ETV Bharat / state

High Court News: ಉದ್ಯೋಗದಾತ ಸಂಸ್ಥೆ ಆದೇಶ ಹೊರಡಿಸಿದಲ್ಲಿ ಮಾತ್ರ ನೌಕರ ಖಾಯಂ ಆಗಲಿದ್ದಾರೆ: ಹೈಕೋರ್ಟ್

author img

By ETV Bharat Karnataka Team

Published : Sep 27, 2023, 10:44 PM IST

ಪ್ರೊಬೆಷನರಿ ಅವಧಿ ಮುಗಿದು ಸೇವೆಯಲ್ಲಿ ಮುಂದುವರಿದಿದ್ದು, ಖಾಯಂ ಆದೇಶ ಹೊರಡಿಸಿಲ್ಲ ಎಂದು ಮಹಿಳೆಯೊಬ್ಬರು ಹೈಕೋರ್ಟ್​ಗೆ​ ಮೇಲ್ಮನವಿ ಸಲ್ಲಿಸಿದ್ದರು.

High Court News
ಹೈಕೋರ್ಟ್ ಸುದ್ದಿ

ಬೆಂಗಳೂರು : ನೌಕರರಿಗೆ ಉದ್ಯೋಗಕ್ಕೆ ಸೇರಿದಾಗ ಪ್ರೊಬೆಷನರಿ ಅವಧಿ ಮುಗಿದ ಬಳಿಕ ಉದ್ಯೋಗದಾತ ಸಂಸ್ಥೆ ಸೇವೆ ಕಾಯಂ ಆದೇಶ ಹೊರಡಿಸಿದಲ್ಲಿ ಮಾತ್ರ ಕಾಯಂ ಆಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಮಡಿಕೇರಿಯ ವಿರಾಜಪೇಟೆಯ ನ್ಯಾಯಾಲಯದಲ್ಲಿ ಸ್ಟೆನೋಗ್ರಾಫರ್ ಆಗಿದ್ದ ಮಹಿಳೆ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಉದ್ಯೋಗಿ ಪ್ರೊಬೆಷನರಿ ಅವಧಿ ಮುಗಿದ ಬಳಿಕ ಸೇವೆಯಲ್ಲಿ ಮುಂದುವರಿಯಬಹುದು. ಆದರೆ ಅವರ ಸೇವೆ ಸಹಜವಾಗಿಯೇ ಕಾಯಂ ಆಗುವುದಿಲ್ಲ. ಸೇವೆ ಕಾಯಂ ಆಗಬೇಕಾದರೆ ಅದಕ್ಕೆ ಉದ್ಯೋಗ ನೀಡುವ ಸಂಸ್ಥೆ ಪ್ರತ್ಯೇಕ ಆದೇಶ ಹೊರಡಿಸಬೇಕು. ಏಕೆಂದರೆ ನಿಯಮಗಳಲ್ಲಿ ಪ್ರೊಬೆಷನರಿ ಮುಗಿದ ಬಳಿಕ ಸಹಜವಾಗಿಯೇ ಸೇವೆ ಕಾಯಂ ಆಗುತ್ತದೆಂದು ಉಲ್ಲೇಖಿಸಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಜತೆಗೆ, ಉದ್ಯೋಗಿಯನ್ನು ಪ್ರೊಬೇಷನರಿಯಲ್ಲಿಡುವುದಕ್ಕೆ ಎರಡು ಕಾರಣಗಳಿವೆ. ಒಂದು ಉದ್ಯೋಗಿ ಆ ಹುದ್ದೆಗೆ ಸೂಕ್ತ ಹೌದೇ ಅಥವಾ ಇಲ್ಲವೇ ಎಂಬುದನ್ನು ಮೌಲ್ಯಮಾಪನ ಮಾಡಲು, ಎರಡು ಉದ್ಯೋಗಿ ಕೂಡ ತಾನು ಆ ಹುದ್ದೆಗೆ ಸೂಕ್ತನೇ ಎಂಬುದನ್ನು ಪರಿಶೀಲಿಸಿಕೊಳ್ಳಲು. ಪ್ರೊಬೆಷನರಿ ಅವಧಿಯಲ್ಲಿ ಇಬ್ಬರಿಗೂ ಆಯ್ಕೆಗಳಿರುತ್ತವೆ ಎಂದು ಪೀಠ ಹೇಳಿದೆ.

ಇದನ್ನೂ ಓದಿ : ವೈದ್ಯಕೀಯ ವೃತ್ತಿಯಲ್ಲಿ ನಂಬಿಕೆ, ವೃತ್ತಿಪರತೆ ಹೊಂದಿರಬೇಕು: ಹೈಕೋರ್ಟ್

ನಿಯಮದಂತೆ ಪ್ರೊಬೆಷನರಿ ಅವಧಿಯ ಸೇವಾ ನಿಯಮಗಳ ವಿಚಾರದಲ್ಲಿ ಈಗಾಗಲೇ ಹಲವು ನ್ಯಾಯಾಲಯಗಳು ಸ್ಪಷ್ಟ ತೀರ್ಪು ನೀಡಿವೆ. ಅದನ್ನು ಪಾಲನೆ ಮಾಡಬೇಕು. ಈ ವಿಚಾರದಲ್ಲಿ ಅರ್ಜಿದಾರರ ಪ್ರೊಬೆಷನರಿ ಅವಧಿ ಮುಗಿದಿದ್ದರೂ ಸೇವೆಯಲ್ಲಿ ಮುಂದುವರಿದಿದ್ದಾರೆ. ಆದರೆ ಅವರ ಸೇವೆ ಖಾಯಂ ಆದೇಶ ಹೊರಡಿಸಿಲ್ಲ. ಹಾಗಾಗಿ ಅವರ ಸೇವೆ ಸಹಜವಾಗಿಯೇ ಕಾಯಂ ಆಗಿದೆ ಎಂದು ಹಕ್ಕು ಮಂಡಿಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರರು ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಸಹ ಸೇವೆಯಿಂದ ವಜಾಗೊಳಿಸಿರುವ ಆದೇಶ ಹೊರಡಿಸಿರುವುದು ನಿಯಮ ಬಾಹಿರವಾಗಿದೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಏಕ ಸದಸ್ಯ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ : ಅ. 4ಕ್ಕೆ ಎಕ್ಸ್​ ಕಾರ್ಪ್​ ಅರ್ಜಿ ವಿಚಾರಣೆ ನಿಗದಿಪಡಿಸಿದ ಹೈಕೋರ್ಟ್

ಬೆಂಗಳೂರು : ನೌಕರರಿಗೆ ಉದ್ಯೋಗಕ್ಕೆ ಸೇರಿದಾಗ ಪ್ರೊಬೆಷನರಿ ಅವಧಿ ಮುಗಿದ ಬಳಿಕ ಉದ್ಯೋಗದಾತ ಸಂಸ್ಥೆ ಸೇವೆ ಕಾಯಂ ಆದೇಶ ಹೊರಡಿಸಿದಲ್ಲಿ ಮಾತ್ರ ಕಾಯಂ ಆಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಮಡಿಕೇರಿಯ ವಿರಾಜಪೇಟೆಯ ನ್ಯಾಯಾಲಯದಲ್ಲಿ ಸ್ಟೆನೋಗ್ರಾಫರ್ ಆಗಿದ್ದ ಮಹಿಳೆ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಉದ್ಯೋಗಿ ಪ್ರೊಬೆಷನರಿ ಅವಧಿ ಮುಗಿದ ಬಳಿಕ ಸೇವೆಯಲ್ಲಿ ಮುಂದುವರಿಯಬಹುದು. ಆದರೆ ಅವರ ಸೇವೆ ಸಹಜವಾಗಿಯೇ ಕಾಯಂ ಆಗುವುದಿಲ್ಲ. ಸೇವೆ ಕಾಯಂ ಆಗಬೇಕಾದರೆ ಅದಕ್ಕೆ ಉದ್ಯೋಗ ನೀಡುವ ಸಂಸ್ಥೆ ಪ್ರತ್ಯೇಕ ಆದೇಶ ಹೊರಡಿಸಬೇಕು. ಏಕೆಂದರೆ ನಿಯಮಗಳಲ್ಲಿ ಪ್ರೊಬೆಷನರಿ ಮುಗಿದ ಬಳಿಕ ಸಹಜವಾಗಿಯೇ ಸೇವೆ ಕಾಯಂ ಆಗುತ್ತದೆಂದು ಉಲ್ಲೇಖಿಸಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಜತೆಗೆ, ಉದ್ಯೋಗಿಯನ್ನು ಪ್ರೊಬೇಷನರಿಯಲ್ಲಿಡುವುದಕ್ಕೆ ಎರಡು ಕಾರಣಗಳಿವೆ. ಒಂದು ಉದ್ಯೋಗಿ ಆ ಹುದ್ದೆಗೆ ಸೂಕ್ತ ಹೌದೇ ಅಥವಾ ಇಲ್ಲವೇ ಎಂಬುದನ್ನು ಮೌಲ್ಯಮಾಪನ ಮಾಡಲು, ಎರಡು ಉದ್ಯೋಗಿ ಕೂಡ ತಾನು ಆ ಹುದ್ದೆಗೆ ಸೂಕ್ತನೇ ಎಂಬುದನ್ನು ಪರಿಶೀಲಿಸಿಕೊಳ್ಳಲು. ಪ್ರೊಬೆಷನರಿ ಅವಧಿಯಲ್ಲಿ ಇಬ್ಬರಿಗೂ ಆಯ್ಕೆಗಳಿರುತ್ತವೆ ಎಂದು ಪೀಠ ಹೇಳಿದೆ.

ಇದನ್ನೂ ಓದಿ : ವೈದ್ಯಕೀಯ ವೃತ್ತಿಯಲ್ಲಿ ನಂಬಿಕೆ, ವೃತ್ತಿಪರತೆ ಹೊಂದಿರಬೇಕು: ಹೈಕೋರ್ಟ್

ನಿಯಮದಂತೆ ಪ್ರೊಬೆಷನರಿ ಅವಧಿಯ ಸೇವಾ ನಿಯಮಗಳ ವಿಚಾರದಲ್ಲಿ ಈಗಾಗಲೇ ಹಲವು ನ್ಯಾಯಾಲಯಗಳು ಸ್ಪಷ್ಟ ತೀರ್ಪು ನೀಡಿವೆ. ಅದನ್ನು ಪಾಲನೆ ಮಾಡಬೇಕು. ಈ ವಿಚಾರದಲ್ಲಿ ಅರ್ಜಿದಾರರ ಪ್ರೊಬೆಷನರಿ ಅವಧಿ ಮುಗಿದಿದ್ದರೂ ಸೇವೆಯಲ್ಲಿ ಮುಂದುವರಿದಿದ್ದಾರೆ. ಆದರೆ ಅವರ ಸೇವೆ ಖಾಯಂ ಆದೇಶ ಹೊರಡಿಸಿಲ್ಲ. ಹಾಗಾಗಿ ಅವರ ಸೇವೆ ಸಹಜವಾಗಿಯೇ ಕಾಯಂ ಆಗಿದೆ ಎಂದು ಹಕ್ಕು ಮಂಡಿಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರರು ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಸಹ ಸೇವೆಯಿಂದ ವಜಾಗೊಳಿಸಿರುವ ಆದೇಶ ಹೊರಡಿಸಿರುವುದು ನಿಯಮ ಬಾಹಿರವಾಗಿದೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಏಕ ಸದಸ್ಯ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ : ಅ. 4ಕ್ಕೆ ಎಕ್ಸ್​ ಕಾರ್ಪ್​ ಅರ್ಜಿ ವಿಚಾರಣೆ ನಿಗದಿಪಡಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.