ETV Bharat / state

​​​​​​​ಐಟಿ, ಇಡಿ ದಾಳಿ ವಿರೋಧ ಪಕ್ಷದವರ ಮೇಲಷ್ಟೇ ಯಾಕೆ: ವೇಣುಗೋಪಾಲ್​​​​ - it-ed-attacks-only-on-opposition-parties

ಕೇಂದ್ರ ಸರ್ಕಾರ ರಾಜಕೀಯ ಅಸ್ತ್ರಗಳನ್ನಾಗಿ ಐಟಿ, ಇಡಿ ಹಾಗೂ ಚುನಾವಣಾ ಆಯೋಗವನ್ನು ಬಳಸಿಕೊಳ್ಳುತ್ತಿದೆ. ಕೇವಲ ಕಾಂಗ್ರೆಸ್​ ನಾಯಕರ ಮೇಲೆ ಮಾತ್ರ ಈ ದಾಳಿಗಳು ನಡೆಯುತ್ತಿವೆ ಎಂದು ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಎಸ್.ವೇಣುಗೋಪಾಲ್
author img

By

Published : Oct 15, 2019, 4:36 PM IST

ಬೆಂಗಳೂರು: ಚುನಾವಣೆ ಬಂದಾಗ‌ ಐಟಿ, ಇಡಿ ದಾಳಿಯ ನಾಟಕ ಆರಂಭವಾಗುತ್ತದೆ. ಇವುಗಳು ಆಡಳಿತ ಪಕ್ಷದ ಶಸ್ತ್ರಗಳಾಗಿವೆ. ವಿರೋಧ ಪಕ್ಷದ ಮೇಲೆ ದಾಳಿ ಮಾಡಿಸಲಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಲ್ ದೂರಿದರು.

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಎಸ್.ವೇಣುಗೋಪಾಲ್

ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾವು ಕಾನೂನು ಪಾಲಿಸುವವರಾಗಿದ್ದೇವೆ. ಬಿಜೆಪಿ ವಿರುದ್ಧವೂ ಸಾಕಷ್ಟು ಪ್ರಕರಣಗಳಿವೆ. ಕುಮಾರಸ್ವಾಮಿ ಸರ್ಕಾರ ಪತನವಾಗುವ ವೇಳೆ ಸಾಕಷ್ಟು ಹಣದ ಆಮಿಷ ನೀಡಿರುವುದು ಎಲ್ಲಾ ಮಾಧ್ಯಮಗಳಿಗೂ ಗೊತ್ತಿದೆ. ಅವರ ವಿರುದ್ಧ ಇಡಿ, ಆದಾಯ ತೆರಿಗೆ ಅಧಿಕಾರಿಗಳು ಯಾವ ಕ್ರಮಕ್ಕೆ ಮುಂದಾಗಿದ್ದಾರೆ. ಇಡಿಯಲ್ಲಿ ಕೆಲ ಬಿಜೆಪಿ ನಾಯಕರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ಆದರೆ, ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್​ ನಾಯಕರ ಮೇಲೆ ಮಾತ್ರ ಈ ದಾಳಿ ಏಕೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಚುನಾವಣಾ ಆಯೋಗವೂ ಪಕ್ಷಪಾತಿಯಾಗಿದೆ. ಡಿ. 1ಕ್ಕೆ ಉಪ ಚುನಾವಣೆ ಘೋಷಣೆಯಾದರೂ ನೀತಿ ಸಂಹಿತೆ ಜಾರಿಯಾಗಿಲ್ಲ. ಅಲ್ಲಿವರೆಗೆ ಸರ್ಕಾರ ಏನನ್ನು ಬೇಕಾದರು ಮಾಡಬಹುದೇ ಎಂದು ಪ್ರಶ್ನಿಸಿದರು.

ಬಿಜೆಪಿ ಅತೃಪ್ತರನ್ನು ಕಾಂಗ್ರೆಸ್​ಗೆ ಸೇರಿಸಬೇಕೋ, ಬೇಡವೋ ಎಂಬ ಬಗ್ಗೆ ಅವರ ಯೋಗ್ಯತೆ ಆಧಾರದಲ್ಲಿ ನಿರ್ಧರಿಸಲಿದ್ದೇವೆ. ಬಿಜೆಪಿ ತರಹ ಎಲ್ಲರನ್ನು ಸೇರಿಸಿಕೊಳ್ಳಲಾಗದು ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು: ಚುನಾವಣೆ ಬಂದಾಗ‌ ಐಟಿ, ಇಡಿ ದಾಳಿಯ ನಾಟಕ ಆರಂಭವಾಗುತ್ತದೆ. ಇವುಗಳು ಆಡಳಿತ ಪಕ್ಷದ ಶಸ್ತ್ರಗಳಾಗಿವೆ. ವಿರೋಧ ಪಕ್ಷದ ಮೇಲೆ ದಾಳಿ ಮಾಡಿಸಲಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಲ್ ದೂರಿದರು.

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಎಸ್.ವೇಣುಗೋಪಾಲ್

ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾವು ಕಾನೂನು ಪಾಲಿಸುವವರಾಗಿದ್ದೇವೆ. ಬಿಜೆಪಿ ವಿರುದ್ಧವೂ ಸಾಕಷ್ಟು ಪ್ರಕರಣಗಳಿವೆ. ಕುಮಾರಸ್ವಾಮಿ ಸರ್ಕಾರ ಪತನವಾಗುವ ವೇಳೆ ಸಾಕಷ್ಟು ಹಣದ ಆಮಿಷ ನೀಡಿರುವುದು ಎಲ್ಲಾ ಮಾಧ್ಯಮಗಳಿಗೂ ಗೊತ್ತಿದೆ. ಅವರ ವಿರುದ್ಧ ಇಡಿ, ಆದಾಯ ತೆರಿಗೆ ಅಧಿಕಾರಿಗಳು ಯಾವ ಕ್ರಮಕ್ಕೆ ಮುಂದಾಗಿದ್ದಾರೆ. ಇಡಿಯಲ್ಲಿ ಕೆಲ ಬಿಜೆಪಿ ನಾಯಕರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ಆದರೆ, ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್​ ನಾಯಕರ ಮೇಲೆ ಮಾತ್ರ ಈ ದಾಳಿ ಏಕೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಚುನಾವಣಾ ಆಯೋಗವೂ ಪಕ್ಷಪಾತಿಯಾಗಿದೆ. ಡಿ. 1ಕ್ಕೆ ಉಪ ಚುನಾವಣೆ ಘೋಷಣೆಯಾದರೂ ನೀತಿ ಸಂಹಿತೆ ಜಾರಿಯಾಗಿಲ್ಲ. ಅಲ್ಲಿವರೆಗೆ ಸರ್ಕಾರ ಏನನ್ನು ಬೇಕಾದರು ಮಾಡಬಹುದೇ ಎಂದು ಪ್ರಶ್ನಿಸಿದರು.

ಬಿಜೆಪಿ ಅತೃಪ್ತರನ್ನು ಕಾಂಗ್ರೆಸ್​ಗೆ ಸೇರಿಸಬೇಕೋ, ಬೇಡವೋ ಎಂಬ ಬಗ್ಗೆ ಅವರ ಯೋಗ್ಯತೆ ಆಧಾರದಲ್ಲಿ ನಿರ್ಧರಿಸಲಿದ್ದೇವೆ. ಬಿಜೆಪಿ ತರಹ ಎಲ್ಲರನ್ನು ಸೇರಿಸಿಕೊಳ್ಳಲಾಗದು ಎಂದು ಸ್ಪಷ್ಟಪಡಿಸಿದರು.

Intro:Body:KN_BNG_01_KCVENUGOPAL_BYTE_SCRIPT_7201951

ಚುನಾವಣೆ ಬರುತ್ತಿದ್ದ ಹಾಗೆ ಐಟಿ, ಇಡಿ ದಾಳಿ ನಾಟಕ ಪ್ರಾರಂಭವಾಗುತ್ತದೆ: ಕೆ.ಸಿ.ವೇಣುಗೋಪಾಲ್

ಬೆಂಗಳೂರು: ಚುನಾವಣೆ ಬಂದಾಗ‌ ಐಟಿ, ಇಡಿ ದಾಳಿ ಯ ನಾಟಕ ಆರಂಭವಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಲ್ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾವು ಕಾನೂನು ಪಾಲಿಸುವವರಾಗಿದ್ದೇವೆ. ಬಿಜೆಪಿ ವಿರುದ್ಧವೂ ಸಾಕಷ್ಟು ಪ್ರಕರಣಗಳಿವೆ. ಕುಮಾರಸ್ವಾಮಿ ಸರ್ಕಾರ ಪತನವಾಗುವ ವೇಳೆ ಸಾಕಷ್ಟು ಹಣದ ಆಮಿಷ ಒಡ್ಡಲಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಇಡಿ ಅಧಿಕಾರಿಗಳಿಗೂ ಅದು ಗೊತ್ತು. ಇಡಿಯಲ್ಲಿ ಕೆಲ ಬಿಜೆಪಿ ನಾಯಕರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ಆದರೆ, ಅವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಕಾಂಗ್ರೆಸ್ ನಾಯಕರ ವಿರುದ್ಧ ದಾಳಿಗಳನ್ನು ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.

ಐಟಿ, ಇಡಿ, ಸಿಬಿಐ ಬಿಜೆಪಿ ಪಕ್ಷದ ರಾಜಕೀಯ ಕೈಗೊಂಬೆಯಾಗಿವೆ. ದೇಶ ಹಾಗು ರಾಜ್ಯದ ಜನರು ಐಟಿ, ಇಡಿ ದಾಳಿ ಕೇವಲ ಕಾಂಗ್ರೆಸ್‌ ನಾಯಕರ ಮೇಲೆ ಏಕೆ ಆಗುತ್ತಿದೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಚುನಾವಣೆ ಬಂದಾಗ ಈ ತರದ ನಾಟಕ ಆರಂಭವಾಗುತ್ತದೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ವೇಳೆ ಅವರು ಐಟಿ, ಇಡಿ, ಸಿಬಿಐಯನ್ನು ಅವಲಂಭಿತರಾಗುತ್ತಾರೆ. ಚುನಾವಣಾ ಆಯೋಗವೂ ಪಕ್ಷಪಾತಿಯಾಗಿದೆ. ಡಿ.1ಕ್ಕೆ ಉಪ ಚುನಾವಣೆ ಘೋಷಣೆ ಮಾಡಲಾಗಿದೆ. ಆದರೆ ಈಗಲೂ ನೀತಿ ಸಂಹಿತೆ ಜಾರಿಯಾಗಿಲ್ಲ. ಅಲ್ಲಿವರೆಗೆ ಸರ್ಕಾರ ಏನನ್ನು ಬೇಕಾದರು ಮಾಡಬಹುದಾಗಿದೆ. ಪ್ರಜಾಪ್ರಭುತ್ವದಲ್ಲಿ ಹೀಗಾದರೆ ಹೇಗೆ? ಎಂದು ಪ್ರಶ್ನಿಸಿದರು.

ಉಪಚುನಾವಣೆಯಲ್ಲಿ ನಾವು ಎಲ್ಲ 15 ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ಬಿಜೆಪಿ ಅತೃಪ್ತರನ್ನು ಕಾಂಗ್ರೆಸ್ ಸೇರಿಸಬೇಕೋ ಬೇಡವೋ ಎಂಬ ಬಗ್ಗೆ ಅವರ ಯೋಗ್ಯತೆ ಆಧಾರದಲ್ಲಿ ನಿರ್ಧರಿಸಲಿದ್ದೇವೆ. ಬಿಜೆಪಿ ತರ ಯಾರನ್ನಾದರು ನಾವು ಸೇರ್ಪಡೆಗೊಳಿಸುವುದಿಲ್ಲ. ಕಾರ್ಯಕರ್ತರ ಜತೆ ಈ ಸಂಬಂಧ ಚರ್ಚೆ ನಡೆಸಿ, ನಿರ್ಧರಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.