ETV Bharat / state

ರೌಡಿಗಳ ಕೃತ್ಯಕ್ಕೆ ಕಡಿವಾಣ ಹಾಕಲು ಪಂತ್ ಖಡಕ್​​​ ಸೂಚನೆ: ಲಾಕ್​​ಡೌನ್ ಟೈಮ್​​ನಲ್ಲಾದ ಮರ್ಡರ್ ಡೀಟೈಲ್ಸ್ ಇಲ್ಲಿದೆ!

author img

By

Published : Jul 7, 2021, 12:23 PM IST

ರೌಡಿಗಳ ಆ್ಯಕ್ಟಿವಿಟಿ ಮೇಲೆ ಹದ್ದಿನ ಕಣ್ಣಿಡಲು‌ ಖಡಕ್ ಸೂಚನೆಯನ್ನು ನಿನ್ನೆ ನಡೆದ ವಾರದ ಪೊಲೀಸ್ ಸಭೆಯಲ್ಲಿ ಪೊಲೀಸ್​​ ಆಯುಕ್ತ ಕಮಲ್ ಪಂತ್​​ ರವಾನಿಸಿದ್ದಾರೆ.

Police Commissioner kamal panth
ಪೊಲೀಸ್​​ ಆಯುಕ್ತ ಕಮಲ್ ಪಂತ್

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಶುರುವಾಯ್ತಾ ರೌಡಿಗಳ ದ್ವೇಷ ಎನ್ನುವ ಮಾತು ಮುನ್ನೆಲೆಗೆ ಬಂದಿದ್ದ ಹಿನ್ನೆಲೆ, ಬುಧವಾರದ ಸಭೆಯಲ್ಲಿ ಎಲ್ಲ ಡಿಸಿಪಿಗಳಿಗೂ ಕಮಿಷನರ್ ಎಚ್ಚರಿಕೆ ನೀಡಿರುವುದು ಬೆಳಕಿಗೆ ಬಂದಿದೆ. ರೌಡಿಗಳ ಆ್ಯಕ್ಟಿವಿಟಿ ಮೇಲೆ ಕಣ್ಣಿಡಲು‌ ಖಡಕ್ ಸೂಚನೆಯನ್ನು ಮಂಗಳವಾರ ನಡೆದ ವಾರದ ಪೊಲೀಸ್ ಸಭೆಯಲ್ಲಿ ಕಮಲ್ ಪಂತ್​​ ರವಾನಿಸಿದ್ದಾರೆ.

ಇತ್ತೀಚೆಗೆ ಮುಖ್ಯವಾಗಿ ರಶೀದ್ ಮಲಬಾರಿ ಸಹಚರ ಕರೀಂ ಅಲಿ, ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್, ಕೃಷ್ಣಮೂರ್ತಿ ಹಾಗೂ ಫೈನಾನ್ಶಿಯರ್ ಮದನ್ ಕೊಲೆಗಳು ನೆಡೆದಿವೆ.

ಜೂನ್ 22 ರಂದು ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ನೆಡೆದ ಕರೀಂ ಅಲಿ ಕೊಲೆಯಿಂದ ಶುರುವಾದ ಗ್ಯಾಂಗ್ ವಾರ್ ಪ್ರಕರಣಗಳು ಮುಂದುವರೆದು ಕಾಟನ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಜೂನ್ 24ಕ್ಕೆ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ, ಜಯನಗರದಲ್ಲಿ ಜುಲೈ 2ರಂದು ಫೈನಾನ್ಶಿಯರ್ ಮದನ್ ಕೊಲೆ, ಡಿಜೆ ಹಳ್ಳಿಯಲ್ಲಿ 3 ನೇ ತಾರೀಖಿನಂದು ಕೃಷ್ಣ ಮೂರ್ತಿ ಮರ್ಡರ್, ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ಜುಲೈ 7 ರಂದು ಮೃತ ಸ್ಲಂ ಭರತನ ಗ್ಯಾಂಗ್ ಹಾಗೂ ಟಿಂಬರ್ ಕಿಟ್ಟಿ ಹುಡುಗರ ನಡುವೆ ಗ್ಯಾಂಗ್ ವಾರ್ ಪ್ರಕರಣಗಳು ದಾಖಲಾಗಿವೆ.

ಇವುಗಳಲ್ಲಿ ಫೈನಾನ್ಶಿಯರ್ ಮದನ್ ಹಾಗೂ ರೇಖಾ ಕೊಲೆ ಹಾಡಹಗಲೇ ನಡೆದಿವೆ. ಬ್ಯಾಟರಾಯನಪುರದ ಗ್ಯಾಂಗ್ ವಾರ್ ಸಹ ಮಧ್ಯಾಹ್ನ ನಡೆದಿತ್ತು. ಉಳಿದಂತೆ ರಶೀದ್ ಮಲಬಾರಿ ಗ್ಯಾಂಗ್ ಹತ್ಯೆಗೆ ಜೈಲಿನಿಂದ ಪ್ಲಾನ್ ಮಾಡಲಾಗಿತ್ತು. ಹೀಗಾಗಿ ರೌಡಿಗಳ ಮೇಲೆ ಖಡಕ್ ಕ್ರಮಕ್ಕೆ ಕಮಲ್‌ಪಂತ್ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಬುಧವಾರ ಡಿಸಿಪಿಗಳು ಸಂಬಂಧಪಟ್ಟ ಠಾಣೆಯ ಇನ್ಸ್​​ಪೆಕ್ಟರ್​ಗೆ ಸೂಚನೆ ರವಾನಿಸಿರುವ ಮಾಹಿತಿ ಲಭ್ಯವಾಗಿದೆ.

ಶಾಕ್ ನೀಡುತ್ತೆ ಲಾಕ್​ಡೌನ್ ಸಮಯದ ಪ್ರಮುಖ ಅಪರಾಧ ಪ್ರಕರಣಗಳ ಡೀಟೈಲ್ಸ್:

ಕೊಲೆ ಪ್ರಕರಣ- 1

  • ದಿನಾಂಕ: ಜೂನ್ 16 ರ ಸಂಜೆ 7 ಗಂಟೆ ಸಮಯದಲ್ಲಿ.
  • ಘಟನೆ: ಕಾರ್ತಿಕ್ ಎನ್ನುವ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ.
  • ಕಾರಣ: ಫ್ಲಾಟ್ ವಿಚಾರಕ್ಕಾಗಿ ನಡೆದಿತ್ತು.
  • ಕೊಲೆ ನಡೆದ ರೀತಿ: ರಸ್ತೆಯಲ್ಲಿ ಅಡ್ಡ ಹಾಕಿ ಹಲ್ಲೆ ಮಾಡಿ ಕಲ್ಲು ಎತ್ತಿ ಹಾಕಿ ಕೊಲೆ.
  • ಕೊಲೆ ನಡೆದ ಸ್ಥಳ: ಜಿಕೆಡಬ್ಲೂ ಲೇಔಟ್ ಬಳಿ ಘಟನೆ ನಡೆದಿತ್ತು.
  • ಕೊಲೆ ಆರೋಪಿಗಳು: ರಿಯಲ್ ಎಸ್ಟೇಟ್ ಏಜೆನ್ಸಿ ಮೋಹನ್ ಮತ್ತು ನಾಗರಾಜ್ ಎಂಬುವರಿಂದ ಹತ್ಯೆ.
  • ಪ್ರಕರಣ ದಾಖಲಾದ ಠಾಣೆ: ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
  • ಕೇಸ್ ಸ್ಟೇಟಸ್ - ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿರುವ ಪೊಲೀಸರು.

ಕೊಲೆ ಪ್ರಕರಣ- 2

  • ದಿನಾಂಕ: ಜೂನ್ 22.
  • ಮೃತ ವ್ಯಕ್ತಿ: ಸೈಯದ್ ಕರೀಮ್ ಅಲಿ, ರೌಡಿ ಶೀಟರ್.
  • ಕಾರಣ: ರಶೀದ್ ಮಲಬಾರ್ ಬಲಗೈ ಬಂಟ ಅನೀಸ್ ಪತ್ನಿ ಜೊತೆ ಅಕ್ರಮ ಸಂಬಂಧದ ಹಿನ್ನೆಲೆ.
  • ಕೊಲೆ ನಡೆದ ರೀತಿ: ಚಾಕುವಿನಿಂದ ಹಿರಿದು ಹತ್ಯೆ.
  • ಕೊಲೆ ನಡೆದ ಸ್ಥಳ: ಗೋವಿಂದಪುರ ಠಾಣಾ ವ್ಯಾಪ್ತಿಯ ಆಂಜನೇಯ ದೇವಸ್ಥಾನದ ಬಳಿ.
  • ಕೊಲೆ ಆರೋಪಿಗಳು: (ಅನೀಸ್ ಸಹಚರರು) ಆರೋಪಿ ಮೊಹ್ಮದ್ ಸಲೀಂ ಬಂಧನ.
  • ಪ್ರಕರಣ ದಾಖಲಾದ ಠಾಣೆ: ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
  • ಕೇಸ್ ಸ್ಟೇಟಸ್: ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರೆಸಲಾಗಿದೆ.

ಕೊಲೆ ಪ್ರಕರಣ- 3

  • ದಿನಾಂಕ: ಜೂನ್22.
  • ಮೃತ ವ್ಯಕ್ತಿ: ತಮಿಳುನಾಡಿನ 32 ವರ್ಷದ ಆಶಾ.
  • ಕಾರಣ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆ.
  • ಕೊಲೆ ನಡೆದ ರೀತಿ: ಕುಡಿದು ಬಂದು ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಲಾಗಿತ್ತು.
  • ಕೊಲೆ ಆರೋಪಿ: ಮಣಿ. ಮೃತ ಮಹಿಳೆಯ ಪತಿ.
  • ಪ್ರಕರಣ ದಾಖಲಾದ ಠಾಣೆ: ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
  • ಕೇಸ್ ಸ್ಟೇಟಸ್: ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಲಾಗಿದೆ.

ಕೊಲೆ ಪ್ರಕರಣ- 4

  • ದಿನಾಂಕ: ಜೂನ್ 23.
  • ಮೃತ ವ್ಯಕ್ತಿ: ಕಾಮತ್.
  • ಕಾರಣ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆ.
  • ಕೊಲೆ ನಡೆದ ರೀತಿ: ಚಾಕುವಿನಿಂದ ಇರಿದು, ರಾಡಿನಿಂದ ಹಲ್ಲೆ ಮಾಡಿ ಹತ್ಯೆ.
  • ಕೊಲೆ ನಡೆದ ಸ್ಥಳ: ಐಟಿಸಿ ಕಾಲೋನಿ ಬಳಿ ಹತ್ಯೆ.
  • ಕೊಲೆ ಆರೋಪಿ: ಆರೋಪಿಗಳ ಪತ್ತೆಗಾಗಿ ಪೊಲೀಸರ ಹುಡುಕಾಟ.
  • ಪ್ರಕರಣ ದಾಖಲಾದ ಠಾಣೆ: ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲು.

ಕೊಲೆ ಪ್ರಕರಣ- 5

  • ದಿನಾಂಕ: ಜೂನ್ 24.
  • ಮೃತ ವ್ಯಕ್ತಿ: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್.
  • ಕಾರಣ: ರಾಜಕೀಯ ಒಳ ಸಂಚು ಮತ್ತು ಹಳೆಯ ದ್ವೇಷ.
  • ಕೊಲೆ ನಡೆದ ರೀತಿ: ಮಾರಕಾಸ್ತ್ರಗಳಿಂದ 10-12 ಬಾರಿ ಹಿರಿದು ಹತ್ಯೆ.
  • ಕೊಲೆ ನಡೆದ ಸ್ಥಳ: ಚಲವಾದಿ ಪಾಳ್ಯದ ಫ್ಲವರ್ ಗಾರ್ಡನ್.
  • ಕೊಲೆ ಆರೋಪಿಗಳು: ಪೀಟರ್, ಮಾಲಾ, ಅರುಳ್, ಸ್ಟೀಫನ್, ಸೂರ್ಯ ಮತ್ತು ಸಹಚರರು.
  • ಪ್ರಕರಣ ದಾಖಲಾದ ಠಾಣೆ: ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
  • ಕೇಸ್ ಸ್ಟೇಟಸ್: ಆರೋಪಿಗಳನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಾಗಿದೆ ಮತ್ತುಹೆಚ್ಚಿನ ತನಿಖೆ ಮುಂದುವರೆದಿದೆ.

ಕೊಲೆ ಪ್ರಕರಣ- 6

  • ದಿನಾಂಕ: ಜೂನ್ 30.
  • ಮೃತ ವ್ಯಕ್ತಿ: ರೌಡಿ ಶೀಟರ್ ಉದಯ್ (39).
  • ಕಾರಣ: ಕುಡಿದು ಊರ ಹುಡುಗರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಉದಯ್.
  • ಕೊಲೆ ನಡೆದ ರೀತಿ: ಬೈಕ್​ನಲ್ಲಿ ಬಂದು ಮಾರಕಾಸ್ತ್ರಗಳಿಂದ ಇರಿದು ಹತ್ಯೆ.
  • ಪ್ರಕರಣ ದಾಖಲಾದ ಠಾಣೆ: ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಕೊಲೆ ಪ್ರಕರಣ- 7

  • ದಿನಾಂಕ: ಜುಲೈ 2
  • ಮೃತ ವ್ಯಕ್ತಿ: ಮದನ್ (36).
  • ಕಾರಣ: ಹಳೆ ದ್ವೇಷ ಹಿನ್ನೆಲೆ.
  • ಕೊಲೆ ನಡೆದ ರೀತಿ: ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿ ಹತ್ಯೆ.
  • ಕೊಲೆ ನಡೆದ ಸ್ಥಳ: ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ.
  • ಕೊಲೆ ಆರೋಪಿಗಳು: ಶಾಂತಿನಗರದಲ್ಲಿ ಕೊಲೆಯಾಗಿದ್ದ ರೌಡಿ ಶೀಟರ್ ಶಾಂತಿನಗರ ಲಿಂಗನ ಸಹಚರರು ಎಂದು ಶಂಕೆ.
  • ಪ್ರಕರಣ ದಾಖಲಾದ ಠಾಣೆ: ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಕೊಲೆ ಪ್ರಕರಣ: 8

  • ದಿನಾಂಕ: ಜುಲೈ 3.
  • ಮೃತ ವ್ಯಕ್ತಿ: ಕೃಷ್ಣಮೂರ್ತಿ (30).
  • ಕಾರಣ: ಎರಡನೇ ಪತ್ನಿಯಿಂದ ಸುಪಾರಿ ಶಂಕೆ.
  • ಕೊಲೆ ನಡೆದ ರೀತಿ: 2-3 ಜನ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ.
  • ಕೊಲೆ ನಡೆದ ಸ್ಥಳ: ಕಾವಲ್ ಭೈರಸಂದ್ರದ ಅಂಬೇಡ್ಕರ್ ಕಾಲೇಜು ಮುಂಭಾಗದಲ್ಲಿ ಘಟನೆ.
  • ಪ್ರಕರಣ ದಾಖಲಾದ ಠಾಣೆ- ಡಿಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು.

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಶುರುವಾಯ್ತಾ ರೌಡಿಗಳ ದ್ವೇಷ ಎನ್ನುವ ಮಾತು ಮುನ್ನೆಲೆಗೆ ಬಂದಿದ್ದ ಹಿನ್ನೆಲೆ, ಬುಧವಾರದ ಸಭೆಯಲ್ಲಿ ಎಲ್ಲ ಡಿಸಿಪಿಗಳಿಗೂ ಕಮಿಷನರ್ ಎಚ್ಚರಿಕೆ ನೀಡಿರುವುದು ಬೆಳಕಿಗೆ ಬಂದಿದೆ. ರೌಡಿಗಳ ಆ್ಯಕ್ಟಿವಿಟಿ ಮೇಲೆ ಕಣ್ಣಿಡಲು‌ ಖಡಕ್ ಸೂಚನೆಯನ್ನು ಮಂಗಳವಾರ ನಡೆದ ವಾರದ ಪೊಲೀಸ್ ಸಭೆಯಲ್ಲಿ ಕಮಲ್ ಪಂತ್​​ ರವಾನಿಸಿದ್ದಾರೆ.

ಇತ್ತೀಚೆಗೆ ಮುಖ್ಯವಾಗಿ ರಶೀದ್ ಮಲಬಾರಿ ಸಹಚರ ಕರೀಂ ಅಲಿ, ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್, ಕೃಷ್ಣಮೂರ್ತಿ ಹಾಗೂ ಫೈನಾನ್ಶಿಯರ್ ಮದನ್ ಕೊಲೆಗಳು ನೆಡೆದಿವೆ.

ಜೂನ್ 22 ರಂದು ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ನೆಡೆದ ಕರೀಂ ಅಲಿ ಕೊಲೆಯಿಂದ ಶುರುವಾದ ಗ್ಯಾಂಗ್ ವಾರ್ ಪ್ರಕರಣಗಳು ಮುಂದುವರೆದು ಕಾಟನ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಜೂನ್ 24ಕ್ಕೆ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ, ಜಯನಗರದಲ್ಲಿ ಜುಲೈ 2ರಂದು ಫೈನಾನ್ಶಿಯರ್ ಮದನ್ ಕೊಲೆ, ಡಿಜೆ ಹಳ್ಳಿಯಲ್ಲಿ 3 ನೇ ತಾರೀಖಿನಂದು ಕೃಷ್ಣ ಮೂರ್ತಿ ಮರ್ಡರ್, ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ಜುಲೈ 7 ರಂದು ಮೃತ ಸ್ಲಂ ಭರತನ ಗ್ಯಾಂಗ್ ಹಾಗೂ ಟಿಂಬರ್ ಕಿಟ್ಟಿ ಹುಡುಗರ ನಡುವೆ ಗ್ಯಾಂಗ್ ವಾರ್ ಪ್ರಕರಣಗಳು ದಾಖಲಾಗಿವೆ.

ಇವುಗಳಲ್ಲಿ ಫೈನಾನ್ಶಿಯರ್ ಮದನ್ ಹಾಗೂ ರೇಖಾ ಕೊಲೆ ಹಾಡಹಗಲೇ ನಡೆದಿವೆ. ಬ್ಯಾಟರಾಯನಪುರದ ಗ್ಯಾಂಗ್ ವಾರ್ ಸಹ ಮಧ್ಯಾಹ್ನ ನಡೆದಿತ್ತು. ಉಳಿದಂತೆ ರಶೀದ್ ಮಲಬಾರಿ ಗ್ಯಾಂಗ್ ಹತ್ಯೆಗೆ ಜೈಲಿನಿಂದ ಪ್ಲಾನ್ ಮಾಡಲಾಗಿತ್ತು. ಹೀಗಾಗಿ ರೌಡಿಗಳ ಮೇಲೆ ಖಡಕ್ ಕ್ರಮಕ್ಕೆ ಕಮಲ್‌ಪಂತ್ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಬುಧವಾರ ಡಿಸಿಪಿಗಳು ಸಂಬಂಧಪಟ್ಟ ಠಾಣೆಯ ಇನ್ಸ್​​ಪೆಕ್ಟರ್​ಗೆ ಸೂಚನೆ ರವಾನಿಸಿರುವ ಮಾಹಿತಿ ಲಭ್ಯವಾಗಿದೆ.

ಶಾಕ್ ನೀಡುತ್ತೆ ಲಾಕ್​ಡೌನ್ ಸಮಯದ ಪ್ರಮುಖ ಅಪರಾಧ ಪ್ರಕರಣಗಳ ಡೀಟೈಲ್ಸ್:

ಕೊಲೆ ಪ್ರಕರಣ- 1

  • ದಿನಾಂಕ: ಜೂನ್ 16 ರ ಸಂಜೆ 7 ಗಂಟೆ ಸಮಯದಲ್ಲಿ.
  • ಘಟನೆ: ಕಾರ್ತಿಕ್ ಎನ್ನುವ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ.
  • ಕಾರಣ: ಫ್ಲಾಟ್ ವಿಚಾರಕ್ಕಾಗಿ ನಡೆದಿತ್ತು.
  • ಕೊಲೆ ನಡೆದ ರೀತಿ: ರಸ್ತೆಯಲ್ಲಿ ಅಡ್ಡ ಹಾಕಿ ಹಲ್ಲೆ ಮಾಡಿ ಕಲ್ಲು ಎತ್ತಿ ಹಾಕಿ ಕೊಲೆ.
  • ಕೊಲೆ ನಡೆದ ಸ್ಥಳ: ಜಿಕೆಡಬ್ಲೂ ಲೇಔಟ್ ಬಳಿ ಘಟನೆ ನಡೆದಿತ್ತು.
  • ಕೊಲೆ ಆರೋಪಿಗಳು: ರಿಯಲ್ ಎಸ್ಟೇಟ್ ಏಜೆನ್ಸಿ ಮೋಹನ್ ಮತ್ತು ನಾಗರಾಜ್ ಎಂಬುವರಿಂದ ಹತ್ಯೆ.
  • ಪ್ರಕರಣ ದಾಖಲಾದ ಠಾಣೆ: ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
  • ಕೇಸ್ ಸ್ಟೇಟಸ್ - ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿರುವ ಪೊಲೀಸರು.

ಕೊಲೆ ಪ್ರಕರಣ- 2

  • ದಿನಾಂಕ: ಜೂನ್ 22.
  • ಮೃತ ವ್ಯಕ್ತಿ: ಸೈಯದ್ ಕರೀಮ್ ಅಲಿ, ರೌಡಿ ಶೀಟರ್.
  • ಕಾರಣ: ರಶೀದ್ ಮಲಬಾರ್ ಬಲಗೈ ಬಂಟ ಅನೀಸ್ ಪತ್ನಿ ಜೊತೆ ಅಕ್ರಮ ಸಂಬಂಧದ ಹಿನ್ನೆಲೆ.
  • ಕೊಲೆ ನಡೆದ ರೀತಿ: ಚಾಕುವಿನಿಂದ ಹಿರಿದು ಹತ್ಯೆ.
  • ಕೊಲೆ ನಡೆದ ಸ್ಥಳ: ಗೋವಿಂದಪುರ ಠಾಣಾ ವ್ಯಾಪ್ತಿಯ ಆಂಜನೇಯ ದೇವಸ್ಥಾನದ ಬಳಿ.
  • ಕೊಲೆ ಆರೋಪಿಗಳು: (ಅನೀಸ್ ಸಹಚರರು) ಆರೋಪಿ ಮೊಹ್ಮದ್ ಸಲೀಂ ಬಂಧನ.
  • ಪ್ರಕರಣ ದಾಖಲಾದ ಠಾಣೆ: ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
  • ಕೇಸ್ ಸ್ಟೇಟಸ್: ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರೆಸಲಾಗಿದೆ.

ಕೊಲೆ ಪ್ರಕರಣ- 3

  • ದಿನಾಂಕ: ಜೂನ್22.
  • ಮೃತ ವ್ಯಕ್ತಿ: ತಮಿಳುನಾಡಿನ 32 ವರ್ಷದ ಆಶಾ.
  • ಕಾರಣ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆ.
  • ಕೊಲೆ ನಡೆದ ರೀತಿ: ಕುಡಿದು ಬಂದು ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಲಾಗಿತ್ತು.
  • ಕೊಲೆ ಆರೋಪಿ: ಮಣಿ. ಮೃತ ಮಹಿಳೆಯ ಪತಿ.
  • ಪ್ರಕರಣ ದಾಖಲಾದ ಠಾಣೆ: ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
  • ಕೇಸ್ ಸ್ಟೇಟಸ್: ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಲಾಗಿದೆ.

ಕೊಲೆ ಪ್ರಕರಣ- 4

  • ದಿನಾಂಕ: ಜೂನ್ 23.
  • ಮೃತ ವ್ಯಕ್ತಿ: ಕಾಮತ್.
  • ಕಾರಣ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆ.
  • ಕೊಲೆ ನಡೆದ ರೀತಿ: ಚಾಕುವಿನಿಂದ ಇರಿದು, ರಾಡಿನಿಂದ ಹಲ್ಲೆ ಮಾಡಿ ಹತ್ಯೆ.
  • ಕೊಲೆ ನಡೆದ ಸ್ಥಳ: ಐಟಿಸಿ ಕಾಲೋನಿ ಬಳಿ ಹತ್ಯೆ.
  • ಕೊಲೆ ಆರೋಪಿ: ಆರೋಪಿಗಳ ಪತ್ತೆಗಾಗಿ ಪೊಲೀಸರ ಹುಡುಕಾಟ.
  • ಪ್ರಕರಣ ದಾಖಲಾದ ಠಾಣೆ: ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲು.

ಕೊಲೆ ಪ್ರಕರಣ- 5

  • ದಿನಾಂಕ: ಜೂನ್ 24.
  • ಮೃತ ವ್ಯಕ್ತಿ: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್.
  • ಕಾರಣ: ರಾಜಕೀಯ ಒಳ ಸಂಚು ಮತ್ತು ಹಳೆಯ ದ್ವೇಷ.
  • ಕೊಲೆ ನಡೆದ ರೀತಿ: ಮಾರಕಾಸ್ತ್ರಗಳಿಂದ 10-12 ಬಾರಿ ಹಿರಿದು ಹತ್ಯೆ.
  • ಕೊಲೆ ನಡೆದ ಸ್ಥಳ: ಚಲವಾದಿ ಪಾಳ್ಯದ ಫ್ಲವರ್ ಗಾರ್ಡನ್.
  • ಕೊಲೆ ಆರೋಪಿಗಳು: ಪೀಟರ್, ಮಾಲಾ, ಅರುಳ್, ಸ್ಟೀಫನ್, ಸೂರ್ಯ ಮತ್ತು ಸಹಚರರು.
  • ಪ್ರಕರಣ ದಾಖಲಾದ ಠಾಣೆ: ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
  • ಕೇಸ್ ಸ್ಟೇಟಸ್: ಆರೋಪಿಗಳನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಾಗಿದೆ ಮತ್ತುಹೆಚ್ಚಿನ ತನಿಖೆ ಮುಂದುವರೆದಿದೆ.

ಕೊಲೆ ಪ್ರಕರಣ- 6

  • ದಿನಾಂಕ: ಜೂನ್ 30.
  • ಮೃತ ವ್ಯಕ್ತಿ: ರೌಡಿ ಶೀಟರ್ ಉದಯ್ (39).
  • ಕಾರಣ: ಕುಡಿದು ಊರ ಹುಡುಗರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಉದಯ್.
  • ಕೊಲೆ ನಡೆದ ರೀತಿ: ಬೈಕ್​ನಲ್ಲಿ ಬಂದು ಮಾರಕಾಸ್ತ್ರಗಳಿಂದ ಇರಿದು ಹತ್ಯೆ.
  • ಪ್ರಕರಣ ದಾಖಲಾದ ಠಾಣೆ: ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಕೊಲೆ ಪ್ರಕರಣ- 7

  • ದಿನಾಂಕ: ಜುಲೈ 2
  • ಮೃತ ವ್ಯಕ್ತಿ: ಮದನ್ (36).
  • ಕಾರಣ: ಹಳೆ ದ್ವೇಷ ಹಿನ್ನೆಲೆ.
  • ಕೊಲೆ ನಡೆದ ರೀತಿ: ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿ ಹತ್ಯೆ.
  • ಕೊಲೆ ನಡೆದ ಸ್ಥಳ: ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ.
  • ಕೊಲೆ ಆರೋಪಿಗಳು: ಶಾಂತಿನಗರದಲ್ಲಿ ಕೊಲೆಯಾಗಿದ್ದ ರೌಡಿ ಶೀಟರ್ ಶಾಂತಿನಗರ ಲಿಂಗನ ಸಹಚರರು ಎಂದು ಶಂಕೆ.
  • ಪ್ರಕರಣ ದಾಖಲಾದ ಠಾಣೆ: ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಕೊಲೆ ಪ್ರಕರಣ: 8

  • ದಿನಾಂಕ: ಜುಲೈ 3.
  • ಮೃತ ವ್ಯಕ್ತಿ: ಕೃಷ್ಣಮೂರ್ತಿ (30).
  • ಕಾರಣ: ಎರಡನೇ ಪತ್ನಿಯಿಂದ ಸುಪಾರಿ ಶಂಕೆ.
  • ಕೊಲೆ ನಡೆದ ರೀತಿ: 2-3 ಜನ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ.
  • ಕೊಲೆ ನಡೆದ ಸ್ಥಳ: ಕಾವಲ್ ಭೈರಸಂದ್ರದ ಅಂಬೇಡ್ಕರ್ ಕಾಲೇಜು ಮುಂಭಾಗದಲ್ಲಿ ಘಟನೆ.
  • ಪ್ರಕರಣ ದಾಖಲಾದ ಠಾಣೆ- ಡಿಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.