ETV Bharat / state

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನೂತನ ಶಸ್ತ್ರಚಿಕಿತ್ಸಾ ಕೊಠಡಿಗಳು ಸಿಎಂರಿಂದ ಉದ್ಘಾಟನೆ

author img

By

Published : Jun 21, 2019, 2:12 AM IST

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿರ್ಮಿಸಲಾದ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡುವ ಮೂಲಕ ಜನರ ಸೇವೆಗೆ ಅರ್ಪಿಸಿದರು.

ಬೆಂಗಳೂರು

ಬೆಂಗಳೂರು: ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿರ್ಮಿಸಲಾದ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡುವ ಮೂಲಕ ಜನರ ಸೇವೆಗೆ ಅರ್ಪಿಸಿದರು.

ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಇನ್ಫೋಸಿಸ್ ವತಿಯಿಂದ ಐದು ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ ಮಾಡಲಾಗಿದ್ದು, ರೋಗಿಗಳಿಗೆ ಸುಧಾಮೂರ್ತಿ ಅನುಕೂಲ ಮಾಡಿ ಕೊಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಗಳಾದ ಜಯದೇವ, ಇಂದಿರಾಗಾಂಧಿ, ಸಂಜಯ್ ಗಾಂಧಿ ಆಸ್ಪತ್ರೆಗಳು ಉತ್ತಮ ರೀತಿ ಕೆಲಸ ಮಾಡುತ್ತಿವೆ. ಹಾಗೆ ನಮ್ಮ ಮೈತ್ರಿ ಸರ್ಕಾರ ಕೂಡ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೆಲಸ ಮಾಡುತ್ತಿದೆ ಎಂದರು.

ಮೇಧಿನಿ ಎಂಬ ಗ್ರಾಮದ ರಸ್ತೆ ಅರಣ್ಯ ಇಲಾಖೆ ಪರಿಮಿತಿಯಲ್ಲಿ ಬರುತ್ತದೆ. ದೇಶದಲ್ಲಿ ಈ ರೀತಿಯ ರಸ್ತೆ ಸಮಸ್ಯೆಗಳಿವೆ. ಸುಧಾಮೂರ್ತಿ ಅವರು ಕಾರವಾರದ ರಸ್ತೆ ಸಮಸ್ಯೆ ಸರಿಪಡಿಸಲು‌ ಮುಂದಾಗಿದ್ದು, ನಾನು ಈಗಾಗಲೇ ಜಿಲ್ಲಾಧಿಕಾರಿ ಜೊತೆ ಫೋನ್​ನಲ್ಲಿ ಮಾತಾಡಿದ್ದೇನೆ. ಈ ಕುರಿತು ಜಿಲ್ಲಾಧಿಕಾರಿ ವರದಿ ನೀಡಲಿದ್ದಾರೆ. ಈ ಸಂಸ್ಥೆ ವರ್ಷಕ್ಕೆ ಸುಮಾರು 400 ಕೋಟಿಯಷ್ಟು ಹಣವನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಇನ್ಫೋಸಿಸ್‌ ಸಂಸ್ಥೆ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇಂತಹ ಸೇವೆಗೆ ನಮ್ಮ ಸರ್ಕಾರವೂ ಸಹಕಾರ ನೀಡಲಿದೆ ಎಂದರು.

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನೂತನ ಶಸ್ತ್ರಚಿಲಿತ್ಸಾ ಕೊಠಡಿಗಳ ಉದ್ಘಾಟಿಸಿದ ಸಿಎಂ ಕುಮಾರಸ್ವಾಮಿ

ಕಿದ್ವಾಯಿಯಲ್ಲಿ ಈಗಾಗಲೇ 8 ಓಟಿಪಿ ಗಳಿದ್ದವು. ಈಗ 5 ಹೆಚ್ಚಿನ ಓಟಿಪಿಗಳನ್ನು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ದೊರಕಿದೆ. ಹೀಗಾಗಿ ಇನ್ಮುಂದೆ ಯಾವ ಕ್ಯಾನ್ಸರ್ ರೋಗಿಯೂ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತ ಕೂರಬೇಕಿಲ್ಲ. ಇದು ದೇಶದ ಅತ್ಯುತ್ತಮ ಶಸ್ತ್ರಚಿಕಿತ್ಸೆ ಕೊಠಡಿ ಹೊಂದಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಧಾ ಮೂರ್ತಿ ಅವರು ಆಸ್ಪತ್ರಗೆ ದೊಡ್ಡಮಟ್ಟದ ಕೊಡುಗೆ ನೀಡಿದ್ದಾರೆ ಎಂದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ. ಸಿ ರಾಮಚಂದ್ರ ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಿಎಂ ಸೇರಿದಂತೆ ವೈದ್ಯಕೀಯ ಸಚಿವ ಇ .ತುಕಾರಾಂ, ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಇನ್ಪೋಸಿಸ್​​ ಸುಧಾ ಮೂರ್ತಿ, ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಸಿ. ರಾಮಚಂದ್ರ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಜಯದೇವ ನಿರ್ದೇಶಕ ಮಂಜುನಾಥ್​ ಭಾಗಿಯಾಗಿದ್ರು.

ಬೆಂಗಳೂರು: ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿರ್ಮಿಸಲಾದ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡುವ ಮೂಲಕ ಜನರ ಸೇವೆಗೆ ಅರ್ಪಿಸಿದರು.

ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಇನ್ಫೋಸಿಸ್ ವತಿಯಿಂದ ಐದು ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ ಮಾಡಲಾಗಿದ್ದು, ರೋಗಿಗಳಿಗೆ ಸುಧಾಮೂರ್ತಿ ಅನುಕೂಲ ಮಾಡಿ ಕೊಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಗಳಾದ ಜಯದೇವ, ಇಂದಿರಾಗಾಂಧಿ, ಸಂಜಯ್ ಗಾಂಧಿ ಆಸ್ಪತ್ರೆಗಳು ಉತ್ತಮ ರೀತಿ ಕೆಲಸ ಮಾಡುತ್ತಿವೆ. ಹಾಗೆ ನಮ್ಮ ಮೈತ್ರಿ ಸರ್ಕಾರ ಕೂಡ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೆಲಸ ಮಾಡುತ್ತಿದೆ ಎಂದರು.

ಮೇಧಿನಿ ಎಂಬ ಗ್ರಾಮದ ರಸ್ತೆ ಅರಣ್ಯ ಇಲಾಖೆ ಪರಿಮಿತಿಯಲ್ಲಿ ಬರುತ್ತದೆ. ದೇಶದಲ್ಲಿ ಈ ರೀತಿಯ ರಸ್ತೆ ಸಮಸ್ಯೆಗಳಿವೆ. ಸುಧಾಮೂರ್ತಿ ಅವರು ಕಾರವಾರದ ರಸ್ತೆ ಸಮಸ್ಯೆ ಸರಿಪಡಿಸಲು‌ ಮುಂದಾಗಿದ್ದು, ನಾನು ಈಗಾಗಲೇ ಜಿಲ್ಲಾಧಿಕಾರಿ ಜೊತೆ ಫೋನ್​ನಲ್ಲಿ ಮಾತಾಡಿದ್ದೇನೆ. ಈ ಕುರಿತು ಜಿಲ್ಲಾಧಿಕಾರಿ ವರದಿ ನೀಡಲಿದ್ದಾರೆ. ಈ ಸಂಸ್ಥೆ ವರ್ಷಕ್ಕೆ ಸುಮಾರು 400 ಕೋಟಿಯಷ್ಟು ಹಣವನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಇನ್ಫೋಸಿಸ್‌ ಸಂಸ್ಥೆ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇಂತಹ ಸೇವೆಗೆ ನಮ್ಮ ಸರ್ಕಾರವೂ ಸಹಕಾರ ನೀಡಲಿದೆ ಎಂದರು.

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನೂತನ ಶಸ್ತ್ರಚಿಲಿತ್ಸಾ ಕೊಠಡಿಗಳ ಉದ್ಘಾಟಿಸಿದ ಸಿಎಂ ಕುಮಾರಸ್ವಾಮಿ

ಕಿದ್ವಾಯಿಯಲ್ಲಿ ಈಗಾಗಲೇ 8 ಓಟಿಪಿ ಗಳಿದ್ದವು. ಈಗ 5 ಹೆಚ್ಚಿನ ಓಟಿಪಿಗಳನ್ನು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ದೊರಕಿದೆ. ಹೀಗಾಗಿ ಇನ್ಮುಂದೆ ಯಾವ ಕ್ಯಾನ್ಸರ್ ರೋಗಿಯೂ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತ ಕೂರಬೇಕಿಲ್ಲ. ಇದು ದೇಶದ ಅತ್ಯುತ್ತಮ ಶಸ್ತ್ರಚಿಕಿತ್ಸೆ ಕೊಠಡಿ ಹೊಂದಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಧಾ ಮೂರ್ತಿ ಅವರು ಆಸ್ಪತ್ರಗೆ ದೊಡ್ಡಮಟ್ಟದ ಕೊಡುಗೆ ನೀಡಿದ್ದಾರೆ ಎಂದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ. ಸಿ ರಾಮಚಂದ್ರ ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಿಎಂ ಸೇರಿದಂತೆ ವೈದ್ಯಕೀಯ ಸಚಿವ ಇ .ತುಕಾರಾಂ, ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಇನ್ಪೋಸಿಸ್​​ ಸುಧಾ ಮೂರ್ತಿ, ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಸಿ. ರಾಮಚಂದ್ರ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಜಯದೇವ ನಿರ್ದೇಶಕ ಮಂಜುನಾಥ್​ ಭಾಗಿಯಾಗಿದ್ರು.

Intro:ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನೂತನ ೫ ಶಸ್ತ್ರ ಚಿಕಿತ್ಸಾ ಕೊಠಡಿಗಳ ಉದ್ಘಾಟಿಸಿ ಸಿಎಮ್ ಕುಮಾರ ಸ್ವಾಮಿ..!!!!!.

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿರ್ಮಿಸಲಾದ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉದ್ಘಾಟನೆ ಮಾಡುವ ಮೂಲಕ ಜನರ ಸೇವೆಗೆ ಅರ್ಪಿಸಿದ್ರು. 5 ಶಸ್ತ್ರಚಿಕಿತ್ಸಾ ಕೊಠಡಿಗಳ ಉದ್ಘಾಟನ ಕಾರ್ ಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಅವರಿಗೆ ವೈದ್ಯಕೀಯ ಸಚಿವ ಇ ತುಕಾರಾಂ, ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಇನ್ಪೋಸಿಸ್ ನ ಸುಧಾ ಮೂರ್ತಿ ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಸಿ ರಾಮಚಂದ್ರ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಜಯದೇವ ನಿರ್ದೇಶಕ ಮಂಜುನಾಥ ಭಾಗಿಯಾಗಿದ್ರು.ಇನ್ನೂ ಶಸ್ತ್ರ ಚಿಕಿತ್ಸಾ ಕೊಠಡಿ ಉದ್ಘಾಟಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇನ್ಫೋಸಿಸ್ ವತಿಯಿಂದ ಐದು ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ ಮಾಡಲಾಗಿದೆ. ರೋಗಿಗಳಿಗೆ ಸುಧಾಮೂರ್ತಿ ಅನುಕೂಲ ಮಾಡಿಕೊಟ್ಟಿದ್ದಾರೆ. ಸರ್ಕಾರಿಆಸ್ಪತ್ರೆಗಳಾದ
ಜಯದೇವ, ಇಂದಿರಾಗಾಂಧಿ, ಸಂಜಯ್ ಗಾಂಧಿ ಆಸ್ಪತ್ರೆಗಳು ಉತ್ತಮ ರೀತಿ ಕೆಲಸ ಮಾಡುತ್ತಿವೆ.
ಶಿಕ್ಷಣ, ಆರೋಗ್ಯಕ್ಕೆ ಮೈತ್ರಿ ಸರ್ಕಾರ ಕೆಲಸ ಮಾಡುತ್ತಿದೆ.
ಮೇಧಿನಿ ಎಂಬ ಗ್ರಾಮದ ರಸ್ತೆ ಅರಣ್ಯ ಇಲಾಖೆ ಪರಿಮಿತಿಯಲ್ಲಿ ಬರುತ್ತೆ‌ ದೇಶದಲ್ಲಿ ಈ ರೀತಿಯ ರಸ್ತೆ ಸಮಸ್ಯೆಗಳಿವೆ. ಸುಧಾಮೂರ್ತಿ ಅವರು ಕಾರವಾರದ ರಸ್ತೆ ಸಮಸ್ಯೆ ಸರಿಪಡಿಸಲು‌ ಮುಂದಾಗಿದ್ದಾರೆ.ನಾನು ಈಗಾಗಲೇ ಜಿಲ್ಲಾಧಿಕಾರಿ ಜೊತೆ ಫೋನ್ ನಲ್ಲಿ ಮಾತಾಡಿದ್ದೇನೆ. ಕಾರವಾರ ಜಿಲ್ಲಾಧಿಕಾರಿ ನಾಳೆ ಬೆಳಗ್ಗೆ ಅಲ್ಲಿ ಹೋಗಿ ವರದಿ ನೀಡಲಿದ್ದಾರೆBody:ಸುಧಾ ಮೂರ್ತಿ ಅವರು ಆ ರಸ್ತೆ ತಮ್ಮ‌ ಸಂಸ್ಥೆಯಿಂದಲೇ ರಸ್ತೆ ಸರಿಪಡಿಸಲು ಅನುಮತಿ ಕೊಡಿ ಎಂದಿದ್ದಾರೆ.ಈಗಾಗಲೇ ನಾನು ಅದಕ್ಕೆ ಸಮ್ಮತಿ ನೀಡಿದ್ದೇನೆ ವರ್ಷಕ್ಕೆ ಸುಮಾರು ೪೦೦ ಕೋಟಿ ಸಮಾಜಕ್ಕಾಗಿ ಅವರು ಖರ್ಚು ಮಾಡುತ್ತಿದ್ದಾರೆ. ಇನ್ಫೋಸಿಸ್‌ ಸಂಸ್ಥೆಯಿಂದ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇಂತಹ ಸೇವೆಗೆ ನಮ್ಮ ಸರ್ಕಾರವೂ ಸಹಕಾರ ನೀಡಲಿದೆ.ವೇದಿಕೆ ಮೇಲೆ ಒಂದು ಮಗು ನನ್ನ ಮಾತನಾಡಲು ಬಂತು
ಈಗಷ್ಟೇ ವೇದಿಕೆ ಮೇಲೆ ಮಾತಾಡಿಸಿದೆ.ಆ ಮಗು ಚಿಕ್ಕವನಿದ್ದಾಗ ನನ್ನ ಬಳಿಚಿಕಿತ್ಸೆಗೆ ಸಹಾಯಕೇಳಿಕೊಂಡು
.ಬಂದಿದ್ದರು. ಈಗ ಆ ಮಗು ಗುಣ ಮುಖವಾಗಿದೆ.
ಇನ್ನೂ ಬೋನ್ ಟ್ರಾನ್ಸ್ಪ್ಲಾನ್ಟ್ಗೆ ೩೬ ಲಕ್ಷ ಖರ್ಚಾಗುತ್ತೆ
ಇದು ಸಾಮಾನ್ಯ ಜನರಿಗೆ ತುಂಬಾ ಕಷ್ಟಕರವಾಗುತ್ತೆ.
ಇದರ ಹಿನ್ನೆಲೆ ಬೋನ್ ನ್ಯಾರೋ ಟ್ರಾನ್ಸ್ಪ್ಲಾನ್ಟ್ ಘಟಕ ನಿರ್ಮಾಣಕ್ಕೆ ಬಜೆಟ್ ನಲ್ಲಿ ಅಲರ್ಟ್ ಮಾಡಲಾಗಿದೆ.
ನಾವು ಆಸ್ಪತ್ರೆಗಳನ್ನು ಕಟ್ಟುತ್ತೇವೆ ಆದರೆ ಅಲ್ಲಿ ಅದರ ನಿರ್ವಹಣೆಗೆ ಸಿಬ್ಬಂದಿಗಳೇ ಇರಲ್ಲ. ಕಿದ್ವಾಯಿನಲ್ಲೂ ಕೂಡ ೧೩೦೦ ವೈದ್ಯರ ಕೊರತೆ ಇದೆ. ಇನ್ನೂ ಡಾ. ಮಂಜುನಾಥ್ ಅವರು ವೈದ್ಯರ ಮೇಲೆ ಹಲ್ಲೆ ಸಂಬಂಧ ಕಾನೂನು ಬಗ್ಗೆ ಮಾತಾಡಿದ್ದರು. ತಮಿಳು ನಾಡಿನಲ್ಲಿ ೬ ವರ್ಷ ನಾನ್ ಬೇಲಬಲ್ ಅಫೆನ್ಸ್ ಎಂದು ಪರಿಗಣಿಸಲಾಗುತ್ತೆ ಕರ್ನಾಟಕದಲ್ಲಿ ಮೂರು ವರ್ಷ ಜೈಲು ಶಿಕ್ಷೆ ಇದೆ.ಆ ಕಾನೂನನ್ನು ಮತ್ತಷ್ಟು ಶಕ್ತಿಯುಕ್ತ ಮಾರ್ಪಾಡುಗಳನ್ನು ಮಾಡಲು ನಾವು ಸಿದ್ಧ.ಅಲ್ಲದೆ ರಾಜ್ಯದ ವೈದ್ಯರ ರಕ್ಷಣೆ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು. ನಂತರ ಮಾತಮಾಡಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್ .ಕಿದ್ವಾಯಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿಗಳು ಇನ್ಪೋಸಿಸ್ ಪೌಂಡೇಷನ್ ವತಿಯಿಂದ ನಿರ್ಮಾಣ ವಾಗಿದ್ದು. ಕಿದ್ವಾಯಿಯಲ್ಲಿ ಈಗಾಗಲೇ 8 ಓಟಿ ಗಳಿತ್ತು.ಈಗ 5 ಹೆಚ್ಚಿನ ಓಟಿ ಗಳನ್ನು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ದೊರಕಿದೆ.ಹೀಗಾಗಿ ಇನ್ಮುಂದೆ ಯಾವ ಕ್ಯಾನ್ಸರ್ ರೋಗಿಯೂ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತ ಕೂರಬೇಕಿಲ್ಲ.ಇದು ದೇಶದ ಅತ್ಯುತ್ತಮ ಶಸ್ತ್ರಚಿಕಿತ್ಸೆ ಕೊಠಡಿ ಹೊಂದಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ. ಸಿ ರಾಮಚಂದ್ರ ಹೇಳಿದರು.Conclusion:ಅಲ್ಲದೆ ದಾನಿಗಳಿಂದ ಕಿದ್ವಾಯಿಗೆ ಅಸ್ಪತ್ರೆಗೆ ಅಪಾರ ಕೊಡುಗೆ ಹರಿದು ಬಂದಿದೆ. ಈ ಪೈಕಿ ಅತಿ‌ದೊಡ್ಡ ದಾನ ಮಾಡಿರೋದು ಸುಧಾ ಮೂರ್ತಿ ಅವರು. ನಾನು ಸಿಎಂ ರನ್ನು ಹೊಗಳು ಹೋಗೋದಿಲ್ಲ. ರೋಗಿಗಳ ಸಂಕಷ್ಟಕ್ಕೆ ಮಿಡಿಯುವ ಮನಸ್ಸು ಸಿಎಂ ಅವರದ್ದು ಎಲ್ಲಾ ಖಾಯಿಲೆಯ ಬಗ್ಗೆ ಅರಿತಿರುವ ಸಿಎಂ ರೋಗಿಗಳ ಕಷ್ಟಕ್ಕೆ ಮರಗುತ್ತಾರೆ.
ಉತ್ತರ ಕರ್ನಾಟಕ ಭಾಗದಲ್ಲೂ ಆಸ್ಪತ್ರೆಗಳನ್ನು ತೆರೆದು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ.
ಉತ್ತರ ಕರ್ನಾಟಕದ ಮಂದಿ ಅಷ್ಟು ದೂರದಿಂದ ಬರುವ ಕಷ್ಟ ಸಿಎಂ ಅರಿತಿದ್ದಾರೆ. ಅಲ್ಲೂ ಸುಸಜ್ಜಿತ ಆಸ್ಪತ್ರೆಗಳನ್ನು ಸಿಎಂ ನಿರ್ಮಿಸಿಕೊಟ್ಟಿದ್ದಾರೆ.ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದರು.ನಂತರ ಮಾತಾನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಇ ತುಕಾರಾಂ ಇದು ರಾಜಕೀಯ ಪ್ರೊಗ್ರಾಂ ಅಲ್ಲಾ. ವಿಶೇಷ ಕಾರ್ಯಕ್ರಮ ಆಗಿರೋದಕ್ಕೆ ಈ‌ ಮಾತನ್ನು ‌ಹೇಳುತ್ತಿದ್ದೇನೆ.45,000 ಕೋಟಿ ಸಾಲ ಮನ್ನಾ ಮಾಡಿರುವ ಧಿಮಂತ ನಾಯಕ‌ ಸಿಎಂ.ರೈತರ ಸಾಲ ಮನ್ನ ಮಾಡಿದ ಏಕೈಕ ಸಿಎಂ ಎಂದರೆ ಅದು ಕುಮಾರಸ್ವಾಮಿ ಅವರು ಇದು ರಾಜಕೀಯ ಭಾಷಣ ಅಲ್ಲ.ಆರೋಗ್ಯ ಸೇವೆಯ ಜೊತೆ ಅನ್ನದಾತರ ಸೇವೆ ಮಾಡುವ ಸಿಎಂನಮ್ಮವರು.ಶಿಕ್ಷಣ ಮತ್ತು ಆರೋಗ್ಯ
ಕಾಂತ್ರಿ ತರೋಣ ನಿಮ್ಮ ಜೊತೆ ನಾವಿದ್ದೇವೆ.ಅಲ್ಲದೆ ಅಸ್ಪತ್ರೆಗಳ ಸಿಬ್ಬಂದಿಗಳ ಕೊರತೆ ನೀಗಿಸೋಣ.ನಿಮ್ಮ
ಒಡಹುಟ್ಟಿದ ಅಣ್ಣತಮ್ಮಂದಿರಗಾಗಿ ನಾವು ಇರುತ್ತೇವೆ ಎಂದು ಸಚಿವ ಇ.ತುಕಾರಾಂ ಹೇಳಿದರು.


ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.