ETV Bharat / state

ಕರ್ನಾಟಕದಲ್ಲಿ ಏರ್ ಬಸ್ ಉತ್ಪಾದನಾ ಘಟಕ ಸ್ಥಾಪಿಸಿ: ಫ್ರೆಂಚ್ ಕಂಪೆನಿಗಳಿಗೆ ಸಿಎಂ ಆಹ್ವಾನ

author img

By

Published : Nov 4, 2022, 9:27 AM IST

ಜಾಗತೀಕರಣದ ಪರಿಣಾಮ ದೇಶಗಳು ಹೊಸ ಮಾರುಕಟ್ಟೆ ಹುಡುಕುತ್ತವೆ. ಅಂತಿಮವಾಗಿ ನಾವು ಮಾರುಕಟ್ಟೆಗೆ ಹತ್ತಿರವಾಗಬೇಕು-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

Basavaraj Bommai invites Airbus to set up manufacturing unit
ಫ್ರೆಂಚ್–ಇಂಡೋ ಚೇಂಬರ್ ಆಫ್ ಕಾಮರ್ಸ್

ಬೆಂಗಳೂರು: ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ನಡೆಯುತ್ತಿರುವ ನಡುವೆ ಕರ್ನಾಟಕದಲ್ಲಿ ಏರ್ ಬಸ್ ಉತ್ಪಾದನಾ ಘಟಕವನ್ನು ಸ್ಥಾಪಿಸುವಂತೆ ಫ್ರೆಂಚ್ ಏರೊಸ್ಪೇಸ್ ಕಂಪನಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಹ್ವಾನಿಸಿದರು.

ಅರಮನೆ ಮೈದಾನದಲ್ಲಿ ಫ್ರೆಂಚ್–ಇಂಡೋ ಚೇಂಬರ್ ಆಫ್ ಕಾಮರ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಫ್ರೆಂಚ್ ಏರೊಸ್ಪೇಸ್ ಕಂಪನಿಗಳು ಕರ್ನಾಟಕದಲ್ಲಿವೆ. ಏರ್ ಬಸ್‌ನಂತಹ ಸಂಸ್ಥೆಗಳು ಬೆಂಗಳೂರಿನಲ್ಲಿ ಘಟಕ ಸ್ಥಾಪಿಸಿ, ವಿಸ್ತರಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕರ್ನಾಟಕ ಏರೊಸ್ಪೇಸ್ ವಲಯದಲ್ಲಿ ದೊಡ್ಡ ಮಟ್ಟದ ಉತ್ಪಾದನಾ ಘಟಕ ಹೊಂದಿದೆ. ವಿಮಾನದ ಭಾಗಗಳ ಉತ್ಪಾದನೆ ರಾಜ್ಯದಲ್ಲಾಗುತ್ತವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಪೂರ್ಣ ಪ್ರಮಾಣದ ವಿಮಾನವನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಏರ್ ಬಸ್ ಹಾಗೂ ಬೋಯಿಂಗ್ ಸಂಸ್ಥೆ ಇದೆ ಎಂದರು.

Basavaraj Bommai invites Airbus to set up manufacturing unit
ಫ್ರೆಂಚ್–ಇಂಡೋ ಚೇಂಬರ್ ಆಫ್ ಕಾಮರ್ಸ್ ಕಾರ್ಯಕ್ರಮ

ನಾವು ಮಾರುಕಟ್ಟೆಗೆ ಹತ್ತಿರವಾಗಬೇಕು: ಫ್ರಾನ್ಸ್ ಮತ್ತು ಇಂಡಿಯಾ ನಡುವೆ ಬಹಳ‌ ಹಳೆಯ ಸಂಬಂಧ ಇದೆ. ಪಾಂಡಿಚೇರಿಯಲ್ಲಿ ಈಗಲೂ ಫ್ರೆಂಚ್ ಭಾಷೆ ಜಾರಿಯಲ್ಲಿದೆ. ಇಲ್ಲಿರುವ ಅರವಿಂದೊ ಆಶ್ರಮಕ್ಕೆ ಫ್ರಾನ್ಸ್ ಪ್ರಜೆಗಳು ಆಗಮಿಸುತ್ತಾರೆ. ಜಾಗತೀಕರಣದ ಪರಿಣಾಮ ದೇಶಗಳು ಹೊಸ ಮಾರುಕಟ್ಟೆ ಹುಡುಕುತ್ತವೆ. ಅಂತಿಮವಾಗಿ ನಾವು ಮಾರುಕಟ್ಟೆಗೆ ಹತ್ತಿರವಾಗಬೇಕು ಎಂದು ಸಿಎಂ ಹೇಳಿದರು.

ಭಾರತ ಅತಿ ದೊಡ್ಡ ಉತ್ಪಾದನಾ ದೇಶ: ಭಾರತ ದೊಡ್ಡ ಪ್ರಮಾಣದ ಜನಸಂಖ್ಯೆ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ದೇಶ. ಜತೆಗೆ ಅತಿ ದೊಡ್ಡ ಉತ್ಪಾದನಾ ದೇಶ. ಅದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಅವಕಾಶವಿದೆ. ಜನರು ಇಲ್ಲಿ ಕೌಶಲ್ಯ, ತಂತ್ರಜ್ಞಾನ, ಮಾರುಕಟ್ಟೆ ಅವಕಾಶಗಳನ್ನು ಹುಡುಕಿಕೊಂಡು ಬರುತ್ತಾರೆ. ನಮ್ಮ ನಾಯಕರಾದ ನರೇಂದ್ರ‌ಮೋದಿಯವರ ನಾಯಕತ್ವದಡಿ ಎಲ್ಲ ರಂಗಗಳಲ್ಲಿಯೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ಪಾಶ್ಚಿಮಾತ್ಯ ದೇಶಗಳು ಬೆಲೆ ಏರಿಕೆ ಮತ್ತು ಆರ್ಥಿಕ ಹಿಂಜರಿಕೆಯಿಂದ ಬಳಲುತ್ತಿವೆ. ಆದ್ದರಿಂದ ಇಂತಹ ದೇಶಗಳು ಬಲಿಷ್ಠ ಆರ್ಥಿಕತೆ ಹಾಗೂ ಬಲಿಷ್ಠ ಮಾರುಕಟ್ಟೆಯಿರುವ ದೇಶಗಳನ್ನು ಅರಸುತ್ತವೆ ಎಂದರು.

ಬಲಿಷ್ಟ ಮಾರುಕಟ್ಟೆ ಹೊಂದಿದೆ: ನಾವು ಬಲಿಷ್ಟ ಮಾರುಕಟ್ಟೆ ಹೊಂದಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಭಾರತ ಶೇ. 7-8ರಷ್ಟು ಜಿಡಿಪಿ ಸಾಧನೆ ಮಾಡಿದ್ದೇವೆ. ಇದು ಭಾರತದ ಶಕ್ತಿಯನ್ನು ತೋರಿಸುತ್ತದೆ. ಇಲ್ಲಿ ಜನಸಂಖ್ಯೆಯನ್ನೇ ಲಾಭವಾಗಿಸಿಕೊಳ್ಳಬಹುದು. ಜನಸಂಖ್ಯೆಯ ಪರಿಣಾಮ ಉತ್ಪಾದನೆಯೂ ಹೆಚ್ಚಾಗುತ್ತಿದೆ. ವಿಸ್ತರಣೆ ಸಣ್ಣ ಪದ, ಮೇಲ್ದರ್ಜೆಗೇರಿಸಿ ಎತ್ತರಕ್ಕೆ ಒಯ್ಯುತ್ತಿದ್ದೇವೆ ಎನ್ನುವುದು ಸರಿಯಾದ ಪದ. ಈ ನಿಟ್ಟಿನಲ್ಲಿ ಭಾರತ ಮತ್ತು ಫ್ರಾನ್ಸ್ ದೇಶದ ಉತ್ತಮ ಸಂಬಂಧ ಅತ್ಯಂತ ಸಮಯೋಚಿತವಾಗಿದೆ ಎಂದರು.

ಆರ್ಥಿಕತೆಯ ಬೆಳವಣಿಗೆಯಲ್ಲಿ ಭಾಗಿದಾರರಾಗಿ: ಭಾರತ ಮತ್ತು ಫ್ರಾನ್ಸ್ ಪರಸ್ಪರ ಸಹಕಾರದಿಂದ ಅಭಿವೃದ್ಧಿ ಹೊಂದಬಹುದು. ಭಾರತ ಅತ್ಯಂತ ಪ್ರಗತಿಶೀಲ ದೇಶವಾಗಿದ್ದು, ಐಟಿಬಿಟಿ, ಏರೋಸ್ಪೇಸ್, ಇವಿ ಹಾಗೂ ನವೀಕರಿಸಬಹುದಾದ ಇಂಧನ ಸೇರಿದಂತೆ ವಿವಿಧ ರಂಗದಲ್ಲಿ ದೇಶ ಮುಂಚೂಣಿಯಲ್ಲಿದೆ. ಹಾಗಾಗಿ ಭಾರತಕ್ಕೆ ಬಂದು ಉದ್ಯಮ ಸ್ಥಾಪಿಸಿ, ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಭಾಗಿದಾರರಾಗಿ ಎಂದು ಬಂಡವಾಳ ಹೂಡಿಕೆದಾರರಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು.

ಭಾರತ ಹಾಗೂ ಕರ್ನಾಟಕ ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಾಶಸ್ತ್ಯ ಸ್ಥಳವಾಗಿದೆ. ಇಲ್ಲಿನ ಅಭಿವೃದ್ಧಿ, ಯಶಸ್ಸು, ತಂತ್ರಜ್ಞಾನ ಹಾಗೂ ಮಾರುಕಟ್ಟೆಯ ಪಾಲುದಾರರಾಗಲು ಸಂಸ್ಥೆಗಳಿಗೆ ಆಹ್ವಾನ ನೀಡುತ್ತೇವೆ. ಅದಕ್ಕೆ ನಾವು ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಇಮ್ಯಾನುಯೆಲ್ ಲೆನೈನ್, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಇದನ್ನೂ ಓದಿ: Invest Karnataka 2022.. ಹೂಡಿಕೆಗೆ ಕರ್ನಾಟಕ ಉತ್ತಮ ರಾಜ್ಯ: ಪ್ರಧಾನಿ ಮೋದಿ ಬಣ್ಣನೆ

ಬೆಂಗಳೂರು: ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ನಡೆಯುತ್ತಿರುವ ನಡುವೆ ಕರ್ನಾಟಕದಲ್ಲಿ ಏರ್ ಬಸ್ ಉತ್ಪಾದನಾ ಘಟಕವನ್ನು ಸ್ಥಾಪಿಸುವಂತೆ ಫ್ರೆಂಚ್ ಏರೊಸ್ಪೇಸ್ ಕಂಪನಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಹ್ವಾನಿಸಿದರು.

ಅರಮನೆ ಮೈದಾನದಲ್ಲಿ ಫ್ರೆಂಚ್–ಇಂಡೋ ಚೇಂಬರ್ ಆಫ್ ಕಾಮರ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಫ್ರೆಂಚ್ ಏರೊಸ್ಪೇಸ್ ಕಂಪನಿಗಳು ಕರ್ನಾಟಕದಲ್ಲಿವೆ. ಏರ್ ಬಸ್‌ನಂತಹ ಸಂಸ್ಥೆಗಳು ಬೆಂಗಳೂರಿನಲ್ಲಿ ಘಟಕ ಸ್ಥಾಪಿಸಿ, ವಿಸ್ತರಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕರ್ನಾಟಕ ಏರೊಸ್ಪೇಸ್ ವಲಯದಲ್ಲಿ ದೊಡ್ಡ ಮಟ್ಟದ ಉತ್ಪಾದನಾ ಘಟಕ ಹೊಂದಿದೆ. ವಿಮಾನದ ಭಾಗಗಳ ಉತ್ಪಾದನೆ ರಾಜ್ಯದಲ್ಲಾಗುತ್ತವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಪೂರ್ಣ ಪ್ರಮಾಣದ ವಿಮಾನವನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಏರ್ ಬಸ್ ಹಾಗೂ ಬೋಯಿಂಗ್ ಸಂಸ್ಥೆ ಇದೆ ಎಂದರು.

Basavaraj Bommai invites Airbus to set up manufacturing unit
ಫ್ರೆಂಚ್–ಇಂಡೋ ಚೇಂಬರ್ ಆಫ್ ಕಾಮರ್ಸ್ ಕಾರ್ಯಕ್ರಮ

ನಾವು ಮಾರುಕಟ್ಟೆಗೆ ಹತ್ತಿರವಾಗಬೇಕು: ಫ್ರಾನ್ಸ್ ಮತ್ತು ಇಂಡಿಯಾ ನಡುವೆ ಬಹಳ‌ ಹಳೆಯ ಸಂಬಂಧ ಇದೆ. ಪಾಂಡಿಚೇರಿಯಲ್ಲಿ ಈಗಲೂ ಫ್ರೆಂಚ್ ಭಾಷೆ ಜಾರಿಯಲ್ಲಿದೆ. ಇಲ್ಲಿರುವ ಅರವಿಂದೊ ಆಶ್ರಮಕ್ಕೆ ಫ್ರಾನ್ಸ್ ಪ್ರಜೆಗಳು ಆಗಮಿಸುತ್ತಾರೆ. ಜಾಗತೀಕರಣದ ಪರಿಣಾಮ ದೇಶಗಳು ಹೊಸ ಮಾರುಕಟ್ಟೆ ಹುಡುಕುತ್ತವೆ. ಅಂತಿಮವಾಗಿ ನಾವು ಮಾರುಕಟ್ಟೆಗೆ ಹತ್ತಿರವಾಗಬೇಕು ಎಂದು ಸಿಎಂ ಹೇಳಿದರು.

ಭಾರತ ಅತಿ ದೊಡ್ಡ ಉತ್ಪಾದನಾ ದೇಶ: ಭಾರತ ದೊಡ್ಡ ಪ್ರಮಾಣದ ಜನಸಂಖ್ಯೆ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ದೇಶ. ಜತೆಗೆ ಅತಿ ದೊಡ್ಡ ಉತ್ಪಾದನಾ ದೇಶ. ಅದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಅವಕಾಶವಿದೆ. ಜನರು ಇಲ್ಲಿ ಕೌಶಲ್ಯ, ತಂತ್ರಜ್ಞಾನ, ಮಾರುಕಟ್ಟೆ ಅವಕಾಶಗಳನ್ನು ಹುಡುಕಿಕೊಂಡು ಬರುತ್ತಾರೆ. ನಮ್ಮ ನಾಯಕರಾದ ನರೇಂದ್ರ‌ಮೋದಿಯವರ ನಾಯಕತ್ವದಡಿ ಎಲ್ಲ ರಂಗಗಳಲ್ಲಿಯೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ಪಾಶ್ಚಿಮಾತ್ಯ ದೇಶಗಳು ಬೆಲೆ ಏರಿಕೆ ಮತ್ತು ಆರ್ಥಿಕ ಹಿಂಜರಿಕೆಯಿಂದ ಬಳಲುತ್ತಿವೆ. ಆದ್ದರಿಂದ ಇಂತಹ ದೇಶಗಳು ಬಲಿಷ್ಠ ಆರ್ಥಿಕತೆ ಹಾಗೂ ಬಲಿಷ್ಠ ಮಾರುಕಟ್ಟೆಯಿರುವ ದೇಶಗಳನ್ನು ಅರಸುತ್ತವೆ ಎಂದರು.

ಬಲಿಷ್ಟ ಮಾರುಕಟ್ಟೆ ಹೊಂದಿದೆ: ನಾವು ಬಲಿಷ್ಟ ಮಾರುಕಟ್ಟೆ ಹೊಂದಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಭಾರತ ಶೇ. 7-8ರಷ್ಟು ಜಿಡಿಪಿ ಸಾಧನೆ ಮಾಡಿದ್ದೇವೆ. ಇದು ಭಾರತದ ಶಕ್ತಿಯನ್ನು ತೋರಿಸುತ್ತದೆ. ಇಲ್ಲಿ ಜನಸಂಖ್ಯೆಯನ್ನೇ ಲಾಭವಾಗಿಸಿಕೊಳ್ಳಬಹುದು. ಜನಸಂಖ್ಯೆಯ ಪರಿಣಾಮ ಉತ್ಪಾದನೆಯೂ ಹೆಚ್ಚಾಗುತ್ತಿದೆ. ವಿಸ್ತರಣೆ ಸಣ್ಣ ಪದ, ಮೇಲ್ದರ್ಜೆಗೇರಿಸಿ ಎತ್ತರಕ್ಕೆ ಒಯ್ಯುತ್ತಿದ್ದೇವೆ ಎನ್ನುವುದು ಸರಿಯಾದ ಪದ. ಈ ನಿಟ್ಟಿನಲ್ಲಿ ಭಾರತ ಮತ್ತು ಫ್ರಾನ್ಸ್ ದೇಶದ ಉತ್ತಮ ಸಂಬಂಧ ಅತ್ಯಂತ ಸಮಯೋಚಿತವಾಗಿದೆ ಎಂದರು.

ಆರ್ಥಿಕತೆಯ ಬೆಳವಣಿಗೆಯಲ್ಲಿ ಭಾಗಿದಾರರಾಗಿ: ಭಾರತ ಮತ್ತು ಫ್ರಾನ್ಸ್ ಪರಸ್ಪರ ಸಹಕಾರದಿಂದ ಅಭಿವೃದ್ಧಿ ಹೊಂದಬಹುದು. ಭಾರತ ಅತ್ಯಂತ ಪ್ರಗತಿಶೀಲ ದೇಶವಾಗಿದ್ದು, ಐಟಿಬಿಟಿ, ಏರೋಸ್ಪೇಸ್, ಇವಿ ಹಾಗೂ ನವೀಕರಿಸಬಹುದಾದ ಇಂಧನ ಸೇರಿದಂತೆ ವಿವಿಧ ರಂಗದಲ್ಲಿ ದೇಶ ಮುಂಚೂಣಿಯಲ್ಲಿದೆ. ಹಾಗಾಗಿ ಭಾರತಕ್ಕೆ ಬಂದು ಉದ್ಯಮ ಸ್ಥಾಪಿಸಿ, ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಭಾಗಿದಾರರಾಗಿ ಎಂದು ಬಂಡವಾಳ ಹೂಡಿಕೆದಾರರಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು.

ಭಾರತ ಹಾಗೂ ಕರ್ನಾಟಕ ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಾಶಸ್ತ್ಯ ಸ್ಥಳವಾಗಿದೆ. ಇಲ್ಲಿನ ಅಭಿವೃದ್ಧಿ, ಯಶಸ್ಸು, ತಂತ್ರಜ್ಞಾನ ಹಾಗೂ ಮಾರುಕಟ್ಟೆಯ ಪಾಲುದಾರರಾಗಲು ಸಂಸ್ಥೆಗಳಿಗೆ ಆಹ್ವಾನ ನೀಡುತ್ತೇವೆ. ಅದಕ್ಕೆ ನಾವು ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಇಮ್ಯಾನುಯೆಲ್ ಲೆನೈನ್, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಇದನ್ನೂ ಓದಿ: Invest Karnataka 2022.. ಹೂಡಿಕೆಗೆ ಕರ್ನಾಟಕ ಉತ್ತಮ ರಾಜ್ಯ: ಪ್ರಧಾನಿ ಮೋದಿ ಬಣ್ಣನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.