ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ಪ್ರಕರಣದ ಪ್ರಾಥಮಿಕ ತನಿಖೆಯ ಚಾರ್ಜ್ಶೀಟ್ಅನ್ನು ಸಿಬಿಐ ನ್ಯಾಯಾಲಕ್ಕೆ ಸಲ್ಲಿಕೆ ಮಾಡಿದ್ದು, ಈ ವೇಳೆ ಸಿಬಿಐ ಎಫ್ಐಆರ್ನಲ್ಲಿ ಇದ್ದ ಹೆಸರು ಚಾರ್ಜ್ಶೀಟ್ನಲ್ಲಿ ಕಣ್ಮರೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
26 ಮಂದಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲು ಮಾಡಿತ್ತು. ಆದ್ರೆ ಚಾರ್ಜ್ಶೀಟ್ನಲ್ಲಿ 20 ಆರೋಪಿಗಳ ಹೆಸರು ಮಾತ್ರ ಉಲ್ಲೇಖ ಮಾಡಿದ್ದು, ಬೆಂಗಳೂರು ನಗರ ಮಾಜಿ ಡಿಸಿ ವಿಜಯಶಂಕರ್, ಮಾಜಿ ಎಸಿಎಲ್ಸಿ ನಾಗರಾಜ್, ಬಿಡಿಎ ಎಂಜಿನಿಯರ್ ಪಿ.ಡಿ.ಕುಮಾರ್ ಮತ್ತು ಗ್ರಾಮ ಲೆಕ್ಕಿಗ ಮಂಜುನಾಥ್ ಹೆಸರು ಕೈ ಬಿಟ್ಟು ಇತ್ತೀಚಿಗಷ್ಟೇ ಸಿಬಿಐ ವಿಶೇಷ ನ್ಯಾಯಾಲಯಕ್ಕೆ 5600 ಪುಟಗಳ ಬೃಹತ್ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
