ETV Bharat / state

ಬೆಂಗಳೂರು ನಗರ ಸಂಚಾರ ಪೊಲೀಸ್​​ ಇಲಾಖೆಗೆ ಇ-ಗವರ್ನನ್ಸ್ ಚಾಂಪಿಯನ್ ಪ್ರಶಸ್ತಿ - Bangalore City Traffic Police Department

ಬೆಂಗಳೂರು ನಗರ ಸಂಚಾರ ಪೊಲೀಸ್​​ ವಿಭಾಗವು ರೂಪಿಸಿರುವ 'ಇ-ಚಲನ್' ಯೋಜನೆಗೆ ಇ-ಗವರ್ನನ್ಸ್ ಚಾಂಪಿಯನ್ ಪ್ರಶಸ್ತಿ ಲಭಿಸಿದೆ.

e-governance champion award
ಇ-ಗವರ್ನನ್ಸ್ ಚಾಂಪಿಯನ್ ಪ್ರಶಸ್ತಿ
author img

By

Published : Dec 10, 2021, 6:15 AM IST

ಬೆಂಗಳೂರು: ಎಕ್ಸ್​ಪ್ರೆಸ್ ಕಂಪ್ಯೂಟರ್ ಹಾಗೂ ಇಂಡಿಯನ್ ಎಕ್ಸ್​ಪ್ರೆಸ್ ಸಮೂಹದಿಂದ ನಡೆಸಲಾದ ಸ್ಪರ್ಧೆಯಲ್ಲಿ ಎಂಟರ್‌ಪ್ರೈಸಸ್ ಮೊಬಿಲಿಟಿ ವಿಭಾಗದಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಜಾರಿಗೊಳಿಸಿರುವ 'ಇ ಚಲನ್' ಉಪಕ್ರಮಕ್ಕೆ ಇ-ಗವರ್ನನ್ಸ್​ ಚಾಂಪಿಯನ್ ಪ್ರಶಸ್ತಿ ದೊರಕಿದೆ.

ಸ್ಪರ್ಧೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 23ಕ್ಕೂ ಅಧಿಕ ಇಲಾಖೆಗಳು ಹಾಗೂ ಸಂಸ್ಥೆಗಳು ಸ್ಪರ್ಧಿಸಿದ್ದವು. ಬೆಂಗಳೂರು ಸಂಚಾರ ಪೊಲೀಸ್ ವಿಭಾಗವು ಹಲವು ಜನಸ್ನೇಹಿ ಉಪ್ರಕಮಗಳನ್ನು ಜಾರಿಗೊಳಿಸಿದೆ. ಈ ಪೈಕಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಉಲ್ಲಂಘನೆಯ ವಿವರ ಹಾಗೂ ದಂಡ ಮೊತ್ತದ ಬಗ್ಗೆ ಎಸ್‌ಎಂಎಸ್ ಅಥವಾ ನೋಟಿಸ್ ಮೂಲಕ ವಾಹನ ಮಾಲೀಕರಿಗೆ ತಲುಪಿಸುವುದು ಹಾಗೂ ಆನ್‌ಲೈನ್, ಪೇಟಿಎಂ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ದಂಡ ಪಾವತಿಸಲು ಅನುವಾಗುವಂತೆ ಜಾರಿ ಮಾಡಿರುವ 'ಇ ಚಲನ್' ಉಪಕ್ರಮಕ್ಕೆ ಈ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಸ್ವೀಕರಿಸಲಿರುವ ರವಿಕಾಂತೇಗೌಡ:

ಇಂದು (ಡಿ.10) ನಡೆಯುವ ತಂತ್ರಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇದೇ ವೇಳೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸಂಚಾರ ಪೊಲೀಸ್ ವಿಭಾಗದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ವಿಧಾನಪರಿಷತ್‌ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಎಕ್ಸ್​ಪ್ರೆಸ್ ಕಂಪ್ಯೂಟರ್ ಹಾಗೂ ಇಂಡಿಯನ್ ಎಕ್ಸ್​ಪ್ರೆಸ್ ಸಮೂಹದಿಂದ ನಡೆಸಲಾದ ಸ್ಪರ್ಧೆಯಲ್ಲಿ ಎಂಟರ್‌ಪ್ರೈಸಸ್ ಮೊಬಿಲಿಟಿ ವಿಭಾಗದಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಜಾರಿಗೊಳಿಸಿರುವ 'ಇ ಚಲನ್' ಉಪಕ್ರಮಕ್ಕೆ ಇ-ಗವರ್ನನ್ಸ್​ ಚಾಂಪಿಯನ್ ಪ್ರಶಸ್ತಿ ದೊರಕಿದೆ.

ಸ್ಪರ್ಧೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 23ಕ್ಕೂ ಅಧಿಕ ಇಲಾಖೆಗಳು ಹಾಗೂ ಸಂಸ್ಥೆಗಳು ಸ್ಪರ್ಧಿಸಿದ್ದವು. ಬೆಂಗಳೂರು ಸಂಚಾರ ಪೊಲೀಸ್ ವಿಭಾಗವು ಹಲವು ಜನಸ್ನೇಹಿ ಉಪ್ರಕಮಗಳನ್ನು ಜಾರಿಗೊಳಿಸಿದೆ. ಈ ಪೈಕಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಉಲ್ಲಂಘನೆಯ ವಿವರ ಹಾಗೂ ದಂಡ ಮೊತ್ತದ ಬಗ್ಗೆ ಎಸ್‌ಎಂಎಸ್ ಅಥವಾ ನೋಟಿಸ್ ಮೂಲಕ ವಾಹನ ಮಾಲೀಕರಿಗೆ ತಲುಪಿಸುವುದು ಹಾಗೂ ಆನ್‌ಲೈನ್, ಪೇಟಿಎಂ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ದಂಡ ಪಾವತಿಸಲು ಅನುವಾಗುವಂತೆ ಜಾರಿ ಮಾಡಿರುವ 'ಇ ಚಲನ್' ಉಪಕ್ರಮಕ್ಕೆ ಈ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಸ್ವೀಕರಿಸಲಿರುವ ರವಿಕಾಂತೇಗೌಡ:

ಇಂದು (ಡಿ.10) ನಡೆಯುವ ತಂತ್ರಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇದೇ ವೇಳೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸಂಚಾರ ಪೊಲೀಸ್ ವಿಭಾಗದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ವಿಧಾನಪರಿಷತ್‌ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧ ಎಫ್ಐಆರ್ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.