗಿದೆ.

ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು
ಆರೋಪಿ ಬಸವರಾಜ್

ರಾಜ್ಯದೆಲ್ಲೆಡೆ, ನಗರದಲ್ಲಿ, ಪಕ್ಕದ ರಾಜ್ಯಗಳಲ್ಲೂ ಕೈಚಳಕ ತೋರಿದ್ದ ಆರೋಪಿಯನ್ನು ನಗರದ ಕೇಂದ್ರ ಅಪರಾಧ ದಳದ ಪೊಲೀಸರು ಹೈದರಬಾದ್​ನಲ್ಲಿ ತಡರಾತ್ರಿ ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕುಖ್ಯಾತ ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಬಸವರಾಜ್ ಅಲಿಯಾಸ್ ಪ್ರಕಾಶ ಅಲಿಯಾಸ್ ಜಂಗ್ಲಿ ಎನ್ನುವವನನ್ನು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಅಪರಾಧ ತನಿಖಾ ದಳದ ಪೊಲೀಸರು ಹೈದರಬಾದ್​ನಲ್ಲಿ ಆರೋಪಿಯನ್ನು ಬಂಧಿಸಿ ಪಡೆದು 80 ಲಕ್ಷ ಮೌಲ್ಯದ 1 ಕೆ.ಜಿ. 367 ಗ್ರಾಂ ಚಿನ್ನಾಭರಣ, 1.50 ಲಕ್ಷ ರೂ ನಗದು, 2 ಕಾರನ್ನು ವಶ ಪಡಿಸಿಕೊಂಡಿದ್ದಾರೆ.

ಬಸವರಾಜ ತಮಿಳುನಾಡಿನಿಂದ ಐಷಾರಾಮಿ ಕಾರ್​ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಆರೋಪಿ ಬಂಧನದಿಂದ ಈ ಹಿಂದೆ 10 ಕ್ಕೂ ಹೆಚ್ಚು ಪ್ರಕರಣದಲ್ಲಿ ಜೈಲೂಟ ಉಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿಸಿಬಿ ಇನ್ಸ್ ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನೆಡೆಸಿ ಬುಧವಾರ ತೆಲಂಗಾಣ ರಾಜ್ಯದ ಹೈದರಾಬಾದ್​ನಿಂದ ಆರೋಪಿ ಬಂಧಿಸಿ ಪೊಲೀಸರು ಕರೆತಂದಿದ್ದಾರೆ.

ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ: ಸಿ.ಸಿ.ಬಿ ಪೊಲೀಸರು ಕಾರ್ಯಚರಣೆ ನೆಡೆಸಿ ಕಾರಿನಲ್ಲಿ ಬಂದು ಕನ್ನಕಳವು ಮಾಡುತ್ತಿದ್ದ ಅಂತರ ರಾಜ್ಯ ಕನ್ನ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧನ. 80 ಲಕ್ಷ ಬೆಲೆ ಬಾಳುವ 1 ಕೆ.ಜಿ 367 ಗ್ರಾಂ ಚಿನ್ನದ ಒಡವೆ, 1,50,000/-ರೂ ನಗದು ಹಣ ಹಾಗು ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರದ ಸಿಸಿಬಿ ಪೊಲೀಸರು ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಐಷರಾಮಿ ಕಾರಿನಲ್ಲಿ ಬಂದು ಕನ್ನ ಕಳವು ಮಾಡುತ್ತಿದ್ದ ಕುಖ್ಯಾತ ಕನ್ನಕಳ್ಳನನ್ನು ವಿಚರಣೆಗೊಳಪಡಿಸಿ 10 ಕನ್ನ ಕಳವು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು
ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು

ಆರೋಪಿಯ ಹಿನ್ನಲೆ: ಆರೋಪಿಯು ಪೊಲೀಸರ ಕಣ್ಣು ತಪ್ಪಿಸಿ ಮನೆ ಕಳ್ಳತನ ಮಾಡುವ ಸಲುವಾಗಿ ವಿವಿಧ ಬಗೆಯ ಹೊಸ ಹೊಸ ಕಾರ್‌ಗಳನ್ನು ಉಪಯೋಗಿಸುತ್ತಿದ್ದ. ಬೆಂಗಳೂರಿನಲ್ಲಿ ಆರೋಪಿಯನ್ನು ಹಿಡಿಯುವ ಪ್ರಯತ್ನದಲ್ಲಿರುವಾಗ ರಾಜಧಾನಿಯನ್ನು ಬಿಟ್ಟು ತೆಲಂಗಾಣ ರಾಜ್ಯದ ಹೈದರಾಬಾದ್‌ನ ತಲೆ ಮರೆಸಿಕೊಂಡಿದ್ದ. ಹೈದರಾಬಾದ್ ನಿಂದ ಬೇರೆ ಬೇರೆ ಕಾರ್ ಗಳಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ, ಇದಲ್ಲದೆ ಹೈದರಾಬಾದ್‌ನಲ್ಲಿ ಕೂಡ ಮನೆ ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡಿದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಹೇಳಲಾಗಿದೆ.

ಆರೋಪಿಯು ವಿರುದ್ಧ ಈ ಹಿಂದೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣದ ದಾಖಲಾಗಿದೆ ನಗರದ ಕೊಡಿಗೇ ಹಳ್ಳಿ ಪೊಲೀಸ್ ಠಾಣೆಯಲ್ಲಿ, ಸಿ.ಕೆ ಅಚ್ಚುಕಟ್ಟು ಠಾಣೆಯಲ್ಲಿ 2017 ರಲ್ಲಿ ಪ್ರಕರಣಗಳು ದಾಖಲಾಗಿದೆ. ರಾಜಧಾನಿಯ ವಿಜಯನಗರ, ಗಿರಿನಗರ,ಎ.ಪಿ ನಗರ 2018 ರಲ್ಲಿ ಪ್ರಕರಣಗಳು ಹಾಗು 2019 ರಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದಾನೆ.

ರಾಮನಗರ ಜಿಲ್ಲೆಯ 2014 ರಲ್ಲಿ ಸಿಕ್ಕಿಬಿದ್ದು ಜೈಲು ವಾಸ ಅನುಭವಿಸಿ, ನಗರದ ಕೊಡಿಗೇಹಳ್ಳಿ ಪೊಲೀಸ್ 2016 ರಲ್ಲೇ ಪ್ರಕರಣದಲ್ಲಿ ಜೈಲೂಟ ಉಂಡಿದ್ದಾನೆ, ವಿಜಯನಗರ ಠಾಣೆಯಲ್ಲಿ 2019ರಲ್ಲಿ ಸೆರೆ ಸಿಕ್ಕಿದ್ದ.

ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು
ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು

ಇನ್ನು ತೆಲಂಗಾಣ, ತಮಿಳುನಾಡಿನ ಕ್ರಮವಾಗಿ ಕೆ.ಪಿ.ಹೆಚ್.ಬಿ ಠಾಣೆ ಹಾಗು ಹೊಸೂರು ಪೊಲೀಸರಿಗೆ ಕಳ್ಳತನ ಪ್ರಕರಣದಲ್ಲಿ 2020 ರಲ್ಲಿ ಸಿಕ್ಕಿಬಿದಿದ್ದ.

ಸದ್ಯಕ್ಕೆ ಆರೋಪಿಯಾದ ಬಸವರಾಜ ಅಲಿಯಾಸ್ ಪ್ರಕಾಶ ಅಲಿಯಾಸ್ ಜಂಗ್ಲಿ ಬಂಧಿಸಿ ಆರೋಪಿಯ ಮಾಹಿತಿ ಮೇರೆಗೆ 80,00,000 ರೂ ಬೆಲೆ ಬಾಳುವ 1 ಕೆ.ಜಿ 367 ಗ್ರಾಂ ತೂಕದ ಒಡವೆಗಳು, 1,50,000/-ರೂ ನಗದು ಹಣ ಕೃತ್ಯಕ್ಕೆ ಉಪಯೋಸಿದ ಒಂದು ವಿಟಾರ ಬ್ರೆಝ ಕಾರು, ಒಂದು ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಇನ್ನೂ 10 ಕಳವು ಪ್ರಕರಣಗಳು ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಚರಣೆ ಕೈಗೊಂಡ ತಂಡ: ಸಿ.ಸಿ.ಬಿ ಮಹಿಳಾ ಸಂರಕ್ಷಾಣಾ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಹಜರೇಶ್ ಕಿಲ್ಲೇದಾರ್ ಸಿಬ್ಬಂದಿಗಳಾದ ಹೆಚ್.ಸಿ ಗಳಾದ ನವಾಜ್ ಖಾನ್, ಮುಫೀಜ್ ಖಾನ್, ರಾಘವೇಂದ್ರ, ನಾಗರಾಜ್, ಶ್ರೀನಿವಾಸ್, ಹಾಗೂ ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ರವಿಕುಮಾರ್, ಸಮೀರ್ ಮಿರ್ಜನ್ನವರ್ ಯಶಸ್ವಿ ಕಾರ್ಯಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಎಂದು ಶಾಘಿಸಿದ್ದಾರೆ.

ಈತನ ವಿಚರಣೆಯಿಂದ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮತ್ತೂ 10 ಪ್ರಕರಣಗಳು ಪತ್ತೆಯಾಗಿದೆ. ನಗರದ ಕೆ.ಆರ್ ಪುರಂ ಪೊಲೀಸ್ ಠಾಣೆಯ 2 ಪ್ರಕರಣ, ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ 3, ಹೆಬ್ಬಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 1,ಬ್ಯಾಡರಹಳ್ಳಿ 1 ಹೆಚ್.ಎಸ್.ಆರ್ ಲೇಔಟ್ ನಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಬೆಂಗಳೂರು: ಅಕ್ಕ ಪಕ್ಕದ ರಾಜ್ಯಗಳಲ್ಲೂ ಕೈಚಳಕ ತೋರಿದ್ದ ಕುಖ್ಯಾತ ಆರೋಪಿಯನ್ನು ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು ಬುಧವಾರ ಕರೆ ತಂದಿದ್ದಾರೆ. ಹತ್ತು ಹಲವು ಪ್ರಕರಣದಲ್ಲಿ ಜೈಲು ಸೇರಿ ಮತ್ತೆ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಈತನ ಇತಿಹಾಸವೇ ರೋಚಕವಾಗಿದೆ.

ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು
ಆರೋಪಿ ಬಸವರಾಜ್

ರಾಜ್ಯದೆಲ್ಲೆಡೆ, ನಗರದಲ್ಲಿ, ಪಕ್ಕದ ರಾಜ್ಯಗಳಲ್ಲೂ ಕೈಚಳಕ ತೋರಿದ್ದ ಆರೋಪಿಯನ್ನು ನಗರದ ಕೇಂದ್ರ ಅಪರಾಧ ದಳದ ಪೊಲೀಸರು ಹೈದರಬಾದ್​ನಲ್ಲಿ ತಡರಾತ್ರಿ ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕುಖ್ಯಾತ ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಬಸವರಾಜ್ ಅಲಿಯಾಸ್ ಪ್ರಕಾಶ ಅಲಿಯಾಸ್ ಜಂಗ್ಲಿ ಎನ್ನುವವನನ್ನು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಅಪರಾಧ ತನಿಖಾ ದಳದ ಪೊಲೀಸರು ಹೈದರಬಾದ್​ನಲ್ಲಿ ಆರೋಪಿಯನ್ನು ಬಂಧಿಸಿ ಪಡೆದು 80 ಲಕ್ಷ ಮೌಲ್ಯದ 1 ಕೆ.ಜಿ. 367 ಗ್ರಾಂ ಚಿನ್ನಾಭರಣ, 1.50 ಲಕ್ಷ ರೂ ನಗದು, 2 ಕಾರನ್ನು ವಶ ಪಡಿಸಿಕೊಂಡಿದ್ದಾರೆ.

ಬಸವರಾಜ ತಮಿಳುನಾಡಿನಿಂದ ಐಷಾರಾಮಿ ಕಾರ್​ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಆರೋಪಿ ಬಂಧನದಿಂದ ಈ ಹಿಂದೆ 10 ಕ್ಕೂ ಹೆಚ್ಚು ಪ್ರಕರಣದಲ್ಲಿ ಜೈಲೂಟ ಉಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿಸಿಬಿ ಇನ್ಸ್ ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನೆಡೆಸಿ ಬುಧವಾರ ತೆಲಂಗಾಣ ರಾಜ್ಯದ ಹೈದರಾಬಾದ್​ನಿಂದ ಆರೋಪಿ ಬಂಧಿಸಿ ಪೊಲೀಸರು ಕರೆತಂದಿದ್ದಾರೆ.

ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ: ಸಿ.ಸಿ.ಬಿ ಪೊಲೀಸರು ಕಾರ್ಯಚರಣೆ ನೆಡೆಸಿ ಕಾರಿನಲ್ಲಿ ಬಂದು ಕನ್ನಕಳವು ಮಾಡುತ್ತಿದ್ದ ಅಂತರ ರಾಜ್ಯ ಕನ್ನ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧನ. 80 ಲಕ್ಷ ಬೆಲೆ ಬಾಳುವ 1 ಕೆ.ಜಿ 367 ಗ್ರಾಂ ಚಿನ್ನದ ಒಡವೆ, 1,50,000/-ರೂ ನಗದು ಹಣ ಹಾಗು ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರದ ಸಿಸಿಬಿ ಪೊಲೀಸರು ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಐಷರಾಮಿ ಕಾರಿನಲ್ಲಿ ಬಂದು ಕನ್ನ ಕಳವು ಮಾಡುತ್ತಿದ್ದ ಕುಖ್ಯಾತ ಕನ್ನಕಳ್ಳನನ್ನು ವಿಚರಣೆಗೊಳಪಡಿಸಿ 10 ಕನ್ನ ಕಳವು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು
ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು

ಆರೋಪಿಯ ಹಿನ್ನಲೆ: ಆರೋಪಿಯು ಪೊಲೀಸರ ಕಣ್ಣು ತಪ್ಪಿಸಿ ಮನೆ ಕಳ್ಳತನ ಮಾಡುವ ಸಲುವಾಗಿ ವಿವಿಧ ಬಗೆಯ ಹೊಸ ಹೊಸ ಕಾರ್‌ಗಳನ್ನು ಉಪಯೋಗಿಸುತ್ತಿದ್ದ. ಬೆಂಗಳೂರಿನಲ್ಲಿ ಆರೋಪಿಯನ್ನು ಹಿಡಿಯುವ ಪ್ರಯತ್ನದಲ್ಲಿರುವಾಗ ರಾಜಧಾನಿಯನ್ನು ಬಿಟ್ಟು ತೆಲಂಗಾಣ ರಾಜ್ಯದ ಹೈದರಾಬಾದ್‌ನ ತಲೆ ಮರೆಸಿಕೊಂಡಿದ್ದ. ಹೈದರಾಬಾದ್ ನಿಂದ ಬೇರೆ ಬೇರೆ ಕಾರ್ ಗಳಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ, ಇದಲ್ಲದೆ ಹೈದರಾಬಾದ್‌ನಲ್ಲಿ ಕೂಡ ಮನೆ ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡಿದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಹೇಳಲಾಗಿದೆ.

ಆರೋಪಿಯು ವಿರುದ್ಧ ಈ ಹಿಂದೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣದ ದಾಖಲಾಗಿದೆ ನಗರದ ಕೊಡಿಗೇ ಹಳ್ಳಿ ಪೊಲೀಸ್ ಠಾಣೆಯಲ್ಲಿ, ಸಿ.ಕೆ ಅಚ್ಚುಕಟ್ಟು ಠಾಣೆಯಲ್ಲಿ 2017 ರಲ್ಲಿ ಪ್ರಕರಣಗಳು ದಾಖಲಾಗಿದೆ. ರಾಜಧಾನಿಯ ವಿಜಯನಗರ, ಗಿರಿನಗರ,ಎ.ಪಿ ನಗರ 2018 ರಲ್ಲಿ ಪ್ರಕರಣಗಳು ಹಾಗು 2019 ರಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದಾನೆ.

ರಾಮನಗರ ಜಿಲ್ಲೆಯ 2014 ರಲ್ಲಿ ಸಿಕ್ಕಿಬಿದ್ದು ಜೈಲು ವಾಸ ಅನುಭವಿಸಿ, ನಗರದ ಕೊಡಿಗೇಹಳ್ಳಿ ಪೊಲೀಸ್ 2016 ರಲ್ಲೇ ಪ್ರಕರಣದಲ್ಲಿ ಜೈಲೂಟ ಉಂಡಿದ್ದಾನೆ, ವಿಜಯನಗರ ಠಾಣೆಯಲ್ಲಿ 2019ರಲ್ಲಿ ಸೆರೆ ಸಿಕ್ಕಿದ್ದ.

ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು
ಹೈದರಬಾದ್​ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು

ಇನ್ನು ತೆಲಂಗಾಣ, ತಮಿಳುನಾಡಿನ ಕ್ರಮವಾಗಿ ಕೆ.ಪಿ.ಹೆಚ್.ಬಿ ಠಾಣೆ ಹಾಗು ಹೊಸೂರು ಪೊಲೀಸರಿಗೆ ಕಳ್ಳತನ ಪ್ರಕರಣದಲ್ಲಿ 2020 ರಲ್ಲಿ ಸಿಕ್ಕಿಬಿದಿದ್ದ.

ಸದ್ಯಕ್ಕೆ ಆರೋಪಿಯಾದ ಬಸವರಾಜ ಅಲಿಯಾಸ್ ಪ್ರಕಾಶ ಅಲಿಯಾಸ್ ಜಂಗ್ಲಿ ಬಂಧಿಸಿ ಆರೋಪಿಯ ಮಾಹಿತಿ ಮೇರೆಗೆ 80,00,000 ರೂ ಬೆಲೆ ಬಾಳುವ 1 ಕೆ.ಜಿ 367 ಗ್ರಾಂ ತೂಕದ ಒಡವೆಗಳು, 1,50,000/-ರೂ ನಗದು ಹಣ ಕೃತ್ಯಕ್ಕೆ ಉಪಯೋಸಿದ ಒಂದು ವಿಟಾರ ಬ್ರೆಝ ಕಾರು, ಒಂದು ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಇನ್ನೂ 10 ಕಳವು ಪ್ರಕರಣಗಳು ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಚರಣೆ ಕೈಗೊಂಡ ತಂಡ: ಸಿ.ಸಿ.ಬಿ ಮಹಿಳಾ ಸಂರಕ್ಷಾಣಾ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಹಜರೇಶ್ ಕಿಲ್ಲೇದಾರ್ ಸಿಬ್ಬಂದಿಗಳಾದ ಹೆಚ್.ಸಿ ಗಳಾದ ನವಾಜ್ ಖಾನ್, ಮುಫೀಜ್ ಖಾನ್, ರಾಘವೇಂದ್ರ, ನಾಗರಾಜ್, ಶ್ರೀನಿವಾಸ್, ಹಾಗೂ ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ರವಿಕುಮಾರ್, ಸಮೀರ್ ಮಿರ್ಜನ್ನವರ್ ಯಶಸ್ವಿ ಕಾರ್ಯಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಎಂದು ಶಾಘಿಸಿದ್ದಾರೆ.

ಈತನ ವಿಚರಣೆಯಿಂದ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮತ್ತೂ 10 ಪ್ರಕರಣಗಳು ಪತ್ತೆಯಾಗಿದೆ. ನಗರದ ಕೆ.ಆರ್ ಪುರಂ ಪೊಲೀಸ್ ಠಾಣೆಯ 2 ಪ್ರಕರಣ, ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ 3, ಹೆಬ್ಬಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 1,ಬ್ಯಾಡರಹಳ್ಳಿ 1 ಹೆಚ್.ಎಸ್.ಆರ್ ಲೇಔಟ್ ನಲ್ಲಿ 1 ಪ್ರಕರಣ ಪತ್ತೆಯಾಗಿದೆ.

Last Updated : Jun 30, 2021, 10:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.