ETV Bharat / state

ಸಾಲ ಮಂಜೂರಾತಿಗೆ ಶಾಸಕರ ನಕಲಿ ಲೆಟರ್‌ಹೆಡ್ ಬಳಕೆ: ಇಬ್ಬರ ಬಂಧನ

author img

By

Published : Oct 24, 2019, 9:44 AM IST

ಮಾಯಕೊಂಡ ಶಾಸಕ ಎನ್.ನಿಂಗಣ್ಣ ಅವರ ಲೆಟರ್​ಹೆಡ್​ ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು

ಬೆಂಗಳೂರು: ಶಾಸಕರೊಬ್ಬರ ಲೆಟರ್‌ಹೆಡ್ ನಕಲು ಮಾಡಿ ಅಂಬೇಡ್ಕರ್ ನಿಗಮದಲ್ಲಿ ಸಾಲ ಮಂಜೂರು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ತಿಪ್ಪೇಸ್ವಾಮಿ ಮತ್ತು ತಿರುಮಲೇಶ್ ಬಂಧಿತ ಆರೋಪಿಗಳು.

ಈ ಆರೋಪಿಗಳು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ನಿಂಗಣ್ಣ ಅವರ ಲೆಟರ್‌ಹೆಡ್‌ ನಕಲು ಮಾಡಿದ್ದಾರೆ. ಶಾಸಕರು ಒಮ್ಮೆ ಕೊಟ್ಟ ಲೆಟರ್‌ಹೆಡ್​ ನಕಲು ಮಾಡುತ್ತಿದ್ದ ಖದೀಮರು ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಂಜಾರ ಅಭಿವೃದ್ಧಿ ನಿಗಮಗಳಿಂದ ಸಾಲ ಪಡೆಯುವ ಫಲಾನುಭವಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಶಾಸಕರ ಪತ್ರ ನೋಡಿದ ಕೂಡಲೇ ಅಂಬೇಡ್ಕರ್ ನಿಗಮದಿಂದ ಹಣ ಮಂಜೂರು ಮಾಡಲಾಗುತ್ತಿತ್ತು. ಇದನ್ನೇ ವಂಚಕರು ಬಂಡವಾಳ ಮಾಡಿಕೊಂಡಿದ್ದರಂತೆ. ಲೆಟರ್‌ಹೆಡ್ ನಕಲಿ ಅರಿತ ಶಾಸಕರು ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು: ಶಾಸಕರೊಬ್ಬರ ಲೆಟರ್‌ಹೆಡ್ ನಕಲು ಮಾಡಿ ಅಂಬೇಡ್ಕರ್ ನಿಗಮದಲ್ಲಿ ಸಾಲ ಮಂಜೂರು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ತಿಪ್ಪೇಸ್ವಾಮಿ ಮತ್ತು ತಿರುಮಲೇಶ್ ಬಂಧಿತ ಆರೋಪಿಗಳು.

ಈ ಆರೋಪಿಗಳು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ನಿಂಗಣ್ಣ ಅವರ ಲೆಟರ್‌ಹೆಡ್‌ ನಕಲು ಮಾಡಿದ್ದಾರೆ. ಶಾಸಕರು ಒಮ್ಮೆ ಕೊಟ್ಟ ಲೆಟರ್‌ಹೆಡ್​ ನಕಲು ಮಾಡುತ್ತಿದ್ದ ಖದೀಮರು ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಂಜಾರ ಅಭಿವೃದ್ಧಿ ನಿಗಮಗಳಿಂದ ಸಾಲ ಪಡೆಯುವ ಫಲಾನುಭವಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಶಾಸಕರ ಪತ್ರ ನೋಡಿದ ಕೂಡಲೇ ಅಂಬೇಡ್ಕರ್ ನಿಗಮದಿಂದ ಹಣ ಮಂಜೂರು ಮಾಡಲಾಗುತ್ತಿತ್ತು. ಇದನ್ನೇ ವಂಚಕರು ಬಂಡವಾಳ ಮಾಡಿಕೊಂಡಿದ್ದರಂತೆ. ಲೆಟರ್‌ಹೆಡ್ ನಕಲಿ ಅರಿತ ಶಾಸಕರು ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Intro:Body:ಶಾಸಕರ ನಕಲಿ ಲೆಟರ್ ಹೆಡ್ ಬಳಸಿ ನಿಗಮಗಳಲ್ಲಿ ಸಾಲ ಮಂಜೂರು ಮಾಡಿಸಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳು ಅಂದರ್



ಬೆಂಗಳೂರು: ಶಾಸಕರೊಬ್ಬರ ಲೆಟರ್ ಹೆಡ್ ನಕಲು ಮಾಡಿ ಅಂಬೇಡ್ಕರ್ ನಿಗಮದಲ್ಲಿ ಫಲಾನುಭವಿಗಳಿಗೆ ನಕಲು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ತಿ ತಿಪ್ಪೇಸ್ವಾಮಿ ಮತ್ತು ತಿರುಮಲೇಶ್ ಬಂಧಿತ ಆರೋಪಿಗಳು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ನಿಂಗಣ್ಣ ಅವರ ರೆಡ್ ಲೆಟರ್ ಅನ್ನು ನಕಲು ಮಾಡಿ ಆರೋಪಿಗಳು ಮೋಸ ಮಾಡುತ್ತಿದ್ದರು.
ಶಾಸಕರು ಒಮ್ಮೆ ಕೊಟ್ಟಾ ಲೆಟರ್ ಹೆಡ್ ನ್ನೆ ನಕಲು ಮಾಡಿದ್ದ ಕಿರಾತಕರು ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಬಂಜಾರ ಅಭಿವೃದ್ಧಿ ನಿಗಮಗಳಿಂದ ಸಾಲ ಪಡೆಯುವ ಫಲಾನುಭವಿಗಳೇ ಟಾರ್ಗೆಟ್ ಮಾಡಿಕೊಂಡಿದ್ದರು.
ಫಲಾನುಭವಿಗಳಿಗೆ ಶಾಸಕರ ಲೆಟರ್ ಹೆಡ್ ಗೆ ಶಾಸಕ ನಕಲಿ ಸಹಿ ಮಾಡಿ ಕೊಡ್ತಾ ಇದ್ರು.... ಶಾಸಕರ ಲೆಟರ್ ಹೆಡ್ ನೋಡಿದ ಕೂಡಲೇ ಅಂಬೇಡ್ಕರ್ ನಿಗಮದಿಂದ ಹಣ ಮಂಜೂರು ಮಾಡಲಾಗುತ್ತಿತ್ತು. ಇದನ್ನೇ ವಂಚಕರು ಬಂಡವಾಳ ಮಾಡಿಕೊಂಡಿದ್ದರು. ಲೆಟರ್ ಹೆಡ್ ನಕಲಿ ಅರಿತ ಶಾಸಕರು ಈ ಬಗ್ಗೆ ವಿಧಾನಸೌದ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.