ETV Bharat / state

ಕೋಟ್ ಸೂಟ್ ಹಾಕಿ ಹೊಸ ಲುಕ್ಕು... ಟಿಪ್​ಟಾಪ್​ ಆಗಿ ವಿದೇಶಕ್ಕೆ ತೆರಳಿದ ಸಿಎಂ ಬಿಎಸ್​ವೈ

author img

By

Published : Jan 19, 2020, 9:59 AM IST

ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಯಡಿಯೂರಪ್ಪ, ಸಚಿವ ಜಗದೀಶ್ ಶೆಟ್ಟರ್ ಮತ್ತು ಅಧಿಕಾರಿಗಳ ತಂಡ ಸ್ವಿಟ್ಜರ್ಲೆಂಡ್‌ನ ದಾವೋಸ್​ಗೆ ಪ್ರಯಾಣ ಬೆಳೆಸಿದೆ. ದಾವೋಸ್​ ಪ್ರವಾಸ ಹಿನ್ನೆಲೆ ಸಿಎಂ ವೇಷ ಭೂಷಣಗಳೆಲ್ಲ ಬದಲಾಗಿದ್ದು, ನೇವಿ ಗ್ರೇ ಬಣ್ಣದ ಕೋಟ್, ವೈಟ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಶೂ ಧರಿಸಿ ಹೊಸ ಲುಕ್​ನಲ್ಲಿ ಬಿಎಸ್​ವೈ ಮಿಂಚುತ್ತಿದ್ದಾರೆ.

CM Tour Switzerland Davos
ವಿದೇಶಕ್ಕೆ ತೆರಳಿದ ಸಿಎಂ ಬಿಎಸ್​ವೈ

ಬೆಂಗಳೂರು: ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಯಡಿಯೂರಪ್ಪ, ಸಚಿವ ಜಗದೀಶ್ ಶೆಟ್ಟರ್ ಮತ್ತು ಅಧಿಕಾರಿಗಳ ತಂಡ ಸ್ವಿಟ್ಜರ್ಲೆಂಡ್‌ನ ದಾವೋಸ್​ಗೆ ಪ್ರಯಾಣ ಬೆಳೆಸಿದೆ. ದಾವೋಸ್​ ಪ್ರವಾಸ ಹಿನ್ನೆಲೆ ಸಿಎಂ ವೇಷ ಭೂಷಣಗಳೆಲ್ಲ ಬದಲಾಗಿದ್ದು, ನೇವಿ ಗ್ರೇ ಬಣ್ಣದ ಕೋಟ್, ವೈಟ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಶೂ ಧರಿಸಿ ಹೊಸ ಲುಕ್​ನಲ್ಲಿ ಬಿಎಸ್​ವೈ ಮಿಂಚುತ್ತಿದ್ದಾರೆ.

ವಿದೇಶಕ್ಕೆ ತೆರಳಿದ ಸಿಎಂ ಬಿಎಸ್​ವೈ

ಇನ್ನು‌ ದಾವೋಸ್​ನಲ್ಲಿ ಮೈನಸ್ 10 ಡಿಗ್ರಿಯಿಂದ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಿನ್ನೆಲೆ, ಚಳಿಯಿಂದ ಬೆಚ್ಚಗಿರಲು ‌ಸಿಎಂಗೆ, ಪುತ್ರ ವಿಜಯೇಂದ್ರ ಮತ್ತು ಪುತ್ರಿ ಉಮಾ ಇಬ್ಬರು ಈಗಾಗಲೇ ಸ್ವೆಟರ್ ಮತ್ತು ಕೋಟ್ ಖರೀದಿಸಿ ಕೊಟ್ಟಿದ್ದಾರೆ. ಇನ್ನು ಸಿಎಂ ವಿದೇಶ ಪ್ರವಾಸ ಹಿನ್ನೆಲೆ ಧವಳಗಿರಿ ನಿವಾಸಕ್ಕೆ ಆಗಮಿಸಿದ ಸಚಿವ ಪ್ರಭು ಚೌಹಾಣ್, ಬಾಬುರಾವ್ ಚಿಂಚನಸೂರ್, ಕಿರಿಯ ಮಗ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದರು. ಧವಳಗಿರಿ ನಿವಾಸದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೊರಟ ಸಿಎಂ 10.25ಕ್ಕೆ ದುಬೈಗೆ ಪ್ರಯಾಣ ಬೆಳೆಸಲಿದ್ದು, ದುಬೈನಿಂದ ಜೂರಿಚ್​ಗೆ ತಲುಪಿ, ಅಲ್ಲಿಂದ ದಾವೂಸ್​ ತೆರಳಲಿದ್ದಾರೆ.

ದಾವೋಸ್​ಗೆ ತೆರಳುವ ಮುನ್ನ ಸಿಎಂ ಯಡಿಯೂರಪ್ಪ ಮಾತನಾಡಿ, ನಾಲ್ಕು ದಿನಗಳ ಶೃಂಗಸಭೆಗಾಗಿ ದಾವೋಸ್ ಕಡೆ ಪ್ರಯಾಣ ಮಾಡ್ತಿದ್ದೇನೆ. ರಾಜ್ಯಕ್ಕೆ ಹೂಡಿಕೆ ತರಲು ವಿಶೇಷ ಪ್ರಯತ್ನ ಮಾಡುತ್ತೇನೆ. 38 ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳ ಜೊತೆ ಸಂವಾದ ನಡೆಸಲಿದ್ದೇನೆ. ವಿಶ್ವ ಆರ್ಥಿಕ ಫೋರಮ್​ನಿಂದ ರಾಜ್ಯಕ್ಕೆ ಬಂಡವಾಳ ಹರಿದು ಬರುವ ಸಾಧ್ಯತೆ ಇದೆ. ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರಿಗೆ ನಾವು ಸೌಲಭ್ಯ, ಸಹಕಾರ ಕೊಡ್ತೇವೆ. ಈ ಎಲ್ಲಾ ಪ್ರಯತ್ನಗಳಿಂದ ಉದ್ಯೋಗವಕಾಶ ಹೆಚ್ಚಾಗುತ್ತದೆ. ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಇದ್ರೂ ಕರ್ನಾಟಕದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ, ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಪ್ರಯತ್ನ ಮಾಡ್ತೇವೆ ಎಂದರು.

ಇನ್ನು ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಸಂಪುಟ ವಿಸ್ತರಣೆ ಕುರಿತು ಅರ್ಧ ಗಂಟೆಗಳ ಕಾಲ ಅಮಿತ್​ ಷಾ ಜೊತೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇನೆ. ಅಮಿತ್ ಷಾರಿಂದ ಒಳ್ಳೆಯ ರೀತಿ ಸ್ಪಂದನೆ ಸಿಕ್ಕಿದೆ, ನಾನು ದಾವೋಸ್​ನಿಂದ ಬರ್ತಿದ್ದಂತೆ ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡ್ತೇನೆ. ಇದಕ್ಕೆ ಯಾವುದೇ ಅಡ್ಡಿ ಆತಂಕ ಇಲ್ಲ ಎಂದು ತಿಳಿಸಿದರು.

ಬೆಂಗಳೂರು: ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಯಡಿಯೂರಪ್ಪ, ಸಚಿವ ಜಗದೀಶ್ ಶೆಟ್ಟರ್ ಮತ್ತು ಅಧಿಕಾರಿಗಳ ತಂಡ ಸ್ವಿಟ್ಜರ್ಲೆಂಡ್‌ನ ದಾವೋಸ್​ಗೆ ಪ್ರಯಾಣ ಬೆಳೆಸಿದೆ. ದಾವೋಸ್​ ಪ್ರವಾಸ ಹಿನ್ನೆಲೆ ಸಿಎಂ ವೇಷ ಭೂಷಣಗಳೆಲ್ಲ ಬದಲಾಗಿದ್ದು, ನೇವಿ ಗ್ರೇ ಬಣ್ಣದ ಕೋಟ್, ವೈಟ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಶೂ ಧರಿಸಿ ಹೊಸ ಲುಕ್​ನಲ್ಲಿ ಬಿಎಸ್​ವೈ ಮಿಂಚುತ್ತಿದ್ದಾರೆ.

ವಿದೇಶಕ್ಕೆ ತೆರಳಿದ ಸಿಎಂ ಬಿಎಸ್​ವೈ

ಇನ್ನು‌ ದಾವೋಸ್​ನಲ್ಲಿ ಮೈನಸ್ 10 ಡಿಗ್ರಿಯಿಂದ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಿನ್ನೆಲೆ, ಚಳಿಯಿಂದ ಬೆಚ್ಚಗಿರಲು ‌ಸಿಎಂಗೆ, ಪುತ್ರ ವಿಜಯೇಂದ್ರ ಮತ್ತು ಪುತ್ರಿ ಉಮಾ ಇಬ್ಬರು ಈಗಾಗಲೇ ಸ್ವೆಟರ್ ಮತ್ತು ಕೋಟ್ ಖರೀದಿಸಿ ಕೊಟ್ಟಿದ್ದಾರೆ. ಇನ್ನು ಸಿಎಂ ವಿದೇಶ ಪ್ರವಾಸ ಹಿನ್ನೆಲೆ ಧವಳಗಿರಿ ನಿವಾಸಕ್ಕೆ ಆಗಮಿಸಿದ ಸಚಿವ ಪ್ರಭು ಚೌಹಾಣ್, ಬಾಬುರಾವ್ ಚಿಂಚನಸೂರ್, ಕಿರಿಯ ಮಗ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದರು. ಧವಳಗಿರಿ ನಿವಾಸದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೊರಟ ಸಿಎಂ 10.25ಕ್ಕೆ ದುಬೈಗೆ ಪ್ರಯಾಣ ಬೆಳೆಸಲಿದ್ದು, ದುಬೈನಿಂದ ಜೂರಿಚ್​ಗೆ ತಲುಪಿ, ಅಲ್ಲಿಂದ ದಾವೂಸ್​ ತೆರಳಲಿದ್ದಾರೆ.

ದಾವೋಸ್​ಗೆ ತೆರಳುವ ಮುನ್ನ ಸಿಎಂ ಯಡಿಯೂರಪ್ಪ ಮಾತನಾಡಿ, ನಾಲ್ಕು ದಿನಗಳ ಶೃಂಗಸಭೆಗಾಗಿ ದಾವೋಸ್ ಕಡೆ ಪ್ರಯಾಣ ಮಾಡ್ತಿದ್ದೇನೆ. ರಾಜ್ಯಕ್ಕೆ ಹೂಡಿಕೆ ತರಲು ವಿಶೇಷ ಪ್ರಯತ್ನ ಮಾಡುತ್ತೇನೆ. 38 ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳ ಜೊತೆ ಸಂವಾದ ನಡೆಸಲಿದ್ದೇನೆ. ವಿಶ್ವ ಆರ್ಥಿಕ ಫೋರಮ್​ನಿಂದ ರಾಜ್ಯಕ್ಕೆ ಬಂಡವಾಳ ಹರಿದು ಬರುವ ಸಾಧ್ಯತೆ ಇದೆ. ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರಿಗೆ ನಾವು ಸೌಲಭ್ಯ, ಸಹಕಾರ ಕೊಡ್ತೇವೆ. ಈ ಎಲ್ಲಾ ಪ್ರಯತ್ನಗಳಿಂದ ಉದ್ಯೋಗವಕಾಶ ಹೆಚ್ಚಾಗುತ್ತದೆ. ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಇದ್ರೂ ಕರ್ನಾಟಕದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ, ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಪ್ರಯತ್ನ ಮಾಡ್ತೇವೆ ಎಂದರು.

ಇನ್ನು ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಸಂಪುಟ ವಿಸ್ತರಣೆ ಕುರಿತು ಅರ್ಧ ಗಂಟೆಗಳ ಕಾಲ ಅಮಿತ್​ ಷಾ ಜೊತೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇನೆ. ಅಮಿತ್ ಷಾರಿಂದ ಒಳ್ಳೆಯ ರೀತಿ ಸ್ಪಂದನೆ ಸಿಕ್ಕಿದೆ, ನಾನು ದಾವೋಸ್​ನಿಂದ ಬರ್ತಿದ್ದಂತೆ ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡ್ತೇನೆ. ಇದಕ್ಕೆ ಯಾವುದೇ ಅಡ್ಡಿ ಆತಂಕ ಇಲ್ಲ ಎಂದು ತಿಳಿಸಿದರು.

Intro:ಕೋಟ್ ಶೂಟ್ ಹಾಕಿ‌ ಸಿಎಂ ಹೊಸ ಲುಕ್ಕು
ವಿದೇಶಕ್ಕೆ ತೆರಳಿದ ಸಿಎಂ mojo Byite s

ಸ್ವಿಟ್ಜರ್ಲೆಂಡ್‌ನ ದಾವೋಸ್ ನಲ್ಲಿ ವಿಶ್ವ ಆರ್ಥಿಕ ಶೃಂಗ ಸಭೆ ಹಿನ್ನೆಲೆ ಇಂದು ದಾವೋಸ್ ಶೃಂಗಸಭೆಯಲ್ಲಿ ಭಾಗವಹಿಸಲು ಸಿಎಂ ಯಡಿಯೂರಪ್ಪ, ಸಚಿವ ಜಗದೀಶ್ ಶೆಟ್ಟರ್ ಮತ್ತು ಅಧಿಕಾರಿಗಳ ತಂಡ ತೆರಳಿದ್ದಾರೆ. ಇನ್ನು ದಾವೋಸ್ನ ಸಭೆಯಲ್ಲಿ ಭಾಗವಹಿಸುವ ಹಿನ್ನೆಲೆ ಸಿಎಂ ಯಡಿಯೂರಪ್ಪ ಹೊಸ ಲುಕ್ಕು ನಲ್ಲಿ ‌ನೇವಿ ಗ್ರೇ ಬಣ್ಣದ ಕೋಟ್, ವೈಟ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಶೂ ಧರಿಸಿ ಹೊಸ ಲುಕ್ಕಿನಲ್ಲಿ ಕಂಡ್ರು.

ಇನ್ನು‌ ದಾವೋಸ್ ನಲ್ಲಿ ಮೈನಸ್ 10 ಡಿಗ್ರಿ ಯಿಂದ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು ಹಿನ್ನೆಲೆ ಸಿಎಂ‌ ಚಳಿಯಿಂದ ಬೆಚ್ಚಗಿರಲು ‌ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರ ಮತ್ತು ಪುತ್ರಿ ಉಮಾ ಇಬ್ಬರು ಈಗಾಗಲೇ ಸ್ವೆಟರ್ ಮತ್ತು ಕೋಟ್ ಖರೀದಿ ಮಾಡಿ ಸಿಎಂಗೆ ನೀಡಿದ್ದಾರೆ.

ದಾವೋಸ್ ಶೃಂಗ ಸಭೆಯಲ್ಲಿ ದಿನಕ್ಕೊಂದು ಡ್ರೆಸ್ ನಲ್ಲಿ‌ ಸಿಎಂ ಮಿಂಚಲಿದ್ದಾರೆ.ಇನ್ನು ಸಿಎಂ ಫಾರಿನ್ ಟೂರ್ ಗೆ ಹೋಗುವ ಹಿನ್ನೆಲೆ ಧವಳಗಿರಿ ನಿವಾಸಕ್ಕೆ ಶುಭ ಹಾರೈಸಲು ಸಚಿವ ಪ್ರಭು ಚೌಹಾಣ್, ಬಾಬುರಾವ್ ಚಿಂಚನಸೂರ್, ಕಿರಿಯ ಮಗ ಬಿ ವೈ ವಿಜಯೇಂದ್ರ ಕೆಲವರು ಶುಭ ಹಾರೈಕೆ ಮಾಡಿದರು. ಇನ್ನು ಧವಳಗಿರಿ ನಿವಾಸದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೊರಟ ಸಿಎಂ ೧೦.೨೫ ರ ವಿಮಾನದಲ್ಲಿ ದುಬೈಗೆ ಪ್ರಯಾಣ ಮಾಡಿ , ದುಬೈನಿಂದ ಜೂರಿಚ್ ಗೆ ತಲುಪಿ ಅಲ್ಲಿಂದ ದಾವೋಸ್ ತಲುಪಿ ಇಂದು ರಾತ್ರಿ‌ ದಾವೋಸ್ ಮುಟ್ಟಲಿದ್ದಾರೆ.

ಇನ್ನು ದಾವೋಸ್ ಗೆ ತೆರಳುವ ಮುನ್ನ ಸಿಎಂ ಯಡಿಯೂರಪ್ಪ ಮಾತಾಡಿ‌ ನಾಲ್ಕು ದಿನ ಶೃಂಗಸಭೆಗಾಗಿ ಇವಾಗ ದಾವೋಸ್ ಕಡೆ ಪ್ರಯಾಣ ಮಾಡ್ತಿದ್ದೇನೆ. ರಾಜ್ಯಕ್ಕೆ ಹೂಡಿಕೆ ತರಲು ವಿಶೇಷ ವಾದ ಪ್ರಯತ್ನ ಮಾಡ್ತಿದ್ದೇನೆ.38 ಹೂಡಿಕೆದಾರರು ಹಾಗು ಕೈಗಾರಿಕೋದ್ಯಮಿಗಳ ಜೊತೆ ಸಂವಾದ ನಡೆಸುತ್ತೇನೆ.ವರ್ಡ್ ಎಕಾನಮಿ ಫೋರಮ್ ನಿಂದ ರಾಜ್ಯಕ್ಕೆ ಬಂಡವಾಳ ಹರಿದು ಬರುವ ಸಾಧ್ಯತೆ ಇದೆ.ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರಿಗೆ ನಾವು ಸೌಲಭ್ಯ, ಸಹಕಾರ ಕೊಡ್ತೇವೆ.ಈ ಎಲ್ಲಾ ಪ್ರಯತ್ನ ಗಳಿಂದ ಉದ್ಯೋಗವಕಾಶ ಹೆಚ್ಚಾಗುತ್ತೆ ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಇದ್ರೂ ಕರ್ನಾಟಕದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ,ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಪ್ರಯತ್ನ ಮಾಡ್ತೇವೆ ಎಂದ್ರು. ಹಾಗೆ ಸಚಿವ ಜಗದೀಶ್ ಶೆಟ್ಟರ್ ಕೂಡ ನಮ್ಮ ಜೊತೆ ಬರ್ತಿದ್ದಾರೆ ಎಂದು ತಿಳಿಸಿದರು.

ಇನ್ನು ಸಂಪುಟ ವಿಸ್ತರಣೆ ವಿಚಾರ ಕುರಿತು ಮಾತಾಡಿ ಸಂಪುಟ ವಿಸ್ತರಣೆ ಕುರಿತು ಅರ್ಧ ಗಂಟೆಗಳ ಕಾಲ ಅಮಿತ ಷಾ ಜೊತೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇನೆ.ಅಮಿತ್ ಷಾ ರಿಂದ ಒಳ್ಳೆಯ ರೀತಿ ಸ್ಪಂದನೆ ಸಿಕ್ಕಿದೆ,ನಾನು ದಾವೋಸ್ ನಿಂದ ಬರ್ತಿದ್ದಂತೆ ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡ್ತೇನೆ.ಇದಕ್ಕೆ ಯಾವುದೇ ಅಡ್ಡಿ ಆತಂಕ ಇಲ್ಲ


ಎರಡು ಬಾರಿ ಷಾ ಜೊತೆ ನಾನು ಮಾತನಾಡಿದ್ದು ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ,ದಾವೋಸ್ ನಿಂದ ಬಂದ ನಂತರ ಮತ್ತೆ ದೆಹಲಿಗೆ ಹೋಗಿ ಅಮಿತ್ ಷಾ ಭೇಟಿ ಮಾಡ್ತೀರಾ ಎಂಬ ಪ್ರಶ್ನೆಗೆ ನಾವು ಅಮಿತ್ ಷಾ ರನ್ನು ಭೇಟಿ ಮಾಡೋದು ಸ್ವಾಭಾವಿಕ ತಾನೇ ಎಂದು ಹೇಳಿ ಸಿಎಂ ತೆರಳಿದ್ರು


Body:KN_bNG_01_YADIYURPA_7204498Conclusion:KN_bNG_01_YADIYURPA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.