ETV Bharat / state

ಸಿದ್ದರಾಮಯ್ಯಗೆ ಕಾಮನ್‌ಸೆನ್ಸ್‌ ಇಲ್ಲ, ಪ್ರಚಾರಕ್ಕೋಸ್ಕರ ನನ್ನ ಹೇಳಿಕೆ ಬಳಸಿಕೊಳ್ತಿದ್ದಾರೆ: ಬಿಎಸ್‌ವೈ - CM Yeddyurappa news

ಆಡಿಯೋ ವೈರಲ್​ ಕುರಿತು ಪ್ರತಿಕ್ರಿಯಿಸಿದ ಬಿ.ಎಸ್‌ ಯಡಿಯೂರಪ್ಪ, ಅನರ್ಹರು ಮುಂಬೈಗೆ ಹೋಗಿದ್ದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಆ ಮಾತನ್ನೇ ನಾನು ಹೇಳಿದ್ದೇನೆ ಅಷ್ಟೇ ಎಂದರು.

ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಇಲ್ಲ: ಸಿಎಂ ಬಿಎಸ್​ವೈ ಆಕ್ರೋಶ
author img

By

Published : Nov 3, 2019, 12:19 PM IST

ಬೆಂಗಳೂರು: ಅನರ್ಹ ಶಾಸಕರ ಕುರಿತು ಸಿಎಂ ಯಡಿಯೂರಪ್ಪ ಮಾತನಾಡಿದ ಆಡಿಯೋ ವಿರುದ್ಧ ನಿನ್ನೆ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡಿರುವ ವಿಚಾರ ಕುರಿತಂತೆ ‌ಡಾಲರ್ಸ್ ಕಾಲೋನಿ‌ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಇಲ್ಲ: ಸಿಎಂ ಬಿಎಸ್​ವೈ ಆಕ್ರೋಶ

ಈ ಕುರಿತು ಪ್ರತಿಕ್ರಿಯಿಸಿರುವ ಬಿ.ಎಸ್.​ವೈ ಕಾಂಗ್ರೆಸ್​ನವರದ್ದು ಹುಚ್ಚುತನದ ಪರಮಾವಧಿ. ಸಿದ್ದರಾಮಯ್ಯ ಪ್ರಚಾರ ಪ್ರಿಯರು‌. ಸಿದ್ದರಾಮಯ್ಯ ಒಬ್ಬ ವಕೀಲರಾಗಿ ಸರ್ಕಾರದ ಪರ ಮಾತಾಡೋದು ಸರಿಯಲ್ಲ. ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಜೊತೆಗೆ ವಾಸ್ತವಿಕ ಪ್ರಜ್ಞೆಯೇ ಇಲ್ಲ ಎಂದರು.

ನಾನು ಸಭೆಯಲ್ಲಿ ಅನರ್ಹ ಶಾಸಕರು ಅವರದ್ದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ‌. ಮುಂದೇನು ಮಾಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ ಎಂದಿದ್ದೆ. ಸದ್ಯ ಸುಪ್ರೀಂಕೋರ್ಟ್​ನಲ್ಲಿ ಅನರ್ಹ ಶಾಸಕರ ವಿಚಾರಣೆ ಇದೆ. ಕಾಂಗ್ರೆಸ್ ಸಂಚು ಮಾಡಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಲು ಈ ರೀತಿ ಮಾಡ್ತಿದ್ದಾರೆ. ಮತ್ತೊಂದೆಡೆ ಅಮಿತ್ ಷಾ ರಾಜೀನಾಮೆ ಕೊಡಬೇಕೆಂದು ತಿಳಿಸಿದ್ದಾರೆಂದು ಆರೋಪಿಸಿದ್ದು ಮೂರ್ಖತನದ ಪರಮಾವಧಿ. ಈಗ ರಾಜೀನಾಮೆ ಕೊಟ್ಟಿರೋರಿಗೆ ಟಿಕೆಟ್‌ ಕೊಡ್ತೀನಿ ಅಂತ ನಾನು ಹೇಳಿಲ್ಲ. ಸಿದ್ದರಾಮಯ್ಯ ತಾನೇ ದೊಡ್ಡ ಲೀಡರ್ ಅಂತ ಅಂದ್ಕೊಂಡು ಸುಳ್ಳು ಪ್ರಚಾರ‌ ಮಾಡ್ತಿದ್ದಾರೆ. ಅನರ್ಹರು ತಮ್ಮದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಆಡಿಯೋ ವೈರಲ್​ ಕುರಿತು ಪ್ರತಿಕ್ರಿಯಿಸಿದ ಸಿಎಂ, ಅನರ್ಹರು ಮುಂಬೈಗೆ ಹೋಗಿದ್ದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಆ ಮಾತನ್ನೇ ನಾನು ಹೇಳಿದ್ದೇನೆ. ಅದಕ್ಕೂ ಅಮಿತ್ ಶಾಗೂ ಏನ್ ಸಂಬಂಧ? ಸಿದ್ದರಾಮಯ್ಯ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಾರೂ ಅವರಿಗೆ ಗೌರವ ಕೊಡಲ್ಲ, ಸಿದ್ದರಾಮಯ್ಯನವ್ರ ನಡವಳಿಕೆಯನ್ನು ಕಾಂಗ್ರೆಸ್‌ನವ್ರೇ ಇಷ್ಟಪಡಲ್ಲ ಎಂದು ಬಿಎಸ್​ವೈ ಆಕ್ರೋಶ ವ್ಯಕ್ತಪಡಿಸಿದರು.

ಹಾಗೆಯೇ ಬಿಜೆಪಿಗೆ ಜೆಡಿಎಸ್ ಬೇಷರತ್ ಬೆಂಬಲ ಎಂಬ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರಕ್ಕೆ ಇಂತಹ ಹೇಳಿಕೆಗಳಿಗೆಲ್ಲ ನಾನು‌ ಪ್ರತಿಕ್ರಿಯೆ ಕೊಡಲ್ಲ, ಅದು ಅವರ ವೈಯಕ್ತಿಕ ವಿಚಾರ ಎಂದರು.

ಬೆಂಗಳೂರು: ಅನರ್ಹ ಶಾಸಕರ ಕುರಿತು ಸಿಎಂ ಯಡಿಯೂರಪ್ಪ ಮಾತನಾಡಿದ ಆಡಿಯೋ ವಿರುದ್ಧ ನಿನ್ನೆ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡಿರುವ ವಿಚಾರ ಕುರಿತಂತೆ ‌ಡಾಲರ್ಸ್ ಕಾಲೋನಿ‌ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಇಲ್ಲ: ಸಿಎಂ ಬಿಎಸ್​ವೈ ಆಕ್ರೋಶ

ಈ ಕುರಿತು ಪ್ರತಿಕ್ರಿಯಿಸಿರುವ ಬಿ.ಎಸ್.​ವೈ ಕಾಂಗ್ರೆಸ್​ನವರದ್ದು ಹುಚ್ಚುತನದ ಪರಮಾವಧಿ. ಸಿದ್ದರಾಮಯ್ಯ ಪ್ರಚಾರ ಪ್ರಿಯರು‌. ಸಿದ್ದರಾಮಯ್ಯ ಒಬ್ಬ ವಕೀಲರಾಗಿ ಸರ್ಕಾರದ ಪರ ಮಾತಾಡೋದು ಸರಿಯಲ್ಲ. ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಜೊತೆಗೆ ವಾಸ್ತವಿಕ ಪ್ರಜ್ಞೆಯೇ ಇಲ್ಲ ಎಂದರು.

ನಾನು ಸಭೆಯಲ್ಲಿ ಅನರ್ಹ ಶಾಸಕರು ಅವರದ್ದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ‌. ಮುಂದೇನು ಮಾಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ ಎಂದಿದ್ದೆ. ಸದ್ಯ ಸುಪ್ರೀಂಕೋರ್ಟ್​ನಲ್ಲಿ ಅನರ್ಹ ಶಾಸಕರ ವಿಚಾರಣೆ ಇದೆ. ಕಾಂಗ್ರೆಸ್ ಸಂಚು ಮಾಡಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಲು ಈ ರೀತಿ ಮಾಡ್ತಿದ್ದಾರೆ. ಮತ್ತೊಂದೆಡೆ ಅಮಿತ್ ಷಾ ರಾಜೀನಾಮೆ ಕೊಡಬೇಕೆಂದು ತಿಳಿಸಿದ್ದಾರೆಂದು ಆರೋಪಿಸಿದ್ದು ಮೂರ್ಖತನದ ಪರಮಾವಧಿ. ಈಗ ರಾಜೀನಾಮೆ ಕೊಟ್ಟಿರೋರಿಗೆ ಟಿಕೆಟ್‌ ಕೊಡ್ತೀನಿ ಅಂತ ನಾನು ಹೇಳಿಲ್ಲ. ಸಿದ್ದರಾಮಯ್ಯ ತಾನೇ ದೊಡ್ಡ ಲೀಡರ್ ಅಂತ ಅಂದ್ಕೊಂಡು ಸುಳ್ಳು ಪ್ರಚಾರ‌ ಮಾಡ್ತಿದ್ದಾರೆ. ಅನರ್ಹರು ತಮ್ಮದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಆಡಿಯೋ ವೈರಲ್​ ಕುರಿತು ಪ್ರತಿಕ್ರಿಯಿಸಿದ ಸಿಎಂ, ಅನರ್ಹರು ಮುಂಬೈಗೆ ಹೋಗಿದ್ದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಆ ಮಾತನ್ನೇ ನಾನು ಹೇಳಿದ್ದೇನೆ. ಅದಕ್ಕೂ ಅಮಿತ್ ಶಾಗೂ ಏನ್ ಸಂಬಂಧ? ಸಿದ್ದರಾಮಯ್ಯ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಾರೂ ಅವರಿಗೆ ಗೌರವ ಕೊಡಲ್ಲ, ಸಿದ್ದರಾಮಯ್ಯನವ್ರ ನಡವಳಿಕೆಯನ್ನು ಕಾಂಗ್ರೆಸ್‌ನವ್ರೇ ಇಷ್ಟಪಡಲ್ಲ ಎಂದು ಬಿಎಸ್​ವೈ ಆಕ್ರೋಶ ವ್ಯಕ್ತಪಡಿಸಿದರು.

ಹಾಗೆಯೇ ಬಿಜೆಪಿಗೆ ಜೆಡಿಎಸ್ ಬೇಷರತ್ ಬೆಂಬಲ ಎಂಬ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರಕ್ಕೆ ಇಂತಹ ಹೇಳಿಕೆಗಳಿಗೆಲ್ಲ ನಾನು‌ ಪ್ರತಿಕ್ರಿಯೆ ಕೊಡಲ್ಲ, ಅದು ಅವರ ವೈಯಕ್ತಿಕ ವಿಚಾರ ಎಂದರು.

Intro:ಸಿದ್ದರಾಮಯ್ಯ ಗೆ ಕಾಮನ್ ಸೆನ್ಸ್ ಇಲ್ಲ.ಸಿದ್ದರಾಮಯ್ಯಗೆ ವಾಸ್ತವಿಕ ಪ್ರಜ್ಞೆ ಇಲ್ಲ:-ಯಡಿಯೂರಪ್ಪ ಆಕ್ರೋಶ

Mojo byite

ಅನರ್ಹ ಶಾಸಕರ ಕುರಿತು ಯಡಿಯೂರಪ್ಪ ಮಾತಾಡಿದ ಆಡಿಯೋ ವಿರುದ್ಧ ನಿನ್ನೆ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡಿರುವ ವಿಚಾರ ಸಂಬಂಧ ‌ಡಾಲರ್ಸ್ ಕಾಲೋನಿ‌ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ನವರದ್ದು ಹುಚ್ಚುತನದ ಪರಮಾವಧಿ .ಸಿದ್ದರಾಮಯ್ಯ ಪ್ರಚಾರ ಪ್ರಿಯರು‌ ಸಿದ್ದರಾಮಯ್ಯ ಒಬ್ಬ ವಕೀಲರಾಗಿ ಸರ್ಕಾರದ ಪರ ಮಾತಾಡೋದು ಸರಿಯಲ್ಲ. ಸಿದ್ದರಾಮಯ್ಯ ಗೆ ಕಾಮನ್ ಸೆನ್ಸ್ಇಲ್ಲ.ಸಿದ್ದರಾಮಯ್ಯಗೆ ವಾಸ್ತವಿಕ ಪ್ರಜ್ಞೆ ಇಲ್ಲ

ನಾನು ಸಭೆಯಲ್ಲಿ ಹೇಳಿದ್ದು, ಅನರ್ಹ ಶಾಸಕರು ರಾಜೀನಾಮೆ ಕೊಟ್ಟೋರು ಅವರದ್ದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ‌.
ಮುಂದೇನು ಮಾಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ ಎಂದಿದ್ದೆ. ಸದ್ಯ ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ವಿಚಾರ ಇದೆ. ಕಾಂಗ್ರೆಸ್ ಸಂಚು ಮಾಡಿ ಗೊಂದಲ ಉಂಟು ಮಾಡಲು ಈ ರೀತಿ ಮಾಡ್ತಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಇದನ್ನು ಹೇಳಿದ್ರೆ ಛೀಮಾರಿ ಹಾಕಿಸ್ಕೋತಾರೆ

ಮತ್ತೊಂದೆಡೆ ಅಮಿತ್ ಷಾ ರಾಜೀನಾಮೆ ಕೊಡಬೇಕು ಅಂದಿದಾರೆ
ಇದು ಮೂರ್ಖತನದ ಪರಮಾವಧಿ. ಏನೋ ಒಂದು ಸುಳ್ಳು ಪ್ರಚಾರ ಮಾಡಲು ಕಾಂಗ್ರೆಸ್ ಯತ್ನಿಸ್ತಿದೆ.ಜನ ಇವರಿಗೆ ತಕ್ಕ ಪಾಠ ಕಲಿಸ್ತಾರೆ ಸಿದ್ದರಾಮಯ್ಯಗೆ ವ್ಯವಹಾರ ಜ್ಞಾನ ಇಲ್ಲ.ಈಗ ರಾಜೀನಾಮೆ ಕೊಟ್ಟಿರೋರಿಗೆ ಸೀಟ್ ಕೊಡ್ತೀನಿ ಅಂತ ನಾನು ಹೇಳಿಲ್ಲ. ಸಿದ್ದರಾಮಯ್ಯ ತಾನೇ ದೊಡ್ಡ ಲೀಡರ್ ಅಂತ ಅನ್ಕೊಂಡು ಸುಳ್ಳು ಪ್ರಚಾರ‌ ಮಾಡ್ತಿದ್ದಾರೆ.ಅನರ್ಹರು ತಮ್ಮದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ .

ಅನರ್ಹರು ಬಾಂಬೆಗೆ ಹೋಗಿದ್ದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ ಎಂದು ಆ ಮಾತನ್ನೇ ನಾನು ಹೇಳಿದ್ದೇನೆ. ಅದಕ್ಕೂ ಅಮಿತ್ ಶಾಗೂ ಏನ್ ಸಂಬಂಧ ?ಸಿದ್ದರಾಮಯ್ಯ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ .ಯಾರೂ ಅವರಿಗೆ ಗೌರವ ಕೊಡಲ್ಲ ,ಸಿದ್ದರಾಮಯ್ಯ ನವ್ರ ನಡವಳಿಕೆಯನ್ನು ಕಾಂಗ್ರೆಸ್ ನವ್ರೇ ಇಷ್ಟ ಪಡಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಬಿಎಸ್ವೈ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ರಾಜ್ಯದಲ್ಲಿ ಮದ್ಯ ನಿಷೇಧದ ಚಿಂತನೆ ಇದೆ ಎಂಬ ಸಂಸದ ಜಿ ಎಸ್ ಬಸವರಾಜು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಯಡಿಯೂರಪ್ಪ ನಕಾರ ಮಾಡಿ ಇದರ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟ ಪಡಲ್ಲ ಎಂದ್ರು. ಹಾಗೆ ಬಿಜೆಪಿಗೆ ಜೆಡಿಎಸ್ ಬೇಷರತ್ ಬೆಂಬಲ ಎಂಬ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರಕ್ಕೆ ಇಂತಹ ಹೇಳಿಕೆಗಳಿಗೆಲ್ಲ ನಾನು‌ ಪ್ರತಿಕ್ರಿಯೆ ಕೊಡಲ್ಲ ಜೆಡಿಎಸ್ ಬೆಂಬಲ ಕುರಿತು ಪ್ರತಿಕ್ರಿಯೆಗೂ ಸಿಎಂ ನಿರಾಕರಣೆ ಮಾಡಿದರು

Body:KN_BNG_03_CM_7204498Conclusion:KN_BNG_03_CM_7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.