ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೈಗೊಳ್ಳಬೇಕಿದ್ದ ಎರಡು ದಿನಗಳ ಮಂಗಳೂರು ಪ್ರವಾಸ ರದ್ದುಗೊಂಡಿದೆ. ಪೂರ್ವ ನಿಗದಿತ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ಸಿಎಂ ರದ್ದುಪಡಿಸಿದ್ದಾರೆ.
ಏಪ್ರಿಲ್ 8 ಮತ್ತು 9 ರಂದು ಕಡಲ ನಗರಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಬೇಕಿತ್ತು. ಸಮಯಾವಕಾಶವನ್ನೂ ನೀಡಿ ಪ್ರೋಟೋಕಾಲ್ ರೀತಿ ಎಲ್ಲ ಸಿದ್ದತೆ ಮಾಡಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಎರಡು ದಿನ ಇರುವಾಗ ಮುಖ್ಯಮಂತ್ರಿಗಳು ಮಂಗಳೂರು ಪ್ರವಾಸವನ್ನು ರದ್ದುಪಡಿಸಿರುವ ಕುರಿತು ಸಿಎಂ ಕಚೇರಿ ಪ್ರಕಟಣೆ ಹೊರಡಿಸಿದೆ.
ಓದಿ : ಬೆಳಗಾವಿಗೆ ತೆರಳಿದ ಸಿಎಂ: ನಾಳೆ ಮಂಗಳಾ ಅಂಗಡಿ ಪರ ಪ್ರಚಾರ
ಇಂದು ಬೆಳಗಾವಿಗೆ ತೆರಳಿರುವ ಸಿಎಂ, ನಾಳೆ ರಾತ್ರಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಏಪ್ರಿಲ್ 9 ರಂದು ರಾಜ್ಯಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದು, ಅವರೊಂದಿಗೆ ಪ್ರವಾಸ ಮಾಡಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಸಾಧ್ಯತೆ ಇದೆ.