ಬೆಂಗಳೂರು: ಅನ್ಲಾಕ್ 2.0 ನಲ್ಲಿ ಹೋಟೆಲ್ಗಳಲ್ಲಿ ಶೇಕಡಾ 50 ರಷ್ಟು ಜನರು ಕುಳಿತು ಊಟ ಮಾಡಲು ಅವಕಾಶ ನೀಡಲಾಗಿದೆ. ಆದರೂ ಇಂದು ನಗರದ ಬಹುತೇಕ ಹೋಟೆಲ್ಗಳ ಬಾಗಿಲು ತೆರೆದಿಲಿಲ್ಲ.
ಇನ್ನು ನಗರದ ಹೃದಯಭಾಗ ಮೆಜೆಸ್ಟಿಕ್ ಹೋಟೆಲ್ಗಳಲ್ಲಿ ಕುಳಿತು ಊಟ ಮಾಡುವ ಅವಕಾಶ ಕಲ್ಪಿಸಿದ್ದರೂ ಸಿಬ್ಬಂದಿ ಕೊರತೆ ಎದುರಾಗಿತ್ತು. ಹೋಟೆಲ್ ಅವಕಾಶ ಅನಿರೀಕ್ಷಿತವಾಗಿದ್ದರಿಂದ ಊರುಗಳಿಗೆ ತೆರಳಿದ್ದ ಬಹುತೇಕ ಸಿಬ್ಬಂದಿ ವಾಪಸ್ ಬಂದಿರಲಿಲ್ಲ.
ಇಂದಿರಾ ಕ್ಯಾಂಟೀನ್ ಉಚಿತ ಊಟ ಬಂದ್
ಲಾಕ್ ಡೌನ್ ಸಮಯದಲ್ಲಿ ಹಸಿದ ಹೊಟ್ಟೆಗಳಿಗೆ ಉಚಿತ ಊಟ ನೀಡಿದ್ದ ಇಂದಿರಾ ಕ್ಯಾಂಟೀನ್ ಈಗ ಮತ್ತೆ ಫ್ರೀ ಊಟ ಸ್ಥಗಿತ ಗೊಳಿಸಿದೆ. ಇಂದಿನಿಂದ ಮತ್ತೆ ಹಳೆಯ ದರ ಜಾರಿಗೊಳಿಸಿದೆ. ತಿಂಡಿಗೆ ಐದು ರೂಪಾಯಿ ಹಾಗೂ ಊಟಕ್ಕೆ ಹತ್ತು ರೂಪಾಯಿ ಪಡೆಯುತ್ತಿದೆ. ಆದರೂ ಜನರ ಕ್ಯೂ ಕಡಿಮೆಯಾಗಿರಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲೇ ಜನರು ಊಟ, ತಿಂಡಿಗೆ ಪಡೆದುಕೊಂಡರು.