ETV Bharat / state

ನನ್ನ ಕ್ಷೇತ್ರದ ಬಡಾವಣೆಗೆ ಪುನೀತ್‌ ಹೆಸರಿಟ್ಟಿರುವುದು ಹರ್ಷ ತಂದಿದೆ: ಜಮೀರ್

author img

By

Published : Jun 14, 2022, 6:50 PM IST

ಪುನೀತ್ ರಾಜ್​ಕುಮಾರ್​​ ಹೆಸರನ್ನು ನನ್ನ ಕ್ಷೇತ್ರದ ಒಂದು ಬಡಾವಣೆಗೆ ಇಟ್ಟಿರುವುದು ನನಗೆ ತುಂಬಾ ಹರ್ಷ ತಂದಿದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಪುನೀತ್ ರಾಜ್ ಕುಮಾರ್ ಹೆಸರಿನ ನೂತನ ಬಡಾವಣೆ ಉದ್ಘಾಟನೆ
ಪುನೀತ್ ರಾಜ್ ಕುಮಾರ್ ಹೆಸರಿನ ನೂತನ ಬಡಾವಣೆ ಉದ್ಘಾಟನೆ

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಆಜಾದ್ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಡಾವಣೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿಡಲಾಗಿದೆ. ಪುನೀತ್ ಹೆಸರನ್ನು ನನ್ನ ಕ್ಷೇತ್ರದ ಒಂದು ಬಡಾವಣೆಗೆ ಇರಿಸಿರುವುದು ನನಗೆ ತುಂಬಾ ಹರ್ಷ ತಂದಿದೆ ಎಂದು ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಪುನೀತ್ ರಾಜ್‌ಕುಮಾರ್ ಹೆಸರಿನ ನೂತನ ಬಡಾವಣೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬರುವ ಮೊದಲಿನಿಂದಲೂ ಡಾ.ರಾಜ್ ಕುಮಾರ್ ಕುಟುಂಬದ ಜೊತೆ ನನಗೆ ಅವಿನಾಭಾವ ಬಾಂಧವ್ಯ ಇದೆ. ಪುನೀತ್ ರಾಜ್ ಕುಮಾರ್ ಅವರನ್ನು ‌ನಾನು ಬಾಲ್ಯದಿಂದಲೂ ನೋಡಿದ್ದೇನೆ. ಅವರಲ್ಲಿದ್ದ ಸರಳತೆ, ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ ಎಂದರು.


ಪುನೀತ್ ರಾಜ್ ಕುಮಾರ್ ಅವರು ಅಪರೂಪದ ವ್ಯಕ್ತಿ ಅಷ್ಟೇ ಅಲ್ಲ, ಅವರೊಂದು ಅದ್ಭುತ ಶಕ್ತಿ ಎಂಬುದನ್ನು ಅಭಿಮಾನಿಗಳು ಅವರ ಮೇಲಿಟ್ಟಿರುವ ಪ್ರೀತಿ ಗೌರವದಿಂದ ಸಾಬೀತಾಗಿದೆ. ಅಷ್ಟೇ ಅಲ್ಲದೇ ನಮ್ಮನ್ನು ಅವರು ಅಗಲುವ ಮುನ್ನಾ ದಿನ ನನ್ನ ಮಗನೊಂದಿಗೆ ಫೋನ್ ಕಾಲ್​ನಲ್ಲಿ ನಡೆಸಿದ ಸಂಭಾಷಣೆ ಇಂದಿಗೂ ಕಿವಿಯಲ್ಲಿ ಗುನುಗುವಂತಿದೆ ಎಂದು ಆಡಿಯೋ ಪ್ಲೇ ಮಾಡಿ, ಸ್ನೇಹವನ್ನು ಮೆಲುಕು ಹಾಕಿದರು.

ಇದನ್ನೂ ಓದಿ: ಸುದೀಪ್‌ ಆತ್ಮೀಯ ಜಾಕ್ ಮಂಜು ಆಸ್ಪತ್ರೆಗೆ ದಾಖಲು!

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಆಜಾದ್ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಡಾವಣೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿಡಲಾಗಿದೆ. ಪುನೀತ್ ಹೆಸರನ್ನು ನನ್ನ ಕ್ಷೇತ್ರದ ಒಂದು ಬಡಾವಣೆಗೆ ಇರಿಸಿರುವುದು ನನಗೆ ತುಂಬಾ ಹರ್ಷ ತಂದಿದೆ ಎಂದು ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಪುನೀತ್ ರಾಜ್‌ಕುಮಾರ್ ಹೆಸರಿನ ನೂತನ ಬಡಾವಣೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬರುವ ಮೊದಲಿನಿಂದಲೂ ಡಾ.ರಾಜ್ ಕುಮಾರ್ ಕುಟುಂಬದ ಜೊತೆ ನನಗೆ ಅವಿನಾಭಾವ ಬಾಂಧವ್ಯ ಇದೆ. ಪುನೀತ್ ರಾಜ್ ಕುಮಾರ್ ಅವರನ್ನು ‌ನಾನು ಬಾಲ್ಯದಿಂದಲೂ ನೋಡಿದ್ದೇನೆ. ಅವರಲ್ಲಿದ್ದ ಸರಳತೆ, ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ ಎಂದರು.


ಪುನೀತ್ ರಾಜ್ ಕುಮಾರ್ ಅವರು ಅಪರೂಪದ ವ್ಯಕ್ತಿ ಅಷ್ಟೇ ಅಲ್ಲ, ಅವರೊಂದು ಅದ್ಭುತ ಶಕ್ತಿ ಎಂಬುದನ್ನು ಅಭಿಮಾನಿಗಳು ಅವರ ಮೇಲಿಟ್ಟಿರುವ ಪ್ರೀತಿ ಗೌರವದಿಂದ ಸಾಬೀತಾಗಿದೆ. ಅಷ್ಟೇ ಅಲ್ಲದೇ ನಮ್ಮನ್ನು ಅವರು ಅಗಲುವ ಮುನ್ನಾ ದಿನ ನನ್ನ ಮಗನೊಂದಿಗೆ ಫೋನ್ ಕಾಲ್​ನಲ್ಲಿ ನಡೆಸಿದ ಸಂಭಾಷಣೆ ಇಂದಿಗೂ ಕಿವಿಯಲ್ಲಿ ಗುನುಗುವಂತಿದೆ ಎಂದು ಆಡಿಯೋ ಪ್ಲೇ ಮಾಡಿ, ಸ್ನೇಹವನ್ನು ಮೆಲುಕು ಹಾಕಿದರು.

ಇದನ್ನೂ ಓದಿ: ಸುದೀಪ್‌ ಆತ್ಮೀಯ ಜಾಕ್ ಮಂಜು ಆಸ್ಪತ್ರೆಗೆ ದಾಖಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.