ETV Bharat / state

ಕೆಲಸ‌ ಕೊಡಿಸುವುದಾಗಿ ನಂಬಿಸಿ 40ಕ್ಕೂ ಹೆಚ್ಚು ಮಂದಿಗೆ ವಂಚನೆ: ಬೆಂಗಳೂರಲ್ಲಿ ಆರೋಪಿ ಅರೆಸ್ಟ್! - ಕೆಲಸ‌ ಕೊಡಿಸುವುದಾಗಿ ವಂಚನೆ ಬೆಂಗಳೂರಲ್ಲಿ ಆರೋಪಿ ಅರೆಸ್ಟ್

ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಉದ್ಯೋಗಾಂಕ್ಷಿಗಳಿಂದ ಲಕ್ಷಾಂತರ ರೂ.ಪಡೆದು ವಂಚಿಸುತ್ತಿದ್ದ‌ ಆರೋಪಿಯನ್ನು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Fraud case accused arrested  in Bengaluru
ಸಂಜೀವ್ ಗಂಗರಾಮ್ ಗೋರ್ಖಾ-ಬಂಧಿತ ಆರೋಪಿ‌
author img

By

Published : Jan 24, 2022, 10:48 AM IST

ಬೆಂಗಳೂರು: ಕೆಲಸ‌ ಕೊಡಿಸುವುದಾಗಿ ಸಂದರ್ಶನ ನಡೆಸಿ, ಪ್ರತಿಷ್ಠಿತ ಐಬಿಎಂ ಕಂಪನಿ ನಕಲಿ ಆಫರ್ ಲೇಟರ್ ನೀಡಿ ಉದ್ಯೋಗಾಂಕ್ಷಿಗಳಿಂದ ಲಕ್ಷಾಂತರ ರೂ.ಪಡೆದು ವಂಚಿಸುತ್ತಿದ್ದ‌ ಆರೋಪಿಯನ್ನು ಸಂಪಿಗೆಹಳ್ಳಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಪುಣೆ ಮೂಲದ ಸಂಜೀವ್ ಗಂಗರಾಮ್ ಗೋರ್ಖಾ ಬಂಧಿತ ಆರೋಪಿ‌. ಈತ ಒಎಲ್​​ಎಕ್ಸ್ ನಲ್ಲಿ ಐಬಿಎಂ ಕಂಪನಿಯಲ್ಲಿ ಕೆಲಸ ಖಾಲಿ‌ಯಿದೆ‌. ಆಸಕ್ತ ಅರ್ಹ ಅರ್ಭ್ಯರ್ಥಿಗಳು ಸಂಪರ್ಕಿಸಿ ಎಂದು ಪೋಸ್ಟ್ ಹಾಕುತ್ತಿದ್ದ. ಪೋಸ್ಟ್ ನೋಡಿ ನಂಬುತ್ತಿದ್ದ ಆಭ್ಯರ್ಥಿಗಳು ತಮ್ಮ‌ ಪ್ರೊಫೈಲ್ ಕಳುಹಿಸುತ್ತಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಳಿಕ ಫೋನ್​​ ನಂಬರ್ ಪಡೆದು ಆನ್​ಲೈನ್​​​ನಲ್ಲಿ ಸಂದರ್ಶನ ನಡೆಸುತ್ತಿದ್ದ. ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಹಣ ಖರ್ಚಾಗಲಿದೆ ಎಂದು ಹೇಳಿ ನಿರುದ್ಯೋಗಿಗಳಿಂದ ಸಾವಿರಾರು ರೂ. ಪಡೆಯುತ್ತಿದ್ದ‌. ಬಳಿಕ ಐಬಿಎಂ ಕಂಪನಿಯ ಹೆಸರಿನ ನಕಲಿ ಲೋಗೊ, ಆಫರ್‌ ಲೇಟರ್ ಕಳುಹಿಸಿ ಮಾನ್ಯತಾ ಟೆಕ್ ಪಾರ್ಕ್​ನಲ್ಲಿರುವ ಐಬಿಎಂ ಕಂಪನಿಯ ಹೆಚ್​​ಆರ್(HR) ಪ್ರದೀಪ್​​ ನನ್ನು ಸಂಪರ್ಕಿಸಿ ಎಂದು ಹೇಳಿ ಬಳಿಕ ಆರೋಪಿ‌ ಮೊಬೈಲ್ ಸ್ವಿಚ್ಡ್​​ ಆಫ್ ಮಾಡಿಕೊಂಡು ವಂಚಿಸುತ್ತಿದ್ದ ಎನ್ನಲಾಗ್ತಿದೆ.

ಇತ್ತ ಹಣ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದ ಅಭ್ಯರ್ಥಿಗಳು ಐಬಿಎಂ‌ ಕಂಪನಿಗೆ ಹೋಗಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ‌. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಂಪಿಗೆಹಳ್ಳಿ‌ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ವಿಚಾರಣೆಗೊಳಪಡಿಸಿದಾಗ ಆರೋಪಿ ಈವರೆಗೆ 40ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಾಣೆಯಾಗಿದ್ದ ಬಸ್ ಮಾಲೀಕ ಶವವಾಗಿ ಪತ್ತೆ: ಸಾಲಬಾಧೆಯಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಕೆಲಸ‌ ಕೊಡಿಸುವುದಾಗಿ ಸಂದರ್ಶನ ನಡೆಸಿ, ಪ್ರತಿಷ್ಠಿತ ಐಬಿಎಂ ಕಂಪನಿ ನಕಲಿ ಆಫರ್ ಲೇಟರ್ ನೀಡಿ ಉದ್ಯೋಗಾಂಕ್ಷಿಗಳಿಂದ ಲಕ್ಷಾಂತರ ರೂ.ಪಡೆದು ವಂಚಿಸುತ್ತಿದ್ದ‌ ಆರೋಪಿಯನ್ನು ಸಂಪಿಗೆಹಳ್ಳಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಪುಣೆ ಮೂಲದ ಸಂಜೀವ್ ಗಂಗರಾಮ್ ಗೋರ್ಖಾ ಬಂಧಿತ ಆರೋಪಿ‌. ಈತ ಒಎಲ್​​ಎಕ್ಸ್ ನಲ್ಲಿ ಐಬಿಎಂ ಕಂಪನಿಯಲ್ಲಿ ಕೆಲಸ ಖಾಲಿ‌ಯಿದೆ‌. ಆಸಕ್ತ ಅರ್ಹ ಅರ್ಭ್ಯರ್ಥಿಗಳು ಸಂಪರ್ಕಿಸಿ ಎಂದು ಪೋಸ್ಟ್ ಹಾಕುತ್ತಿದ್ದ. ಪೋಸ್ಟ್ ನೋಡಿ ನಂಬುತ್ತಿದ್ದ ಆಭ್ಯರ್ಥಿಗಳು ತಮ್ಮ‌ ಪ್ರೊಫೈಲ್ ಕಳುಹಿಸುತ್ತಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಳಿಕ ಫೋನ್​​ ನಂಬರ್ ಪಡೆದು ಆನ್​ಲೈನ್​​​ನಲ್ಲಿ ಸಂದರ್ಶನ ನಡೆಸುತ್ತಿದ್ದ. ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಹಣ ಖರ್ಚಾಗಲಿದೆ ಎಂದು ಹೇಳಿ ನಿರುದ್ಯೋಗಿಗಳಿಂದ ಸಾವಿರಾರು ರೂ. ಪಡೆಯುತ್ತಿದ್ದ‌. ಬಳಿಕ ಐಬಿಎಂ ಕಂಪನಿಯ ಹೆಸರಿನ ನಕಲಿ ಲೋಗೊ, ಆಫರ್‌ ಲೇಟರ್ ಕಳುಹಿಸಿ ಮಾನ್ಯತಾ ಟೆಕ್ ಪಾರ್ಕ್​ನಲ್ಲಿರುವ ಐಬಿಎಂ ಕಂಪನಿಯ ಹೆಚ್​​ಆರ್(HR) ಪ್ರದೀಪ್​​ ನನ್ನು ಸಂಪರ್ಕಿಸಿ ಎಂದು ಹೇಳಿ ಬಳಿಕ ಆರೋಪಿ‌ ಮೊಬೈಲ್ ಸ್ವಿಚ್ಡ್​​ ಆಫ್ ಮಾಡಿಕೊಂಡು ವಂಚಿಸುತ್ತಿದ್ದ ಎನ್ನಲಾಗ್ತಿದೆ.

ಇತ್ತ ಹಣ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದ ಅಭ್ಯರ್ಥಿಗಳು ಐಬಿಎಂ‌ ಕಂಪನಿಗೆ ಹೋಗಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ‌. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಂಪಿಗೆಹಳ್ಳಿ‌ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ವಿಚಾರಣೆಗೊಳಪಡಿಸಿದಾಗ ಆರೋಪಿ ಈವರೆಗೆ 40ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಾಣೆಯಾಗಿದ್ದ ಬಸ್ ಮಾಲೀಕ ಶವವಾಗಿ ಪತ್ತೆ: ಸಾಲಬಾಧೆಯಿಂದ ಆತ್ಮಹತ್ಯೆ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.