ETV Bharat / state

ವಿಚ್ಛೇದನಕ್ಕಾಗಿ ದೂರವಾಗಿದ್ದ ದಂಪತಿ 5 ವರ್ಷದ ಬಳಿಕ ಒಂದೇ ರೈಲಿನಲ್ಲಿ ಮುಖಾಮುಖಿ: ಮುಂದಾಗಿದ್ದೇನು?

ವಿಚ್ಛೇದನಕ್ಕೆ ನಿರ್ಧರಿಸಿ ದೂರವಾಗಿದ್ದ ದಂಪತಿ ಆಕಸ್ಮಿಕವಾಗಿ ರೈಲಿನಲ್ಲಿ ಭೇಟಿಯಾಗಿದ್ದು, ಈ ವೇಳೆಯೂ ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ಚೆನ್ನೈ-ಯಶವಂತಪುರ ಎಕ್ಸ್​ಪ್ರೆಸ್ ರೈಲಿನಲ್ಲಿ ನಡೆದಿದೆ.

author img

By

Published : Jun 26, 2019, 5:30 PM IST

ದೂರವಾಗಿದ್ದ ದಂಪತಿ ಸಿನಿಶೈಲಿಯಲ್ಲಿ ಒಂದೇ ರೈಲಿನಲ್ಲಿ ಮುಖಾಮುಖಿ

ಬೆಂಗಳೂರು: ವೈಯಕ್ತಿಕ ಕಾರಣಕ್ಕಾಗಿ ವಿಚ್ಛೇದನ ನೀಡಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿ ಆಕಸ್ಮಿಕವಾಗಿ ರೈಲಿನಲ್ಲಿ ಭೇಟಿಯಾಗಿದ್ದು, ಟ್ರೈನಿನ ಒಳಗಡೆಯೂ ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸಾಫ್ಟ್‌ವೇರ್ ಎಂಜಿನಿಯರ್‌ ಆಗಿರುವ ಚೆನ್ನೈ ಮೂಲದ ಬಾಲಸುಬ್ರಹ್ಮಣ್ಯಂ 5 ವರ್ಷಗಳ ಹಿಂದೆ ರೇಖಾ ಎಂಬ ಮಹಿಳೆಯನ್ನು ಮದುವೆಯಾಗಿದ್ದ. ಇವರಿಗೆ 3 ವರ್ಷದ ಗಂಡು ಮಗ ಸಹ ಇದೆ. ಕಾರಣಾಂತರಗಳಿಂದ ಪತ್ನಿಗೆ ಡಿವೋರ್ಸ್ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ. ಡಿವೋರ್ಸ್​ಗೆ ನಿರ್ಧರಿಸಿದ ನಂತರ ಇಬ್ಬರೂ ಬೇರೆ-ಬೇರೆ ಮನೆಯಲ್ಲಿ ವಾಸವಿದ್ದರು. ಇದೇ ತಿಂಗಳು 23ರ ರಾತ್ರಿ ಚೆನ್ನೈ-ಯಶವಂತಪುರ ಎಕ್ಸ್​ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ತೆರಳುವ ವೇಳೆ ಇಬ್ಬರೂ ಪರಸ್ಪರ ಮೀಟ್​ ಆಗಿದ್ದಾರೆ.

ಈ ವೇಳೆ ಪತ್ನಿ ರೇಖಾ, ನನಗೆ ಏಕೆ ವಿಚ್ಛೇದನ ನೀಡುತ್ತಿದ್ದೀಯಾ? ನಾನು ನಿನ್ನನ್ನು ಹೇಗೆ ಹುಡುಕುವುದು, ನಿನ್ನ ಮೊಬೈಲ್ ನಂಬರ್ ಆದರೂ ನನಗೆ ನೀಡು ಎಂದು ತನ್ನ ಪತಿ ಬಾಲಸುಬ್ರಹ್ಮಣ್ಯಂಗೆ ಕೇಳಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿದ ಬಾಲಸುಬ್ರಹ್ಮಣ್ಯಂ, ರೈಲಿನಲ್ಲಿ ಆಕೆಯ ಜೊತೆ ಎಲ್ಲರ ಸಮ್ಮುಖದಲ್ಲೇ ಗಲಾಟೆ ಮಾಡಿ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನು ಈ ಸಂಬಂಧ ಆತನ ಪತ್ನಿ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬೆಂಗಳೂರು: ವೈಯಕ್ತಿಕ ಕಾರಣಕ್ಕಾಗಿ ವಿಚ್ಛೇದನ ನೀಡಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿ ಆಕಸ್ಮಿಕವಾಗಿ ರೈಲಿನಲ್ಲಿ ಭೇಟಿಯಾಗಿದ್ದು, ಟ್ರೈನಿನ ಒಳಗಡೆಯೂ ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸಾಫ್ಟ್‌ವೇರ್ ಎಂಜಿನಿಯರ್‌ ಆಗಿರುವ ಚೆನ್ನೈ ಮೂಲದ ಬಾಲಸುಬ್ರಹ್ಮಣ್ಯಂ 5 ವರ್ಷಗಳ ಹಿಂದೆ ರೇಖಾ ಎಂಬ ಮಹಿಳೆಯನ್ನು ಮದುವೆಯಾಗಿದ್ದ. ಇವರಿಗೆ 3 ವರ್ಷದ ಗಂಡು ಮಗ ಸಹ ಇದೆ. ಕಾರಣಾಂತರಗಳಿಂದ ಪತ್ನಿಗೆ ಡಿವೋರ್ಸ್ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ. ಡಿವೋರ್ಸ್​ಗೆ ನಿರ್ಧರಿಸಿದ ನಂತರ ಇಬ್ಬರೂ ಬೇರೆ-ಬೇರೆ ಮನೆಯಲ್ಲಿ ವಾಸವಿದ್ದರು. ಇದೇ ತಿಂಗಳು 23ರ ರಾತ್ರಿ ಚೆನ್ನೈ-ಯಶವಂತಪುರ ಎಕ್ಸ್​ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ತೆರಳುವ ವೇಳೆ ಇಬ್ಬರೂ ಪರಸ್ಪರ ಮೀಟ್​ ಆಗಿದ್ದಾರೆ.

ಈ ವೇಳೆ ಪತ್ನಿ ರೇಖಾ, ನನಗೆ ಏಕೆ ವಿಚ್ಛೇದನ ನೀಡುತ್ತಿದ್ದೀಯಾ? ನಾನು ನಿನ್ನನ್ನು ಹೇಗೆ ಹುಡುಕುವುದು, ನಿನ್ನ ಮೊಬೈಲ್ ನಂಬರ್ ಆದರೂ ನನಗೆ ನೀಡು ಎಂದು ತನ್ನ ಪತಿ ಬಾಲಸುಬ್ರಹ್ಮಣ್ಯಂಗೆ ಕೇಳಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿದ ಬಾಲಸುಬ್ರಹ್ಮಣ್ಯಂ, ರೈಲಿನಲ್ಲಿ ಆಕೆಯ ಜೊತೆ ಎಲ್ಲರ ಸಮ್ಮುಖದಲ್ಲೇ ಗಲಾಟೆ ಮಾಡಿ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನು ಈ ಸಂಬಂಧ ಆತನ ಪತ್ನಿ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Intro:Body:ಪತ್ನಿಯಿಂದ ದೂರವಾಗಿದ್ದ ಗಂಡ: ಸಿನಿಶೈಲಿಯಲ್ಲಿ ಒಂದೇ ರೈಲಿನಲ್ಲಿ ಮುಖಾಮುಖಿ ದಂಪತಿ: ಮುಂದಾಗಿದ್ದೇನು ?

ಬೆಂಗಳೂರು:
ವೈಯಕ್ತಿಕ ಕಾರಣಕ್ಕಾಗಿ ಆತ ಹೆಂಡತಿಗೆ ವಿಚ್ಛೇದನ ನೀಡಲು ನಿರ್ಧರಿಸಿ ಕೋರ್ಟ್ ಮೆಟ್ಟಲೇರಿದ್ದ.‌ ಪತ್ನಿಯೊಂದಿಗೆ ದೂರವಾಗಿ ವಾಸ ಮಾಡುತ್ತಿದ್ದ ಚೆನ್ನೈ ನಿಂದ ಬೆಂಗಳೂರು ಮಾರ್ಗದ ರೈಲು ಹತ್ತಿದ್ದ.‌ ಆಕಸ್ಮಿಕ ಎಂಬಂತೆ ಆತನ ಹೆಂಡತಿ ಸಹ ಅದೇ ಟ್ರೈನ್ ಹತ್ತಿದ್ದರು. ಸಂಬಂಧಿಕರ ಮೂಲಕ ಗಂಡ ಅದೇ ರೈಲಿನಲ್ಲಿ ಇರುವುದನ್ನು ಕಂಡುಕೊಂಡು ಆಕೆ ಮುಂದೆನಾಯ್ತು ಗೊತ್ತಾ ಸ್ಟೋರಿ ಓದಿ...
ಚೈನ್ನೈ ಮೂಲದ ಬಾಲಸುಬ್ರಹ್ಮಣ್ಯಂ ಈತ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ . ಮೂರು ವರ್ಷಗಳ ಹಿಂದೆಯೇ ರೇಖಾ ಎಂಬ ಮಹಿಳೆಯನ್ನು ಮದುವೆಯಾಗಿದ್ದ. ಕಾರಣಾಂತರಗಳಿಂದ ಪತ್ನಿಗೆ ಡೈವರ್ಸ್ ನೀಡಲು ಮುಂದಾಗಿದ್ದಾನೆ. ಇವರಿಬ್ಬರೂ ಸಹ ಇರೋದು ಚೆನ್ನೈ ನಲ್ಲಿ. ಇಬ್ಬರು ಸಹ ಅನ್ಯೋನ್ಯವಾಗಿ ಹೊರ ದೇಶಕ್ಕೆ ಹೋಗಿ ಬಂದು ಚೆನ್ನೈ ನಲ್ಲಿ ನೆಲೆಸಿದ್ದರು. ಇನ್ನೂ ಈ ದಂಪತಿಗೆ ಐದು ವರ್ಷದ ಮಗು ಇದೆ. ಸಂಸಾರದಲ್ಲಿ ಗಲಾಟೆ ಅಂದರೆ ಸಹಜ ಸಣ್ಣ ವಿಚಾರಕ್ಕೆ ಈತನು ಕೋರ್ಟ್ ಮೆಟ್ಟಿಲನ್ನು ಏರಿ ಪತ್ನಿಯ ರೇಖಾ ಬಳಿ ವಿಚ್ಛೇದನ ಪಡೆಯಲೇಬೇಕು ಅಂತ ಹಠ ತೊಟ್ಟಿದ್ದ.
ಯಾವಾಗ ತನ್ನ ಪತಿ ಕೋರ್ಟ್ ಮೆಟ್ಟಿಲು ಏರಿದ್ದಾರೆ ಅಂತ ಗೊತ್ತಾದ ಕೂಡಲೇ ಪತ್ನಿ ಹಾಗೂ ಗಂಡ ಇಬ್ಬರೂ ಸಹ ಬೇರೆ ಬೇರೆಯಾಗಿದ್ದಾರೆ.
ಇದೇ ತಿಂಗಳು 23 ರಾತ್ರಿ ಸುಮಾರು 11.35ಕ್ಕೆ ಚೆನ್ನೈ- ಯಶವಂತಪುರ ಎಕ್ಸ್ ಪ್ರೆಸ್ ಟ್ರೈನ್ ನಲ್ಲಿ ಇಬ್ಬರೂ ಸಹ ಒಬ್ಬರಿಗೊಬ್ಬರ ಗೊತ್ತಿಲ್ಲದೆ ಬೆಂಗಳೂರಿಗೆ ಬರಲು ಏರಿದ್ದಾರೆ. ವಿಧಿಯಾಟ ಇವರ ಜೀವನದಲ್ಲಿ ಸಿನಿಮಾ ರೀತಿಯಲ್ಲಿ ಆಟ ಆಡಿದ್ದೆ. S-4 ಕಂಪಾರ್ಟ್ಮೆಂಟ್ ನಲ್ಲಿ ಬಾಲಸುಬ್ರಹ್ಮಣ್ಯಂ ಹೆಂಡತಿ ರೇಖಾ ಸೀಟು ಕಾಯ್ದಿರಿಸಿ ಮಾಡಿ ತನ್ನ ಸೀಟನ್ನು ಪಡೆದಿದ್ದಳು.
ಅದೇ ರೈಲು S3 ಕಂಪಾರ್ಟ್ಮೆಂಟ್ ನಲ್ಲಿ ಬಾಲಸುಬ್ರಹ್ಮಣ್ಯಂ ಸಹ ಇದ್ದರು. ಈತ ಕೂಡ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದ. ಇನ್ನೂ ತನ್ನ ಗಂಡನನ್ನ ಹುಡುಕಿಕೊಂಡು ಬರುತ್ತಿದ್ದ ಪತ್ನಿ ರೇಖಾ ಬೆಳಗಿನ ಜಾವ 3:50ಕ್ಕೆ ಕೆಆರ್ ಪುರಂ ರೈಲ್ವೆ ಸ್ಟೇಷನ್ ಬಳಿ ಟ್ರೈನ್ ತಲುಪಿದಾಗ ರೇಖಾಳ ಸಂಬಂಧಿಕರೊಬ್ಬರು ಕರೆ ಮಾಡಿ ನಿನ್ನ ಗಂಡ ನೀನಿರುವ ಟ್ರೈನ್ ನಲ್ಲಿ ಇದ್ದಾನೆ ಹುಡುಕು ಎಂಬ ಮಾಹಿತಿ ನೀಡಿದ್ದಾರೆ.
ಇನ್ನೂ ಕರೆ ಮಾಡಿ ತಮ್ಮ ಸಂಬಂಧಿಕರು ಹೇಳಿದ ಕೂಡಲೇ ರೇಖಾ ಮುಂದಿನ ಕಂಪಾರ್ಟ್ಮೆಂಟ್ S4 ಬಳಿ ಹುಡುಕಲು ಪ್ರಾರಂಭಿಸಿದಳು. ಆಗ ತನ್ನ ಗಂಡ ಇರುವುದು ತಿಳಿಯಿತು. ಅಂದು ಬೆಳಗಿನ ಜಾವ 4 ಗಂಟೆ ವೇಳೆ ರೇಖಾ ತನ್ನ ಗಂಡ ಬಾಲಸುಬ್ರಹ್ಮಣ್ಯಂ ಬಳಿ ಹೋಗಿ ನನಗೆ ಯಾರೂ ಗತಿ ಇಲ್ಲ. ನಾನು ನಿನ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ಹೊರಟಿದ್ದೆ ಆದರೆ ದೇವರ ಆಟ ನೀನು ಇಲ್ಲೇ ಇದೆಯಾ ನನಗೆ ಏಕೆ ವಿಚ್ಛೇದನ ನೀಡುತ್ತಿದೆಯೇ ನಾನು ನಿನ್ನನ್ನು ಹೇಗೆ ಹುಡುಕುವುದು ನಿನ್ನ ಮೊಬೈಲ್ ನಂಬರ್ ಆದರೂ ಸಹ ನನಗೆ ನೀಡು ಎಂದು ರೇಖಾ ತನ್ನ ಪತಿ ಜೊತೆಗೆ ಮಾತನಾಡಿದಳು. ಆದರೆ ಇದಕ್ಕೆ ನಿರಾಕರಿಸಿದ ಆಕೆಯ ಗಂಡ ಸಾಫ್ಟ್ ವೇರ್ ಉದ್ಯೋಗಿ ಬಾಲಸುಬ್ರಹ್ಮಣ್ಯಂ ರೈಲಿನಲ್ಲಿ ಆಕೆಯ ಮೇಲೆ ಎಲ್ಲರ ಸಮ್ಮುಖದಲ್ಲೇ ರೈಲ್ವೆ ಸ್ಟೇಷನ್ ಬಳಿ ಟ್ರೈನಿನ ಒಳಗಡೆ ಗಲಾಟೆ ಸಹ ಮಾಡಿದ್ದಾನೆ. ಇನ್ನೂ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ ಇದನ್ನು ನೋಡಿದ ಜನರು ಸುಬ್ರಹ್ಮಣ್ಯನ ಹಿಡಿದು ಮಾತನಾಡುವಾಗ ಇದು ನನ್ನ ಫ್ಯಾಮಿಲಿ ವಿಚಾರ ನನ್ನನ್ನು ಬಿಟ್ಟು ಬಿಡಿ ಎಂದು ಪ್ರಯಾಣಿಕರಿಗೆ ಹೇಳಿ ಅಲ್ಲಿಂದ ಸುಬ್ರಹ್ಮಣ್ಯ ಕಾಲ್ಕಿತ್ತಿದ್ದಾನೆ.‌ ಈ ಸಂಬಂಧ ಆತನ ಪತ್ನಿ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.