ETV Bharat / state

ಇನ್ನೂ ಹತ್ತು ವಿಡಿಯೋ ಬಿಟ್ಟರೂ ಹೆದರಲ್ಲ, ನಮಗೂ ವಕೀಲರಿದ್ದಾರೆ; ರಮೇಶ ಜಾರಕಿಹೊಳಿ

author img

By

Published : Mar 26, 2021, 1:46 PM IST

ಇನ್ನೂ ಹತ್ತು ವಿಡಿಯೋ ಬಿಟ್ಟರೂ ನಾನು ಹೆದರುವುದಿಲ್ಲ. ದೂರು ನೀಡುವುದಿದ್ದರೆ ಇಷ್ಟು ದಿನ ಯುವತಿ ಏನು ಮಾಡುತ್ತಿದ್ದಳು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.

Dont care if you leave more than ten videos, Dont care if you leave more than ten videos says Jarkiholi, Ramesh Jarkiholi CD case, Ramesh Jarkiholi CD case news, ಇನ್ನು ಹತ್ತು ವಿಡಿಯೋ ಬಿಟ್ಟರೂ ಹೆದರುವುದಿಲ್ಲ, ಇನ್ನು ಹತ್ತು ವಿಡಿಯೋ ಬಿಟ್ಟರೂ ಹೆದರುವುದಿಲ್ಲ ಎಂದ ಜಾರಕಿಹೊಳಿ, ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ, ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ ಸುದ್ದಿ,
ಇನ್ನು ಹತ್ತು ವಿಡಿಯೋ ಬಿಟ್ಟರೂ ಹೆದರುವುದಿಲ್ಲ ಎಂದ ರಮೇಶ್​ ಜಾರಕಿಹೊಳಿ

ಬೆಂಗಳೂರು: ಇನ್ನೂ ಹತ್ತು ವಿಡಿಯೋ ಬಿಟ್ಟರೂ ನಾನು ಹೆದರುವುದಿಲ್ಲ. ದೂರು ನೀಡುವುದಿದ್ದರೆ ಯುವತಿ ಇಷ್ಟು ದಿನ ಏನು ಮಾಡುತ್ತಿದ್ದಳು? ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಲೇಡಿಯ ಮೂರನೇ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಹತ್ತು ವಿಡಿಯೋ ಬಿಟ್ಟರೂ ಹೆದರುವುದಿಲ್ಲ ಎಂದ ರಮೇಶ್​ ಜಾರಕಿಹೊಳಿ

ಇಂದು ಮಧ್ಯಾಹ್ನ 2.30ಕ್ಕೆ ವಕೀಲ ಜಗದೀಶ್ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸುವುದಾಗಿ ಹೇಳಿರುವ ಕುರಿತು ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ರಮೇಶ ಜಾರಕಿಹೊಳಿ, ಬೆತ್ತಲೆ ಪ್ರದರ್ಶನ ಮಾಡಿದವಳಿಗೆ ಇದೇನು ದೊಡ್ಡದಲ್ಲ. ಅವಳು ವಕೀಲರ ಮೂಲಕ ದೂರು ನೀಡಲಿ. ನಮಗೂ ವಕೀಲರಿದ್ದಾರೆ. ಅವರ ಭೇಟಿಗೆ ಈಗ ತೆರಳುತ್ತೇನೆ ಎಂದರು.

ನಾನೇಕೆ ಜಾಮೀನು ಪಡೆಯಬೇಕು. ಇದು ನನ್ನ ವಿರುದ್ಧದ ಮಹಾ ಷಡ್ಯಂತ್ರ. ದೂರು ಅವತ್ತೇ ನೀಡಬೇಕಿತ್ತು. ಇನ್ನೂ ಬಹಳ ವಿಷಯಗಳು ಹೊರಗೆ ಬರೋದಿದೆ. ಕಾದು ನೋಡಿ ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

ಅವರು ದೂರು ನೀಡಲಿ. ನಾನು ಎದುರಿಸುದೋದಕ್ಕೆ ರೆಡಿ ಇದ್ದೇನೆ. ನನ್ನ ಬಳಿಯೂ ವಕೀಲರಿದ್ದಾರೆ. ಏನೂ ಟೆನ್ಷನ್ ಮಾಡಿಕೊಳ್ಳೋ ಅಗತ್ಯ ಇಲ್ಲ ಎಂದು ಕೂಲ್ ಆಗಿಯೇ ರಮೇಶ್​ ಜಾರಕಿಹೊಳಿ ಉತ್ತರ ನೀಡಿದರು.

ಇಂಥ ಹತ್ತು ವಿಡಿಯೋ ಬಿಡಲಿ. ಕಂಪ್ಲೇಂಟ್ ಕೊಡೋ ಹಾಗಿದ್ರೆ ಮೊದಲೇ ಕೊಡಬೇಕಿತ್ತು. ಎಲ್ಲೋ ಕುಳಿತುಕೊಂಡು ಈಗ ಕಂಪ್ಲೇಂಟ್ ಕೊಡುತ್ತಿದ್ದಾರೆ ಎಂದು ಸಿಡಿ ಗ್ಯಾಂಗ್ ವಿರುದ್ಧ ರಮೇಶ್​ ಜಾರಕಿಹೊಳಿ ಹರಿಹಾಯ್ದರು.

ಬೆಂಗಳೂರು: ಇನ್ನೂ ಹತ್ತು ವಿಡಿಯೋ ಬಿಟ್ಟರೂ ನಾನು ಹೆದರುವುದಿಲ್ಲ. ದೂರು ನೀಡುವುದಿದ್ದರೆ ಯುವತಿ ಇಷ್ಟು ದಿನ ಏನು ಮಾಡುತ್ತಿದ್ದಳು? ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಲೇಡಿಯ ಮೂರನೇ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಹತ್ತು ವಿಡಿಯೋ ಬಿಟ್ಟರೂ ಹೆದರುವುದಿಲ್ಲ ಎಂದ ರಮೇಶ್​ ಜಾರಕಿಹೊಳಿ

ಇಂದು ಮಧ್ಯಾಹ್ನ 2.30ಕ್ಕೆ ವಕೀಲ ಜಗದೀಶ್ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸುವುದಾಗಿ ಹೇಳಿರುವ ಕುರಿತು ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ರಮೇಶ ಜಾರಕಿಹೊಳಿ, ಬೆತ್ತಲೆ ಪ್ರದರ್ಶನ ಮಾಡಿದವಳಿಗೆ ಇದೇನು ದೊಡ್ಡದಲ್ಲ. ಅವಳು ವಕೀಲರ ಮೂಲಕ ದೂರು ನೀಡಲಿ. ನಮಗೂ ವಕೀಲರಿದ್ದಾರೆ. ಅವರ ಭೇಟಿಗೆ ಈಗ ತೆರಳುತ್ತೇನೆ ಎಂದರು.

ನಾನೇಕೆ ಜಾಮೀನು ಪಡೆಯಬೇಕು. ಇದು ನನ್ನ ವಿರುದ್ಧದ ಮಹಾ ಷಡ್ಯಂತ್ರ. ದೂರು ಅವತ್ತೇ ನೀಡಬೇಕಿತ್ತು. ಇನ್ನೂ ಬಹಳ ವಿಷಯಗಳು ಹೊರಗೆ ಬರೋದಿದೆ. ಕಾದು ನೋಡಿ ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

ಅವರು ದೂರು ನೀಡಲಿ. ನಾನು ಎದುರಿಸುದೋದಕ್ಕೆ ರೆಡಿ ಇದ್ದೇನೆ. ನನ್ನ ಬಳಿಯೂ ವಕೀಲರಿದ್ದಾರೆ. ಏನೂ ಟೆನ್ಷನ್ ಮಾಡಿಕೊಳ್ಳೋ ಅಗತ್ಯ ಇಲ್ಲ ಎಂದು ಕೂಲ್ ಆಗಿಯೇ ರಮೇಶ್​ ಜಾರಕಿಹೊಳಿ ಉತ್ತರ ನೀಡಿದರು.

ಇಂಥ ಹತ್ತು ವಿಡಿಯೋ ಬಿಡಲಿ. ಕಂಪ್ಲೇಂಟ್ ಕೊಡೋ ಹಾಗಿದ್ರೆ ಮೊದಲೇ ಕೊಡಬೇಕಿತ್ತು. ಎಲ್ಲೋ ಕುಳಿತುಕೊಂಡು ಈಗ ಕಂಪ್ಲೇಂಟ್ ಕೊಡುತ್ತಿದ್ದಾರೆ ಎಂದು ಸಿಡಿ ಗ್ಯಾಂಗ್ ವಿರುದ್ಧ ರಮೇಶ್​ ಜಾರಕಿಹೊಳಿ ಹರಿಹಾಯ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.