ETV Bharat / state

ಬಜೆಟ್​ಗೆ 10 ರಲ್ಲಿ 8 ಅಂಕ ಕೊಡಬಹುದು: ಎಫ್‌ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ

author img

By

Published : Jul 7, 2023, 5:26 PM IST

ಈ ಬಜೆಟ್​ನಲ್ಲಿ ಯಾವುದೇ ತೆರಿಗೆ ಹೇರಿಕೆ ಮಾಡಿಲ್ಲ. ಆದರೆ, ಗೈಡ್​ಲೈನ್ಸ್ ವಾಲ್ಯೂ ಮಾತ್ರ ಜಾಸ್ತಿ ಮಾಡಿದ್ದಾರೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ ಅವರು ತಿಳಿಸಿದ್ದಾರೆ.

ಎಫ್‌ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ
ಎಫ್‌ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ
ಎಫ್‌ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ

ಬೆಂಗಳೂರು : ಹೊಸ ತೆರಿಗೆ ಯಾವುದೇ ಜಾರಿ ಮಾಡಿಲ್ಲ. ಹೀಗಾಗಿ ಜನರಿಗೆ ಹೊರೆಯಾಗುವ ಸಾಧ್ಯತೆ ಇಲ್ಲ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್‌ಕೆಸಿಸಿಐ) ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಬಜೆಟ್​ ಮಂಡನೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಎಂ.ಎಸ್.ಎಂ.ಇ ಕ್ಲಸ್ಟರ್ ಮಾಡಲು ಬಜೆಟ್​ನಲ್ಲಿ ಒತ್ತು ಕೊಡಲಾಗಿದೆ. ಸಿಎಂ ಸಿದ್ದರಾಮಯ್ಯ ಬಜೆಟ್​ಗೆ 10 ರಲ್ಲಿ 8 ಅಂಕ ಕೊಡಬಹುದು ಎಂದಿದ್ದಾರೆ.

9% ನಿಂದ 3%ಗೆ ಇಂಧನ ತೆರಿಗೆ ಇಳಿಸಿ ಎಂದು ಕೇಳಿಕೊಂಡಿದ್ದೆವು. ಅದರ ಬಗ್ಗೆ ಯಾವುದೇ ಉಲ್ಲೇಖ ಬಜೆಟ್​ನಲ್ಲಿ ಇಲ್ಲ. ಕೈಗಾರಿಕೆಗಳಿಗಾಗಿಯೇ ವಿಶೇಷವಾದ ಪೋರ್ಟಲ್ ರಚನೆಗೆ ಕೇಳಿಕೊಂಡಿದ್ದೆವು. ಅದನ್ನು ಈಡೇರಿಸಲಾಗಿಲ್ಲ. ಎಪಿಎಂಸಿ ಕಾಯ್ದೆಯನ್ನೂ ಸರಳೀಕರಣಗೊಳಿಸಲು ಬೇಡಿಕೆಯಿತ್ತು. ಅದೂ ಈಡೇರಿಸಿಲ್ಲ ಎಂದು ಹೇಳಿದರು.

ಈ ಬಜೆಟ್​ನಲ್ಲಿ ಯಾವುದೇ ತೆರಿಗೆ ಹೇರಿಕೆ ಮಾಡಿಲ್ಲ. ಆದರೆ ಗೈಡ್​ಲೈನ್ಸ್ ವಾಲ್ಯೂ ಮಾತ್ರ ಜಾಸ್ತಿ ಮಾಡಿದ್ದಾರೆ. ಟ್ರೇಡ್ ಲೈಸೆನ್ಸ್ ತೆಗೆದು ಹಾಕಲು ಮನವಿ ಮಾಡಿದ್ದೆವು. ಅದನ್ನೂ ಈಡೇರಿಸಿಲ್ಲ. ಜಿಎಸ್​ಟಿ, ಎಪಿಎಂಸಿ ಸೇರಿದಂತೆ ವ್ಯಾಪಾರಗಳಿಗೆ ಹಲವು ರಿಜಿಸ್ಟ್ರೇಷನ್ ಇರುತ್ತದೆ. ಇದರ ಜೊತೆಗೆ ಟ್ರೇಡ್ ಲೈಸೆನ್ಸ್ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

ನಮ್ಮ ನಿಯೋಗ ಸಿಎಂ ಬಳಿ ತೆರಳಲಿದೆ: ಈ ಬಜೆಟ್​ನ ನಂತರ ಎಲ್ಲವನ್ನು ಲೆಕ್ಕಾಚಾರ ಮಾಡುತ್ತೇವೆ. ನಂತರ ಈ ಬಜೆಟ್​ನಲ್ಲಿ ನಮಗೆ ಎಷ್ಟು ಅನುದಾನವನ್ನು ಕೊಡಬೇಕು ಎಂಬುದರ ಬಗ್ಗೆ ಸಿಎಂ ಬಳಿ ಮಾತನಾಡಿದ್ದೆವೋ. ಯಾವುದನ್ನು ಸಿಎಂ ಘೋಷಣೆ ಮಾಡಿಲ್ಲವೋ. ಆ ವಿಚಾರದ ಕುರಿತು ಮುಂದಿನ ದಿನಗಳಲ್ಲಿ ನಮ್ಮ ನಿಯೋಗ ಸಿಎಂ ಬಳಿ ತೆರಳಿ ಚರ್ಚಿಸಲಿದೆ. ಅದರ ಬಗ್ಗೆ ಪರಿಹಾರವನ್ನು ಕಂಡುಕೊಳ್ಳಲಿದೆ ಎಂದರು.

ಎಪಿಎಂಸಿ ಕಾಯ್ದೆಯ ಬಗ್ಗೆ ಮಾತನಾಡಿದ ಅವರು, ಈ ಹಿಂದೆ ಎಪಿಎಂಸಿ ಮಾರುಕಟ್ಟೆಯಿಂದ ಹೊರಗೆ ವ್ಯಾಪಾರ ಮಾಡುತ್ತಿದ್ದವರಿಗೆ ಯಾವುದೇ ರೂಲ್ಸ್​ ಅಂಡ್​ ರೆಗ್ಯುಲೇಷನ್ ಇರಲಿಲ್ಲ. ಸ್ಟ್ರೇಸ್ ಇರಲಿಲ್ಲ. ಅವರಿಗೆ ಸ್ವತಂತ್ರವಿತ್ತು. ಮಾರುಕಟ್ಟೆ ಫೀಸ್​ ಇರಲಿಲ್ಲ. ಆದರೆ ಎಪಿಎಂಸಿ ಒಳಗೆ ವ್ಯಾಪಾರ ಮಾಡುತ್ತಿರುವವರಿಗೆ ಬಹಳ ಅನಾನುಕೂಲವಿದೆ. ಅವರು ರಿಜಿಸ್ಟ್ರೇಷನ್ಸ್. ರೂಲ್ಸ್​ ಅಂಡ್​ ರೆಗ್ಯುಲೇಷನ್ಸ್​. ಎಲ್ಲ ಕಾಯ್ದೆಗಳನ್ನು ಅನುಸರಿಸಬೇಕಿತ್ತು. ಅವರಿಗೆ ಎಲ್ಲಾ ಕಾಯ್ದೆಗಳು ಅನ್ವಯಿಸುತ್ತಿತ್ತು.

ಇದನ್ನೂ ಓದಿ: Karnataka Budget: ಬ್ರ್ಯಾಂಡ್​ ಬೆಂಗಳೂರಿಗೆ ಹಲವು ಕ್ರಮಗಳು; ತ್ಯಾಜ್ಯ, ಸಾರಿಗೆ ಸಮಸ್ಯೆ ನಿವಾರಣೆಗೆ ಒತ್ತು

ಇಬ್ಬರಿಗೂ ಒಂದೇ ಕಾನೂನು ಇರಬೇಕು: ಈಚೆ ಕಡೆ ವ್ಯಾಪಾರ ಮಾಡುವವರಿಗೆ ಈ ಕಾಯ್ದೆಗಳೇ ಇರಲಿಲ್ಲ. ಆದ್ದರಿಂದ ತೆರಿಗೆ ಸಂಪೂರ್ಣ ಕಡಿಮೆಯಾಗಿತ್ತು. ತೆರಿಗೆ ದರ 600 ಕೋಟಿಯಿಂದ 180 ಕೋಟಿಗೆ ಬಂದಿದೆ ಎಂದಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು ಎಂದರು. ಇಬ್ಬರಿಗೂ ಒಂದೇ ಕಾನೂನು ಇರಬೇಕು. ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಕಾನೂನು ಇರುವುದು ಸರಿಯಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಲೆಕ್ಕ: ಆದಾಯ ಸಂಗ್ರಹಕ್ಕೆ ಹೆಚ್ಚು ಒತ್ತು,ಆದಾಯ ಕೊರತೆಯ ಬಜೆಟ್​...₹85,818 ಕೋಟಿ ಸಾಲದ ಮೊರೆ

ಎಫ್‌ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ

ಬೆಂಗಳೂರು : ಹೊಸ ತೆರಿಗೆ ಯಾವುದೇ ಜಾರಿ ಮಾಡಿಲ್ಲ. ಹೀಗಾಗಿ ಜನರಿಗೆ ಹೊರೆಯಾಗುವ ಸಾಧ್ಯತೆ ಇಲ್ಲ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್‌ಕೆಸಿಸಿಐ) ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಬಜೆಟ್​ ಮಂಡನೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಎಂ.ಎಸ್.ಎಂ.ಇ ಕ್ಲಸ್ಟರ್ ಮಾಡಲು ಬಜೆಟ್​ನಲ್ಲಿ ಒತ್ತು ಕೊಡಲಾಗಿದೆ. ಸಿಎಂ ಸಿದ್ದರಾಮಯ್ಯ ಬಜೆಟ್​ಗೆ 10 ರಲ್ಲಿ 8 ಅಂಕ ಕೊಡಬಹುದು ಎಂದಿದ್ದಾರೆ.

9% ನಿಂದ 3%ಗೆ ಇಂಧನ ತೆರಿಗೆ ಇಳಿಸಿ ಎಂದು ಕೇಳಿಕೊಂಡಿದ್ದೆವು. ಅದರ ಬಗ್ಗೆ ಯಾವುದೇ ಉಲ್ಲೇಖ ಬಜೆಟ್​ನಲ್ಲಿ ಇಲ್ಲ. ಕೈಗಾರಿಕೆಗಳಿಗಾಗಿಯೇ ವಿಶೇಷವಾದ ಪೋರ್ಟಲ್ ರಚನೆಗೆ ಕೇಳಿಕೊಂಡಿದ್ದೆವು. ಅದನ್ನು ಈಡೇರಿಸಲಾಗಿಲ್ಲ. ಎಪಿಎಂಸಿ ಕಾಯ್ದೆಯನ್ನೂ ಸರಳೀಕರಣಗೊಳಿಸಲು ಬೇಡಿಕೆಯಿತ್ತು. ಅದೂ ಈಡೇರಿಸಿಲ್ಲ ಎಂದು ಹೇಳಿದರು.

ಈ ಬಜೆಟ್​ನಲ್ಲಿ ಯಾವುದೇ ತೆರಿಗೆ ಹೇರಿಕೆ ಮಾಡಿಲ್ಲ. ಆದರೆ ಗೈಡ್​ಲೈನ್ಸ್ ವಾಲ್ಯೂ ಮಾತ್ರ ಜಾಸ್ತಿ ಮಾಡಿದ್ದಾರೆ. ಟ್ರೇಡ್ ಲೈಸೆನ್ಸ್ ತೆಗೆದು ಹಾಕಲು ಮನವಿ ಮಾಡಿದ್ದೆವು. ಅದನ್ನೂ ಈಡೇರಿಸಿಲ್ಲ. ಜಿಎಸ್​ಟಿ, ಎಪಿಎಂಸಿ ಸೇರಿದಂತೆ ವ್ಯಾಪಾರಗಳಿಗೆ ಹಲವು ರಿಜಿಸ್ಟ್ರೇಷನ್ ಇರುತ್ತದೆ. ಇದರ ಜೊತೆಗೆ ಟ್ರೇಡ್ ಲೈಸೆನ್ಸ್ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

ನಮ್ಮ ನಿಯೋಗ ಸಿಎಂ ಬಳಿ ತೆರಳಲಿದೆ: ಈ ಬಜೆಟ್​ನ ನಂತರ ಎಲ್ಲವನ್ನು ಲೆಕ್ಕಾಚಾರ ಮಾಡುತ್ತೇವೆ. ನಂತರ ಈ ಬಜೆಟ್​ನಲ್ಲಿ ನಮಗೆ ಎಷ್ಟು ಅನುದಾನವನ್ನು ಕೊಡಬೇಕು ಎಂಬುದರ ಬಗ್ಗೆ ಸಿಎಂ ಬಳಿ ಮಾತನಾಡಿದ್ದೆವೋ. ಯಾವುದನ್ನು ಸಿಎಂ ಘೋಷಣೆ ಮಾಡಿಲ್ಲವೋ. ಆ ವಿಚಾರದ ಕುರಿತು ಮುಂದಿನ ದಿನಗಳಲ್ಲಿ ನಮ್ಮ ನಿಯೋಗ ಸಿಎಂ ಬಳಿ ತೆರಳಿ ಚರ್ಚಿಸಲಿದೆ. ಅದರ ಬಗ್ಗೆ ಪರಿಹಾರವನ್ನು ಕಂಡುಕೊಳ್ಳಲಿದೆ ಎಂದರು.

ಎಪಿಎಂಸಿ ಕಾಯ್ದೆಯ ಬಗ್ಗೆ ಮಾತನಾಡಿದ ಅವರು, ಈ ಹಿಂದೆ ಎಪಿಎಂಸಿ ಮಾರುಕಟ್ಟೆಯಿಂದ ಹೊರಗೆ ವ್ಯಾಪಾರ ಮಾಡುತ್ತಿದ್ದವರಿಗೆ ಯಾವುದೇ ರೂಲ್ಸ್​ ಅಂಡ್​ ರೆಗ್ಯುಲೇಷನ್ ಇರಲಿಲ್ಲ. ಸ್ಟ್ರೇಸ್ ಇರಲಿಲ್ಲ. ಅವರಿಗೆ ಸ್ವತಂತ್ರವಿತ್ತು. ಮಾರುಕಟ್ಟೆ ಫೀಸ್​ ಇರಲಿಲ್ಲ. ಆದರೆ ಎಪಿಎಂಸಿ ಒಳಗೆ ವ್ಯಾಪಾರ ಮಾಡುತ್ತಿರುವವರಿಗೆ ಬಹಳ ಅನಾನುಕೂಲವಿದೆ. ಅವರು ರಿಜಿಸ್ಟ್ರೇಷನ್ಸ್. ರೂಲ್ಸ್​ ಅಂಡ್​ ರೆಗ್ಯುಲೇಷನ್ಸ್​. ಎಲ್ಲ ಕಾಯ್ದೆಗಳನ್ನು ಅನುಸರಿಸಬೇಕಿತ್ತು. ಅವರಿಗೆ ಎಲ್ಲಾ ಕಾಯ್ದೆಗಳು ಅನ್ವಯಿಸುತ್ತಿತ್ತು.

ಇದನ್ನೂ ಓದಿ: Karnataka Budget: ಬ್ರ್ಯಾಂಡ್​ ಬೆಂಗಳೂರಿಗೆ ಹಲವು ಕ್ರಮಗಳು; ತ್ಯಾಜ್ಯ, ಸಾರಿಗೆ ಸಮಸ್ಯೆ ನಿವಾರಣೆಗೆ ಒತ್ತು

ಇಬ್ಬರಿಗೂ ಒಂದೇ ಕಾನೂನು ಇರಬೇಕು: ಈಚೆ ಕಡೆ ವ್ಯಾಪಾರ ಮಾಡುವವರಿಗೆ ಈ ಕಾಯ್ದೆಗಳೇ ಇರಲಿಲ್ಲ. ಆದ್ದರಿಂದ ತೆರಿಗೆ ಸಂಪೂರ್ಣ ಕಡಿಮೆಯಾಗಿತ್ತು. ತೆರಿಗೆ ದರ 600 ಕೋಟಿಯಿಂದ 180 ಕೋಟಿಗೆ ಬಂದಿದೆ ಎಂದಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು ಎಂದರು. ಇಬ್ಬರಿಗೂ ಒಂದೇ ಕಾನೂನು ಇರಬೇಕು. ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಕಾನೂನು ಇರುವುದು ಸರಿಯಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಲೆಕ್ಕ: ಆದಾಯ ಸಂಗ್ರಹಕ್ಕೆ ಹೆಚ್ಚು ಒತ್ತು,ಆದಾಯ ಕೊರತೆಯ ಬಜೆಟ್​...₹85,818 ಕೋಟಿ ಸಾಲದ ಮೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.