ETV Bharat / state

ಕೃಷ್ಣಪ್ಪ ವರ್ಚಸ್ಸಿಗೆ ಮಣೆ ಹಾಕ್ತಾರಾ ಮತದಾರ ಪ್ರಭುಗಳು, ಮೋದಿ ಮೋಡಿಗೆ ಗೆಲ್ಲುತ್ತಾರಾ ರವೀಂದ್ರ?: ಕುತೂಹಲ ಮೂಡಿಸಿದ ವಿಜಯನಗರ ಕ್ಷೇತ್ರ..!

author img

By

Published : May 6, 2023, 5:05 PM IST

Updated : May 6, 2023, 7:40 PM IST

ಕಾಂಗ್ರೆಸ್​ ಭದ್ರಕೋಟೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸುತ್ತಾ ಮೋದಿ ರೋಡ್​ ಶೋ..

Elelction Campaign of M Krishnappa
ಎಂ ಕೃಷ್ಣಪ್ಪ ಚುನಾವಣಾ ಪ್ರಚಾರ

ವಿಜಯನಗರ ವಿಧಾನಸಭಾ ಕ್ಷೇತ್ರ

ಬೆಂಗಳೂರು: ಕಳೆದ ಬಾರಿ ಜಿದ್ದಾಜಿದ್ದಿಯ ಕ್ಷೇತ್ರವಾಗಿದ್ದ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಸ್ಪಷ್ಟವಾಗಿದೆ. ಹಳೆಯ ಹುರಿಯಾಳುಗಳೇ ಮತ್ತೊಮ್ಮೆ ಮುಖಾಮುಖಿಯಾಗಿದ್ದು, ವಿಜಯನಗರ ಅಖಾಡದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ. ಕ್ಷೇತ್ರ ದಕ್ಕಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯಾಸಪಡುತ್ತಿದೆ.

ಬೆಂಗಳೂರಿನ ಹೃದಯ ಭಾಗದ ಪಕ್ಕದಲ್ಲೇ ಇರುವ ವಿಜಯನಗರ ಕ್ಷೇತ್ರ ಉತ್ತಮ ಸೌಕರ್ಯಗಳಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಮೆಟ್ರೋ ಸೇರಿದಂತೆ ಎಲ್ಲ ರೀತಿಯ ಸಂಪರ್ಕ, ಸುಸಜ್ಜಿತ ಬಡಾವಣೆಗಳು, ಶಾಪಿಂಗ್ ತಾಣಗಳು, ಗ್ರಂಥಾಲಯ, ಉದ್ಯಾನಗಳು, ಉತ್ತಮ ಶಿಕ್ಷಣ ಸಂಸ್ಥೆಗಳು, ಆಧುನಿಕ ಆಸ್ಪತ್ರೆಗಳು ಕ್ಷೇತ್ರದಲ್ಲಿವೆ. ಬಿಜೆಪಿಯ ಕಾರ್ಪೊರೇಟರ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದರೂ ಕ್ಷೇತ್ರ ಮಾತ್ರ ಕಾಂಗ್ರೆಸ್​ನ ಹಿಡಿತದಲ್ಲಿಯೇ ಇದೆ. ವಿಜಯನಗರ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆಯಾಗಿದೆ. ಅಭಿವೃದ್ಧಿ ಹೊಂದಿದ ಪ್ರದೇಶಗಳು, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿಂದ ಕೂಡಿರುವ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿ ಇರುವ ಕಣವಾಗಿದೆ.

ಮತದಾರರ ವಿವರ: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 3,05,386 ಮತದಾರರಿದ್ದಾರೆ. ಇದರಲ್ಲಿ 1,60,151 ಪುರುಷ ಮತದಾರರು, 1,45,099 ಮಹಿಳಾ ಮತದಾರರಿದ್ದಾರೆ. ಪುರುಷ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ 51 ಸಾವಿರ ಒಕ್ಕಲಿಗ ಮತದಾರರಿದ್ದು, ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಮುಸ್ಲಿಂ ಮತಗಳು ಬಹಳ ಮಹತ್ವದದ್ದಾಗಿವೆ. ಇಲ್ಲಿ 17,500 ಲಿಂಗಾಯತ ಮತದಾರರು, 9 ಸಾವಿರ ಬ್ರಾಹ್ಮಣ ಮತದಾರರು, 38 ಸಾವಿರ ಒಬಿಸಿ, 42 ಸಾವಿರ ಎಸ್ಸಿ ಎಸ್ಟಿ, 37 ಸಾವಿರ ಮುಸ್ಲಿಂ, 35 ಸಾವಿರ ಇತರ ಮತದಾರರಿದ್ದಾರೆ.

Vijayanagara Constituency
ವಿಜಯನಗರ ವಿಧಾನಸಭಾ ಕ್ಷೇತ್ರ

2008, 2013, 2018 ಮೂರು ಬಾರಿಯೂ ಕಾಂಗ್ರೆಸ್​ನಿಂದ ಎಂ ಕೃಷ್ಣಪ್ಪ ಸ್ಪರ್ಧಿಸಿ ಹ್ಯಾಟ್ರಿಕ್ ಜಯಭೇರಿ ಭಾರಿಸಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಅನುಭವ ಇದೆ. ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೃಷ್ಣಪ್ಪ ಪಾಲಿಗೆ ಶ್ರೀರಕ್ಷೆಯಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕ್ಷೇತ್ರದಲ್ಲಿ ಚಿರಪರಿಚಿತರಾಗಿ ಕ್ಷೇತ್ರದ ಜನರ ಜೊತೆ ಬೆರೆತು ಕ್ಷೇತ್ರದ ತುಂಬಾ ಸಂಚರಿಸಿಕೊಂಡಿದ್ದಾರೆ. ಹಿರಿಯ ನಾಯಕರಾಗಿರುವ ಕೃಷ್ಣಪ್ಪ ಅಪಾರ ಕಾರ್ಯಕರ್ತರ ಪಡೆಯನ್ನು ಹೊಂದಿದ್ದು, ಕ್ಷೇತ್ರದ ತುಂಬಾ ಮಿಂಚಿನ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ತಾರಾ ಪ್ರಚಾರಕರ ಅನಿವಾರ್ಯತೆ ಇಲ್ಲದೇ ಸ್ವತಂತ್ರವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್​ನ ಹಿರಿಯ ನಾಯಕರು ಬಂದು ಪ್ರಚಾರ ನಡೆಸಿದ್ದು, ಕ್ಷೇತ್ರದ ತುಂಬಾ ಅಬ್ಬರದ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಕಳೆದ ಮೂರು ಚುನಾವಣೆಯಲ್ಲಿಯೂ ಬೇರೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಬಿಜೆಪಿಗೆ ಗೆಲುವು ಸಿಕ್ಕಿಲ್ಲ. 2008 ರಲ್ಲಿ ಪ್ರಮಿಳಾ ನೇಸರ್ಗಿ, 2013 ರಲ್ಲಿ ವಿ ಸೋಮಣ್ಣ, 2018 ರಲ್ಲಿ ಹೆಚ್. ರವೀಂದ್ರ ಅವರನ್ನು ಕಣಕ್ಕಿಳಿಸಿತ್ತು. ಆದರೆ, ವಿಜಯ ಮಾಲೆ ಸಿಗಲಿಲ್ಲ. ಕಳೆದ ಬಾರಿ ಕೃಷ್ಣಪ್ಪರಿಗೆ ತೀವ್ರ ಪೈಪೋಟಿ ಒಡ್ಡಿ ಅತ್ಯಲ್ಪ ಮತಗಳ ಅಂತರದಲ್ಲಿ ರವೀಂದ್ರ ಪರಾಜಿತರಾಗಿದ್ದರು. ಒಂದು ಹಂತದಲ್ಲಿ ಕೃಷ್ಣಪ್ಪ ಸೋಲುವ ಭೀತಿಗೆ ಸಿಲುಕಿದ ಸನ್ನಿವೇಶವನ್ನೂ ಸೃಷ್ಟಿಸಿದ್ದರು. ಅವರಿಗೇ ಈ ಬಾರಿ ಮತ್ತೊಮ್ಮೆ ಬಿಜೆಪಿ ಟಿಕೆಟ್ ನೀಡಿದೆ. ಹಾಗಾಗಿ ಕಳೆದ ಬಾರಿಯ ಎದುರಾಳಿಗಳೇ ಈ ಬಾರಿ ನೇರಾನೇರ ಸ್ಪರ್ಧೆಯಲ್ಲಿದ್ದಾರೆ.

ಕೃಷ್ಣಪ್ಪ ಅಬ್ಬರದ ಪ್ರಚಾರ ನಡೆಸುತ್ತಿದದರೆ ಬಿಜೆಪಿಯ ರವೀಂದ್ರ ಕೂಡ ಹಿಂದೆ ಬಿದ್ದಿಲ್ಲ. ಹಾಲಿ ಸಚಿವ ಪಕ್ಷದ ಕ್ಷೇತ್ರ ಗೋವಿಂದರಾಜನಗರ ಕ್ಷೇತ್ರದ ಶಾಸಕ ಸೋಮಣ್ಣ ನೆರವಿನಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದಾರೆ. ಸೋಮಣ್ಣ ಕೂಡ ಕ್ಷೇತ್ರದ ಮೇಲೆ ವಿಶೇಷ ಆಸಕ್ತಿ ತೋರಿ ಕೆಲಸ ಮಾಡಿದ್ದಾರೆ. ಅಲ್ಲದೇ ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಳೆದೆರಡು ಚುನಾವಣೆಯಲ್ಲಿ ತೀರಾ ಕಳಪೆ ಸಾಧನೆ ತೋರಿದ್ದ ಹಿನ್ನೆಲೆಯಲ್ಲಿ ಈ ಬಾರಿ ಅಭ್ಯರ್ಥಿ ಹಾಕುವ ಗೋಜಿಗೆ ಜೆಡಿಎಸ್ ಹೋಗಿಲ್ಲ ಹಾಗಾಗಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರ ಪೈಪೋಟಿ ಇದೆ. ಇನ್ನು ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಹೆಚ್ಚಾಗಿದೆ.

'ಕೃಷ್ಣಪ್ಪ ಗೆದ್ದೇ ಗೆಲ್ಲುತ್ತಾರೆ. ಮತ್ತೆ ಮಂತ್ರಿಯಾಗುತ್ತಾರೆ ಎನ್ನುವ ಭರವಸೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಬಾರಿ ಮನೆ ಮನೆ ಪ್ರಚಾರ ಸರಿಯಾಗಿ ಮಾಡದ ಕಾರಣದಿಂದಾಗಿ ಗೆಲುವಿನ ಅಂತರ ಕಡಿಮೆಯಾಗಿತ್ತು. ಆದರೆ ಈ ಬಾರಿ ಮನೆ ಮನೆ ಪ್ರಚಾರಕ್ಕೆ ಆದ್ಯತೆ ನೀಡಿದ್ದಾರೆ. ಎಲ್ಲ ಕಡೆ ಪ್ರಚಾರ ಮಾಡುತ್ತಿದ್ದೇವೆ. ಕೃಷ್ಣಪ್ಪ ಈ ಬಾರಿ ಹೆಚ್ಚಿನ ಅಂತರದಲ್ಲಿ ಗೆದ್ದು ಕಾಂಗ್ರೆಸ್ ಸರ್ಕಾರ ರಚನೆಯಾದರೆ ಸಚಿವರಾಗಿಯೂ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ. ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಿಜೆಪಿಯವರಿಂದ ಏನೂ ಸಹಾಯವಾಗಿಲ್ಲ. ಕುಡಿಯುವ ನೀರು, ಮೂಲಸೌಕರ್ಯ ಸೇರಿದಂತೆ ಎಲ್ಲ ವ್ಯವಸ್ಥೆ ಶಾಸಕ ಕೃಷ್ಣಪ್ಪ ಅವರಿಂದ ಸಿಕ್ಕಿದೆ. ಹಾಗಾಗಿ ಅವರಿಗೆ ಮತ ಹಾಕುತ್ತೇವೆ ಎನ್ನುವ ಹೇಳಿಕೆಯನ್ನು ಮತದಾರರು ನೀಡುತ್ತಿದ್ದಾರೆ. ಹಾಗಾಗಿ ಈ ಬಾರಿಯೂ ಕೃಷ್ಣಪ್ಪ ಗೆಲುವು ಖಚಿತ' ಎಂದು ಕೃಷ್ಣಪ್ಪ ಪರ ಪ್ರಚಾರ ಕಾರ್ಯ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಗೌಡನಾಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತೆ ಶಿವಮ್ಮ ಮಾತನಾಡಿ, ಕೋವಿಡ್ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕಷ್ಟದಲ್ಲಿದ್ದಾಗ ಸಹಾಯ ಮಾಡಿದ್ದಾರೆ. ಹಾಗಾಗಿ ಅವರಿಗೆ ಮತದಾರರು ಮಣೆ ಹಾಕುತ್ತಾರೆ ಎಂದರು. ಬಿಜೆಪಿ ಕಾರ್ಯಕರ್ತರಲ್ಲಿಯೂ ಹುರುಪು ಕಡಿಮೆಯಾಗಿಲ್ಲ. ಸೋಮಣ್ಣ ಬೆಂಬಲಿಗರ ಬೆಂಬಲವೂ ಕ್ಷೇತ್ರದಲ್ಲಿ ರವೀಂದ್ರಗೆ ಸಿಕ್ಕಿದೆ. ವಿಜಯನಗರ ಕ್ಷೇತ್ರದ ತುಂಬಾ ಬಿರುಸಿನ ಪ್ರಚಾರದಲ್ಲಿ ರವೀಂದ್ರ ತೊಡಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದ ಮತದಾರರ ಆಶೀರ್ವಾದ ಬೇಕು, ವಿಜಯನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ, ಸರ್ವತೋಮುಖ ಅಭಿವೃದ್ಧಿಗೆ ಬೆಂಬಲ ನೀಡಿ, ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ತಮಗೆ ಅವಕಾಶ ನೀಡಬೇಕೆಂದು ಮತದಾರರಿಗೆ ಮನವಿ ಮಾಡಿದ್ದಾರೆ.

ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರೆಲ್ಲರೂ ರವೀಂದ್ರ ಪರ ಪ್ರಚಾರ ಕಾರ್ಯ ನಡೆಸಿದ್ದಾರೆ. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿ ಪ್ರಚಾರ ನಡೆಸಲಿದ್ದು, ರವೀಂದ್ರ ಸಂತಸಕ್ಕೆ ಪಾರವೇ ಇಲ್ಲದಂತೆ ಮಾಡಿದೆ. ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಮೋದಿ ಮಿಂಚಿನ ಸಂಚಲನದ ಪ್ರಚಾರ ಕಾರ್ಯ ಬಿಜೆಪಿಗೆ ಪ್ಲಸ್ ಆಗಲಿದ್ದು, ಮತಗಳಿಕೆಯ ಪ್ರಮಾಣವನ್ನು ಹೆಚ್ಚಿಸಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಮೋದಿ ಮೋಡಿ ವರ್ಕೌಟ್ ಆದಲ್ಲಿ ಕೃಷ್ಣಪ್ಪಗೆ ವಿಜಯಮಾಲೆ ಕಷ್ಟವಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಸಾಕಷ್ಟು ಆಗಿದ್ದರೂ, ರಸ್ತೆ, ಕುಡಿಯುವ ನೀರಿನ ಪೂರೈಕೆ ಸಮಸ್ಯೆ ಅಲ್ಲಲ್ಲಿ ಕಂಡುಬರುತ್ತಲೇ ಇರುತ್ತವೆ. ಆದರೆ, ಈಗ ಚುನಾವಣಾ ಸಮಯವಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಗೂ ಮೊದಲೇ ರಸ್ತೆಗಳಿಗೆ ಟಾರು ಹಾಕಲಾಗಿದೆ. ಸಣ್ಣಪುಟ್ಟ ಸಮಸ್ಯೆ ಸರಿಪಡಿಸಲಾಗಿದೆ. ಮೇಲ್ನೋಟಕ್ಕೆ ಸಮಸ್ಯೆಗಳು ಕಾಣದಂತೆ ನೋಡಿಕೊಳ್ಳಲಾಗಿದೆ. ಹಾಗಾಗಿ ಚುನಾವಣಾ ಪ್ರಚಾರದ ನಡುವೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

ಒಟ್ಟಿನಲ್ಲಿ ನೇರಾ ನೇರ ಸ್ಪರ್ಧೆ ಇರುವ ವಿಜಯನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಕೃಷ್ಣಪ್ಪ ಕೊರಳಿಗೆ ನಾಲ್ಕನೇ ಬಾರಿ ಗೆಲುವಿನ ಹಾರ ಬೀಳಲಿದೆಯಾ, ಮೋದಿ ಮೋಡಿ ಮಾಡಿ ರವೀಂದ್ರಗೆ ಮೊದಲ ಬಾರಿ ಗೆಲುವಿನ ಉಡುಗೊರೆ ನೀಡಲಿದ್ದಾರಾ? ಎನ್ನುವುದು ಮೇ 10 ರಂದು ನಿರ್ಧಾರವಾಗಲಿದ್ದು, 14 ಅಭ್ಯರ್ಥಿಗಳ ಭವಿಷ್ಯ ಅಂದು ಮತಯಂತ್ರದಲ್ಲಿ ಭದ್ರವಾಗಲಿದೆ. ಮೇ.13 ರಂದು ಯಾರಾಗಲಿದ್ದಾರೆ ವಿಜಯನಗರದ ವೀರಪುತ್ರ ಎನ್ನುವುದು ಗೊತ್ತಾಗಲಿದೆ.

ಇದನ್ನೂ ಓದಿ: ಜೆಡಿಎಸ್​ ಭದ್ರಕೋಟೆ ಹಾಸನದಲ್ಲಿ ರಂಗು ಪಡೆದುಕೊಂಡ ಚುನಾವಣೆ: ಜೆಡಿಎಸ್​ - ಬಿಜೆಪಿ ನಡುವೆ ಪೈಪೋಟಿ

ವಿಜಯನಗರ ವಿಧಾನಸಭಾ ಕ್ಷೇತ್ರ

ಬೆಂಗಳೂರು: ಕಳೆದ ಬಾರಿ ಜಿದ್ದಾಜಿದ್ದಿಯ ಕ್ಷೇತ್ರವಾಗಿದ್ದ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಸ್ಪಷ್ಟವಾಗಿದೆ. ಹಳೆಯ ಹುರಿಯಾಳುಗಳೇ ಮತ್ತೊಮ್ಮೆ ಮುಖಾಮುಖಿಯಾಗಿದ್ದು, ವಿಜಯನಗರ ಅಖಾಡದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ. ಕ್ಷೇತ್ರ ದಕ್ಕಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯಾಸಪಡುತ್ತಿದೆ.

ಬೆಂಗಳೂರಿನ ಹೃದಯ ಭಾಗದ ಪಕ್ಕದಲ್ಲೇ ಇರುವ ವಿಜಯನಗರ ಕ್ಷೇತ್ರ ಉತ್ತಮ ಸೌಕರ್ಯಗಳಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಮೆಟ್ರೋ ಸೇರಿದಂತೆ ಎಲ್ಲ ರೀತಿಯ ಸಂಪರ್ಕ, ಸುಸಜ್ಜಿತ ಬಡಾವಣೆಗಳು, ಶಾಪಿಂಗ್ ತಾಣಗಳು, ಗ್ರಂಥಾಲಯ, ಉದ್ಯಾನಗಳು, ಉತ್ತಮ ಶಿಕ್ಷಣ ಸಂಸ್ಥೆಗಳು, ಆಧುನಿಕ ಆಸ್ಪತ್ರೆಗಳು ಕ್ಷೇತ್ರದಲ್ಲಿವೆ. ಬಿಜೆಪಿಯ ಕಾರ್ಪೊರೇಟರ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದರೂ ಕ್ಷೇತ್ರ ಮಾತ್ರ ಕಾಂಗ್ರೆಸ್​ನ ಹಿಡಿತದಲ್ಲಿಯೇ ಇದೆ. ವಿಜಯನಗರ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆಯಾಗಿದೆ. ಅಭಿವೃದ್ಧಿ ಹೊಂದಿದ ಪ್ರದೇಶಗಳು, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿಂದ ಕೂಡಿರುವ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿ ಇರುವ ಕಣವಾಗಿದೆ.

ಮತದಾರರ ವಿವರ: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 3,05,386 ಮತದಾರರಿದ್ದಾರೆ. ಇದರಲ್ಲಿ 1,60,151 ಪುರುಷ ಮತದಾರರು, 1,45,099 ಮಹಿಳಾ ಮತದಾರರಿದ್ದಾರೆ. ಪುರುಷ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ 51 ಸಾವಿರ ಒಕ್ಕಲಿಗ ಮತದಾರರಿದ್ದು, ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಮುಸ್ಲಿಂ ಮತಗಳು ಬಹಳ ಮಹತ್ವದದ್ದಾಗಿವೆ. ಇಲ್ಲಿ 17,500 ಲಿಂಗಾಯತ ಮತದಾರರು, 9 ಸಾವಿರ ಬ್ರಾಹ್ಮಣ ಮತದಾರರು, 38 ಸಾವಿರ ಒಬಿಸಿ, 42 ಸಾವಿರ ಎಸ್ಸಿ ಎಸ್ಟಿ, 37 ಸಾವಿರ ಮುಸ್ಲಿಂ, 35 ಸಾವಿರ ಇತರ ಮತದಾರರಿದ್ದಾರೆ.

Vijayanagara Constituency
ವಿಜಯನಗರ ವಿಧಾನಸಭಾ ಕ್ಷೇತ್ರ

2008, 2013, 2018 ಮೂರು ಬಾರಿಯೂ ಕಾಂಗ್ರೆಸ್​ನಿಂದ ಎಂ ಕೃಷ್ಣಪ್ಪ ಸ್ಪರ್ಧಿಸಿ ಹ್ಯಾಟ್ರಿಕ್ ಜಯಭೇರಿ ಭಾರಿಸಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಅನುಭವ ಇದೆ. ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೃಷ್ಣಪ್ಪ ಪಾಲಿಗೆ ಶ್ರೀರಕ್ಷೆಯಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕ್ಷೇತ್ರದಲ್ಲಿ ಚಿರಪರಿಚಿತರಾಗಿ ಕ್ಷೇತ್ರದ ಜನರ ಜೊತೆ ಬೆರೆತು ಕ್ಷೇತ್ರದ ತುಂಬಾ ಸಂಚರಿಸಿಕೊಂಡಿದ್ದಾರೆ. ಹಿರಿಯ ನಾಯಕರಾಗಿರುವ ಕೃಷ್ಣಪ್ಪ ಅಪಾರ ಕಾರ್ಯಕರ್ತರ ಪಡೆಯನ್ನು ಹೊಂದಿದ್ದು, ಕ್ಷೇತ್ರದ ತುಂಬಾ ಮಿಂಚಿನ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ತಾರಾ ಪ್ರಚಾರಕರ ಅನಿವಾರ್ಯತೆ ಇಲ್ಲದೇ ಸ್ವತಂತ್ರವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್​ನ ಹಿರಿಯ ನಾಯಕರು ಬಂದು ಪ್ರಚಾರ ನಡೆಸಿದ್ದು, ಕ್ಷೇತ್ರದ ತುಂಬಾ ಅಬ್ಬರದ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಕಳೆದ ಮೂರು ಚುನಾವಣೆಯಲ್ಲಿಯೂ ಬೇರೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಬಿಜೆಪಿಗೆ ಗೆಲುವು ಸಿಕ್ಕಿಲ್ಲ. 2008 ರಲ್ಲಿ ಪ್ರಮಿಳಾ ನೇಸರ್ಗಿ, 2013 ರಲ್ಲಿ ವಿ ಸೋಮಣ್ಣ, 2018 ರಲ್ಲಿ ಹೆಚ್. ರವೀಂದ್ರ ಅವರನ್ನು ಕಣಕ್ಕಿಳಿಸಿತ್ತು. ಆದರೆ, ವಿಜಯ ಮಾಲೆ ಸಿಗಲಿಲ್ಲ. ಕಳೆದ ಬಾರಿ ಕೃಷ್ಣಪ್ಪರಿಗೆ ತೀವ್ರ ಪೈಪೋಟಿ ಒಡ್ಡಿ ಅತ್ಯಲ್ಪ ಮತಗಳ ಅಂತರದಲ್ಲಿ ರವೀಂದ್ರ ಪರಾಜಿತರಾಗಿದ್ದರು. ಒಂದು ಹಂತದಲ್ಲಿ ಕೃಷ್ಣಪ್ಪ ಸೋಲುವ ಭೀತಿಗೆ ಸಿಲುಕಿದ ಸನ್ನಿವೇಶವನ್ನೂ ಸೃಷ್ಟಿಸಿದ್ದರು. ಅವರಿಗೇ ಈ ಬಾರಿ ಮತ್ತೊಮ್ಮೆ ಬಿಜೆಪಿ ಟಿಕೆಟ್ ನೀಡಿದೆ. ಹಾಗಾಗಿ ಕಳೆದ ಬಾರಿಯ ಎದುರಾಳಿಗಳೇ ಈ ಬಾರಿ ನೇರಾನೇರ ಸ್ಪರ್ಧೆಯಲ್ಲಿದ್ದಾರೆ.

ಕೃಷ್ಣಪ್ಪ ಅಬ್ಬರದ ಪ್ರಚಾರ ನಡೆಸುತ್ತಿದದರೆ ಬಿಜೆಪಿಯ ರವೀಂದ್ರ ಕೂಡ ಹಿಂದೆ ಬಿದ್ದಿಲ್ಲ. ಹಾಲಿ ಸಚಿವ ಪಕ್ಷದ ಕ್ಷೇತ್ರ ಗೋವಿಂದರಾಜನಗರ ಕ್ಷೇತ್ರದ ಶಾಸಕ ಸೋಮಣ್ಣ ನೆರವಿನಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದಾರೆ. ಸೋಮಣ್ಣ ಕೂಡ ಕ್ಷೇತ್ರದ ಮೇಲೆ ವಿಶೇಷ ಆಸಕ್ತಿ ತೋರಿ ಕೆಲಸ ಮಾಡಿದ್ದಾರೆ. ಅಲ್ಲದೇ ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಳೆದೆರಡು ಚುನಾವಣೆಯಲ್ಲಿ ತೀರಾ ಕಳಪೆ ಸಾಧನೆ ತೋರಿದ್ದ ಹಿನ್ನೆಲೆಯಲ್ಲಿ ಈ ಬಾರಿ ಅಭ್ಯರ್ಥಿ ಹಾಕುವ ಗೋಜಿಗೆ ಜೆಡಿಎಸ್ ಹೋಗಿಲ್ಲ ಹಾಗಾಗಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರ ಪೈಪೋಟಿ ಇದೆ. ಇನ್ನು ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಹೆಚ್ಚಾಗಿದೆ.

'ಕೃಷ್ಣಪ್ಪ ಗೆದ್ದೇ ಗೆಲ್ಲುತ್ತಾರೆ. ಮತ್ತೆ ಮಂತ್ರಿಯಾಗುತ್ತಾರೆ ಎನ್ನುವ ಭರವಸೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಬಾರಿ ಮನೆ ಮನೆ ಪ್ರಚಾರ ಸರಿಯಾಗಿ ಮಾಡದ ಕಾರಣದಿಂದಾಗಿ ಗೆಲುವಿನ ಅಂತರ ಕಡಿಮೆಯಾಗಿತ್ತು. ಆದರೆ ಈ ಬಾರಿ ಮನೆ ಮನೆ ಪ್ರಚಾರಕ್ಕೆ ಆದ್ಯತೆ ನೀಡಿದ್ದಾರೆ. ಎಲ್ಲ ಕಡೆ ಪ್ರಚಾರ ಮಾಡುತ್ತಿದ್ದೇವೆ. ಕೃಷ್ಣಪ್ಪ ಈ ಬಾರಿ ಹೆಚ್ಚಿನ ಅಂತರದಲ್ಲಿ ಗೆದ್ದು ಕಾಂಗ್ರೆಸ್ ಸರ್ಕಾರ ರಚನೆಯಾದರೆ ಸಚಿವರಾಗಿಯೂ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ. ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಿಜೆಪಿಯವರಿಂದ ಏನೂ ಸಹಾಯವಾಗಿಲ್ಲ. ಕುಡಿಯುವ ನೀರು, ಮೂಲಸೌಕರ್ಯ ಸೇರಿದಂತೆ ಎಲ್ಲ ವ್ಯವಸ್ಥೆ ಶಾಸಕ ಕೃಷ್ಣಪ್ಪ ಅವರಿಂದ ಸಿಕ್ಕಿದೆ. ಹಾಗಾಗಿ ಅವರಿಗೆ ಮತ ಹಾಕುತ್ತೇವೆ ಎನ್ನುವ ಹೇಳಿಕೆಯನ್ನು ಮತದಾರರು ನೀಡುತ್ತಿದ್ದಾರೆ. ಹಾಗಾಗಿ ಈ ಬಾರಿಯೂ ಕೃಷ್ಣಪ್ಪ ಗೆಲುವು ಖಚಿತ' ಎಂದು ಕೃಷ್ಣಪ್ಪ ಪರ ಪ್ರಚಾರ ಕಾರ್ಯ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಗೌಡನಾಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತೆ ಶಿವಮ್ಮ ಮಾತನಾಡಿ, ಕೋವಿಡ್ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕಷ್ಟದಲ್ಲಿದ್ದಾಗ ಸಹಾಯ ಮಾಡಿದ್ದಾರೆ. ಹಾಗಾಗಿ ಅವರಿಗೆ ಮತದಾರರು ಮಣೆ ಹಾಕುತ್ತಾರೆ ಎಂದರು. ಬಿಜೆಪಿ ಕಾರ್ಯಕರ್ತರಲ್ಲಿಯೂ ಹುರುಪು ಕಡಿಮೆಯಾಗಿಲ್ಲ. ಸೋಮಣ್ಣ ಬೆಂಬಲಿಗರ ಬೆಂಬಲವೂ ಕ್ಷೇತ್ರದಲ್ಲಿ ರವೀಂದ್ರಗೆ ಸಿಕ್ಕಿದೆ. ವಿಜಯನಗರ ಕ್ಷೇತ್ರದ ತುಂಬಾ ಬಿರುಸಿನ ಪ್ರಚಾರದಲ್ಲಿ ರವೀಂದ್ರ ತೊಡಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದ ಮತದಾರರ ಆಶೀರ್ವಾದ ಬೇಕು, ವಿಜಯನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ, ಸರ್ವತೋಮುಖ ಅಭಿವೃದ್ಧಿಗೆ ಬೆಂಬಲ ನೀಡಿ, ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ತಮಗೆ ಅವಕಾಶ ನೀಡಬೇಕೆಂದು ಮತದಾರರಿಗೆ ಮನವಿ ಮಾಡಿದ್ದಾರೆ.

ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರೆಲ್ಲರೂ ರವೀಂದ್ರ ಪರ ಪ್ರಚಾರ ಕಾರ್ಯ ನಡೆಸಿದ್ದಾರೆ. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿ ಪ್ರಚಾರ ನಡೆಸಲಿದ್ದು, ರವೀಂದ್ರ ಸಂತಸಕ್ಕೆ ಪಾರವೇ ಇಲ್ಲದಂತೆ ಮಾಡಿದೆ. ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಮೋದಿ ಮಿಂಚಿನ ಸಂಚಲನದ ಪ್ರಚಾರ ಕಾರ್ಯ ಬಿಜೆಪಿಗೆ ಪ್ಲಸ್ ಆಗಲಿದ್ದು, ಮತಗಳಿಕೆಯ ಪ್ರಮಾಣವನ್ನು ಹೆಚ್ಚಿಸಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಮೋದಿ ಮೋಡಿ ವರ್ಕೌಟ್ ಆದಲ್ಲಿ ಕೃಷ್ಣಪ್ಪಗೆ ವಿಜಯಮಾಲೆ ಕಷ್ಟವಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಸಾಕಷ್ಟು ಆಗಿದ್ದರೂ, ರಸ್ತೆ, ಕುಡಿಯುವ ನೀರಿನ ಪೂರೈಕೆ ಸಮಸ್ಯೆ ಅಲ್ಲಲ್ಲಿ ಕಂಡುಬರುತ್ತಲೇ ಇರುತ್ತವೆ. ಆದರೆ, ಈಗ ಚುನಾವಣಾ ಸಮಯವಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಗೂ ಮೊದಲೇ ರಸ್ತೆಗಳಿಗೆ ಟಾರು ಹಾಕಲಾಗಿದೆ. ಸಣ್ಣಪುಟ್ಟ ಸಮಸ್ಯೆ ಸರಿಪಡಿಸಲಾಗಿದೆ. ಮೇಲ್ನೋಟಕ್ಕೆ ಸಮಸ್ಯೆಗಳು ಕಾಣದಂತೆ ನೋಡಿಕೊಳ್ಳಲಾಗಿದೆ. ಹಾಗಾಗಿ ಚುನಾವಣಾ ಪ್ರಚಾರದ ನಡುವೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

ಒಟ್ಟಿನಲ್ಲಿ ನೇರಾ ನೇರ ಸ್ಪರ್ಧೆ ಇರುವ ವಿಜಯನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಕೃಷ್ಣಪ್ಪ ಕೊರಳಿಗೆ ನಾಲ್ಕನೇ ಬಾರಿ ಗೆಲುವಿನ ಹಾರ ಬೀಳಲಿದೆಯಾ, ಮೋದಿ ಮೋಡಿ ಮಾಡಿ ರವೀಂದ್ರಗೆ ಮೊದಲ ಬಾರಿ ಗೆಲುವಿನ ಉಡುಗೊರೆ ನೀಡಲಿದ್ದಾರಾ? ಎನ್ನುವುದು ಮೇ 10 ರಂದು ನಿರ್ಧಾರವಾಗಲಿದ್ದು, 14 ಅಭ್ಯರ್ಥಿಗಳ ಭವಿಷ್ಯ ಅಂದು ಮತಯಂತ್ರದಲ್ಲಿ ಭದ್ರವಾಗಲಿದೆ. ಮೇ.13 ರಂದು ಯಾರಾಗಲಿದ್ದಾರೆ ವಿಜಯನಗರದ ವೀರಪುತ್ರ ಎನ್ನುವುದು ಗೊತ್ತಾಗಲಿದೆ.

ಇದನ್ನೂ ಓದಿ: ಜೆಡಿಎಸ್​ ಭದ್ರಕೋಟೆ ಹಾಸನದಲ್ಲಿ ರಂಗು ಪಡೆದುಕೊಂಡ ಚುನಾವಣೆ: ಜೆಡಿಎಸ್​ - ಬಿಜೆಪಿ ನಡುವೆ ಪೈಪೋಟಿ

Last Updated : May 6, 2023, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.