ETV Bharat / state

ಹೊಳೆಯಂತಾದ 'ಹೊಸಕೆರೆ'ಹಳ್ಳಿ: ವರುಣನ ಆರ್ಭಟಕ್ಕೆ ಹೊಳೆಯಾದ ರಸ್ತೆಗಳು - Heavy Rain Fall in Bengaluru

ಬೆಂಗಳೂರು ನಗರದಲ್ಲಿ ಸುರಿದ ಭೀಕರ ಮಳೆಯಿಂದಾಗಿ ಹೊಸಕೆರೆ ಹಳ್ಳಿಯ ರಸ್ತೆಗಳೆಲ್ಲವೂ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಯಲ್ಲಿದ್ದ ಬಹುತೇಕ ವಾಹನಗಳು ಮುಳುಗಿವೆ.

Hoskerehalli
ಹೊಳೆಯಂತಾದ ಹೊಸಕೆರೆಹಳ್ಳಿ
author img

By

Published : Oct 23, 2020, 7:02 PM IST

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಹೊಸಕೆರೆಹಳ್ಳಿ ಏರಿಯಾ ಸಂಪೂರ್ಣವಾಗಿ ಕೆರೆ ಸ್ವರೂಪ ತಾಳಿದಂತಾಗಿದೆ.

ಹೊಳೆಯಂತಾದ ಹೊಸಕೆರೆಹಳ್ಳಿ

ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಪಕ್ಕದ ರಸ್ತೆಯಲ್ಲಿಯೂ ರಭಸದಿಂದ ನೀರು ಹರಿಯತೊಡಗಿದ್ದು, ಆಟೋ, ಕಾರು ಸೇರಿದಂತೆ ಇನ್ನಿತರ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗತೊಡಗಿವೆ. ಇಲ್ಲಿನ ಮುಖ್ಯ ರಸ್ತೆಗಳು ಕೂಡಾ ಜಲಾವೃತವಾಗಿದ್ದು, ಮೆಟ್ರೋ ಕಾಮಗಾರಿಗೆ ಹಾಕಿದ್ದ ಬ್ಯಾರಿಕೇಡ್​ಗಳು ರಸ್ತೆಗೆ ಬಿದ್ದಿವೆ.

ನಗರದ ಜೆ.ಸಿ.ರಸ್ತೆಯಲ್ಲಿದ್ದ ಕೆಲ ವಾಹನಗಳೂ ಸಹ ನೀರಿನಲ್ಲಿ ಮುಳುಗಿದ್ದು, ಚರಂಡಿ ವ್ಯವಸ್ಥಿತವಾಗಿಲ್ಲದ ಕಾರಣ ಮೋರಿ ನೀರೆಲ್ಲವೂ ರಸ್ತೆಯಲ್ಲಿ ಬ್ಲಾಕ್ ಆಗಿವೆ. ವರುಣನ ಆರ್ಭಟಕ್ಕೆ ನಗರದ ಗವಿಗಂಗಾಧರೇಶ್ವರ ದೇವಸ್ಥಾನದ ಗೋಡೆ ಕುಸಿದಿದೆ.

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಹೊಸಕೆರೆಹಳ್ಳಿ ಏರಿಯಾ ಸಂಪೂರ್ಣವಾಗಿ ಕೆರೆ ಸ್ವರೂಪ ತಾಳಿದಂತಾಗಿದೆ.

ಹೊಳೆಯಂತಾದ ಹೊಸಕೆರೆಹಳ್ಳಿ

ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಪಕ್ಕದ ರಸ್ತೆಯಲ್ಲಿಯೂ ರಭಸದಿಂದ ನೀರು ಹರಿಯತೊಡಗಿದ್ದು, ಆಟೋ, ಕಾರು ಸೇರಿದಂತೆ ಇನ್ನಿತರ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗತೊಡಗಿವೆ. ಇಲ್ಲಿನ ಮುಖ್ಯ ರಸ್ತೆಗಳು ಕೂಡಾ ಜಲಾವೃತವಾಗಿದ್ದು, ಮೆಟ್ರೋ ಕಾಮಗಾರಿಗೆ ಹಾಕಿದ್ದ ಬ್ಯಾರಿಕೇಡ್​ಗಳು ರಸ್ತೆಗೆ ಬಿದ್ದಿವೆ.

ನಗರದ ಜೆ.ಸಿ.ರಸ್ತೆಯಲ್ಲಿದ್ದ ಕೆಲ ವಾಹನಗಳೂ ಸಹ ನೀರಿನಲ್ಲಿ ಮುಳುಗಿದ್ದು, ಚರಂಡಿ ವ್ಯವಸ್ಥಿತವಾಗಿಲ್ಲದ ಕಾರಣ ಮೋರಿ ನೀರೆಲ್ಲವೂ ರಸ್ತೆಯಲ್ಲಿ ಬ್ಲಾಕ್ ಆಗಿವೆ. ವರುಣನ ಆರ್ಭಟಕ್ಕೆ ನಗರದ ಗವಿಗಂಗಾಧರೇಶ್ವರ ದೇವಸ್ಥಾನದ ಗೋಡೆ ಕುಸಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.