ETV Bharat / state

ಕುಡಿದು ಬಂದು ಕಾಡುತ್ತಿದ್ದ ಮಗನಿಗೆ 'ಅಂತ್ಯ' ಹಾಡಿದ ತಂದೆ!

author img

By

Published : Feb 26, 2021, 7:43 PM IST

ನಿತ್ಯವೂ ಕುಡಿದು ಬಂದು ಪೋಷಕರೊಂದಿಗೆ ಜಗಳವಾಡುತ್ತಿದ್ದ ಮಗನನ್ನು ಸ್ವತಃ ತಂದೆಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

hussen
ಹುಸೇನ್

ಬೆಂಗಳೂರು: ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನು ಸ್ವತಃ ತಂದೆಯೇ ಕೊಲೆ ಮಾಡಿರುವ ಘಟನೆ ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ಅಬ್ಬಿಗೆರೆ ‌ನಿವಾಸಿ ಹುಸೇನ್ (68) ಬಂಧಿತ (ತಂದೆ) ಆರೋಪಿ. ಬಾಬರ್ (30) ಕೊಲೆಯಾದ (ಮಗ) ವ್ಯಕ್ತಿ.‌ ಅಬ್ಬಿಗೆರೆಯಲ್ಲಿ ವಾಸ ಮಾಡುತ್ತಿದ್ದ ಹುಸೇನ್​ಗೆ ಒಬ್ಬನೇ ಮಗನಿದ್ದು, ಪತ್ನಿ ಗೃಹಿಣಿಯಾಗಿದ್ದಾರೆ. ಜೀವನಕ್ಕಾಗಿ ಹುಸೇನ್ ಸೆಕ್ಯೂರಿಟಿ ಕೆಲಸ ಮಾಡಿದರೆ, ಮಗ ಬಾಬರ್ ಗಾರೆ ಕೆಲಸ‌ ಮಾಡುತ್ತಿದ್ದ. ಇದರ ನಡುವೆ ಕುಡಿತದ ಚಟ ಅಂಟಿಸಿಕೊಂಡಿದ್ದ ಮಗ ನಿತ್ಯವೂ‌ ಕುಡಿದು ಬಂದು ಪೋಷಕರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ಓದಿ: ಪತ್ನಿ, ನಾದಿನಿ ಕೊಲೆ: ಖ್ಯಾತ ವೀಣಾ ವಾದಕ ಚಂದ್ರಶೇಖರ್​ಗೆ ಜೀವಾವಧಿ ಶಿಕ್ಷೆ

ಏನಾಯ್ತು? ಇದೇ ರೀತಿ ನಿನ್ನೆ ಸಂಜೆ ಸಹ ಬಾಬರ್​ ಕುಡಿದು ಬಂದಿದ್ದಾನೆ. ಈ ವೇಳೆ‌ ಕ್ಷುಲ್ಲಕ ಕಾರಣಕ್ಕಾಗಿ ತಂದೆ ವಿರುದ್ಧ ತಿರುಗಿ ಬಿದ್ದಿದ್ದಾನೆ. ನಂತರ ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಮನೆಯಲ್ಲಿದ್ದ ಕೊಡಲಿಯನ್ನು ಕೈಗೆತ್ತಿಕೊಂಡ ತಂದೆ ಮಗನ ತಲೆಗೆ ಹೊಡೆದಿದ್ದಾರೆ. ಪರಿಣಾಮ ಆತನ ತಲೆಯಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದು ಗಂಗಮ್ಮನ ಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು: ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನು ಸ್ವತಃ ತಂದೆಯೇ ಕೊಲೆ ಮಾಡಿರುವ ಘಟನೆ ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ಅಬ್ಬಿಗೆರೆ ‌ನಿವಾಸಿ ಹುಸೇನ್ (68) ಬಂಧಿತ (ತಂದೆ) ಆರೋಪಿ. ಬಾಬರ್ (30) ಕೊಲೆಯಾದ (ಮಗ) ವ್ಯಕ್ತಿ.‌ ಅಬ್ಬಿಗೆರೆಯಲ್ಲಿ ವಾಸ ಮಾಡುತ್ತಿದ್ದ ಹುಸೇನ್​ಗೆ ಒಬ್ಬನೇ ಮಗನಿದ್ದು, ಪತ್ನಿ ಗೃಹಿಣಿಯಾಗಿದ್ದಾರೆ. ಜೀವನಕ್ಕಾಗಿ ಹುಸೇನ್ ಸೆಕ್ಯೂರಿಟಿ ಕೆಲಸ ಮಾಡಿದರೆ, ಮಗ ಬಾಬರ್ ಗಾರೆ ಕೆಲಸ‌ ಮಾಡುತ್ತಿದ್ದ. ಇದರ ನಡುವೆ ಕುಡಿತದ ಚಟ ಅಂಟಿಸಿಕೊಂಡಿದ್ದ ಮಗ ನಿತ್ಯವೂ‌ ಕುಡಿದು ಬಂದು ಪೋಷಕರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.

ಓದಿ: ಪತ್ನಿ, ನಾದಿನಿ ಕೊಲೆ: ಖ್ಯಾತ ವೀಣಾ ವಾದಕ ಚಂದ್ರಶೇಖರ್​ಗೆ ಜೀವಾವಧಿ ಶಿಕ್ಷೆ

ಏನಾಯ್ತು? ಇದೇ ರೀತಿ ನಿನ್ನೆ ಸಂಜೆ ಸಹ ಬಾಬರ್​ ಕುಡಿದು ಬಂದಿದ್ದಾನೆ. ಈ ವೇಳೆ‌ ಕ್ಷುಲ್ಲಕ ಕಾರಣಕ್ಕಾಗಿ ತಂದೆ ವಿರುದ್ಧ ತಿರುಗಿ ಬಿದ್ದಿದ್ದಾನೆ. ನಂತರ ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಮನೆಯಲ್ಲಿದ್ದ ಕೊಡಲಿಯನ್ನು ಕೈಗೆತ್ತಿಕೊಂಡ ತಂದೆ ಮಗನ ತಲೆಗೆ ಹೊಡೆದಿದ್ದಾರೆ. ಪರಿಣಾಮ ಆತನ ತಲೆಯಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದು ಗಂಗಮ್ಮನ ಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.