ETV Bharat / state

ಯಲಹಂಕ ಅನಿಲ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ಅವಘಡ: 15 ಎಂಜಿನಿಯರ್​ಗಳಿಗೆ ಗಾಯ! - ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಸುದ್ದಿ,

ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ (ವೈಸಿಸಿಪಿಪಿ) ಅಗ್ನಿ ಅವಘಡ ಸಂಭವಿಸಿ 15 ಎಂಜಿನಿಯರ್​ಗಳು ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

Fire incident in Yalahanka Gas based power plant, Fire incident in Yalahanka, Yalahanka Gas based power plant, Yalahanka Gas based power plant news, Yalahanka Gas based power plant fire news, ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ಅವಘಡ, ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ, ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಸುದ್ದಿ, ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ಸುದ್ದಿ,
ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ಅವಘಡ
author img

By

Published : Oct 2, 2020, 2:16 PM IST

ಯಲಹಂಕ: ಮುಂಜಾನೆ 3-30ರ ಸಮಯದಲ್ಲಿ ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ 15 ಎಂಜಿನಿಯರ್​ಗಳಿಗೆ ಸುಟ್ಟು ಗಾಯಗಳಾಗಿವೆ.

ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ಅವಘಡ

ಯಲಹಂಕದ ದೊಡ್ಡಬಳ್ಳಾಪುರ ರಸ್ತೆಯ ಅನಂತ್​ಪುರ ಗೇಟ್ ಮುಂಭಾಗದ ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಈ ಘಟನೆ ನಡೆದಿದೆ. 370 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕ ಒಂದರ ಕಾರ್ಯಾಚರಣೆ ನಡೆಸುವ ವೇಳೆ ಈ ಅನಾಹುತ ಸಂಭವಿಸಿದೆ.

ಈ ದುರ್ಘಟನೆಯಲ್ಲಿ 15 ಎಂಜಿನಿಯರ್​ಗಳು ಗಾಯಗೊಂಡಿದ್ದು, ಗಾಯಾಳುಗಳನ್ನ ತಕ್ಷಣವೇ ಸಮೀಪದ ಕೊಲಂಬಿಯಾ ಏಷಿಯಾ, ಮಲ್ಲಿಗೆ, ರಾಮಯ್ಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಇನ್ನು ಈ ಗಾಯಾಳುಗಳಲ್ಲಿ ಕೆಪಿಸಿಎಲ್​ನ 11, ಬಿಹೆಚ್​ಇಎಲ್ ಹಾಗೂ ಜಿಇ ಕಂಪನಿಯ ತಲಾ ಇಬ್ಬರು ಎಂಜಿನಿಯರ್​ಗಳಿದ್ದಾರೆ. ಗಾಯಾಗೊಂಡವರನ್ನು ಹೆಚ್.ಎನ್.ಶ್ರೀನಿವಾಸ್, ಕೃಷ್ಣಾ ಭಟ್, ಮನೋಜ್, ನಿತೀಶ್, ನರಸಿಂಹಮೂರ್ತಿ, ಹರೀಶ್, ಅಕುಲ್ ರಾಘುರಾಮ್, ಶ್ರೀನಿವಾಸ್, ಅಶೋಕ್, ಡಿ.ಪಿ.ಶ್ರೀನಿವಾಸನ್, ಮಂಜಪ್ಪ, ಅಶ್ವಥ್ ನಾರಾಯಣ್, ರವಿ ಕೆ.ಪಿ., ಬಾಲರಾಜ್ ಎಂದು ಗುರುತಿಸಲಾಗಿದೆ.

ಯಲಹಂಕ ಉಪನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಯಲಹಂಕ: ಮುಂಜಾನೆ 3-30ರ ಸಮಯದಲ್ಲಿ ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ 15 ಎಂಜಿನಿಯರ್​ಗಳಿಗೆ ಸುಟ್ಟು ಗಾಯಗಳಾಗಿವೆ.

ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ಅವಘಡ

ಯಲಹಂಕದ ದೊಡ್ಡಬಳ್ಳಾಪುರ ರಸ್ತೆಯ ಅನಂತ್​ಪುರ ಗೇಟ್ ಮುಂಭಾಗದ ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಈ ಘಟನೆ ನಡೆದಿದೆ. 370 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕ ಒಂದರ ಕಾರ್ಯಾಚರಣೆ ನಡೆಸುವ ವೇಳೆ ಈ ಅನಾಹುತ ಸಂಭವಿಸಿದೆ.

ಈ ದುರ್ಘಟನೆಯಲ್ಲಿ 15 ಎಂಜಿನಿಯರ್​ಗಳು ಗಾಯಗೊಂಡಿದ್ದು, ಗಾಯಾಳುಗಳನ್ನ ತಕ್ಷಣವೇ ಸಮೀಪದ ಕೊಲಂಬಿಯಾ ಏಷಿಯಾ, ಮಲ್ಲಿಗೆ, ರಾಮಯ್ಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಇನ್ನು ಈ ಗಾಯಾಳುಗಳಲ್ಲಿ ಕೆಪಿಸಿಎಲ್​ನ 11, ಬಿಹೆಚ್​ಇಎಲ್ ಹಾಗೂ ಜಿಇ ಕಂಪನಿಯ ತಲಾ ಇಬ್ಬರು ಎಂಜಿನಿಯರ್​ಗಳಿದ್ದಾರೆ. ಗಾಯಾಗೊಂಡವರನ್ನು ಹೆಚ್.ಎನ್.ಶ್ರೀನಿವಾಸ್, ಕೃಷ್ಣಾ ಭಟ್, ಮನೋಜ್, ನಿತೀಶ್, ನರಸಿಂಹಮೂರ್ತಿ, ಹರೀಶ್, ಅಕುಲ್ ರಾಘುರಾಮ್, ಶ್ರೀನಿವಾಸ್, ಅಶೋಕ್, ಡಿ.ಪಿ.ಶ್ರೀನಿವಾಸನ್, ಮಂಜಪ್ಪ, ಅಶ್ವಥ್ ನಾರಾಯಣ್, ರವಿ ಕೆ.ಪಿ., ಬಾಲರಾಜ್ ಎಂದು ಗುರುತಿಸಲಾಗಿದೆ.

ಯಲಹಂಕ ಉಪನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.