ETV Bharat / state

ಮಲ್ಲೇಶ್ವರಂನಲ್ಲಿ ಇಬ್ಬರು ಯುವಕರ ಅನುಮಾನಾಸ್ಪದ ಸಾವು, ತನಿಖೆ ಚುರುಕು - ಅಭಿಲಾಶ್ ಮತ್ತು ಗೋಪಿ ಮೃತ ಯುವಕರು

ನಗರದ ಒಂದೇ ಪ್ರದೇಶದಲ್ಲಿ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಅಭಿಲಾಶ್ ಮತ್ತು ಗೋಪಿ ಮೃತ ಯುವಕರು
author img

By

Published : Nov 20, 2019, 7:54 AM IST

ಬೆಂಗಳೂರು: ಒಂದೇ ಪ್ರದೇಶದಲ್ಲಿ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಅಭಿಲಾಶ್ ಮತ್ತು ಗೋಪಿ ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ.

ಮಲ್ಲೇಶ್ವರಂ 13ನೇ ಕ್ರಾಸ್‌ನ ನಿವಾಸಿಯಾಗಿರುವ ಅಭಿಲಾಶ್ ಹೊಟ್ಟೆ ನೋವೆಂದು ಮನೆಯಲ್ಲಿ ನಿನ್ನೆ ಒದ್ದಾಡಿ ನಂತ್ರ ಮಾತ್ರೆ ಸೇವಿಸಿದ್ದಾನೆ. ನಂತರ ನೋವು ಜಾಸ್ತಿಯಾದ ಕಾರಣ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ದೊರೆತಿದೆ.

ಮತ್ತೊಂದೆಡೆ ಇದೇ ಪ್ರದೇಶದ ನಿವಾಸಿ ಗೋಪಿ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಒಂದೇ ಪ್ರದೇಶದಲ್ಲಿ ಇಬ್ಬರು ಯುವಕರ ಸಾವು, ಅನುಮಾನ ಹುಟ್ಟಿಸಿದ ಪ್ರಕರಣ

ಸಾವಿನ ಹಿಂದೆ ಅನುಮಾನ:

ಯುವಕರ ಗುಂಪು ನಿನ್ನೆ ರಾತ್ರಿ ಬರ್ತ್‌ಡೇ ಪಾರ್ಟಿ ಮಾಡಿದ್ದು ಈ ವೇಳೆ ಎಂಟು ಯುವಕರ ತಂಡ ಗಾಂಜಾ ಸೇವನೆ ಮಾಡಿದೆ ಎನ್ನಲಾಗಿದೆ. ಹೀಗಾಗಿ ಅಭಿಲಾಶ್ ಮತ್ತು ಗೋಪಿ ಸಾವನ್ನಪ್ಪಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಸದ್ಯ ವೈಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಪೋಸ್ಟ್ ಮಾರ್ಟಮ್‌ ವರದಿಯ ಬಳಿಕ ಸಾವಿನ ಸತ್ಯಾಸತ್ಯತೆ ಬಗ್ಗೆ ಪೊಲೀಸರು ಮತ್ತಷ್ಟು ತನಿಖೆ ಕೈಗೊಳ್ಳಲಿದ್ದಾರೆ.

ಬೆಂಗಳೂರು: ಒಂದೇ ಪ್ರದೇಶದಲ್ಲಿ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಅಭಿಲಾಶ್ ಮತ್ತು ಗೋಪಿ ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ.

ಮಲ್ಲೇಶ್ವರಂ 13ನೇ ಕ್ರಾಸ್‌ನ ನಿವಾಸಿಯಾಗಿರುವ ಅಭಿಲಾಶ್ ಹೊಟ್ಟೆ ನೋವೆಂದು ಮನೆಯಲ್ಲಿ ನಿನ್ನೆ ಒದ್ದಾಡಿ ನಂತ್ರ ಮಾತ್ರೆ ಸೇವಿಸಿದ್ದಾನೆ. ನಂತರ ನೋವು ಜಾಸ್ತಿಯಾದ ಕಾರಣ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ದೊರೆತಿದೆ.

ಮತ್ತೊಂದೆಡೆ ಇದೇ ಪ್ರದೇಶದ ನಿವಾಸಿ ಗೋಪಿ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಒಂದೇ ಪ್ರದೇಶದಲ್ಲಿ ಇಬ್ಬರು ಯುವಕರ ಸಾವು, ಅನುಮಾನ ಹುಟ್ಟಿಸಿದ ಪ್ರಕರಣ

ಸಾವಿನ ಹಿಂದೆ ಅನುಮಾನ:

ಯುವಕರ ಗುಂಪು ನಿನ್ನೆ ರಾತ್ರಿ ಬರ್ತ್‌ಡೇ ಪಾರ್ಟಿ ಮಾಡಿದ್ದು ಈ ವೇಳೆ ಎಂಟು ಯುವಕರ ತಂಡ ಗಾಂಜಾ ಸೇವನೆ ಮಾಡಿದೆ ಎನ್ನಲಾಗಿದೆ. ಹೀಗಾಗಿ ಅಭಿಲಾಶ್ ಮತ್ತು ಗೋಪಿ ಸಾವನ್ನಪ್ಪಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಸದ್ಯ ವೈಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಪೋಸ್ಟ್ ಮಾರ್ಟಮ್‌ ವರದಿಯ ಬಳಿಕ ಸಾವಿನ ಸತ್ಯಾಸತ್ಯತೆ ಬಗ್ಗೆ ಪೊಲೀಸರು ಮತ್ತಷ್ಟು ತನಿಖೆ ಕೈಗೊಳ್ಳಲಿದ್ದಾರೆ.

Intro:ಅನುಮಾನ ಮೂಡಿಸಿದ ಒಂದೇ ಏರಿಯಾದಲ್ಲಿ‌ ಇಬ್ಬರ ಯುವಕರ ಸಾವು.
ಪೊಲೀಸರಿಂದ ತನೀಕೆ ಚುರುಕು

ಒಂದೇ ಏರಿಯಾದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದು ಸಾವಿಗೆ ಬಹಳಷ್ಟು ಅನುಮಾನ ಮೂಡಿಸಿದೆ .ಅಭಿಲಾಶ್ ಮತ್ತು ಗೋಪಿ ಮೃತ ಯುವಕರು. ಮಲ್ಲೇಶ್ವರಂ 13th ಕ್ರಾಸ್ ನಲ್ಲಿ ರುವ ಯುವಕರ ಪೈಕಿ ಅಭಿಲಾಶ್ ಹೊಟ್ಟೆ ನೋವೆಂದು ಮನೆಯಲ್ಲಿ ನಿನ್ನೆ ಒದ್ದಾಡಿ ನಂತ್ರ ಮಾತ್ರೆ ಸೇವಿಸಿದ್ದ.ಆಗ ನೋವು ಜಾಸ್ತಿಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದನು. ಮತ್ತೊಂದೆಡೆ ಅದೇ ಏರಿಯಾದ ಗೋಪಿ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳ್ತಿದ್ದಾರೆ.

ಮತ್ತೊಂದೆಡೆ ಸಾವಿನ ಬಗ್ಗೆ ಬಹಳ ಅನುಮಾಗಳು ಮೂಡಿದ್ದು ಈ ಸಾವಿಗೀಡಾದ‌ ಯುವಕರ ಗುಂಪು ನಿನ್ನೆ ರಾತ್ರಿ ಬರ್ತಡೆ ಪಾರ್ಟಿಯನ್ನ ಮಾಡಿ ಎಂಟು ಯುವಕರ ತಂಡ ಈ ವೇಳೆ ಗಾಂಜಾ ಸೇವನೆ ಮಾಡಿ
ಅಭಿಲಾಶ್ ಮತ್ತು ಗೋಪಿ ಸಾವನ್ನಪ್ಪಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿದೆನ ಸದ್ಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪೊಲಿಸರು ಪ್ರಕರಣ ದಾಖಲಿಸಿ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾದಿದ್ದು ತನೀಕೆ ಮುಂದುವರೆಸಿದ್ದಾರೆBody:KN_BNG_13_DEATh_7204498Conclusion:KN_BNG_13_DEATh_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.