ETV Bharat / state

ಮದ್ಯ ನಿಷೇಧ ಹೋರಾಟ ಸ್ಥಳಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ

author img

By

Published : Nov 8, 2019, 3:05 AM IST

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್​ ದೊರೆಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮದ್ಯ ನಿಷೇಧ ಹೋರಾಟ ಸ್ಥಳಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ ನೀಡಿ ಹೋರಾಟಗಾರರ ಮನವೊಲಿಸಿದ್ದಾರೆ.

ಅಶ್ವಥ್ ನಾರಾಯಣ್ ಭೇಟಿ

ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಿಸಬೇಕು ಎಂದು ಆಗ್ರಹಿಸಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್​ ದೊರೆಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಡಿಸಿಎಂ ಡಾ.ಸಿ ಅಶ್ವಥ್ ನಾರಾಯಣ ಭೇಟಿ ನೀಡಿ ಹೋರಾಟಗಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ಯ ನಿಷೇಧ ಹೋರಾಟ ಸ್ಥಳಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಡಿಸಿಎಂ ಭೇಟಿ ನೀಡಿದ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್ ದೊರೆಸ್ವಾಮಿಯವರು ಡಿಸಿಎಂರನ್ನು ತರಾಟೆಗೆ ತೆಗೆದುಕೊಂಡರು. ಹೋರಾಟಗಳನ್ನು, ಚಳವಳಿಗಳನ್ನು ಪೊಲೀಸ್​ ಅಥವಾ ಸರ್ಕಾರಗಳು ನಿಯಂತ್ರಣ ಮಾಡುವುದಲ್ಲ. ನಮಗೆ ನಮ್ಮದೇ ಆದ ಸ್ವಾತಂತ್ರ್ಯ ಇದೆ. ನಮ್ಮ ನೋವಿನ ದನಿಯನ್ನು ಹೊರಹಾಕುವ ವೇದಿಕೆ ಹೋರಾಟ, ಪ್ರತಿಭಟನೆಗಳು ಆಗಿದೆ. ಇಂದು ನಮ್ಮನ್ನು ನಡೆಸಿಕೊಂಡಿದ್ದು ಅಮಾನವೀಯವಾಗಿದೆ ಎಂದು ಎಚ್.ಎಸ್ ದೊರೆಸ್ವಾಮಿ ಅವರು ಡಿಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.

ನಂತರ ಪ್ರತಿಭಟನಾ ನಿರತರ ಜೊತೆ ಮಾತನಾಡಿದ ಡಿಸಿಎಂ, ಮದ್ಯ ಸಮಾಜಕ್ಕೆ ಬೇಕಿರುವ ವಸ್ತು ಅಲ್ಲ. ಅದು ಯಾವ ಸಮಾಜಕ್ಕೂ ಪ್ರಯೋಜನಕಾರಿ ಅಲ್ಲ. ಸ್ವಾತಂತ್ರ್ಯ ಮುಂಚೆ ಮತ್ತು ಈಗಲೂ ಮದ್ಯ ನಿಷೇಧ ಆಗಬೇಕು ಅನ್ನುವ ಕೂಗು ಇದೆ. ಸರ್ಕಾರವೂ ಸಹ ಇದರ ವಿರುದ್ಧ ಇದೆ. ಸಂಪೂರ್ಣ ನಿಷೇಧ ಆಗಬೇಕು ಅನ್ನುವ ನಿಮ್ಮ ಬೇಡಿಕೆ ಈಡೇರಿಕೆಗೆ ತುಂಬಾ ಸವಾಲುಗಳಿವೆ. ನೀವು ಹೇಳಿದ ಹಾಗೆಯೇ ಹಂತ ಹಂತವಾಗಿ ನಿಷೇಧ ಮಾಡುವ ಕೆಲಸವನ್ನು ಸರ್ಕಾದಿಂದ ಮಾಡುತ್ತೇವೆ ಎಂದರು.

ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲು ಅವಕಾಶ ಕೇಳಿದ್ದೀರಾ? ಅದಕ್ಕೂ ಕೂಡ ನಾವು ವ್ಯವಸ್ಥೆ ಮಾಡಿ ಕೊಡುತ್ತೇವೆ. ಹೋರಾಟ ಹತ್ತಿಕ್ಕುವ ಉದ್ದೇಶ ನಮಗಿಲ್ಲ. ಇದು ಪ್ರಸ್ತುತವಾದ ವಿಚಾರವಾಗಿದೆ. 10 ದಿನಗಳೊಳಗೆ ಸಿಎಂ ಜೊತೆ ಸಭೆ ನಡೆಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೋರಾಟಗಾರರಿಗೆ ಡಿಸಿಎಂ ಭರವಸೆ ಕೊಟ್ಟ ನಂತರ ಹೋರಾಟವನ್ನು ಅಂತ್ಯಗೊಳಿಸಿ ಊರಿಗೆ ವಾಪಸ್ಸು ತೆರಳಲು ಪ್ರತಿಭಟನಾಕಾರರು ಒಪ್ಪಿಗೆ ಸೂಚಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಿಸಬೇಕು ಎಂದು ಆಗ್ರಹಿಸಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್​ ದೊರೆಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಡಿಸಿಎಂ ಡಾ.ಸಿ ಅಶ್ವಥ್ ನಾರಾಯಣ ಭೇಟಿ ನೀಡಿ ಹೋರಾಟಗಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ಯ ನಿಷೇಧ ಹೋರಾಟ ಸ್ಥಳಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಡಿಸಿಎಂ ಭೇಟಿ ನೀಡಿದ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್ ದೊರೆಸ್ವಾಮಿಯವರು ಡಿಸಿಎಂರನ್ನು ತರಾಟೆಗೆ ತೆಗೆದುಕೊಂಡರು. ಹೋರಾಟಗಳನ್ನು, ಚಳವಳಿಗಳನ್ನು ಪೊಲೀಸ್​ ಅಥವಾ ಸರ್ಕಾರಗಳು ನಿಯಂತ್ರಣ ಮಾಡುವುದಲ್ಲ. ನಮಗೆ ನಮ್ಮದೇ ಆದ ಸ್ವಾತಂತ್ರ್ಯ ಇದೆ. ನಮ್ಮ ನೋವಿನ ದನಿಯನ್ನು ಹೊರಹಾಕುವ ವೇದಿಕೆ ಹೋರಾಟ, ಪ್ರತಿಭಟನೆಗಳು ಆಗಿದೆ. ಇಂದು ನಮ್ಮನ್ನು ನಡೆಸಿಕೊಂಡಿದ್ದು ಅಮಾನವೀಯವಾಗಿದೆ ಎಂದು ಎಚ್.ಎಸ್ ದೊರೆಸ್ವಾಮಿ ಅವರು ಡಿಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.

ನಂತರ ಪ್ರತಿಭಟನಾ ನಿರತರ ಜೊತೆ ಮಾತನಾಡಿದ ಡಿಸಿಎಂ, ಮದ್ಯ ಸಮಾಜಕ್ಕೆ ಬೇಕಿರುವ ವಸ್ತು ಅಲ್ಲ. ಅದು ಯಾವ ಸಮಾಜಕ್ಕೂ ಪ್ರಯೋಜನಕಾರಿ ಅಲ್ಲ. ಸ್ವಾತಂತ್ರ್ಯ ಮುಂಚೆ ಮತ್ತು ಈಗಲೂ ಮದ್ಯ ನಿಷೇಧ ಆಗಬೇಕು ಅನ್ನುವ ಕೂಗು ಇದೆ. ಸರ್ಕಾರವೂ ಸಹ ಇದರ ವಿರುದ್ಧ ಇದೆ. ಸಂಪೂರ್ಣ ನಿಷೇಧ ಆಗಬೇಕು ಅನ್ನುವ ನಿಮ್ಮ ಬೇಡಿಕೆ ಈಡೇರಿಕೆಗೆ ತುಂಬಾ ಸವಾಲುಗಳಿವೆ. ನೀವು ಹೇಳಿದ ಹಾಗೆಯೇ ಹಂತ ಹಂತವಾಗಿ ನಿಷೇಧ ಮಾಡುವ ಕೆಲಸವನ್ನು ಸರ್ಕಾದಿಂದ ಮಾಡುತ್ತೇವೆ ಎಂದರು.

ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲು ಅವಕಾಶ ಕೇಳಿದ್ದೀರಾ? ಅದಕ್ಕೂ ಕೂಡ ನಾವು ವ್ಯವಸ್ಥೆ ಮಾಡಿ ಕೊಡುತ್ತೇವೆ. ಹೋರಾಟ ಹತ್ತಿಕ್ಕುವ ಉದ್ದೇಶ ನಮಗಿಲ್ಲ. ಇದು ಪ್ರಸ್ತುತವಾದ ವಿಚಾರವಾಗಿದೆ. 10 ದಿನಗಳೊಳಗೆ ಸಿಎಂ ಜೊತೆ ಸಭೆ ನಡೆಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೋರಾಟಗಾರರಿಗೆ ಡಿಸಿಎಂ ಭರವಸೆ ಕೊಟ್ಟ ನಂತರ ಹೋರಾಟವನ್ನು ಅಂತ್ಯಗೊಳಿಸಿ ಊರಿಗೆ ವಾಪಸ್ಸು ತೆರಳಲು ಪ್ರತಿಭಟನಾಕಾರರು ಒಪ್ಪಿಗೆ ಸೂಚಿಸಿದ್ದಾರೆ.

Intro:ಹೋರಾಟ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಭೇಟಿ ಹೋರಾಟಗಾರರ ಮನವೊಲಿಸಿದ ಡಿಸಿಎಮ್..

ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಿಸ ಬೇಕು ಎಂದು ಆಗ್ರಹಿಸಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ
ಉಪಮುಖ್ಯಮಂತ್ರಿಗಳಾದ ಡಾಕ್ಟರ್ ಸಿ ಅಶ್ವಥ್ ನಾರಾಯಣ ಆಗಮಿಸಿ ಹೋರಾಟ ಗಾರರ
ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಡಿಸಿಎಮ್ಆಗಮಿಸಿದ
ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್ ಎಸ್ ದೊರೆಸ್ವಾಮಿಯವರು ಡಿಸಿಎಂಗೆ ತರಾಟೆ ತೆಗೆದು ಕೊಂಡರು.ಹೋರಾಟಗಳನ್ನು, ಚಳವಳಿಗಳನ್ನು ಪೋಲಿಸ್ ಅಥವಾ ಸರ್ಕಾರಗಳು ನಿಯಂತ್ರಣ ಮಾಡುವುದಲ್ಲ, ನಮಗೆ ನಮ್ಮದೇ ಆದ ಸ್ವಾತಂತ್ರ್ಯ ಇದೆ ನಮ್ಮ ನೋವಿನ ದನಿಯನ್ನು ಹೊರಹಾಕುವ ವೇದಿಕೆ ಹೋರಾಟ ಪ್ರತಿಭಟನೆಗಳು ಆಗಿದೆ. ಇಂದು ನಮ್ಮನ್ನು ನಡೆಸಿಕೊಂಡಿದ್ದು ಅಮಾನವೀಯವಾಗಿದೆ ಎಂದು ಸ್ವಾತಂತ್ರ್ಯ ಸೇನಾನಿ ಎಚ್.ಎಸ್ ದೊರೆಸ್ವಾಮಿ ಅವರು ಡಿಸಿಎಮ್ ಅವರ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ರುBody:ಅಲ್ಲದೆ ಪೊಲೀಸರು ಸತ್ಯಾಗ್ರಹಕ್ಕೆ ನಡೆಸಲು ಅವಕಾಶ ಕೊಡುತ್ತಿಲ್ಲ ಇದು ಸರಿಯಾದ ನಡವಳಿಕೆ ಅಲ್ಲ. ಮಹಿಳೆಯರನ್ನು ಬೀದಿಯಲ್ಲಿ ಕೂರಿಸಿ ಜಾಗ ಕೊಡದೇ ಅಮಾನವೀಯವಾಗಿ ನಡೆಸಿದ್ದಾರೆ ಮಹಿಳೆಯರಿಗೆ ಹೀಗೆಯೇ ನಿಮ್ಮ ಪೊಲೀಸರು ನಡೆಸಿಕೊಳ್ಳುವುದು ಎಂದು ಪ್ರತಿಭಟನಾನಿರತ ಮಹಿಳೆಯರು ಡಿಸಿಎಮ್ ಪ್ರಶ್ನೆ ಮಾಡಿದ್ದಾಗ ಉಪಮುಖ್ಯಮಂತ್ರಿಗಖು ಉತ್ತರ ಇಲ್ಲದೆ ಮೌನಕ್ಕೆ ಶರಣಾದರು.

ನಂತರ ಪ್ರತಿಭಟನಾ ನಿರತರ ಜೊತೆ ಮಾತನಾಡಿದ
ಡಿಸಿಎಮ್ ಮದ್ಯ ಸಮಾಜಕ್ಕೆ ಬೇಕಿರುವ ವಸ್ತು ಅಲ್ಲ. ಅದು ಯಾವ ಸಮಾಜಕ್ಕೂ ಪ್ರಯೋಜನಕಾರಿ ಅಲ್ಲ. ಸ್ವಾತಂತ್ರ್ಯ ಮುಂಚೆ ಮತ್ತು ಈಗಲೂ ಮದ್ಯ ನಿಷೇಧ ಆಗಬೇಕು ಅನ್ನುವ ಕೂಗು ಇದೆ. ಸರ್ಕಾರವೂ ಸಹ ಇದರ ವಿರುದ್ಧ ಇದೆ. ಸಂಪೂರ್ಣ ನಿಷೇಧ ಆಗಬೇಕು ಅನ್ನುವ ನಿಮ್ಮ ಬೇಡಿಕೆ ಈಡೇರಿಕೆ ಆಗೋಕೆ ತುಂಬಾ ಸವಾಲುಗಳಿವೆ. ನೀವು ಹೇಳಿದ ಹಾಗೆಯೇ ಹಂತ ಹಂತವಾಗಿ ನಿಷೇಧ ಅಥವಾ ಕಡಿವಾಣ ಹಾಕೋಕೆ ತುಂಬಾ ದಾರಿಗಳಿವೆ. Conclusion:ಕೈಗೆ ಸುಲಭವಾಗಿ ಸಿಗುವ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ನಿರ್ಭಂದನೆ ಮಾಡಲು ನಿರ್ಧಾರ ಮಾಡುತ್ತೋ ಅವಕ್ಕೆ ಸ್ವಾತಂತ್ರ್ಯ ಇರುವ ರೀತಿಯಲ್ಲಿ ನಾವು ಕೆಲಸ ಮಾಡುತ್ತೇವೆ. ಕುಡಿತದಿಂದಾಗಿ ಹಲವಾರು ವೈದ್ಯಕೀಯ ಸಮಸ್ಯೆಗಳು ಆಗುತ್ತಿದೆ. ಸಾವು ಕೂಡ ಸಂಭವಿಸುತ್ತಿದೆ. ಒಂದು ಕಡೆ ಬಾಗಿಲು ಮುಚ್ಚಿದರೆ ಮತ್ತೊಂದು ಲಡೆ ತೆರೆದುಕೊಳ್ಳುತ್ತದೆ ಹಾಗಾಗಿ ಇದಕ್ಕೆ ಹತ ಹಂತವಾಗಿ ನಿಲ್ಲಿಸಿ ಇದಕ್ಕೆ ಕಡಿವಾಣ ಹಾಕುವ ಕೆಲಸ ಸರ್ಕಾದಿಂದ ಮಾಡುತ್ತೇವೆ.

ಅದರ ಜೊತೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲು ಕೇಳಿದೀರಿ ಅದಕ್ಕೂ ಕೂಡ ನಾವು ವ್ಯವಸ್ಥೆ ಮಾಡಿ
ಕೊಡುತ್ತೇವೆ.ಹೋರಾಟಹತ್ತಕ್ಕುವ ಉದ್ಧೇಶ ನಮಗಿಲ್ಲ,
ಇದು ಪ್ರಸ್ತುತವಾದ ವಿಚಾರವಾಗಿದೆ ಸಿ.ಎಮ್ ಜೊತೆ ಸಭೆಗೆ10 ದಿನದ ಒಳಗಾಗಿಯೇವ್ಯವಸ್ಥೆಮಾಡಲಾಗುತ್ತದೆ
ಎಂದು ಹೋರಾಟಗಾರರಿಗೆ ಡಿಸಿಎಮ್ ಭರವಸೆ ಕೊಟ್ಟ ನಂತರ ಹೋರಾಟವನ್ನು ಅಂತ್ಯ ಗೊಳಿಸಿ ಊರಿಗೆ ವಾಪಸ್ಸು ತೆರಳಲು ಪ್ರತಿಭಟನಾಕಾರರು ಒಪ್ಪಿಗೆ ಸೂಚಿಸಿದರು.

ಸತೀಶ ಎಂಬಿ



ETV Bharat Logo

Copyright © 2024 Ushodaya Enterprises Pvt. Ltd., All Rights Reserved.