ಬೆಂಗಳೂರು: ಲಾಕ್ ಡೌನ್ ಆದೇಶ ಉಲ್ಲಂಘಿಸಿ ರಸ್ತೆಗೆ ಇಳಿದ ಮೂವರು ಯುವಕರನ್ನು ಹಲಸೂರು ಸಂಚಾರ ಪೊಲೀಸರು ಸ್ಥಳದಲ್ಲೇ ಯುವಕರು ಧರಿಸಿದ್ದ ಟೀ ಶರ್ಟ್ ಬಿಚ್ಚಿಸಿ ಅದರಲ್ಲೇ ಮಾಸ್ಕ್ ಧರಿಸುವಂತೆ ಹೇಳಿ ಕಳುಹಿಸಿದ್ದಾರೆ.
ಟ್ರಿನಿಟಿ ಸರ್ಕಲ್ ವೃತ್ತದಲ್ಲಿ ಮಾಸ್ಕ್ ಧರಿಸದೇ ಮೂವರು ಯುವಕರು ಬರುತ್ತಿರುವುದನ್ನು ಕಂಡು ಹಲಸೂರು ಸಂಚಾರ ಪೊಲೀಸರು ತಡೆದು ಮಾಸ್ಕ್ ಯಾಕೆ ಹಾಕಿಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಯುವಕರ ಸಬೂಬು ಮಾತಿಗೆ ಕಿವಿಗೊಡದ ಪೊಲೀಸರು ಹಾಕಿಕೊಂಡಿದ್ದ ಟಿ -ಶರ್ಟ್ ಬಿಚ್ಚಿಸಿ ಅದರಲ್ಲೇ ಮಾಸ್ಕ್ ಧರಿಸಿ ಬುದ್ದಿ ಹೇಳಿ ಕಳುಹಿಸಿದ್ದಾರೆ.