ETV Bharat / state

ಪ.ಜಾತಿ ಒಳಮೀಸಲಾತಿಗೆ ಸದಾಶಿವ ಆಯೋಗದ ವರದಿ ಆಧಾರ ಬೇಡ: ಸಿಎಸ್‌ಗೆ ಮನವಿ

author img

By

Published : Dec 18, 2022, 7:02 AM IST

Updated : Dec 18, 2022, 8:15 AM IST

ಸಂಪುಟ ಉಪಸಮಿತಿಯು ನ್ಯಾ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸದೇ, ಪರಿಶಿಷ್ಟ ಜಾತಿಗಳ ವರ್ಗೀಕರಣಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ತೀರ್ಮಾನ ಕೈಗೊಳ್ಳಬಾರದು ಎಂದು ಪತ್ರದಲ್ಲಿ ಒತ್ತಾಯಿಸಿದೆ.

Karnataka Reservation Protection Union
ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ನ್ಯಾ.ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಸಬಾರದು ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟವು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದೆ. ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಬರೆದ ಪತ್ರದಲ್ಲಿ, ಸಚಿವ ಸಂಪುಟದ ಉಪ ಸಮಿತಿಯು ಸ್ವಯಂ ಅಧ್ಯಯನ ನಡೆಸಿ ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳಮೀಸಲಾತಿ) ಮಾಡುವುದಾದರೆ ಅದಕ್ಕೆ ನಮ್ಮ ತಕರಾರಿಲ್ಲ. ಆದರೆ, ಒಳಮೀಸಲಾತಿಗೆ ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸುವುದಾದರೆ ನಮ್ಮ ಆಕ್ಷೇಪಣೆ ಇದೆ ಎಂದು ತಿಳಿಸಿದೆ.

ಸದಾಶಿವ ಆಯೋಗದ ವರದಿ ನಾನಾ ಕಾರಣಗಳಿಗಾಗಿ ದೋಷಪೂರಿತವಾಗಿದೆ. ಸೋರಿಕೆ ಆಗಿರುವ ಈ ವರದಿಯಲ್ಲಿನ ಅಂಶಗಳನ್ನು ವಿರೋಧಿಸಿ ಪರಿಶಿಷ್ಟ ಜಾತಿಗೆ ಸೇರಿರುವ ಶೇ.70 ರಷ್ಟು ಸಮುದಾಯಗಳು ಹಿಂದಿನ 12 ವರ್ಷಗಳಿಂದ ಹೋರಾಟ, ಚಳುವಳಿಗಳನ್ನು ನಡೆಸುತ್ತಾ ಬಂದಿರುವುದು ತಮಗೆ ತಿಳಿದ ಸಂಗತಿ. ಇಲ್ಲಿಯವರೆಗೆ ವರದಿಯ ಸತ್ಯಾಸತ್ಯತೆ ಅರಿಯಲು ಸಾರ್ವಜನಿಕ ಚರ್ಚೆಗೆ ಒಳಪಡಿಸಿಲ್ಲ. ಶಾಸನ ಸಭೆಗಳಲ್ಲೂ ಚರ್ಚೆ ಆಗಿಲ್ಲ. ಹೀಗಾಗಿ ಪ.ಜಾತಿಯ ಸಹೋದರ ಸಮುದಾಯಗಳಲ್ಲಿ ವೈಮನಸ್ಸು ಉಂಟಾಗಲು ಕಾರಣವಾಗುತ್ತಿದೆ. ಪ.ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳ ಆಕ್ಷೇಪಣೆಗಳನ್ನು ಪಡೆಯದ ಏಕಮುಖವಾಗಿ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಕ್ಕೆ ನಮ್ಮ ಬಲವಾದ ವಿರೋಧವಿದೆ ಎಂದು ಹೇಳಿದೆ.

ಪ.ಜಾತಿಗಳಲ್ಲಿರುವ ಸಮುದಾಯಗಳ ಜೀವನ ವಿಧಾನ, ಉದ್ಯೋಗ, ಆರ್ಥಿಕತೆ, ಶಿಕ್ಷಣ ಮುಂತಾದ ಅಂಶಗಳ ಕುರಿತು ಸತ್ಯಾಂಶಗಳನ್ನು ಮರೆಮಾಚಿದೆ. ಪ.ಜಾತಿಯಲ್ಲಿ ಗುರುತಿಸಲ್ಪಟ್ಟಿರುವ ಅಲೆಮಾರಿ, ವಿಮುಕ್ತ ಅಲೆಮಾರಿ ಸಮುದಾಯಗಳು, ದೇವದಾಸಿ, ಸಫಾಯಿ ಕರ್ಮಚಾರಿ ಇತ್ಯಾದಿ ಅವಕಾಶ ವಂಚಿತ(ನಿರ್ಲಕ್ಷಿತ ಸಮುದಾಯಗಳನ್ನು ಪ್ರತ್ಯೇಕ ಗುಂಪು ಮಾಡಿ ಕಾರ್ಯಸಾಧುವಲ್ಲದ ರೀತಿಯ ವರ್ಗೀಕರಣ) ಭಾಗವನ್ನು ಈ ಸಮುದಾಯಗಳಿಗೆ ನಿಗದಿಪಡಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಭಾರತ ಸರ್ಕಾರದ 2011ರ ಜನಗಣತಿಯಲ್ಲಿ ರಾಜ್ಯದ ಪರಿಶಿಷ್ಟ ಜಾತಿಗಳ ಒಟ್ಟು ಜನಸಂಖ್ಯೆ 104 ಲಕ್ಷಗಳಿದ್ದು, ಈ ವರದಿಯಲ್ಲಿನ ಜನಸಂಖ್ಯೆ 96.64 ಇದೆ. ಇದರಲ್ಲೂ 6 ಲಕ್ಷ ಜನರ ಜಾತಿಯ ಬಗ್ಗೆ ಮಾಹಿತಿ ಇರುವುದಿಲ್ಲ. ಆ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನವೂ ಆಗಿಲ್ಲ‌. 14 ಲಕ್ಷ ಪರಿಶಿಷ್ಟ ಜಾತಿ ಜನರನ್ನು ಹೊರಗಿಟ್ಟು ಈ ಆಯೋಗ ತನ್ನ ವರದಿಯನ್ನು ತಯಾರಿಸಿದೆ ಎಂದು ಆಕ್ಷೇಪಿಸಿದೆ.

ಉಪಸಮಿತಿಯು ನ್ಯಾ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸದೆ, ಪರಿಶಿಷ್ಟ ಜಾತಿಗಳ ವರ್ಗಿಕರಣಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ತೀರ್ಮಾನ ಕೈಗೊಳ್ಳಬಾರದು. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಇದರ ದೃಢೀಕೃತ ಪ್ರತಿಯನ್ನು ನೀಡಬೇಕು. ಅವುಗಳಿಂದ ಅಭಿಪ್ರಾಯ / ಆಕ್ಷೇಪಣೆಗಳನ್ನು ಸ್ವೀಕರಿಸಲು ಅವಕಾಶ ನೀಡಬೇಕು. ಆ ನಂತರ, ಈ ಸಮುದಾಯಗಳ ಹಿಂದುಳಿದಿರುವಿಕೆ ಮತ್ತು ಜನಸಂಖ್ಯೆವಾರು ಮೀಸಲಾತಿಯನ್ನು ಹಂಚಿಕೆ ಮಾಡಲು ಕಾನೂನು ರೂಪಿಸಬೇಕು ಎಂದು ನಮ್ಮ ಹಕ್ಕೊತ್ತಾಯವಾಗಿರುತ್ತದೆ ಎಂದು ಪತ್ರದಲ್ಲಿ ಒತ್ತಾಯಿಸಿದೆ.

ಇದನ್ನೂ ಓದಿ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ನ್ಯಾ.ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಸಬಾರದು ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟವು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದೆ. ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಬರೆದ ಪತ್ರದಲ್ಲಿ, ಸಚಿವ ಸಂಪುಟದ ಉಪ ಸಮಿತಿಯು ಸ್ವಯಂ ಅಧ್ಯಯನ ನಡೆಸಿ ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳಮೀಸಲಾತಿ) ಮಾಡುವುದಾದರೆ ಅದಕ್ಕೆ ನಮ್ಮ ತಕರಾರಿಲ್ಲ. ಆದರೆ, ಒಳಮೀಸಲಾತಿಗೆ ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸುವುದಾದರೆ ನಮ್ಮ ಆಕ್ಷೇಪಣೆ ಇದೆ ಎಂದು ತಿಳಿಸಿದೆ.

ಸದಾಶಿವ ಆಯೋಗದ ವರದಿ ನಾನಾ ಕಾರಣಗಳಿಗಾಗಿ ದೋಷಪೂರಿತವಾಗಿದೆ. ಸೋರಿಕೆ ಆಗಿರುವ ಈ ವರದಿಯಲ್ಲಿನ ಅಂಶಗಳನ್ನು ವಿರೋಧಿಸಿ ಪರಿಶಿಷ್ಟ ಜಾತಿಗೆ ಸೇರಿರುವ ಶೇ.70 ರಷ್ಟು ಸಮುದಾಯಗಳು ಹಿಂದಿನ 12 ವರ್ಷಗಳಿಂದ ಹೋರಾಟ, ಚಳುವಳಿಗಳನ್ನು ನಡೆಸುತ್ತಾ ಬಂದಿರುವುದು ತಮಗೆ ತಿಳಿದ ಸಂಗತಿ. ಇಲ್ಲಿಯವರೆಗೆ ವರದಿಯ ಸತ್ಯಾಸತ್ಯತೆ ಅರಿಯಲು ಸಾರ್ವಜನಿಕ ಚರ್ಚೆಗೆ ಒಳಪಡಿಸಿಲ್ಲ. ಶಾಸನ ಸಭೆಗಳಲ್ಲೂ ಚರ್ಚೆ ಆಗಿಲ್ಲ. ಹೀಗಾಗಿ ಪ.ಜಾತಿಯ ಸಹೋದರ ಸಮುದಾಯಗಳಲ್ಲಿ ವೈಮನಸ್ಸು ಉಂಟಾಗಲು ಕಾರಣವಾಗುತ್ತಿದೆ. ಪ.ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳ ಆಕ್ಷೇಪಣೆಗಳನ್ನು ಪಡೆಯದ ಏಕಮುಖವಾಗಿ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಕ್ಕೆ ನಮ್ಮ ಬಲವಾದ ವಿರೋಧವಿದೆ ಎಂದು ಹೇಳಿದೆ.

ಪ.ಜಾತಿಗಳಲ್ಲಿರುವ ಸಮುದಾಯಗಳ ಜೀವನ ವಿಧಾನ, ಉದ್ಯೋಗ, ಆರ್ಥಿಕತೆ, ಶಿಕ್ಷಣ ಮುಂತಾದ ಅಂಶಗಳ ಕುರಿತು ಸತ್ಯಾಂಶಗಳನ್ನು ಮರೆಮಾಚಿದೆ. ಪ.ಜಾತಿಯಲ್ಲಿ ಗುರುತಿಸಲ್ಪಟ್ಟಿರುವ ಅಲೆಮಾರಿ, ವಿಮುಕ್ತ ಅಲೆಮಾರಿ ಸಮುದಾಯಗಳು, ದೇವದಾಸಿ, ಸಫಾಯಿ ಕರ್ಮಚಾರಿ ಇತ್ಯಾದಿ ಅವಕಾಶ ವಂಚಿತ(ನಿರ್ಲಕ್ಷಿತ ಸಮುದಾಯಗಳನ್ನು ಪ್ರತ್ಯೇಕ ಗುಂಪು ಮಾಡಿ ಕಾರ್ಯಸಾಧುವಲ್ಲದ ರೀತಿಯ ವರ್ಗೀಕರಣ) ಭಾಗವನ್ನು ಈ ಸಮುದಾಯಗಳಿಗೆ ನಿಗದಿಪಡಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಭಾರತ ಸರ್ಕಾರದ 2011ರ ಜನಗಣತಿಯಲ್ಲಿ ರಾಜ್ಯದ ಪರಿಶಿಷ್ಟ ಜಾತಿಗಳ ಒಟ್ಟು ಜನಸಂಖ್ಯೆ 104 ಲಕ್ಷಗಳಿದ್ದು, ಈ ವರದಿಯಲ್ಲಿನ ಜನಸಂಖ್ಯೆ 96.64 ಇದೆ. ಇದರಲ್ಲೂ 6 ಲಕ್ಷ ಜನರ ಜಾತಿಯ ಬಗ್ಗೆ ಮಾಹಿತಿ ಇರುವುದಿಲ್ಲ. ಆ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನವೂ ಆಗಿಲ್ಲ‌. 14 ಲಕ್ಷ ಪರಿಶಿಷ್ಟ ಜಾತಿ ಜನರನ್ನು ಹೊರಗಿಟ್ಟು ಈ ಆಯೋಗ ತನ್ನ ವರದಿಯನ್ನು ತಯಾರಿಸಿದೆ ಎಂದು ಆಕ್ಷೇಪಿಸಿದೆ.

ಉಪಸಮಿತಿಯು ನ್ಯಾ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸದೆ, ಪರಿಶಿಷ್ಟ ಜಾತಿಗಳ ವರ್ಗಿಕರಣಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ತೀರ್ಮಾನ ಕೈಗೊಳ್ಳಬಾರದು. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಇದರ ದೃಢೀಕೃತ ಪ್ರತಿಯನ್ನು ನೀಡಬೇಕು. ಅವುಗಳಿಂದ ಅಭಿಪ್ರಾಯ / ಆಕ್ಷೇಪಣೆಗಳನ್ನು ಸ್ವೀಕರಿಸಲು ಅವಕಾಶ ನೀಡಬೇಕು. ಆ ನಂತರ, ಈ ಸಮುದಾಯಗಳ ಹಿಂದುಳಿದಿರುವಿಕೆ ಮತ್ತು ಜನಸಂಖ್ಯೆವಾರು ಮೀಸಲಾತಿಯನ್ನು ಹಂಚಿಕೆ ಮಾಡಲು ಕಾನೂನು ರೂಪಿಸಬೇಕು ಎಂದು ನಮ್ಮ ಹಕ್ಕೊತ್ತಾಯವಾಗಿರುತ್ತದೆ ಎಂದು ಪತ್ರದಲ್ಲಿ ಒತ್ತಾಯಿಸಿದೆ.

ಇದನ್ನೂ ಓದಿ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ

Last Updated : Dec 18, 2022, 8:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.