ETV Bharat / state

ಕೊರೊನಾ ರೋಗಿಗಳ ಫೋಟೋ ಸೆರೆ ಹಿಡಿದ್ರೆ ಕಠಿಣ ಕ್ರಮ: ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ - corona news

ಆಸ್ಪತ್ರೆಯಲ್ಲಿ ಕ್ವಾರಂಟೈನ್​​ನಲ್ಲಿರುವ ಕೊರೊನಾ ರೋಗಿಗಳ ಭಾವಚಿತ್ರ ಅಥವಾ ವಿಡಿಯೋ ಸೆರೆಹಿಡಿದು ಮಾಧ್ಯಮಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ವ್ಯಕ್ತಿಯ ಗೌಪ್ಯತನಕ್ಕೆ ಧಕ್ಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ‌ ಇಂತಹ ಪ್ರವೃತ್ತಿ ಮುಂದುವರೆದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪೊಲೀಸ್ ಕಮೀಷನರ್ ಭಾಸ್ಕರ್ ರಾವ್
ಪೊಲೀಸ್ ಕಮೀಷನರ್ ಭಾಸ್ಕರ್ ರಾವ್
author img

By

Published : Jun 21, 2020, 11:28 PM IST

ಬೆಂಗಳೂರು: ಕೊರೊನಾ ರೋಗಿಗಳ ಫೋಟೋವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಮಾಧ್ಯಮಗಳಿಗೆ ಕಳುಹಿಸಿ, ಖಾಸಗಿತನಕ್ಕೆ‌ ಧಕ್ಕೆ ತರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.‌

  • When a COVID patient is taken to hospital, bystanders take photos on their mobiles and TV channels also air. Privacy invaded n they complained that they feel https://t.co/HID2DqQ4Dq photography without consent.I have instructed my officers to ensure privacy or take Legal Action.

    — Bhaskar Rao IPS (@deepolice12) June 21, 2020 " class="align-text-top noRightClick twitterSection" data=" ">

ಮಾರ್ಯಾದೆಗೆ ಅಂಜಿ ಸೋಂಕಿನ ಗುಣಲಕ್ಷಣವಿದ್ದರೂ ಕೊರೊನಾ ಇರುವ ವಿಷಯವನ್ನು ಜನರು ಮುಚ್ಚಿಡುತ್ತಿದ್ದಾರೆ. ಈ ಮಧ್ಯೆ ಆಸ್ಪತ್ರೆಯಲ್ಲಿ ಕ್ವಾರಂಟೈನ್​​ನಲ್ಲಿರುವ ರೋಗಿಗಳ ಭಾವಚಿತ್ರ ಅಥವಾ ವಿಡಿಯೋ ಸೆರೆಹಿಡಿದು ಮಾಧ್ಯಮಗಳಿಗೆ ಕಳುಹಿಸಲಾಗುತ್ತಿದೆ.‌ ಇದರಿಂದ ವ್ಯಕ್ತಿಯ ಗೌಪ್ಯತನಕ್ಕೆ ಧಕ್ಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ‌ ಇಂತಹ ಪ್ರವೃತ್ತಿ ಮುಂದುವರೆದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಭಾಸ್ಕರ್​ ರಾವ್​ ಅವರು ಸೂಚನೆ ನೀಡಿರುವುದಾಗಿ ಟ್ಚೀಟರ್​ನಲ್ಲಿ‌ ಟ್ವೀಟ್ ಮಾಡಿದ್ದಾರೆ.

ಲಾಕ್​ಡೌನ್ ಸಡಿಲಿಕೆ ಬಳಿಕ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ವಾರಿಯರ್ಸ್​ಗಳಾಗಿರುವ 45 ಪೊಲೀಸರಿಗೆ ಸೋಂಕು ದೃಢವಾಗಿದೆ. ಒಟ್ಟು 794 ಮಂದಿ ಸೋಂಕಿತರಿದ್ದಾರೆ‌. ಈ ಪೈಕಿ 64 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಬೆಂಗಳೂರು: ಕೊರೊನಾ ರೋಗಿಗಳ ಫೋಟೋವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಮಾಧ್ಯಮಗಳಿಗೆ ಕಳುಹಿಸಿ, ಖಾಸಗಿತನಕ್ಕೆ‌ ಧಕ್ಕೆ ತರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.‌

  • When a COVID patient is taken to hospital, bystanders take photos on their mobiles and TV channels also air. Privacy invaded n they complained that they feel https://t.co/HID2DqQ4Dq photography without consent.I have instructed my officers to ensure privacy or take Legal Action.

    — Bhaskar Rao IPS (@deepolice12) June 21, 2020 " class="align-text-top noRightClick twitterSection" data=" ">

ಮಾರ್ಯಾದೆಗೆ ಅಂಜಿ ಸೋಂಕಿನ ಗುಣಲಕ್ಷಣವಿದ್ದರೂ ಕೊರೊನಾ ಇರುವ ವಿಷಯವನ್ನು ಜನರು ಮುಚ್ಚಿಡುತ್ತಿದ್ದಾರೆ. ಈ ಮಧ್ಯೆ ಆಸ್ಪತ್ರೆಯಲ್ಲಿ ಕ್ವಾರಂಟೈನ್​​ನಲ್ಲಿರುವ ರೋಗಿಗಳ ಭಾವಚಿತ್ರ ಅಥವಾ ವಿಡಿಯೋ ಸೆರೆಹಿಡಿದು ಮಾಧ್ಯಮಗಳಿಗೆ ಕಳುಹಿಸಲಾಗುತ್ತಿದೆ.‌ ಇದರಿಂದ ವ್ಯಕ್ತಿಯ ಗೌಪ್ಯತನಕ್ಕೆ ಧಕ್ಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ‌ ಇಂತಹ ಪ್ರವೃತ್ತಿ ಮುಂದುವರೆದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಭಾಸ್ಕರ್​ ರಾವ್​ ಅವರು ಸೂಚನೆ ನೀಡಿರುವುದಾಗಿ ಟ್ಚೀಟರ್​ನಲ್ಲಿ‌ ಟ್ವೀಟ್ ಮಾಡಿದ್ದಾರೆ.

ಲಾಕ್​ಡೌನ್ ಸಡಿಲಿಕೆ ಬಳಿಕ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ವಾರಿಯರ್ಸ್​ಗಳಾಗಿರುವ 45 ಪೊಲೀಸರಿಗೆ ಸೋಂಕು ದೃಢವಾಗಿದೆ. ಒಟ್ಟು 794 ಮಂದಿ ಸೋಂಕಿತರಿದ್ದಾರೆ‌. ಈ ಪೈಕಿ 64 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.