ETV Bharat / state

ಅಪ್ರಾಪ್ತರ ವಿಚಾರಣೆ ಸೂಕ್ಷ್ಮವಾಗಿರಬೇಕು - ಸುಪ್ರೀಂ ನ್ಯಾ. ದೀಪಕ್ ಮಿಶ್ರಾ

author img

By

Published : Feb 9, 2020, 6:42 AM IST

ಕಾನೂನು ಸಂಘರ್ಷಕ್ಕೆ ಸಿಲುಕಿದ ಅಪ್ರಾಪ್ತರ ವಿಚಾರಣೆ ನಡೆಸುವಾಗ ಪೊಲೀಸರು, ವಕೀಲರಷ್ಟೇ ಅಲ್ಲದೆ ನ್ಯಾಯಾಧೀಶರು ಕೂಡ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು ಎಂದು ನ್ಯಾ.ದೀಪಕ್ ಮಿಶ್ರಾ ಹೇಳಿದರು.

kn_bng_02_DeepakMishra_7208962
ಅಪ್ರಾಪ್ತರ ವಿಚಾರಣೆ ವೇಳೆ ಸೂಕ್ಷ್ಮವಾಗಿರಬೇಕು - ಸುಪ್ರೀಂ ನ್ಯಾ. ದೀಪಕ್ ಮಿಶ್ರಾ

ಬೆಂಗಳೂರು: ಕಾನೂನು ಸಂಘರ್ಷಕ್ಕೆ ಸಿಲುಕಿದ ಅಪ್ರಾಪ್ತರ ವಿಚಾರಣೆ ನಡೆಸುವಾಗ ಮತ್ತು ಅವರಿಂದ ಸಾಕ್ಷಿ ಸಂಗ್ರಹಿಸುವ ಸಂದರ್ಭಗಳಲ್ಲಿ ಪೊಲೀಸರು, ವಕೀಲರಷ್ಟೇ ಅಲ್ಲದೆ ನ್ಯಾಯಾಧೀಶರು ಕೂಡ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟರು.

ಬೆಂಗಳೂರಿನ ನ್ಯಾಯಾಂಗ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ನೀಡಲಿಕ್ಕಾಗಿ ರೂಪಿಸಿರುವ 3 ಮನೋ ಸಾಮಾಜಿಕ ಕೈಪಿಡಿಗಳನ್ನು ಬಿಡುಗಡೆ ಮಾಡಿದ ನ್ಯಾ. ಮಿಶ್ರಾ ಅವರು, ಲೈಂಗಿಕ ಶೋಷಣೆಗೆ ಒಳಗಾದ ಮಕ್ಕಳನ್ನು ಕಾನೂನಾತ್ಮಕ ವಿಚಾರಣೆಗೆ ಒಳಪಡಿಸುವಾಗ ಅಥವಾ ಅವರಿಂದ ಸಾಕ್ಷಿ ಸಂಗ್ರಹಿಸುವಾಗ ಹೆಚ್ಚು ಜಾಗರೂಕತೆ ವಹಿಸಬೇಕು. ಎಲ್ಲೂ ಕೂಡಾ ಮಗುವಿನ ಗುರುತು ಬಹಿರಂಗವಾಗದಂತೆ ನೋಡಿಕೊಳ್ಳಬೇಕು. ಈ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಬಾಲ ನ್ಯಾಯ (ಕಾಳಜಿ ಮತ್ತು ರಕ್ಷಣೆ) ಕಾಯ್ದೆ-2015ರ ಬಗ್ಗೆ ವಿವರಿಸುತ್ತಾ, ಬಾಲಪರಾಧ ಎಸಗಿದ ಮಕ್ಕಳನ್ನು ಅಪರಾಧಿಗಳಂತೆ ನೋಡದೆ ಅವರನ್ನು ಕೇವಲ ಮಕ್ಕಳಾಗಿಯೇ ನೋಡಬೇಕು. ಪೂರ್ವನಿರ್ಧಾರಿತ ಮನಸ್ಥಿತಿಯಲ್ಲಿ ಅವರನ್ನು ನೋಡಿದರೆ ಅವರ ಭವಿಷ್ಯ ಮಸುಕಾಗಿಬಿಡುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಧೀಶರು ಪೂರ್ವಭಾವನೆಗೆ ಒಳಗಾಗದೆ ಸಹಾನುಭೂತಿಯಿಂದ ನ್ಯಾಯದಾನ ಮಾಡಬೇಕು. ಅವರಿಗೆ ಅವಶ್ಯವಿರುವ ಕಾನೂನು ನೆರವು ನೀಡಬೇಕು ಎಂದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌. ಓಕ ಅವರು ಮಾತನಾಡಿ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳ ಪರ ವಕಾಲತ್ತು ವಹಿಸುವ ವಕೀಲರು, ಕೇವಲ ಕಕ್ಷಿದಾರರ ರಕ್ಷಣೆಯನ್ನು ಮಾತ್ರ ಪರಿಗಣಿಸಬಾರದು. ಒಂದು ಮಗುವಿನ ಭವಿಷ್ಯವನ್ನೂ ಗಾಢವಾಗಿ ಆಲೋಚಿಸಬೇಕು ಎಂದರು. ಇದೇ ವೇಳೆ ರಾಜ್ಯದಲ್ಲಿ ಪ್ರಾಸಿಕ್ಯೂಷನ್ ಪರ ವಾದಿಸಲು ಅಗತ್ಯವಿರುವ ಪಬ್ಲಿಕ್ ಪ್ರಾಸಿಕ್ಯೂಟರ್​ಗಳ ಸಂಖ್ಯೆ ಶೇ. 60ರಷ್ಟಿದ್ದು, ನ್ಯಾಯದಾನದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ಬಾಲ ನ್ಯಾಯ ಸಮಿತಿ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾ. ಬಿ.ವಿ.ನಾಗರತ್ನ ಮಾತನಾಡಿ, ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣಗಳಲ್ಲಿ ನ್ಯಾಯಾಧೀಶರು ನಿರ್ಲಿಪ್ತ ಮನಃಸ್ಥಿತಿಯನ್ನು ಪಕ್ಕಕ್ಕಿಟ್ಟು, ಮಕ್ಕಳ ಹಿತದೃಷ್ಟಿಯಿಂದ ಆಪ್ತವಾಗಿ ವಿಚಾರಣೆ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿಗಳು, ವಿಶೇಷ ನ್ಯಾಯಾಲಯಗಳ ನ್ಯಾಯಾಧೀಶರು, ಹೈಕೋರ್ ರಿಜಿಸ್ ರ್ ಜನರಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಪಲ್ಲವಿ ಅಕುರಾತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಬೆಂಗಳೂರು: ಕಾನೂನು ಸಂಘರ್ಷಕ್ಕೆ ಸಿಲುಕಿದ ಅಪ್ರಾಪ್ತರ ವಿಚಾರಣೆ ನಡೆಸುವಾಗ ಮತ್ತು ಅವರಿಂದ ಸಾಕ್ಷಿ ಸಂಗ್ರಹಿಸುವ ಸಂದರ್ಭಗಳಲ್ಲಿ ಪೊಲೀಸರು, ವಕೀಲರಷ್ಟೇ ಅಲ್ಲದೆ ನ್ಯಾಯಾಧೀಶರು ಕೂಡ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟರು.

ಬೆಂಗಳೂರಿನ ನ್ಯಾಯಾಂಗ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ನೀಡಲಿಕ್ಕಾಗಿ ರೂಪಿಸಿರುವ 3 ಮನೋ ಸಾಮಾಜಿಕ ಕೈಪಿಡಿಗಳನ್ನು ಬಿಡುಗಡೆ ಮಾಡಿದ ನ್ಯಾ. ಮಿಶ್ರಾ ಅವರು, ಲೈಂಗಿಕ ಶೋಷಣೆಗೆ ಒಳಗಾದ ಮಕ್ಕಳನ್ನು ಕಾನೂನಾತ್ಮಕ ವಿಚಾರಣೆಗೆ ಒಳಪಡಿಸುವಾಗ ಅಥವಾ ಅವರಿಂದ ಸಾಕ್ಷಿ ಸಂಗ್ರಹಿಸುವಾಗ ಹೆಚ್ಚು ಜಾಗರೂಕತೆ ವಹಿಸಬೇಕು. ಎಲ್ಲೂ ಕೂಡಾ ಮಗುವಿನ ಗುರುತು ಬಹಿರಂಗವಾಗದಂತೆ ನೋಡಿಕೊಳ್ಳಬೇಕು. ಈ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಬಾಲ ನ್ಯಾಯ (ಕಾಳಜಿ ಮತ್ತು ರಕ್ಷಣೆ) ಕಾಯ್ದೆ-2015ರ ಬಗ್ಗೆ ವಿವರಿಸುತ್ತಾ, ಬಾಲಪರಾಧ ಎಸಗಿದ ಮಕ್ಕಳನ್ನು ಅಪರಾಧಿಗಳಂತೆ ನೋಡದೆ ಅವರನ್ನು ಕೇವಲ ಮಕ್ಕಳಾಗಿಯೇ ನೋಡಬೇಕು. ಪೂರ್ವನಿರ್ಧಾರಿತ ಮನಸ್ಥಿತಿಯಲ್ಲಿ ಅವರನ್ನು ನೋಡಿದರೆ ಅವರ ಭವಿಷ್ಯ ಮಸುಕಾಗಿಬಿಡುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಧೀಶರು ಪೂರ್ವಭಾವನೆಗೆ ಒಳಗಾಗದೆ ಸಹಾನುಭೂತಿಯಿಂದ ನ್ಯಾಯದಾನ ಮಾಡಬೇಕು. ಅವರಿಗೆ ಅವಶ್ಯವಿರುವ ಕಾನೂನು ನೆರವು ನೀಡಬೇಕು ಎಂದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌. ಓಕ ಅವರು ಮಾತನಾಡಿ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳ ಪರ ವಕಾಲತ್ತು ವಹಿಸುವ ವಕೀಲರು, ಕೇವಲ ಕಕ್ಷಿದಾರರ ರಕ್ಷಣೆಯನ್ನು ಮಾತ್ರ ಪರಿಗಣಿಸಬಾರದು. ಒಂದು ಮಗುವಿನ ಭವಿಷ್ಯವನ್ನೂ ಗಾಢವಾಗಿ ಆಲೋಚಿಸಬೇಕು ಎಂದರು. ಇದೇ ವೇಳೆ ರಾಜ್ಯದಲ್ಲಿ ಪ್ರಾಸಿಕ್ಯೂಷನ್ ಪರ ವಾದಿಸಲು ಅಗತ್ಯವಿರುವ ಪಬ್ಲಿಕ್ ಪ್ರಾಸಿಕ್ಯೂಟರ್​ಗಳ ಸಂಖ್ಯೆ ಶೇ. 60ರಷ್ಟಿದ್ದು, ನ್ಯಾಯದಾನದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ಬಾಲ ನ್ಯಾಯ ಸಮಿತಿ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾ. ಬಿ.ವಿ.ನಾಗರತ್ನ ಮಾತನಾಡಿ, ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣಗಳಲ್ಲಿ ನ್ಯಾಯಾಧೀಶರು ನಿರ್ಲಿಪ್ತ ಮನಃಸ್ಥಿತಿಯನ್ನು ಪಕ್ಕಕ್ಕಿಟ್ಟು, ಮಕ್ಕಳ ಹಿತದೃಷ್ಟಿಯಿಂದ ಆಪ್ತವಾಗಿ ವಿಚಾರಣೆ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿಗಳು, ವಿಶೇಷ ನ್ಯಾಯಾಲಯಗಳ ನ್ಯಾಯಾಧೀಶರು, ಹೈಕೋರ್ ರಿಜಿಸ್ ರ್ ಜನರಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಪಲ್ಲವಿ ಅಕುರಾತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.