ETV Bharat / state

ರಾಜ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು: ಸಿಎಂ ಬೊಮ್ಮಾಯಿ

ಕರ್ನಾಟಕ ಆರ್ ಅಂಡ್ ಡಿ ಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಎಲ್ಲ ಕ್ಷೇತ್ರಗಳ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿರುವ 400 ಆರ್ ಅಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

author img

By

Published : Jul 7, 2022, 10:53 PM IST

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಆರ್ ಅಂಡ್ ಡಿ ಕ್ಷೇತ್ರದಲ್ಲಿರುವ ಉದ್ಯಮಿಗಳು ಕರ್ನಾಟಕವನ್ನು ಸ್ಪ್ರಿಂಗ್ ಬೋರ್ಡ್ ಆಗಿ ಬಳಸಿ ತಮ್ಮೊಂದಿಗೆ ರಾಜ್ಯವನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅವರು ಆಯೋಜಿಸಿದ್ದ 11th Strategic Electronic Summit- defence and Aerospace ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಆರ್ ಅಂಡ್ ಡಿ ಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಎಲ್ಲಾ ಕ್ಷೇತ್ರಗಳ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿರುವ 400 ಆರ್ ಅಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ ಎಂದರು.

ವಿಶ್ವದ ಬೇರೆ ಯಾವ ನಗರದಲ್ಲಿಯೂ ಇಷ್ಟು ಕೇಂದ್ರಗಳಿಲ್ಲ. 500 ಫಾರ್ಚೂನ್ ಕಂಪನಿಗಳ ಪೈಕಿ 400 ಕಂಪನಿಗಳು ಬೆಂಗಳೂರಿನಲ್ಲಿವೆ. ಎಲೆಕ್ಟ್ರಾನಿಕ್ ಆರ್ ಅಂಡ್ ಡಿ ಬೆಂಗಳೂರಲ್ಲದೇ ಬೇರೆಲ್ಲೂ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ಮೇಲೇರಲು ಬೆಂಗಳೂರು ಒಂದು ಚಿಮ್ಮುಹಲಗೆಯಂತೆ ಕೆಲಸ ಮಾಡುತ್ತದೆ ಎಂದರು.

ಕ್ರಿಯಾಶೀಲ ಸಮಾಜವಿರಬೇಕೆಂಬ ಆಶಯ: ಏರೋಸ್ಪೇಸ್ ಹಾಗೂ ರಕ್ಷಣಾ ಆರ್ ಅಂಡ್ ಡಿ ಹೊಂದಿರುವ ಮೊದಲ ರಾಜ್ಯ ಕರ್ನಾಟಕ. ಸೆಮಿಕಂಡಕ್ಟರ್ ಹಾಗೂ ನವೀಕರಿಸಬಹುದಾದ ಇಂಧನ ನೀತಿಯನ್ನು ಹೊಂದಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಆರ್ ಅಂಡ್ ಡಿ ನೀತಿಗೆ ಸಹ ಅನುಮೋದನೆ ದೊರೆಯಲಿದೆ ಎಂದರು.

ಗ್ಯಾರೇಜ್ ನಿಂದ ಹಿಡಿದು ಅತ್ಯುನ್ನತ ಸಂಸ್ಥೆಗಳ ಆರ್ ಅಂಡ್ ಡಿಯವರೆಗೂ ಸಹಾಯ ಮತ್ತು ನೆರವನ್ನು ಒದಗಿಸಲಾಗುವುದು. ನಮ್ಮ ರಾಜ್ಯದಲ್ಲಿ ಅತ್ಯಂತ ಕ್ರಿಯಾಶೀಲ ಸಮಾಜವಿರಬೇಕೆಂಬ ಆಶಯ ನಮ್ಮದು ಎಂದು ಹೇಳಿದರು.

ಜೀವನೋಪಾಯಕ್ಕೆ ಅವಕಾಶಗಳನ್ನು ಒದಗಿಸುವ ರಾಜ್ಯ ಮಾತ್ರವಾಗಿರದೇ ಆರ್ ಅಂಡ್ ಡಿ ಮೂಲಕ ಭವಿಷ್ಯದಲ್ಲಿ ಉತ್ತಮ ಗುಣಮಟ್ಟದ ಜೀವನವನ್ನು ಹೊಂದಬೇಕೆಂಬುದು ನಮ್ಮದು ಉದ್ದೇಶ ಎಂದರು. 2000 ಎಕರೆಗಳನ್ನು ರಕ್ಷಣಾ ಉತ್ಪಾದನೆಗೆ ಹಾಗೂ 1000 ಎಕರೆಯನ್ನು ರಕ್ಷಣಾ ಮತ್ತು ಏರೋಸ್ಪೇಸ್ ಉತ್ಪಾದನೆಗೆ ಮೀಸಲಿರಿಸಿದೆ.

ಕೈಗಾರಿಕಾ ನೀತಿ, ಏರೋಸ್ಪೇಸ್‍ನೀತಿಗಳು ಈಗಾಗಲೇ ಇರುವುದರಿಂದ ಉದ್ಯಮಿಗಳೂ ಬೆಂಗಳೂರಿಗೆ ಬಂದು ಯಶಸ್ವಿಯಾಗುವಂತೆ ಕರೆ ನೀಡಿದರು. ಅದಕ್ಕೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಸಹಕಾರವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

ರಕ್ಷಣಾ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮನಿರ್ಭರ್: ರಕ್ಷಣಾ ಇಲಾಖೆಯ ಅಭಿವೃದ್ಧಿ ಅವಶ್ಯಕತೆಯನ್ನು ಆಧರಿಸಿದೆ. ಯುದ್ಧಗಳ ನಂತರದಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಾಗಿರುವುದನ್ನು ಮೊದಲನೇ ಮತ್ತು ಎರಡನೇ ವಿಶ್ವ ಯುದ್ಧಗಳಲ್ಲಿ ನೋಡಿದ್ದೇವೆ. ರಕ್ಷಣಾ ಮತ್ತು ಡಿ.ಆರ್.ಡಿ.ಒ ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನಮ್ಮ ದೈನಂದಿನ ಬಳಕೆಯ ವಸ್ತುಗಳಲ್ಲಿ ಕಾಣಬಹುದಾಗಿದ್ದು, ಡಿಆರ್​ಡಿಒ ಮಾಡುವ ಎಲ್ಲ ಸಂಶೋಧನೆಗಳನ್ನು ನಾವು ಸ್ವಾಗತಿಸಬೇಕು ಎಂದರು.

ಮುಂದಿನ 10 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮನಿರ್ಭರ್ ಆಗಬಹುದು. ಇದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸೂ ಹೌದು. ಎಲೆಕ್ಟ್ರಾನ್ ಮಾದರಿಯಲ್ಲಿ ನಮ್ಮ ಸರ್ಕಾರ ಮುಂದುವರೆಯಲಿದೆ ಎಂದು ಹೇಳಿದರು.

ಓದಿ: PSI ಅಕ್ರಮ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಆರ್ ಅಂಡ್ ಡಿ ಕ್ಷೇತ್ರದಲ್ಲಿರುವ ಉದ್ಯಮಿಗಳು ಕರ್ನಾಟಕವನ್ನು ಸ್ಪ್ರಿಂಗ್ ಬೋರ್ಡ್ ಆಗಿ ಬಳಸಿ ತಮ್ಮೊಂದಿಗೆ ರಾಜ್ಯವನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅವರು ಆಯೋಜಿಸಿದ್ದ 11th Strategic Electronic Summit- defence and Aerospace ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಆರ್ ಅಂಡ್ ಡಿ ಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಎಲ್ಲಾ ಕ್ಷೇತ್ರಗಳ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿರುವ 400 ಆರ್ ಅಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ ಎಂದರು.

ವಿಶ್ವದ ಬೇರೆ ಯಾವ ನಗರದಲ್ಲಿಯೂ ಇಷ್ಟು ಕೇಂದ್ರಗಳಿಲ್ಲ. 500 ಫಾರ್ಚೂನ್ ಕಂಪನಿಗಳ ಪೈಕಿ 400 ಕಂಪನಿಗಳು ಬೆಂಗಳೂರಿನಲ್ಲಿವೆ. ಎಲೆಕ್ಟ್ರಾನಿಕ್ ಆರ್ ಅಂಡ್ ಡಿ ಬೆಂಗಳೂರಲ್ಲದೇ ಬೇರೆಲ್ಲೂ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ಮೇಲೇರಲು ಬೆಂಗಳೂರು ಒಂದು ಚಿಮ್ಮುಹಲಗೆಯಂತೆ ಕೆಲಸ ಮಾಡುತ್ತದೆ ಎಂದರು.

ಕ್ರಿಯಾಶೀಲ ಸಮಾಜವಿರಬೇಕೆಂಬ ಆಶಯ: ಏರೋಸ್ಪೇಸ್ ಹಾಗೂ ರಕ್ಷಣಾ ಆರ್ ಅಂಡ್ ಡಿ ಹೊಂದಿರುವ ಮೊದಲ ರಾಜ್ಯ ಕರ್ನಾಟಕ. ಸೆಮಿಕಂಡಕ್ಟರ್ ಹಾಗೂ ನವೀಕರಿಸಬಹುದಾದ ಇಂಧನ ನೀತಿಯನ್ನು ಹೊಂದಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಆರ್ ಅಂಡ್ ಡಿ ನೀತಿಗೆ ಸಹ ಅನುಮೋದನೆ ದೊರೆಯಲಿದೆ ಎಂದರು.

ಗ್ಯಾರೇಜ್ ನಿಂದ ಹಿಡಿದು ಅತ್ಯುನ್ನತ ಸಂಸ್ಥೆಗಳ ಆರ್ ಅಂಡ್ ಡಿಯವರೆಗೂ ಸಹಾಯ ಮತ್ತು ನೆರವನ್ನು ಒದಗಿಸಲಾಗುವುದು. ನಮ್ಮ ರಾಜ್ಯದಲ್ಲಿ ಅತ್ಯಂತ ಕ್ರಿಯಾಶೀಲ ಸಮಾಜವಿರಬೇಕೆಂಬ ಆಶಯ ನಮ್ಮದು ಎಂದು ಹೇಳಿದರು.

ಜೀವನೋಪಾಯಕ್ಕೆ ಅವಕಾಶಗಳನ್ನು ಒದಗಿಸುವ ರಾಜ್ಯ ಮಾತ್ರವಾಗಿರದೇ ಆರ್ ಅಂಡ್ ಡಿ ಮೂಲಕ ಭವಿಷ್ಯದಲ್ಲಿ ಉತ್ತಮ ಗುಣಮಟ್ಟದ ಜೀವನವನ್ನು ಹೊಂದಬೇಕೆಂಬುದು ನಮ್ಮದು ಉದ್ದೇಶ ಎಂದರು. 2000 ಎಕರೆಗಳನ್ನು ರಕ್ಷಣಾ ಉತ್ಪಾದನೆಗೆ ಹಾಗೂ 1000 ಎಕರೆಯನ್ನು ರಕ್ಷಣಾ ಮತ್ತು ಏರೋಸ್ಪೇಸ್ ಉತ್ಪಾದನೆಗೆ ಮೀಸಲಿರಿಸಿದೆ.

ಕೈಗಾರಿಕಾ ನೀತಿ, ಏರೋಸ್ಪೇಸ್‍ನೀತಿಗಳು ಈಗಾಗಲೇ ಇರುವುದರಿಂದ ಉದ್ಯಮಿಗಳೂ ಬೆಂಗಳೂರಿಗೆ ಬಂದು ಯಶಸ್ವಿಯಾಗುವಂತೆ ಕರೆ ನೀಡಿದರು. ಅದಕ್ಕೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಸಹಕಾರವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

ರಕ್ಷಣಾ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮನಿರ್ಭರ್: ರಕ್ಷಣಾ ಇಲಾಖೆಯ ಅಭಿವೃದ್ಧಿ ಅವಶ್ಯಕತೆಯನ್ನು ಆಧರಿಸಿದೆ. ಯುದ್ಧಗಳ ನಂತರದಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಾಗಿರುವುದನ್ನು ಮೊದಲನೇ ಮತ್ತು ಎರಡನೇ ವಿಶ್ವ ಯುದ್ಧಗಳಲ್ಲಿ ನೋಡಿದ್ದೇವೆ. ರಕ್ಷಣಾ ಮತ್ತು ಡಿ.ಆರ್.ಡಿ.ಒ ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನಮ್ಮ ದೈನಂದಿನ ಬಳಕೆಯ ವಸ್ತುಗಳಲ್ಲಿ ಕಾಣಬಹುದಾಗಿದ್ದು, ಡಿಆರ್​ಡಿಒ ಮಾಡುವ ಎಲ್ಲ ಸಂಶೋಧನೆಗಳನ್ನು ನಾವು ಸ್ವಾಗತಿಸಬೇಕು ಎಂದರು.

ಮುಂದಿನ 10 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮನಿರ್ಭರ್ ಆಗಬಹುದು. ಇದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸೂ ಹೌದು. ಎಲೆಕ್ಟ್ರಾನ್ ಮಾದರಿಯಲ್ಲಿ ನಮ್ಮ ಸರ್ಕಾರ ಮುಂದುವರೆಯಲಿದೆ ಎಂದು ಹೇಳಿದರು.

ಓದಿ: PSI ಅಕ್ರಮ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.