ಬೆಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಶನಿವಾರದವರೆಗೆ ಒಟ್ಟು 96 ಅಭ್ಯರ್ಥಿಗಳಿಂದ ಬರೋಬ್ಬರಿ 117 ನಾಮಪತ್ರಗಳು ಸಲ್ಲಿಕೆಯಾಗಿವೆ.
ರಾಷ್ಟ್ರೀಯ ಕಾಂಗ್ರೆಸ್ ನಿಂದ 25, ಉತ್ತಮ ಪ್ರಜಾಕೀಯ ಪಕ್ಷದಿಂದ 10, ಜೆಡಿಎಸ್ ನಿಂದ 2, ಭಾರತೀಯ ಜನತಾ ಪಕ್ಷದಿಂದ 4, ಕಮ್ಯುನಿಸ್ಟ್ ಪಕ್ಷ 2, ರಿಪಬ್ಲಿಕ್ ಸೇನಾ ಪಾರ್ಟಿ 1, ಹಿಂದುಸ್ತಾನ ಜನತಾ ಪಾರ್ಟಿ 2, ಬಹುಜನ ಸಮಾಜ ಪಕ್ಷದಿಂದ 3, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ 2, ಕರ್ನಾಟಕ ರಾಷ್ಟ್ರೀಯ ಸಮಿತಿಗಳಿಂದ 8 ಸೇರಿದಂತೆ ಒಟ್ಟು 96 ಅಭ್ಯರ್ಥಿಗಳಿಂದ 117 ನಾಮಪತ್ರಗಳು ಸಲ್ಲಿಕೆ ಆಗಿವೆ.
ಕ್ಷೇತ್ರವಾರು ನಾಮಪತ್ರ ಸಲ್ಲಿಕೆ
ಅಥಣಿಯಲ್ಲಿ 8 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ. ಉಳಿದಂತೆ ಕಾಗವಾಡ 6, ಗೋಕಾಕ್ 11, ಯಲ್ಲಾಪುರ 10, ಹಿರೇಕೆರೂರಿನಿಂದ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ. ರಾಣೆಬೆನ್ನೂರಿನಿಂದ 4, ವಿಜಯನಗರದಿಂದ 9, ಚಿಕ್ಕಬಳ್ಳಾಪುರದಿಂದ 5, ಯಶವಂತಪುರದಿಂದ 8, ಕೆ ಆರ್ ಪುರ ದಿಂದ 9, ಮಹಾಲಕ್ಷ್ಮಿಲೇಔಟ್ ನಿಂದ 4 ಹಾಗೂ ಹೊಸಕೋಟೆಯಿಂದ 7 ನಾಮಪತ್ರ ಸಲ್ಲಿಕೆಯಾಗಿವೆ. ಶಿವಾಜಿನಗರದಿಂದ 16, ಕೃಷ್ಣರಾಜಪೇಟೆ (ಕೆ ಆರ್ ಪೇಟೆ) ಯಲ್ಲಿ 5 ಹಾಗೂ ಹುಣಸೂರಿನಿಂದ 12 ನಾಮಪತ್ರ ಸಲ್ಲಿಕೆ ಆಗಿವೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 25 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ- ಕ್ಷೇತ್ರವಾರು ಗಮನಿಸಿದಾಗ ಅಥಣಿಯಿಂದ 4 ಕಾಗವಾಡ ದಿಂದ 5, ಗೋಕಾಕ್ನಿಂದ 1, ಯಲ್ಲಾಪುರದಿಂದ 3,ವಿಜಯನಗರದಿಂದ 2, ಚಿಕ್ಕಬಳ್ಳಾಪುರ 3, ಕೃಷ್ಣರಾಜಪೇಟೆ ಯಿಂದ-1, ಹೊಸಕೋಟೆಯಿಂದ- 1, ಹುಣಸೂರಿನಿಂದ- 2, ರಾಣೆಬೆನ್ನೂರಿನಿಂದ- 2 ಹಾಗೂ ಶಿವಾಜಿನಗರದಿಂದ 1 ನಾಮಪತ್ರ ಸಲ್ಲಿಕೆಯಾಗಿವೆ.
ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ಯಶವಂತಪುರದಲ್ಲಿ ಬಿಜೆಪಿಯಿಂದ 1, ಗೋಕಾಕ್ನಿಂದ 1 ಹಾಗೂ ಚಿಕ್ಕಬಳ್ಳಾಪುರದಿಂದ 2 ನಾಮಪತ್ರ ಸಲ್ಲಿಕೆಯಾಗಿವೆ. ಶನಿವಾರ ರಾಜ್ಯದ 15 ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಳೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಸಾಕಷ್ಟು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈಗಾಗಲೇ ಒಮ್ಮೆ ನಾಮಪತ್ರ ಸಲ್ಲಿಸಿದವರು ಕೂಡ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.