ETV Bharat / state

ಕುಮಾರಸ್ವಾಮಿ ಡಬ್ಬಲ್ ಸ್ಟ್ಯಾಂಡರ್ಡ್‌, ಗೋಸುಂಬೆ ಸಿಎಂ.. ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ

ಮೈತ್ರಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಗೈದಿರುವ ಸಂಸದೆ ಶೋಭಾ ಕರಂದ್ಲಾಜೆ ಸಿಎಂ ಕುಮಾರಸ್ವಾಮಿಯವರನ್ನು ಗೋಸುಂಬೆ ಮುಖ್ಯಮಂತ್ರಿ ಎಂದು ಟೀಕೆ ಮಾಡಿದ್ದಾರೆ.

author img

By

Published : Jun 14, 2019, 3:46 PM IST

Updated : Jun 14, 2019, 3:52 PM IST

ಕುಮಾರಸ್ವಾಮಿ ಡಬ್ಬಲ್ ಸ್ಟಾಂಡರ್ಡ್ ಸಿಎಂ

ಬೆಂಗಳೂರು: ಲೀಸ್ ಕಂ ಸೇಲ್ ಅಂದರೆ ಹೊಸ ಸರ್ಕಾರ ಬಂದಾಗ ಮಾರಾಟ ಮಾಡಲಿ ಎನ್ನುವುದಲ್ಲ ಲೀಸ್ ಮುಂದುವರೆಸಿಕೊಂಡು ಹೋಗಲಿ ಎನ್ನುವುದು ಎಂದು ಮೈತ್ರಿ ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.

ನಗರದ ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಬಿಜೆಪಿ ಧರಣಿಯಲ್ಲಿ ಮಾತನಾಡಿದ ಅವರು, ಲೀಸ್ ಕಂ ಸೇಲ್ ಅಂದರೆ ಅವಧಿ‌ಮುಗಿದ ನಂತರ ಲೀಸ್ ಮುಂದುವರೆಸಲಿ ಎಂದು‌ ಅಷ್ಟೇ, ಜಿಂದಾಲ್‌ಗೆ 3667 ಎಕರೆ ಭೂಮಿಯನ್ನು ಹತ್ತು ವರ್ಷ ಲೀಸ್‌ಗೆ ನೀಡಿದ್ದೆವು. ಆದರೆ, ನಾವು ಲೀಸ್ ಕಮ್ ಸೇಲ್ ಕೊಟ್ಟರೆ ನೀವು ಶುದ್ಧ ಕ್ರಯ ಪತ್ರ ಮಾಡಿ‌ ಮಾರಾಟಕ್ಕೆ‌ ಹೊರಟಿದ್ದೀರಾ ಎಂದು ಕಿಡಿಕಾರಿದರು. ಯಾವಾಗ ಡಿ ಕೆ ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಆದರೋ ಆಗಲೇ ಅಲ್ಲಿ‌ ಗೋಲ್‌ಮಾಲ್ ನಡೆಯುತ್ತೆ ಅನ್ನುವುದು ಗೊತ್ತಿತ್ತು. ಈಗ ಅದು ಸಾಬೀತಾಗಿದೆ. ಡಿ ಕೆ ಶಿವಕುಮಾರ್, ಕೆ ಜೆ ಜಾರ್ಜ್, ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ನಿಮಗೆಷ್ಟು ಲಾಭ ಆಗಿದೆ ಎಂದು ಹೇಳಬೇಕು ಎಂದು ಆಗ್ರಹಿಸಿದರು. ತಾವು ಆಡಳಿತಕ್ಕೆ ಬಂದ 24ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದ ಕುಮಾರಸ್ವಾಮಿಯವರು ಈಯವರಗೆ ಒಬ್ಬನೇ ಒಬ್ಬ ರೈತನ ಸಾಲ ಮನ್ನಾ ಮಾಡಿಲ್ಲ. ಚುನಾವಣೆ ಆದ ತಕ್ಷಣ ಬ್ಯಾಂಕಿಗೆ ಕೊಟ್ಟ ಹಣವನ್ನೂ ವಾಪಸ್ ಪಡೆದು ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಡಬ್ಬಲ್ ಸ್ಟಾಂಡರ್ಡ್ ಸಿಎಂ

ಚುನಾವಣೆಗೆ ಮುನ್ನ ಹುಬ್ಬಳ್ಳಿಯಲ್ಲಿ ಸಿಎಂ ಮನೆ ಮಾಡಿದ್ದರು. ಈಗ ಆ ಮನೆ ಏನಾಯ್ತು. ಇವರು ಡಬ್ಬಲ್ ಸ್ಟಾಂಡರ್ಡ್ ಮುಖ್ಯಮಂತ್ರಿ. ಗೋಸುಂಬೆ ಮುಖ್ಯಮಂತ್ರಿ. ಇವರು ಹಾಸನ ಮತ್ತು ಮಂಡ್ಯಕ್ಕೆ ಸೀಮಿತ. ನಾವು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಕೈ ಕಾಲು ಹಿಡಿದು ಸಿಆರ್‌ಎಫ್ ಫಂಡ್ ತಂದರೆ ಈಯವರಗೆ ಲೋಕೋಪಯೋಗಿ ಸಚಿವ ರೇವಣ್ಣ ಟೆಂಡರ್ ಕರೆದಿಲ್ಲ. ಗಡ್ಕರಿಯವರು ಕರೆದು ತಾಕೀತು ಮಾಡಿದ್ರೂ ರೇವಣ್ಣ ಹಾಸನ ಬಿಟ್ಟು ಬೇರೆ ಜಿಲ್ಲೆಗಳ ಕಡೆ ಗಮನಹರಿಸಿಲ್ಲ ಎಂದರು. ಇನ್ನು ಐಎಂಎ ದೋಖಾ ಪ್ರಕರಣ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ, ಕರ್ನಾಟಕದ ಹಲವು ಪೊಲೀಸ್ ಅಧಿಕಾರಿಗಳು ಮನ್ಸೂರ್ ಜತೆ ಕೂತು ಬಿರಿಯಾನಿ ತಿನ್ನುತ್ತಾರೆ. ಜಮೀರ್ ಅಹಮದ್ ಕೂಡ ಮನ್ಸೂರ್ ಜತೆ ಶಾಮೀಲಾಗಿದ್ದಾರೆ. ಹಾಗಾಗಿಯೇ ಈ ಪ್ರಕರಣವನ್ನು ಸಿಬಿಐ ಮತ್ತು ಇಡಿ ತನಿಖೆಗೆ ವಹಿಸಿ. ಇವರ ಹಿಂದೆ ಇರುವ ಭಯೋತ್ಪಾದಕ ಸಂಘಟನೆಯ ಪಾತ್ರವೂ ಗೊತ್ತಾಗಬೇಕು‌ ಎಂದು ಒತ್ತಾಯಿಸಿದರು.

ಬೆಂಗಳೂರು: ಲೀಸ್ ಕಂ ಸೇಲ್ ಅಂದರೆ ಹೊಸ ಸರ್ಕಾರ ಬಂದಾಗ ಮಾರಾಟ ಮಾಡಲಿ ಎನ್ನುವುದಲ್ಲ ಲೀಸ್ ಮುಂದುವರೆಸಿಕೊಂಡು ಹೋಗಲಿ ಎನ್ನುವುದು ಎಂದು ಮೈತ್ರಿ ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.

ನಗರದ ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಬಿಜೆಪಿ ಧರಣಿಯಲ್ಲಿ ಮಾತನಾಡಿದ ಅವರು, ಲೀಸ್ ಕಂ ಸೇಲ್ ಅಂದರೆ ಅವಧಿ‌ಮುಗಿದ ನಂತರ ಲೀಸ್ ಮುಂದುವರೆಸಲಿ ಎಂದು‌ ಅಷ್ಟೇ, ಜಿಂದಾಲ್‌ಗೆ 3667 ಎಕರೆ ಭೂಮಿಯನ್ನು ಹತ್ತು ವರ್ಷ ಲೀಸ್‌ಗೆ ನೀಡಿದ್ದೆವು. ಆದರೆ, ನಾವು ಲೀಸ್ ಕಮ್ ಸೇಲ್ ಕೊಟ್ಟರೆ ನೀವು ಶುದ್ಧ ಕ್ರಯ ಪತ್ರ ಮಾಡಿ‌ ಮಾರಾಟಕ್ಕೆ‌ ಹೊರಟಿದ್ದೀರಾ ಎಂದು ಕಿಡಿಕಾರಿದರು. ಯಾವಾಗ ಡಿ ಕೆ ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಆದರೋ ಆಗಲೇ ಅಲ್ಲಿ‌ ಗೋಲ್‌ಮಾಲ್ ನಡೆಯುತ್ತೆ ಅನ್ನುವುದು ಗೊತ್ತಿತ್ತು. ಈಗ ಅದು ಸಾಬೀತಾಗಿದೆ. ಡಿ ಕೆ ಶಿವಕುಮಾರ್, ಕೆ ಜೆ ಜಾರ್ಜ್, ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ನಿಮಗೆಷ್ಟು ಲಾಭ ಆಗಿದೆ ಎಂದು ಹೇಳಬೇಕು ಎಂದು ಆಗ್ರಹಿಸಿದರು. ತಾವು ಆಡಳಿತಕ್ಕೆ ಬಂದ 24ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದ ಕುಮಾರಸ್ವಾಮಿಯವರು ಈಯವರಗೆ ಒಬ್ಬನೇ ಒಬ್ಬ ರೈತನ ಸಾಲ ಮನ್ನಾ ಮಾಡಿಲ್ಲ. ಚುನಾವಣೆ ಆದ ತಕ್ಷಣ ಬ್ಯಾಂಕಿಗೆ ಕೊಟ್ಟ ಹಣವನ್ನೂ ವಾಪಸ್ ಪಡೆದು ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಡಬ್ಬಲ್ ಸ್ಟಾಂಡರ್ಡ್ ಸಿಎಂ

ಚುನಾವಣೆಗೆ ಮುನ್ನ ಹುಬ್ಬಳ್ಳಿಯಲ್ಲಿ ಸಿಎಂ ಮನೆ ಮಾಡಿದ್ದರು. ಈಗ ಆ ಮನೆ ಏನಾಯ್ತು. ಇವರು ಡಬ್ಬಲ್ ಸ್ಟಾಂಡರ್ಡ್ ಮುಖ್ಯಮಂತ್ರಿ. ಗೋಸುಂಬೆ ಮುಖ್ಯಮಂತ್ರಿ. ಇವರು ಹಾಸನ ಮತ್ತು ಮಂಡ್ಯಕ್ಕೆ ಸೀಮಿತ. ನಾವು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಕೈ ಕಾಲು ಹಿಡಿದು ಸಿಆರ್‌ಎಫ್ ಫಂಡ್ ತಂದರೆ ಈಯವರಗೆ ಲೋಕೋಪಯೋಗಿ ಸಚಿವ ರೇವಣ್ಣ ಟೆಂಡರ್ ಕರೆದಿಲ್ಲ. ಗಡ್ಕರಿಯವರು ಕರೆದು ತಾಕೀತು ಮಾಡಿದ್ರೂ ರೇವಣ್ಣ ಹಾಸನ ಬಿಟ್ಟು ಬೇರೆ ಜಿಲ್ಲೆಗಳ ಕಡೆ ಗಮನಹರಿಸಿಲ್ಲ ಎಂದರು. ಇನ್ನು ಐಎಂಎ ದೋಖಾ ಪ್ರಕರಣ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ, ಕರ್ನಾಟಕದ ಹಲವು ಪೊಲೀಸ್ ಅಧಿಕಾರಿಗಳು ಮನ್ಸೂರ್ ಜತೆ ಕೂತು ಬಿರಿಯಾನಿ ತಿನ್ನುತ್ತಾರೆ. ಜಮೀರ್ ಅಹಮದ್ ಕೂಡ ಮನ್ಸೂರ್ ಜತೆ ಶಾಮೀಲಾಗಿದ್ದಾರೆ. ಹಾಗಾಗಿಯೇ ಈ ಪ್ರಕರಣವನ್ನು ಸಿಬಿಐ ಮತ್ತು ಇಡಿ ತನಿಖೆಗೆ ವಹಿಸಿ. ಇವರ ಹಿಂದೆ ಇರುವ ಭಯೋತ್ಪಾದಕ ಸಂಘಟನೆಯ ಪಾತ್ರವೂ ಗೊತ್ತಾಗಬೇಕು‌ ಎಂದು ಒತ್ತಾಯಿಸಿದರು.

Intro:ಬೆಂಗಳೂರು: ಲೀಸ್ ಕಂ ಸೇಲ್ ಅಂದರೆ ಹೊಸ ಸರ್ಕಾರ ಬಂದಾಗ ಮಾರಾಟ ಮಾಡಲಿ ಎನ್ನುವುದಲ್ಲ ಲೀಸ್ ಮುಂದುವರೆಸಿಕೊಂಡು ಹೋಗಲಿ ಎನ್ನುವುದು ಎಂದು ಮೈತ್ರಿ ಸರ್ಕಾರ ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.Body:





ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಬಿಜೆಪಿ ಧರಣಿಯಲ್ಲಿ ಮಾತನಾಡಿದ ಅವರು,ಲೀಸ್ ಕಂ ಸೇಲ್ ಅಂದರೆ ಅವಧಿ‌ಮುಗಿದ ನಂತರ ಲೀಸ್ ಮುಂದುವರೆಸಲಿ ಎಂದು‌ ಅಷ್ಟೇ, ಜಿಂದಾಲ್ ಗೆ 3667 ಎಕರೆ ಭೂಮಿಯನ್ನು ಹತ್ತು ವರ್ಷ ಲೀಸ್ ಗೆ ನೀಡಿದ್ದೆವು, ಆದರೆ ನಾವು ಲೀಸ್ ಕಮ್ ಸೇಲ್ ಕೊಟ್ಟರೆ ನೀವು ಶುದ್ದ ಕ್ರಯ ಪತ್ರ ಮಾಡಿ‌ ಮಾರಾಟಕ್ಕೆ‌ ಹೊರಟಿದ್ದೀರಾ ಎಂದು ಕಿಡಿಕಾರಿದರು.

ಸಿ ಮತ್ತು ಡಿ ಗ್ರೂಪ್‌ ನಲ್ಲಿ ಕನ್ನಡಿಗರಿಗೆ ಕೆಲಸ‌‌ ಕೊಟ್ಟಿಲ್ಲ, ಎಂಎಸ್ಐಎಲ್ ಗೆ ಹಣ ಕಟ್ಟುವುದು ಬಾಕಿ ಇದೆ, ಸರ್ಕಾರಕ್ಕೆ ಎರಡು ಸಾವಿರ‌ ಕೋಟಿ ಬಾಕಿ‌ ಇದೆ. ಕೃಷ್ಣ ನದಿಯಿಂದ‌2 ಟಿಎಂಸಿ ನೀರಿ ಬಳಸಲು ಅನುಮತಿ ಪಡೆದು ಅಕ್ರಮವಾಗಿ ಐದು ಟಿಎಂಸಿ ನೀರು ಬಳಕೆ ಮಾಡುತ್ತಿದ್ದರೂ ಅದ‌ನ್ನು ಕೇಳದೆ ಎಕರೆಗೆ 1.22 ಲಕ್ಷ ರೂ.ಗೆ ಮಾರಾಟ‌ ಮಾಡುತ್ತಿದ್ದೀರಿ ಅದರ್ಥ ಏನು, ಯಾರ್ಯಾರಿಗೆ‌ ಕಿಕ್‌ಬ್ಯಾಕ್ ಹೋಗಿದೆ, ಸೂಟ್ ಕೇಸ್ ಹೋಗಿದ್ದೆ, ಸಿದ್ದರಾಮಯ್ಯ, ಕುಮಾರಸ್ವಾಮಿ ಯಾಕೆ ಮೌನವಾಗಿದ್ದಾರೆ, ಅಂದು ಬೊಬ್ಬೆ ಹೊಡೆದು ಪಾದಯಾತ್ರೆ ಮಾಡಿದ್ದ ನೀವು ಯಾಕೆ ಸುಮ್ಮ‌ನಿದ್ದೇರಿ, ಯಾವಾಗ ಡಿ.ಕೆ ಶಿವಕುಮಾರ್ ಬಳ್ಳಾರುಇ ಉಸ್ತುವಾರಿ ಆದರೋ ಆಗಲೇ ಅಲ್ಲಿ‌ ಗೋಲ್ ಮಾಲ್ ನಡೆಯುತ್ತೆ ಅನ್ನುವುದು ಗೊತ್ತಿತ್ತು ಈಗ ಅದು ಸಾಬೀತಾಗಿದೆ ,ಡಿಕೆ ಶಿವಕುಮಾರ್,ಜಾರ್ಜ್, ಕುಮಾರಸ್ವಾಮಿ ,ಸಿದ್ದುರಾಮಯ್ಯ ಸೇರಿ ಎಷ್ಟು ಆಗಿದೆ ಎಂದು ಹೇಳಬೇಕು ಎಂದು ಆಗ್ರಹಿಸಿದರು.

ತಾವು ಆಡಳಿತಕ್ಕೆ ಬಂದ 24ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಕುಮಾರಸ್ವಾಮಿಯವರು ಧರ್ಮಸ್ಥಳ ಮತ್ತು ಶೃಂಗೇರಿಯಲ್ಲಿ ಹೇಳಿಕೆ ನೀಡಿದ್ದರು.ಆದರೆ ಇಲ್ಲಿಯವರಗೆ ಒಬ್ಬನೇ ಒಬ್ಬ ರೈತನ ಸಾಲ ಮನ್ನಾ ಮಾಡಿಲ್ಲ.ಸಾಲ ಮನ್ನಾ ಮಾಡುವುದಾಗಿ ಹೇಳಿ ರೈತರ ಮೂಗಿಗೆ ತುಪ್ಪಹಚ್ಚಿದ್ದಾರೆ.ರೈತರಿಗೆ ಬ್ಯಾಂಕ್ ಗಳಿಂದ ನೊಟೀಸ್ ಬರುತ್ತಿದೆ.ಚುನಾವಣೆ ಆದ ತಕ್ಷಣ ಬ್ಯಾಂಕಿಗೆ ಕೊಟ್ಟ ಹಣವನ್ನೂ ವಾಪಸ್ ಪಡೆದು ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಬರಗಾಲ ಮತ್ತು ಅತಿವೃಷ್ಟಿಗೆ ಕೇಂದ್ರ ಸರ್ಕಾರ ಐದು ವರ್ಷಗಳಲ್ಲಿ 7182 ಕೋಟಿ ರೂ.ಕೊಟ್ಟಿದೆ.ಅದನ್ನು ರಾಜ್ಯ ಸರ್ಕಾರ ಬಳಕೆಯೇ ಮಾಡಿಲ್ಲ.ಕೊಡಗಿನ ಮರು ನಿರ್ಮಾಣಕ್ಕೆ ಎಕರೆಗೆ 37,000 ರೂ ನಂತೆ ಪರಿಹಾರ ಕೊಟ್ಟಿದ್ದು ಎನ್ ಡಿ ಆರ್ ಎಫ್ ಹಣ.ರಾಜ್ಯ ಸರ್ಕಾರದ ಬಳಿ ಜಿಲ್ಲಾಧಿಕಾರಿ ಬಳಿ 127 ಕೋಟಿ ರೂ ಇದೆ.ಆದರೆ ಪರಿಹಾರ ಮಾತ್ರ ಕೊಡುತ್ತಿಲ್ಲ ಎಂದು ದೂರಿದರು.

ಕುಮಾರಸ್ವಾಮಿ ಡಬ್ಬಲ್ ಸ್ಟಾಂಡರ್ಡ್ ಮುಖ್ಯಮಂತ್ರಿ...ಗೋಸುಂಬೆ ಮುಖ್ಯಮಂತ್ರಿ:

ಚುನಾವಣೆಗೆ ಮುನ್ನ ಹುಬ್ಬಳ್ಳಿಯಲ್ಲಿ ಸಿಎಂ ಮನೆ ಮಾಡಿದ್ದರು.ಈಗ ಆ ಮನೆ ಏನಾಯ್ತು.ಇವರು ಡಬ್ಬಲ್ ಸ್ಟಾಂಡರ್ಡ್ ಮುಖ್ಯಮಂತ್ರಿ.ಗೋಸುಂಬೆ ಮುಖ್ಯಮಂತ್ರಿ.ಇವರು ಹಾಸನ ಮತ್ತು ಮಂಡ್ಯಕ್ಕೆ ಸೀಮಿತ.ನಾವು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಕೈ ಕಾಲು ಹಿಡಿದು ಸಿಆರ್ ಎಫ್ ಫಂಡ್ ತಂದರೆ ಇಲ್ಲಿಯವರಗೆ ಲೋಕೋಪಯೋಗಿ ಸಚಿವ ರೇವಣ್ಣ ಟೆಂಡರ್ ಕರೆದಿಲ್ಲ.ಗಡ್ಕರಿಯವರು ಕರೆದು ತಾಕೀತು ಮಾಡಿದ್ರೂ ರೇವಣ್ಣ ಹಾಸನ ಬಿಟ್ಟು ಬೇರೆ ಜಿಲ್ಲೆಗಳ ಕಡೆ ಗಮನಹರಿಸಿಲ್ಲ ಎಂದರು.

ಐಎಂಎ ಹಗರಣ ಸಿಬಿಐ ಇಡಿ ತನಿಖೆಗೆ ವಹಿಸಿ:


ಐಎಂಎ ಹಗರಣವನ್ನು ಎಸ್ ಐಟಿ ತನಿಖೆಗೆ ಕೊಟ್ಟಿದ್ದಾರೆ.ಹಿಂದೆ ಗಣಪತಿ ಕೇಸ್ ನ್ನೂ ಎಸ್ ಐಟಿ ಗೆ ವಹಿಸಿದ್ದರು.ಆದರೆ ಆ ಕೇಸ್ ಗತಿ ಏನಾಯ್ತು.ಐಎಂಎ ಪ್ರಕರಣ ಮುಚ್ಚಿ ಹಾಕಲೆಂದೆ ಎಸ್ ಐಟಿ ತನಿಖೆಗೆ ಕೊಟ್ಟಿದ್ದಾರೆ.ಕರ್ನಾಟಕದ ಹಲವು ಪೊಲೀಸ್ ಅಧಿಕಾರಿಗಳು ಮನ್ಸೂರ್ ಜತೆ ಕೂತು ಬಿರಿಯಾನಿ ತಿನ್ನುತ್ತಾರೆ.ಜಮೀರ್ ಅಹಮದ್ ಕೂಡ ಮನ್ಸೂರ್ ಜತೆ ಶಾಮೀಲಾಗಿದ್ದಾರೆ. ಹಾಗಾಗಿಯೇ ಈ ಪ್ರಕರಣವನ್ನು ಸಿಬಿಐ ಮತ್ತು ಇಡಿ ತನಿಖೆಗೆ ವಹಿಸಿ.ಇವರ ಹಿಂದೆ ಇರುವ ಭಯೋತ್ಪಾದಕ ಸಂಘಟನೆಯ ಪಾತ್ರವೂ ಗೊತ್ತಾಗಬೇಕು‌ ಎಂದು ಒತ್ತಾಯಿಸಿದರು.
Conclusion:
Last Updated : Jun 14, 2019, 3:52 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.