ETV Bharat / state

ನಾನು ರಾಜೀನಾಮೆ ನೀಡುತ್ತಿಲ್ಲ; ನನಗೆ ಯೋಚಿಸಿ ನಿರ್ಧರಿಸುವ ಶಕ್ತಿ ಇದೆ: ಶಾಸಕಿ ಸೌಮ್ಯ ರೆಡ್ಡಿ

ಸದ್ಯ ರಾಜ್ಯದಲ್ಲಿ ರಾಜಕೀಯ ಸ್ಥಿತಿ ಕ್ಷಣಕ್ಕೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ರಾಜೀನಾಮೆ ವಿಚಾರವಾಗಿ ಮೊದಲ ಬಾರಿಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ "ನಾನು ಸ್ವತಂತ್ರ ಮಹಿಳೆ, ನನಗೆ ನನ್ನ ರಾಜಕೀಯದ ಬಗ್ಗೆ ಯೋಚಿಸುವಂತಹ ಸ್ವಂತ ಶಕ್ತಿ ಇದೆ (I am an independent woman, I have mind of my own) ಎಂದಿದ್ದಾರೆ.

author img

By

Published : Jul 10, 2019, 10:43 PM IST

ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿದರು


ಬೆಂಗಳೂರು: ಸದ್ಯದ ರಾಜಕೀಯ ಕ್ಷಣಕೊಂದು ತಿರುವು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ ನಡೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೋನಿಯಾಗಾಂಧಿ ರವರ ಭೇಟಿ ತೀವ್ರ ಕುತೂಹಲ ಕೆರಳಿಸಿತ್ತು. ಸದ್ಯ ಅವರು ಮೊದಲ ಬಾರಿಗೆ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಶಾಸಕಿ ಸೌಮ್ಯ ರೆಡ್ಡಿ ಮಾತು

ನಾನು ರಾಜೀನಾಮೆ ಕೊಟ್ಟಿಲ್ಲ! ದೆಹಲಿಗೆ ಹೋಗಿದ್ದು ಒಂದು ಕಾನ್ಫರೆನ್ಸ್ ನಿಮಿತ್ತ. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಕಾರಣಕ್ಕೆ ಅಲ್ಲ. ಈ ಸಂದರ್ಭದಲ್ಲೇ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿರುವೆ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಆಗಿರುವುದರಿಂದ ಕೆಲ ಚರ್ಚೆಗಳು ನಡೆಸಿದ್ದು,ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರ ಗಮನಕ್ಕೂ ತಂದಿದ್ದೇನೆ. ನಾನು ದೆಹಲಿಗೆ ತೆರಳಿದ್ದು, ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ್ದು, ನನ್ನ ತಂದೆಯವರಿಗೆ ತಿಳಿದಿರಲಿಲ್ಲ, ಭೇಟಿಯ ನಂತರವಷ್ಟೇ ಅವರಿಗೆ ಈ ಬಗ್ಗೆ ತಿಳಿದಿದೆ ಎಂದರು.

ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಕೊಟ್ಟಿರುವುದಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ ಎಂದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ನನ್ನ ತಂದೆಯನ್ನು ಕಡೆಗಣಿಸಲಾಗಿದೆ. ಅವರಿಗೆ ತುಂಬಾ ನೋವಾಗಿದೆ. ರಾಜೀನಾಮೆ ನೀಡಿದ ನಂತರ ಉಳಿದವರು ಮುಂಬೈಗೆ ತೆರಳಿದರೂ ಸಹ, ನಮ್ಮ ತಂದೆಯವರು ಬೆಂಗಳೂರಿನಲ್ಲಿ ಉಳಿದಿದ್ದಾರೆ. ರಾಜೀನಾಮೆ ನೀಡುವುದಕ್ಕೆ ಬೇರೆ ಯಾವ ಶಾಸಕರಿಗೂ ನಾವು ಪ್ರೇರೇಪಿಸಿಲ್ಲ. ಅವರವರ ಸ್ವಂತ ನಿರ್ಧಾರವಾಗಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.

ಅಲ್ಲದೇ ನಮ್ಮ ತಂದೆಯವರು ಇದುವರೆಗೂ ಯಾವುದೇ ಸಚಿವ ಸ್ಥಾನದ ಆಸೆಯನ್ನು ವ್ಯಕ್ತಪಡಿಸಿಲ್ಲ.ಇನ್ನು ಮುಂದೆಯೂ ವ್ಯಕ್ತಪಡಿಸುವುದಿಲ್ಲ. ಅದನ್ನು ಅರಿತು ಅವರಿಗೆ ಸರಿಯಾದ ಸ್ಥಾನಮಾನ ನೀಡಬೇಕಾಗಿತ್ತು ಎಂದರು‌.

15ನೇ ತಾರೀಖು ರಾಜಿನಾಮೆ ವಿಚಾರವಾಗಿ ಸ್ಪೀಕರ್ ಭೇಟಿಯಾಗಲು ಸೂಚಿಸಿದ್ದು, ರಾಜೀನಾಮೆ ಅಂಗೀಕಾರವಾದರೆ, ನೀವು ರಾಜೀನಾಮೆ ನೀಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜೀನಾಮೆ ಕೊಡುವುದಿಲ್ಲ. ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡುತ್ತಿದ್ದೇನೆ. ಇಲ್ಲಸಲ್ಲದ ಮಾಧ್ಯಮದ ಮಾತುಗಳನ್ನು ದಯವಿಟ್ಟು ಯಾರು ನಂಬಬೇಡಿ ಎಂದರು‌.


ಬೆಂಗಳೂರು: ಸದ್ಯದ ರಾಜಕೀಯ ಕ್ಷಣಕೊಂದು ತಿರುವು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ ನಡೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೋನಿಯಾಗಾಂಧಿ ರವರ ಭೇಟಿ ತೀವ್ರ ಕುತೂಹಲ ಕೆರಳಿಸಿತ್ತು. ಸದ್ಯ ಅವರು ಮೊದಲ ಬಾರಿಗೆ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಶಾಸಕಿ ಸೌಮ್ಯ ರೆಡ್ಡಿ ಮಾತು

ನಾನು ರಾಜೀನಾಮೆ ಕೊಟ್ಟಿಲ್ಲ! ದೆಹಲಿಗೆ ಹೋಗಿದ್ದು ಒಂದು ಕಾನ್ಫರೆನ್ಸ್ ನಿಮಿತ್ತ. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಕಾರಣಕ್ಕೆ ಅಲ್ಲ. ಈ ಸಂದರ್ಭದಲ್ಲೇ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿರುವೆ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಆಗಿರುವುದರಿಂದ ಕೆಲ ಚರ್ಚೆಗಳು ನಡೆಸಿದ್ದು,ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರ ಗಮನಕ್ಕೂ ತಂದಿದ್ದೇನೆ. ನಾನು ದೆಹಲಿಗೆ ತೆರಳಿದ್ದು, ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ್ದು, ನನ್ನ ತಂದೆಯವರಿಗೆ ತಿಳಿದಿರಲಿಲ್ಲ, ಭೇಟಿಯ ನಂತರವಷ್ಟೇ ಅವರಿಗೆ ಈ ಬಗ್ಗೆ ತಿಳಿದಿದೆ ಎಂದರು.

ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಕೊಟ್ಟಿರುವುದಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ ಎಂದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ನನ್ನ ತಂದೆಯನ್ನು ಕಡೆಗಣಿಸಲಾಗಿದೆ. ಅವರಿಗೆ ತುಂಬಾ ನೋವಾಗಿದೆ. ರಾಜೀನಾಮೆ ನೀಡಿದ ನಂತರ ಉಳಿದವರು ಮುಂಬೈಗೆ ತೆರಳಿದರೂ ಸಹ, ನಮ್ಮ ತಂದೆಯವರು ಬೆಂಗಳೂರಿನಲ್ಲಿ ಉಳಿದಿದ್ದಾರೆ. ರಾಜೀನಾಮೆ ನೀಡುವುದಕ್ಕೆ ಬೇರೆ ಯಾವ ಶಾಸಕರಿಗೂ ನಾವು ಪ್ರೇರೇಪಿಸಿಲ್ಲ. ಅವರವರ ಸ್ವಂತ ನಿರ್ಧಾರವಾಗಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.

ಅಲ್ಲದೇ ನಮ್ಮ ತಂದೆಯವರು ಇದುವರೆಗೂ ಯಾವುದೇ ಸಚಿವ ಸ್ಥಾನದ ಆಸೆಯನ್ನು ವ್ಯಕ್ತಪಡಿಸಿಲ್ಲ.ಇನ್ನು ಮುಂದೆಯೂ ವ್ಯಕ್ತಪಡಿಸುವುದಿಲ್ಲ. ಅದನ್ನು ಅರಿತು ಅವರಿಗೆ ಸರಿಯಾದ ಸ್ಥಾನಮಾನ ನೀಡಬೇಕಾಗಿತ್ತು ಎಂದರು‌.

15ನೇ ತಾರೀಖು ರಾಜಿನಾಮೆ ವಿಚಾರವಾಗಿ ಸ್ಪೀಕರ್ ಭೇಟಿಯಾಗಲು ಸೂಚಿಸಿದ್ದು, ರಾಜೀನಾಮೆ ಅಂಗೀಕಾರವಾದರೆ, ನೀವು ರಾಜೀನಾಮೆ ನೀಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜೀನಾಮೆ ಕೊಡುವುದಿಲ್ಲ. ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡುತ್ತಿದ್ದೇನೆ. ಇಲ್ಲಸಲ್ಲದ ಮಾಧ್ಯಮದ ಮಾತುಗಳನ್ನು ದಯವಿಟ್ಟು ಯಾರು ನಂಬಬೇಡಿ ಎಂದರು‌.

Intro:Sowmya Reddy reaction exclusive to etv bharatBody:Exclusive

*ಐಯಾಮ್ ಇಂಡಿಪೆಂಡೆಂಟ್ ಉಮೆನ್!! ನನಗೆ ಯೋಚಿಸಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದೆ*

ಸದ್ಯದ ರಾಜಕೀಯ ಕ್ಷಣಕೊಂದು ತಿರುವು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ರವರ ನಡೆ, ಮುಖ್ಯ ಪಾತ್ರ ವಹಿಸುತ್ತಿರುವ ಈ ಸಂದರ್ಭದಲ್ಲಿ.

ರಾಮಲಿಂಗ ರೆಡ್ಡಿ ರವರ ಪುತ್ರಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಅವರ ನಡೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೋನಿಯಾಗಾಂಧಿ ರವರ ಭೇಟಿ ತೀವ್ರ ಕುತೂಹಲ ಕೆರಳಿಸಿತ್ತು. ಸದ್ಯ ಅವರ ಮೊದಲ ಬಾರಿಗೆ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


ನಾನು ರಾಜೀನಾಮೆ ಕೊಟ್ಟಿಲ್ಲ! ನಾನು ದೆಹಲಿಗೆ ಹೋಗಿದ್ದು ಒಂದು ಕಾನ್ಫರೆನ್ಸ್ ನಿಮಿತ್ತ. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಕಾರಣಕ್ಕೆ ಅಲ್ಲ. ಈ ಸಂದರ್ಭದಲ್ಲೇ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದೆ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಆಗಿರುವುದರಿಂದ ಕೆಲ ಚರ್ಚೆಗಳು ನಡೆಸಿದ್ದು,ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರ ಗಮನಕ್ಕೂ ತಂದಿದ್ದೇನೆ.

ನಾನು ದೆಹಲಿಗೆ ತೆರಳಿದ್ದು, ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ್ದು ನನ್ನ ತಂದೆಯವರಿಗೆ ತಿಳಿದಿರಲಿಲ್ಲ, ಭೇಟಿಯ ನಂತರವಷ್ಟೇ ಅವರಿಗೆ ಈ ಬಗ್ಗೆ ತಿಳಿದಿದೆ ಎಂದರು.

ರಾಜೀನಾಮೆಯ ವಿಚಾರವಾಗಿ ಮಾತನಾಡಿದ ಸೌಮ್ಯ ರೆಡ್ಡಿ "ನಾನು ಸ್ವತಂತ್ರ ಮಹಿಳೆ ನನಗೆ ನನ್ನ ರಾಜಕೀಯದ ಬಗ್ಗೆ ಯೋಚಿಸುವಂತಹ ಸ್ವಂತ ಶಕ್ತಿ ಇದೆ"!(I am an independent woman, I have mind of my own) ಎಂದರು.

ರಾಮಲಿಂಗ ರೆಡ್ಡಿ ಅವರು ರಾಜೀನಾಮೆ ಕೊಟ್ಟಿರುವುದಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ, ಸಮ್ಮಿಶ್ರ ಸರ್ಕಾರದಲ್ಲಿ ಅವರನ್ನು ಕಡೆಗಣಿಸಲಾಗಿದೆ.ನನ್ನ ತಂದೆಯವರಿಗೆ ತುಂಬಾ ನೋವಾಗಿದೆ, ರಾಜಿನಾಮೆ ನೀಡಿದ ನಂತರ ಉಳಿದವರು ಬಾಂಬೆಗೆ ತೆರಳಿದರು ಸಹ ನಮ್ಮ ತಂದೆಯವರು ಬೆಂಗಳೂರಿನಲ್ಲಿ ಉಳಿದಿದ್ದಾರೆ, ರಾಜೀನಾಮೆ ನೀಡುವುದಕ್ಕೆ ಬೇರೆ ಯಾವ ಶಾಸಕರಿಗೂ ನಾವು ಪ್ರೇರೇಪಿಸಿಲ್ಲ, ಅವರವರ ಸ್ವಂತ ನಿರ್ಧಾರವಾಗಿ ಅವರು ರಾಜೀನಾಮೆ ನೀಡಿದ್ದಾರೆ.

ನಮ್ಮ ತಂದೆಯವರು ಇದುವರೆಗೂ ಯಾವುದೇ ಸಚಿವಸ್ಥಾನದ ಆಸೆಯನ್ನು ವ್ಯಕ್ತಪಡಿಸಿಲ್ಲ ಇನ್ನು ಮುಂದೆಯೂ ವ್ಯಕ್ತಪಡಿಸುವುದಿಲ್ಲ. ಅದನ್ನು ಅರಿತು ಅವರಿಗೆ ಸರಿಯಾದ ಸ್ಥಾನಮಾನ ನೀಡಬೇಕಾಗಿತ್ತು ಎಂದರು‌.

15ನೇ ತಾರೀಖು ರಾಜಿನಾಮೆ ವಿಚಾರವಾಗಿ ಸ್ಪೀಕರ್ ಭೇಟಿಯಾಗಲು ಸೂಚಿಸಿದ್ದು, ರಾಜಿನಾಮೆ ಅಂಗೀಕಾರವಾದರೆ, ನೀವು ರಾಜೀನಾಮೆ ನೀಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ರಾಜೀನಾಮೆ ಕೊಡುವುದಿಲ್ಲ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡುತ್ತಿದ್ದೇನೆ ಇಲ್ಲಸಲ್ಲದ ಮಾಧ್ಯಮಗಳ ಮಾಧ್ಯಮಗಳನ್ನು ಯಾರು ದಯವಿಟ್ಟು ನಂಬಬೇಡಿ ಎಂದರು‌.Conclusion:Exclusive byte sent

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.