ETV Bharat / state

ಕೆಪಿಸಿಸಿ ಅಧ್ಯಕ್ಷರ ನೇಮಕ ಹೈ ಕಮಾಂಡ್​ಗೆ ಬಿಟ್ಟದ್ದು: ಮಲ್ಲಿಕಾರ್ಜುನ ಖರ್ಗೆ

author img

By

Published : Jan 27, 2020, 3:31 PM IST

ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತೆ. ಯಾರು ಏನೂ ಆತಂಕ ಪಡುವುದು ಬೇಡ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

Mallikarjuna Kharge
ಕೆಪಿಸಿಸಿ ಅಧ್ಯಕ್ಷರ ನೇಮಕ ಹೈ ಕಮಾಂಡ್​ಗೆ ಬಿಟ್ಟದ್ದು: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತೆ. ಯಾರು ಏನೂ ಆತಂಕ ಪಡುವುದು ಬೇಡ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು , ಸೋನಿಯಾಜಿ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ತಾರೆ. ಯಾರೂ ಪಕ್ಷಕ್ಕಿಂತ ಮೇಲಿಲ್ಲ. ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧರಿಸುತ್ತೆ. ಇಲ್ಲಿ ಬೇರೆ ಯಾವ ಚರ್ಚೆಯೂ ಅನ್ವಯವಾಗಲ್ಲ ಎಂದರು. ನಿನ್ನೆ ಸಿದ್ದರಾಮಯ್ಯ ಜೊತೆ ಹೊಟೇಲ್​ನಲ್ಲಿ ಉಪಹಾರ ಸೇವಿಸಿ ಚರ್ಚಿಸಿದ ವಿಚಾರ ಮಾತನಾಡಿ, ಮಾಧ್ಯಮಗಳೇ ಏನೇನೋ ಕಲ್ಪನೆ ಮಾಡಿಕೊಂಡು ಸುದ್ದಿ ಮಾಡ್ತೀರ. ವಾಸ್ತವ ನೋಡಿಕೊಂಡು ಸುದ್ದಿ ಮಾಡಬೇಕು. ಜನಾರ್ಧನ ಹೋಟೆಲ್​​​​ಗೆ ಭೇಟಿ ನೀಡ್ತೇವೆ. ಕೇರಳ ಹೋಟೆಲ್​​ ಮತ್ತೊಂದು ಹೋಟೆಲ್​​ಗೂ ಹೋಗ್ತೇವೆ. ನಿನ್ನೆ ಸಿದ್ದರಾಮಯ್ಯನವರೂ ಜೊತೆಯಾಗಿದ್ರು ಅಷ್ಟೇ. ನಾವು ಅಲ್ಲಿ ಏನೇನೂ ಮಾತನಾಡಿಲ್ಲ. ಸುಮ್ಮನೆ ಸುದ್ದಿ ಮಾಡಿದರೆ ಬೇರೆ ಅರ್ಥ ಬರುತ್ತೆ. ನಮ್ಮ ನಮ್ಮಲ್ಲೇ ಮಿಸ್ ಅಂಡರ್​ಸ್ಟಾಂಡಿಂಗ್ ಆಗುತ್ತೆ. ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಸಿದ್ದರಾಮಯ್ಯ ಭೇಟಿಗೆ ವಿಶೇಷ ಅರ್ಥ ಬೇಕಿಲ್ಲ ಎಂದರು.

ಆಂಧ್ರದಲ್ಲಿ ಮಕ್ಕಳಾಟವಾಗಿದೆ: ಆಂಧ್ರದಲ್ಲಿ ಮೇಲ್ಮನೆ ರದ್ಧು ಮಾಡುವ ನಿರ್ಧಾರ ವಿಚಾರ ಮಾತನಾಡಿ, ಮೇಲ್ಮನೆ ರದ್ಧು ಪಡಿಸೋ ಅಧಿಕಾರ ರಾಜ್ಯಕ್ಕಿದೆ. ಆದರೆ ಆಂಧ್ರದಲ್ಲಿ ಮಕ್ಕಳಾಟವಾಗಿದೆ. ಒಮ್ಮೆ ತೆಗೆದು ಹಾಕಿದ್ರು. ಮತ್ತೆ ಅದನ್ನ ತಂದ್ರು. ಈಗ ಮತ್ತೆ ಮೇಲ್ಮನೆ ತೆಗೆದು ಹಾಕ್ತಿದ್ದಾರೆ. ರಾಜ್ಯದಲ್ಲಿ ಸಂಸ್ಥೆಯನ್ನ ಮಾಡಿದರೆ ಸದಾಕಾಲ ಇರಬೇಕು. ಮೇಲ್ಮನೆ ಸೀಟು ಸಿಗದವರಿಗೆ ಅವಕಾಶ ನೀಡುವುದಕ್ಕೆ ಇರಲ್ಲ. ಮೇಲ್ಮನೆ ಇರೋದು ಬಿಲ್ ಚರ್ಚೆಗೆ ಒತ್ತು ನೀಡೋಕೆ. ಪ್ರೂಪ್ ರೀಡರ್ ಇದ್ದಂಗೆ. ತಪ್ಪುಗಳಿದ್ದರೆ ಸರಿಪಡಿಸೋಕೆ. ಕೆಲವು ಬಿಲ್ ಗಳನ್ನ ಕೆಳಮನೆಯಲ್ಲಿ ಪ್ರಸ್ತಾಪ ಮಾಡ್ತಾರೆ. ಇವತ್ತು ತರಾತುರಿಯಲ್ಲಿ ಕೆಲವು ಕಾನೂನು ಬರ್ತಿವೆ. ಕಾನೂನು ತರುವಾಗ ಸೀರಿಯಸ್ ನೆಸ್ ಬೇಕಾಗುತ್ತದೆ. ಇಂತ ವೇಳೆ ಮೇಲ್ಮನೆಯಲ್ಲಿ ಸಲಹೆ ಕೊಡೋಕೆ ಸಾಧ್ಯವಾಗುತ್ತೆ. ತರಾಯುರಿಯಲ್ಲಿ ತೆಗೆದರೆ ಒಳ್ಳೆಯ ಸಂದೇಶ ಹೋಗಲ್ಲ. ಆದರೆ, ಇದನ್ನ ತೆಗೆಯೋದು ಸರಿಯಲ್ಲ. ರದ್ಧುಪಡಿಸೋದು, ತೆಗೆಯೋದು ಮಕ್ಕಳಾಟವಾದಂತೆ ಎಂದರು.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತೆ. ಯಾರು ಏನೂ ಆತಂಕ ಪಡುವುದು ಬೇಡ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು , ಸೋನಿಯಾಜಿ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ತಾರೆ. ಯಾರೂ ಪಕ್ಷಕ್ಕಿಂತ ಮೇಲಿಲ್ಲ. ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧರಿಸುತ್ತೆ. ಇಲ್ಲಿ ಬೇರೆ ಯಾವ ಚರ್ಚೆಯೂ ಅನ್ವಯವಾಗಲ್ಲ ಎಂದರು. ನಿನ್ನೆ ಸಿದ್ದರಾಮಯ್ಯ ಜೊತೆ ಹೊಟೇಲ್​ನಲ್ಲಿ ಉಪಹಾರ ಸೇವಿಸಿ ಚರ್ಚಿಸಿದ ವಿಚಾರ ಮಾತನಾಡಿ, ಮಾಧ್ಯಮಗಳೇ ಏನೇನೋ ಕಲ್ಪನೆ ಮಾಡಿಕೊಂಡು ಸುದ್ದಿ ಮಾಡ್ತೀರ. ವಾಸ್ತವ ನೋಡಿಕೊಂಡು ಸುದ್ದಿ ಮಾಡಬೇಕು. ಜನಾರ್ಧನ ಹೋಟೆಲ್​​​​ಗೆ ಭೇಟಿ ನೀಡ್ತೇವೆ. ಕೇರಳ ಹೋಟೆಲ್​​ ಮತ್ತೊಂದು ಹೋಟೆಲ್​​ಗೂ ಹೋಗ್ತೇವೆ. ನಿನ್ನೆ ಸಿದ್ದರಾಮಯ್ಯನವರೂ ಜೊತೆಯಾಗಿದ್ರು ಅಷ್ಟೇ. ನಾವು ಅಲ್ಲಿ ಏನೇನೂ ಮಾತನಾಡಿಲ್ಲ. ಸುಮ್ಮನೆ ಸುದ್ದಿ ಮಾಡಿದರೆ ಬೇರೆ ಅರ್ಥ ಬರುತ್ತೆ. ನಮ್ಮ ನಮ್ಮಲ್ಲೇ ಮಿಸ್ ಅಂಡರ್​ಸ್ಟಾಂಡಿಂಗ್ ಆಗುತ್ತೆ. ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಸಿದ್ದರಾಮಯ್ಯ ಭೇಟಿಗೆ ವಿಶೇಷ ಅರ್ಥ ಬೇಕಿಲ್ಲ ಎಂದರು.

ಆಂಧ್ರದಲ್ಲಿ ಮಕ್ಕಳಾಟವಾಗಿದೆ: ಆಂಧ್ರದಲ್ಲಿ ಮೇಲ್ಮನೆ ರದ್ಧು ಮಾಡುವ ನಿರ್ಧಾರ ವಿಚಾರ ಮಾತನಾಡಿ, ಮೇಲ್ಮನೆ ರದ್ಧು ಪಡಿಸೋ ಅಧಿಕಾರ ರಾಜ್ಯಕ್ಕಿದೆ. ಆದರೆ ಆಂಧ್ರದಲ್ಲಿ ಮಕ್ಕಳಾಟವಾಗಿದೆ. ಒಮ್ಮೆ ತೆಗೆದು ಹಾಕಿದ್ರು. ಮತ್ತೆ ಅದನ್ನ ತಂದ್ರು. ಈಗ ಮತ್ತೆ ಮೇಲ್ಮನೆ ತೆಗೆದು ಹಾಕ್ತಿದ್ದಾರೆ. ರಾಜ್ಯದಲ್ಲಿ ಸಂಸ್ಥೆಯನ್ನ ಮಾಡಿದರೆ ಸದಾಕಾಲ ಇರಬೇಕು. ಮೇಲ್ಮನೆ ಸೀಟು ಸಿಗದವರಿಗೆ ಅವಕಾಶ ನೀಡುವುದಕ್ಕೆ ಇರಲ್ಲ. ಮೇಲ್ಮನೆ ಇರೋದು ಬಿಲ್ ಚರ್ಚೆಗೆ ಒತ್ತು ನೀಡೋಕೆ. ಪ್ರೂಪ್ ರೀಡರ್ ಇದ್ದಂಗೆ. ತಪ್ಪುಗಳಿದ್ದರೆ ಸರಿಪಡಿಸೋಕೆ. ಕೆಲವು ಬಿಲ್ ಗಳನ್ನ ಕೆಳಮನೆಯಲ್ಲಿ ಪ್ರಸ್ತಾಪ ಮಾಡ್ತಾರೆ. ಇವತ್ತು ತರಾತುರಿಯಲ್ಲಿ ಕೆಲವು ಕಾನೂನು ಬರ್ತಿವೆ. ಕಾನೂನು ತರುವಾಗ ಸೀರಿಯಸ್ ನೆಸ್ ಬೇಕಾಗುತ್ತದೆ. ಇಂತ ವೇಳೆ ಮೇಲ್ಮನೆಯಲ್ಲಿ ಸಲಹೆ ಕೊಡೋಕೆ ಸಾಧ್ಯವಾಗುತ್ತೆ. ತರಾಯುರಿಯಲ್ಲಿ ತೆಗೆದರೆ ಒಳ್ಳೆಯ ಸಂದೇಶ ಹೋಗಲ್ಲ. ಆದರೆ, ಇದನ್ನ ತೆಗೆಯೋದು ಸರಿಯಲ್ಲ. ರದ್ಧುಪಡಿಸೋದು, ತೆಗೆಯೋದು ಮಕ್ಕಳಾಟವಾದಂತೆ ಎಂದರು.

Intro:newsBody:ಕೆಪಿಸಿಸಿ ಅಧ್ಯಕ್ಷರ ನೇಮಕ ಹೈಕಮಾಂಡ್ಗೆ ಬಿಟ್ಟದ್ದು: ಖರ್ಗೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತೆ. ಯಾರು ಏನೂ ಆತಂಕ ಪಡುವುದು ಬೇಡ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿ, ಸೋನಿಯಾಜಿ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ತಾರೆ. ಯಾರೂ ಪಕ್ಷಕ್ಕಿಂತ ಮೇಲಿಲ್ಲ. ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧರಿಸುತ್ತೆ. ಇಲ್ಲಿ ಬೇರೆ ಯಾವ ಚರ್ಚೆಯೂ ಅನ್ವಯವಾಗಲ್ಲ ಎಂದರು.
ನಿನ್ನೆಸಿದ್ದರಾಮಯ್ಯ ಜತೆ ಹೋಟೆಲ್ನಲ್ಲಿ ಉಪಹಾರ ಸೇವಿಸಿ ಚರ್ಚಿಸಿದ ವಿಚಾರ ಮಾತನಾಡಿ, ಮಾಧ್ಯಮಗಳೇ ಏನೇನೋ ಕಲ್ಪನೆ ಮಾಡಿಕೊಂಡು ಸುದ್ದಿ ಮಾಡ್ತೀರ. ವಾಸ್ತವ ನೋಡಿಕೊಂಡು ಸುದ್ದಿ ಮಾಡಬೇಕು. ಜನಾರ್ಧನ ಹೊಟೇಲ್ ಗೆ ಭೇಟಿ ನೀಡ್ತೇವೆ. ಕೇರಳ ಹೊಟೇಲ್ ಮತ್ತೊಂದು ಹೊಟೇಲ್ ಗೂ ಹೋಗ್ತೇವೆ. ನಿನ್ನೆ ಸಿದ್ದರಾಮಯ್ಯನವರೂ ಜೊತೆಯಾಗಿದ್ರು ಅಷ್ಟೇ. ನಾವು ಅಲ್ಲಿ ಏನೇನೂ ಮಾತನಾಡಿಲ್ಲ. ಸುಮ್ಮನೆ ಸುದ್ದಿ ಮಾಡಿದರೆ ಬೇರೆ ಅರ್ಥ ಹೋಗುತ್ತೆ. ನಮ್ಮ ನಮ್ಮಲ್ಲೇ ಮಿಸ್ ಅಂಡರಸ್ಟಾಂಡಿಂಗ್ ಆಗುತ್ತೆ. ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಸಿದ್ದರಾಮಯ್ಯ ಭೇಟಿಗೆ ವಿಶೇಷ ಅರ್ಥ ಬೇಕಿಲ್ಲ ಎಂದರು.
ಆಂಧ್ರದಲ್ಲಿ ಮಕ್ಕಳಾಟವಾಗಿದೆ
ಆಂಧ್ರದಲ್ಲಿ ಮೇಲ್ಮನೆ ರದ್ಧು ಮಾಡುವ ನಿರ್ಧಾರ ವಿಚಾರ ಮಾತನಾಡಿ, ಮೇಲ್ಮನೆ ರದ್ಧು ಪಡಿಸೋ ಅಧಿಕಾರ ರಾಜ್ಯಕ್ಕಿದೆ. ಆದರೆ ಆಂಧ್ರದಲ್ಲಿ ಮಕ್ಕಳಾಟವಾಗಿದೆ. ಒಮ್ಮೆ ತೆಗೆದು ಹಾಕಿದ್ರು, ಮತ್ತೆ ಅದನ್ನ ತಂದ್ರು. ಈಗ ಮತ್ತೆ ಮೇಲ್ಮನೆ ತೆಗೆದು ಹಾಕ್ತಿದ್ದಾರೆ. ರಾಜ್ಯದಲ್ಲಿ ಸಂಸ್ಥೆಯನ್ನ ಮಾಡಿದರೆ ಸದಾಕಾಲ ಇರಬೇಕು. ಮೇಲ್ಮನೆ ಸೀಟು ಸಿಗದವರಿಗೆ ಅವಕಾಶ ನೀಡುವುದಕ್ಕೆ ಇರಲ್ಲ. ಮೇಲ್ಮನೆ ಇರೋದು ಬಿಲ್ ಚರ್ಚೆಗೆ ಒತ್ತು ನೀಡೋಕೆ. ಪ್ರೂಪ್ ರೀಡರ್ ಇದ್ದಂಗೆ. ಕೆಳಮನೆಯಲ್ಲಿ ಆದದ್ದನ್ನ ಮತ್ತೊಮ್ಮೆ ಸ್ಕ್ಯೂಟಿನಿ ಮಾಡೋಕೆ. ತಪ್ಪುಗಳಿದ್ದರೆ ಸರಿಪಡಿಸೋಕೆ. ಕೆಲವು ಬಿಲ್ ಗಳನ್ನ ಕೆಳಮನೆಯಲ್ಲಿ ಪ್ರಸ್ತಾಪ ಮಾಡ್ತಾರೆ. ಅದನ್ನ ಮೇಲ್ಮನೆಯಲ್ಲಿ ಸ್ಕೂಟಿನಿ ಮಾಡೋಕೆ ಆಗುತ್ತೆ. ಇವತ್ತು ತರಾತುರಿಯಲ್ಲಿ ಕೆಲವು ಕಾನೂನು ಬರ್ತಿವೆ. ಕಾನೂನು ತರುವಾಗ ಸೀರಿಯಸ್ ನೆಸ್ ಬೇಕಾಗುತ್ತದೆ. ಇಂತ ವೇಳೆ ಮೇಲ್ಮನೆಯಲ್ಲಿ ಸಲಹೆ ಕೊಡೋಕೆ ಸಾಧ್ಯವಾಗುತ್ತೆ. ತರಾಯುರಿಯಲ್ಲಿ ತೆಗೆದರೆ ಒಳ್ಳೆಯ ಸಂದೇಶ ಹೋಗಲ್ಲ. ಆದರೆ ಇದನ್ನ ತೆಗೆಯೋದು ಸರಿಯಲ್ಲ. ರದ್ಧುಪಡಿಸೋದು, ತೆಗೆಯೋದು ಮಕ್ಕಳಾಟವಾದಂತೆ ಎಂದರು.
ರಾಜ್ಯಸಭೆಯನ್ನ ತೆಗೆಯೋಕೆ ಆಗಲ್ಲ. ಸಂವಿಧಾನದಲ್ಲಿ ಗಟ್ಟಿಯಾಗಿ ಹೇಳಲಾಗಿದೆ. ಬೇರೆಯದ್ದಾಗಿದ್ದರೆ ತೆಗೆದುಹೋಗ್ತಿದ್ರೇನೋ. ಆದರೆ ರಾಜ್ಯಕ್ಕೆ ಕೆಲವೊಂದು ವಿನಾಯ್ತಿಗಳಿವೆ. ಹೀಗಾಗಿ ತೆಗೆಯೋದು ಸ್ಥಾಪಿಸೋದು ನಡೆಯುತ್ತೆ ಎಂದರು.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.