ETV Bharat / state

ಜಿಂದಾಲ್ ಸಂಪುಟ ಉಪಸಮಿತಿ ರಚನೆ ವಿಳಂಬ ಆಗಬಾರದು: ಎಚ್.ಕೆ.ಪಾಟೀಲ್ - Hk patil in jindal

ಜಿಂದಾಲ್​ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಅನೇಕ ಪರ-ವಿರೋಧ ಅಲೆ ಎದ್ದಿದೆ. ಆ ಗೊಂದಲವನ್ನು ಪರಿಹರಿಸಬೇಕೆಂಬುದು ಸದ್ಯ ಹಲವರ ಒತ್ತಾಯವಾಗಿದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಶೀಘ್ರವೇ ಸಂಪುಟ ಉಪ ಸಮಿತಿಗೆ ಹೆಸರುಗಳನ್ನ ಸೂಚಿಸಿ ಸರ್ಕಾರ ಸಮಿತಿ ರಚಿಸಬೇಕೆಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್​ ನಾಯಕ ಹೆಚ್​ ಕೆ ಪಾಟೀಲ್​ ಒತ್ತಾಯಿಸಿದ್ಧಾರೆ.

ಎಚ್.ಕೆ.ಪಾಟೀಲ್
author img

By

Published : Jun 25, 2019, 6:03 PM IST

ಬೆಂಗಳೂರು: ಜಿಂದಾಲ್ ಸಂಪುಟ ಉಪ ಸಮಿತಿ ರಚನೆ‌ ವಿಳಂಬವಾಗುತ್ತಿದ್ದು, ಆದಷ್ಟು ಬೇಗ ಸಂಪುಟ ಉಪಸಮಿತಿ ರಚನೆಯಾಗಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಂಪುಟ ಉಪ ಸಮಿತಿ ರಚನೆ ಬಗ್ಗೆ ತೀರ್ಮಾನ ಕೈಗೊಂಡು ಎರಡು ವಾರ ಕಳೆಯುತ್ತಾ ಬಂತು, ಇದು ಇನ್ನೂ ವಿಳಂಬ ಆಗಬಾರದು. ಅದು ತಡವಾಗಬಾರದು ಎಂದರೆ ಸರ್ಕಾರ ಕೆಲ ಹೆಜ್ಜೆಗಳನ್ನು ಇಡಬೇಕು ಎಂದು ಒತ್ತಾಯಿಸಿದರು.

ಉಪಸಮಿತಿಯವರು ಜಿಂದಾಲ್​ಗೆ ನೀಡಿದ ಭೂಮಿಯ ಅಡಿಟ್ ಮಾಡಬೇಕು. ಜಿಂದಾಲ್​ಗೆ ಎಷ್ಟು ಭೂಮಿ ನೀಡಲಾಗಿದೆ. ಆ ಭೂಮಿಯ ಲ್ಯಾಂಡ್ ಆಡಿಟ್ ಮಾಡಿಸಬೇಕು. ಅವರು ಕೇಳಿದ್ದೆಷ್ಟು, ಸರ್ಕಾರ ಕೊಟ್ಟಿದ್ದೆಷ್ಟು? ಅವರಿಗೆ ಭೂಮಿ ಅವಶ್ಯಕತೆಯಿದೆಯೇ? ಇದರ ಬಗ್ಗೆ ತಪಾಸಣೆ ಆಗಬೇಕು. ಇದರ ಬಗ್ಗೆ ಸಬ್ ಕಮಿಟಿ ಮೊದಲು ಗಮನಹರಿಸಬೇಕು ಎಂದು ಆಗ್ರಹಿಸಿದರು.

ಇನ್ನು ಲೋಕಸಭೆ ಚುನಾವಣೆ ಸೋಲಿಗೆ ಮೈತ್ರಿ ಕಾರಣ ಎಂಬ ವೀರಪ್ಪ ಮೊಯ್ಲಿ ಮತ್ತು ಕೆ.ಎಚ್.ಮುನಿಯಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೋಲಿಗೆ ಮೈತ್ರಿಯೇ ಕಾರಣ ಅಲ್ಲ. ಸೋಲಿನ ಕಾರಣಗಳಲ್ಲಿ ಮೈತ್ರಿಯೂ ಒಂದಾಗಿರಬಹುದು. ಅವರಿಬ್ಬರ ಕ್ಷೇತ್ರಗಳ ಪರಿಸ್ಥಿತಿ ನನಗೆ ಗೊತ್ತಿಲ್ಲ. ಆದರೆ, ಉತ್ತರ ಕರ್ನಾಟಕದಲ್ಲಾದ ಸೋಲಿಗೂ ಮೈತ್ರಿಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು: ಜಿಂದಾಲ್ ಸಂಪುಟ ಉಪ ಸಮಿತಿ ರಚನೆ‌ ವಿಳಂಬವಾಗುತ್ತಿದ್ದು, ಆದಷ್ಟು ಬೇಗ ಸಂಪುಟ ಉಪಸಮಿತಿ ರಚನೆಯಾಗಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಂಪುಟ ಉಪ ಸಮಿತಿ ರಚನೆ ಬಗ್ಗೆ ತೀರ್ಮಾನ ಕೈಗೊಂಡು ಎರಡು ವಾರ ಕಳೆಯುತ್ತಾ ಬಂತು, ಇದು ಇನ್ನೂ ವಿಳಂಬ ಆಗಬಾರದು. ಅದು ತಡವಾಗಬಾರದು ಎಂದರೆ ಸರ್ಕಾರ ಕೆಲ ಹೆಜ್ಜೆಗಳನ್ನು ಇಡಬೇಕು ಎಂದು ಒತ್ತಾಯಿಸಿದರು.

ಉಪಸಮಿತಿಯವರು ಜಿಂದಾಲ್​ಗೆ ನೀಡಿದ ಭೂಮಿಯ ಅಡಿಟ್ ಮಾಡಬೇಕು. ಜಿಂದಾಲ್​ಗೆ ಎಷ್ಟು ಭೂಮಿ ನೀಡಲಾಗಿದೆ. ಆ ಭೂಮಿಯ ಲ್ಯಾಂಡ್ ಆಡಿಟ್ ಮಾಡಿಸಬೇಕು. ಅವರು ಕೇಳಿದ್ದೆಷ್ಟು, ಸರ್ಕಾರ ಕೊಟ್ಟಿದ್ದೆಷ್ಟು? ಅವರಿಗೆ ಭೂಮಿ ಅವಶ್ಯಕತೆಯಿದೆಯೇ? ಇದರ ಬಗ್ಗೆ ತಪಾಸಣೆ ಆಗಬೇಕು. ಇದರ ಬಗ್ಗೆ ಸಬ್ ಕಮಿಟಿ ಮೊದಲು ಗಮನಹರಿಸಬೇಕು ಎಂದು ಆಗ್ರಹಿಸಿದರು.

ಇನ್ನು ಲೋಕಸಭೆ ಚುನಾವಣೆ ಸೋಲಿಗೆ ಮೈತ್ರಿ ಕಾರಣ ಎಂಬ ವೀರಪ್ಪ ಮೊಯ್ಲಿ ಮತ್ತು ಕೆ.ಎಚ್.ಮುನಿಯಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೋಲಿಗೆ ಮೈತ್ರಿಯೇ ಕಾರಣ ಅಲ್ಲ. ಸೋಲಿನ ಕಾರಣಗಳಲ್ಲಿ ಮೈತ್ರಿಯೂ ಒಂದಾಗಿರಬಹುದು. ಅವರಿಬ್ಬರ ಕ್ಷೇತ್ರಗಳ ಪರಿಸ್ಥಿತಿ ನನಗೆ ಗೊತ್ತಿಲ್ಲ. ಆದರೆ, ಉತ್ತರ ಕರ್ನಾಟಕದಲ್ಲಾದ ಸೋಲಿಗೂ ಮೈತ್ರಿಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

Intro:Hk patil jindalBody:KN_BNG_03_25_JINDALSUBCOMMITTEE_HKPATIL_SCRIPT_VENKAT_7201951

ಜಿಂದಾಲ್ ಸಂಪುಟ ಉಪಸಮಿತಿ ರಚನೆ ವಿಳಂಬ ಆಗಬಾರದು: ಎಚ್.ಕೆ.ಪಾಟೀಲ್

ಬೆಂಗಳೂರು: ಆದಷ್ಟು ಬೇಗ ಜಿಂದಾಲ್ ಸಂಪುಟ ಉಪಸಮಿತಿ ರಚನೆ‌ ವಿಳಂಬವಾಗುತ್ತಿದ್ದು, ಆದಷ್ಟು ಬೇಗ ಸಂಪುಟ ಉಪಸಮಿತಿ ರಚನೆಯಾಗಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಂಪುಟ ಉಪ ಸಮಿತಿ ರಚನೆ ಬಗ್ಗೆ ತೀರ್ಮಾನ ಕೈಗೊಂಡು ಎರಡು ವಾರ ಕಳೆಯುತ್ತಾ ಬಂತು. ವಿಳಂಬ ಆಗಬಾರದು. ಇದು ಆಗಬಾರದು ಅಂದರೆ ಸರ್ಕಾರ ಕೆಲ ಹೆಜ್ಜೆಗಳನ್ನು ಇಡಬೇಕು. ಉಪಸಮಿತಿಯವರು ನಿರ್ಣಯ ಮಾಡಿ ತಿಳಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಉಪಸಮಿತಿಯವರು ಜಿಂದಾಲ್ ಗೆ ನೀಡಿದ ಭೂಮಿಯ ಅಡಿಟ್ ಮಾಡಬೇಕು ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದರು. ಜಿಂದಾಲ್ ಗೆ ಎಷ್ಟು ಭೂಮಿ ನೀಡಲಾಗಿದೆ. ಆ ಭೂಮಿಯ ಲ್ಯಾಂಡ್ ಆಡಿಟ್ ಮಾಡಿಸಬೇಕು. ಅವರು ಕೇಳಿದ್ದೆಷ್ಟು, ಸರ್ಕಾರ ಕೊಟ್ಟಿದ್ದೆಷ್ಟು?. ಅವರಿಗೆ ಭೂಮಿ ಅವಶ್ಯಕತೆಯಿದೆಯೇ?. ಇದರ ಬಗ್ಗೆ ತಪಾಸಣೆ ಆಗಬೇಕು. ಇದರ ಬಗ್ಗೆ ಸಬ್ ಕಮಿಟಿ ಮೊದಲು ಗಮನಹರಿಸಬೇಕು ಎಂದು ಆಗ್ರಹಿಸಿದರು.

ಮಧ್ಯಂತರ ಚುನಾವಣೆ ಬರುವ ಸನ್ಮಿವೇಶ ಈಗ ಇಲ್ಲ ಎಂದು ಇದೇ ವೇಳೆ ಅಭಿಪ್ರಾಯ ಪಟ್ಟರು.

ಮಧ್ಯಂತರ ಚುನಾವಣೆ ವಿಚಾರ ಸರ್ಕಾರ ಕೆಡವಬೇಕು ಅನ್ನೋ ರಿಗೆ ಬ್ಲಾಕ್ ಮೇಲ್ ತಂತ್ರ ಆಗಿದೆ. ಮಧ್ಯಂತರ ಚುನಾವಣೆ ಬರಲಿದೆ ಅಂತ ಯಾರೇ ಹೇಳಿದ್ರೂ ಅಂತಹ ಲಕ್ಷಣ ಇಲ್ಲ. ಮಧ್ಯಂತರ ಚುನಾವಣೆಗೆ ಕಾರಣಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭೆ ಚುನಾವಣೆ ಸೋಲಿಗೆ ಮೈತ್ರಿ ಕಾರಣ ಎಂಬ ವೀರಪ್ಪ ಮೊಯ್ಲಿ ಮತ್ತು ಕೆ.ಎಚ್.ಮುನಿಯಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೋಲಿಗೆ ಮೈತ್ರಿಯೇ ಕಾರಣ ಅಲ್ಲ. ಸೋಲಿನ ಕಾರಣಗಳಲ್ಲಿ ಮೈತ್ರಿಯೂ ಒಂದಾಗಿರಬಹುದು. ಅವರಿಬ್ಬರ ಕ್ಷೇತ್ರಗಳ ಪರಿಸ್ಥಿತಿ ನನಗೆ ಗೊತ್ತಿಲ್ಲ. ಆದರೆ ಉತ್ತರ ಕರ್ನಾಟಕದಲ್ಲಾದ ಸೋಲಿಗೂ ಮೈತ್ರಿಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕ ಚುನಾವಣೆ ಸೋಲಿಗೆ ಹಲವು ಕಾರಣಗಳಿವೆ.‌ಮೈತ್ರಿಯಿಂದಾಗಿ ಕಾರಣ ಅನ್ನೋಕೆ ಆಗಲ್ಲ. ನಮ್ಮ ಭಾಗದಲ್ಲಿ ಮೈತ್ರಿ ಸೋಲಿಗೆ ಕಾರಣವಲ್ಲ. ಕೆಲವು ಕಡೆ ಕೆಲವೊಂದು ಕಾರಣಗಳು ಇವೆ ಎಂದು ವಿವರಿಸಿದರು.Conclusion:Venkat

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.