ETV Bharat / state

ನೂರಕ್ಕೆ ನೂರು ಪರ್ಸೆಂಟ್ ಲವ್ ಜಿಹಾದ್, ಗೋ ಹತ್ಯೆ ನಿಷೇಧ: ಸಚಿವ ಅಶೋಕ್

author img

By

Published : Nov 20, 2020, 6:50 PM IST

Updated : Nov 20, 2020, 8:46 PM IST

ಬಿಜೆಪಿ, ಆರ್​ಎಸ್​ಎಸ್​ಗೆ ಯಾವುದೇ ಸಂಬಂಧವಿಲ್ಲ. ನಾವು ಆರ್​ಎಸ್​ಎಸ್​ನಿಂದಲೇ ಬಂದವರು. ಯಡಿಯೂರಪ್ಪ ಕೂಡ ಅಲ್ಲಿಂದಲೇ ಬಂದವರು..

ಕಂದಾಯ ಸಚಿವ ಆರ್. ಅಶೋಕ್
ಕಂದಾಯ ಸಚಿವ ಆರ್. ಅಶೋಕ್

ಬೆಂಗಳೂರು : ನೂರಕ್ಕೆ ನೂರು ಪರ್ಸೆಂಟ್ ಲವ್ ಜಿಹಾದ್ ನಿಷೇಧ ಮಾಡುತ್ತೇವೆ. ಅದರ ಜೊತೆಗೆ ಗೋ ಹತ್ಯೆ ನಿಷೇಧವನ್ನೂ ಜಾರಿಗೆ ತರುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲವ್ ಜಿಹಾದ್ ನಿಷೇಧದ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕಾನೂನು ತರಲು ಉದ್ದೇಶಿಸಲಾಗಿದ್ದು, ಹೆಣ್ಣು ಮಕ್ಕಳ ಮತಾಂತರವನ್ನು ತಡೆಯುತ್ತೇವೆ. ಇದು ದೇಶ, ನಮ್ಮ ಸಂಸ್ಕೃತಿಗೂ ಮಾರಕ ಎಂದರು.

ಕಂದಾಯ ಸಚಿವ ಆರ್. ಅಶೋಕ್

ಬಿಜೆಪಿಯನ್ನು ಆರ್​ಎಸ್​ಎಸ್ ಕಂಟ್ರೋಲ್ ಮಾಡುತ್ತಿಲ್ಲ: ಆರ್​ಎಸ್​ಎಸ್ ಪಾರ್ಟಿ ಎಂಬ ಕೈ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆರ್​ಎಸ್​ಎಸ್ ಒಂದು ಸಂಘಟನೆ. ಅದು ಪಾರ್ಟಿಯಲ್ಲ, ಬಿಜೆಪಿಯನ್ನು ಅದು ಕಂಟ್ರೋಲ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ, ಆರ್​ಎಸ್​ಎಸ್​ಗೆ ಯಾವುದೇ ಸಂಬಂಧವಿಲ್ಲ. ನಾವು ಆರ್​ಎಸ್​ಎಸ್​ನಿಂದಲೇ ಬಂದವರು. ಯಡಿಯೂರಪ್ಪ ಕೂಡ ಅಲ್ಲಿಂದಲೇ ಬಂದವರು ಎಂದು ಹೇಳಿದರು. ಕಾಂಗ್ರೆಸ್​ನಲ್ಲೇ ಗೊಂದಲವಿದೆ. ಇದನ್ನು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ.

ಅವರ ತಟ್ಟೆಯಲ್ಲೇ ನೊಣ, ಹೆಗ್ಗಣ ಬಿದ್ದಿದೆ. ಬಿಜೆಪಿ ತಟ್ಟೆಯಲ್ಲಿ ಸೊಳ್ಳೆ ಬಿದ್ದಿರುವುದನ್ನು ಹುಡುಕಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಅಶೋಕ್ ಟಾಂಗ್ ನೀಡಿದರು.

ಬೆಂಗಳೂರು : ನೂರಕ್ಕೆ ನೂರು ಪರ್ಸೆಂಟ್ ಲವ್ ಜಿಹಾದ್ ನಿಷೇಧ ಮಾಡುತ್ತೇವೆ. ಅದರ ಜೊತೆಗೆ ಗೋ ಹತ್ಯೆ ನಿಷೇಧವನ್ನೂ ಜಾರಿಗೆ ತರುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲವ್ ಜಿಹಾದ್ ನಿಷೇಧದ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕಾನೂನು ತರಲು ಉದ್ದೇಶಿಸಲಾಗಿದ್ದು, ಹೆಣ್ಣು ಮಕ್ಕಳ ಮತಾಂತರವನ್ನು ತಡೆಯುತ್ತೇವೆ. ಇದು ದೇಶ, ನಮ್ಮ ಸಂಸ್ಕೃತಿಗೂ ಮಾರಕ ಎಂದರು.

ಕಂದಾಯ ಸಚಿವ ಆರ್. ಅಶೋಕ್

ಬಿಜೆಪಿಯನ್ನು ಆರ್​ಎಸ್​ಎಸ್ ಕಂಟ್ರೋಲ್ ಮಾಡುತ್ತಿಲ್ಲ: ಆರ್​ಎಸ್​ಎಸ್ ಪಾರ್ಟಿ ಎಂಬ ಕೈ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆರ್​ಎಸ್​ಎಸ್ ಒಂದು ಸಂಘಟನೆ. ಅದು ಪಾರ್ಟಿಯಲ್ಲ, ಬಿಜೆಪಿಯನ್ನು ಅದು ಕಂಟ್ರೋಲ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ, ಆರ್​ಎಸ್​ಎಸ್​ಗೆ ಯಾವುದೇ ಸಂಬಂಧವಿಲ್ಲ. ನಾವು ಆರ್​ಎಸ್​ಎಸ್​ನಿಂದಲೇ ಬಂದವರು. ಯಡಿಯೂರಪ್ಪ ಕೂಡ ಅಲ್ಲಿಂದಲೇ ಬಂದವರು ಎಂದು ಹೇಳಿದರು. ಕಾಂಗ್ರೆಸ್​ನಲ್ಲೇ ಗೊಂದಲವಿದೆ. ಇದನ್ನು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ.

ಅವರ ತಟ್ಟೆಯಲ್ಲೇ ನೊಣ, ಹೆಗ್ಗಣ ಬಿದ್ದಿದೆ. ಬಿಜೆಪಿ ತಟ್ಟೆಯಲ್ಲಿ ಸೊಳ್ಳೆ ಬಿದ್ದಿರುವುದನ್ನು ಹುಡುಕಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಅಶೋಕ್ ಟಾಂಗ್ ನೀಡಿದರು.

Last Updated : Nov 20, 2020, 8:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.